Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಬಸ್ನಲ್ಲಿ ಹಣ ಕಳೆದುಕೊಂಡು ಗೋಳಾಡಿದ ಅಜ್ಜಿ: ಪ್ರಯಾಣಿಕರು ಒಟ್ಟು ಮಾಡಿದ್ರು ಹಣ
ಈಗ ಮೊಬೈಲ್, ಟಿವಿ ಎಲ್ಲ ಬಂದ ಮೇಲೆ ಜನ ಮನುಷ್ಯರ ಜೊತೆ ಬೆರೆಯುವುದನ್ನೇ ಮರೆತುಬಿಟ್ಟಿದ್ದಾರೆ. ಅವರು ಮೊಬೈಲ್ ಲೋಕದಲ್ಲಿ ಮುಳುಗಿರುತ್ತಾರೆ. ಜೊತೆಗೆ ಮಾನವೀಯತೆ ಅನ್ನೋದನ್ನೇ ಮರೆತಿರುತ್ತಾರೆ. ಯಾಕಂದ್ರೆ ಯಾರಾದ್ರು ಕಷ್ಟದಲ್ಲಿದ್ದಾಗ ಅವರ ಕಷ್ಟಕ್ಕೆ ಸ್ಪಂದಿಸಬೇಕು ಎಂಬ ಮನೋಭಾವ ಈಗ ಬಹುತೇಕರಲ್ಲಿ ಇಲ್ಲವೇ ಇಲ್ಲ. ಇದಕ್ಕೆ ಉದಾಹರಣೆ ಎಂಬಂತೆ ನಾವು ಹತ್ತಾರು ಘಟನೆಗಳನ್ನ ನೋಡುತ್ತಲೇ ಇರುತ್ತೇವೆ.
ಯಾರಾದ್ರು ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದರೆ ಅಂತವರ ಮಾತನಾಡಿಸುವ ಗೋಜಿಗೂ ನಾವು ಹೋಗುವುದಿಲ್ಲ. ಅವರಿಗೆ ಏನಾಗಿದೆ ಆಸ್ಪತ್ರೆಗೆ ಸಾಗಿಸಬೇಕು ಎಂಬುದಿರುವುದಿಲ್ಲ. ಬದಲಿಗೆ ಮೊಬೈಲ್ ತೆಗೆದು ವಿಡಿಯೋ ಫೋಟೊ ತಗೆದುಕೊಳ್ಳುತ್ತಾರೆ. ಇಂತಹ ಕಾಲದಲ್ಲಿ ಇದಕ್ಕೆ ವಿರುದ್ಧವಾದ ಕೆಲವೊಂದು ಘಟನೆಗಳು ನಡೆದಾಗ ಮಾನವೀಯತೆ ಇನ್ನೂ ಉಳಿದಿದೆ ಎನಿಸುತ್ತದೆ.

ಯಾರಾದ್ರು ಕಷ್ಟದಲ್ಲಿದ್ದರೆ ಅವರ ಪಾಡಿಗೆ ಅವರ ಬಿಟ್ಟು ಬೇರೆಯವರ ಸಹವಾಸ ನಮಗ್ಯಾಕೆ ಅಂದುಕೊಂಡು ಮುಂದೆ ಸಾಗುವವರೆ ಹೆಚ್ಚು. ಆದ್ರೆ ಇಲ್ಲೊಂದು ಘಟನೆ ಮಾತ್ರ ಮಾನವೀಯ ಮೌಲ್ಯ ಇನ್ನೂ ಮಾನವರಲ್ಲಿ ಉಳಿದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಹೌದು ಹಾವೇರಿ ಧರ್ಮಸ್ಥಳ ಮಾರ್ಗವಾಗಿ ಹೋಗುತ್ತಿದ್ದ ಬಸ್ನಲ್ಲಿ ಹಣ ಕಳೆದುಕೊಂಡು ಅಜ್ಜಿಯೊಬ್ಬರು ಗೋಲಾಡುತ್ತಿದ್ದರು ಆದರೆ ಬಸ್ನಲ್ಲಿದ್ದ ಪ್ರಯಾಣಿಕರು ಸೇರಿ ಹಣ ಒಟ್ಟು ಮಾಡಿ ಕೊಟ್ಟು ಆಕೆಗೆ ನೆರವಾಗಿದ್ದು ಮಾತ್ರವಲ್ಲ ಮಾನವೀಯತೆ ಇನ್ನೂ ಉಳಿದಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ.
ಹಾವೇರಿ-ಧರ್ಮಸ್ಥಳ ಮಾರ್ಗವಾಗಿ ಚಲಿಸುತ್ತಿದ್ದ ಸರ್ಕಾರಿ ಬಸ್ನಲ್ಲಿ ಅಜ್ಜಿಯೊಬ್ಬರು ಗೋಳಾಡುತ್ತಿದ್ದಾರೆ, ಅವರ ಬ್ಯಾಗ್ನಲ್ಲಿದ್ದ 5 ಸಾವಿರ ರೂಪಾಯಿ ಕಳೆದುಕೊಂಡಿರುವುದಾಗಿ ಅವರು ಕಣ್ಣೀರಿಡುತ್ತಿದ್ದಾರೆ. ಆದರೆ ಆಕೆಯ ನೋವು ಕಂಡ ಪ್ರಯಾಣಿಕರು ಒಮ್ಮತದಿಂದ ತಮ್ಮ ಬಳಿ ಇದ್ದ ಕೈಲಾದಷ್ಟು ಹಣವನ್ನು ಒಟ್ಟು ಸೇರಿಸಿ ಸುಮಾರು 4 ಸಾವಿರ ರೂಪಾಯಿ ಮಾಡಿ ಆಕೆಗೆ ನೀಡಿದ್ದಾರೆ. ಹನಿ ಹನಿ ಕೂಡಿದರೆ ಹಳ್ಳ ಎಂಬ ಮಾತನ್ನು ಮತ್ತೆ ಮತ್ತೆ ಅವರೆಲ್ಲ ಸೇರಿ ನಿಜ ಮಾಡಿದ್ದಾರೆ. ಬಸ್ನಲ್ಲಿ ಅಜ್ಜಿಗೆ 4 ಸಾವಿರ ನೀಡಿ ಮಾನವೀಯತೆ ಮೆರೆದಿದ್ದಾರೆ.
ಈ ಘಟನೆಯ ವಿಡಿಯೋವೊಂದು ಆನ್ಲೈನ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಷ್ಟ ಪಟ್ಟು ದುಡಿದು ಒಟ್ಟು ಮಾಡಿಟ್ಟ ಹಣ ಕಳೆದುಕೊಂಡ ಅಜ್ಜಿಯ ನೆರವಿಗೆ ಬಂದ ಪ್ರಯಾಣಿಕರ ಕಾರ್ಯಕ್ಕೆ ಭಾರಿ ಮೆಚ್ಚುಗೆ ಕೇಳಿಬಂದಿದೆ. ಪ್ರಯಾಣಿಕರು ಎಲ್ಲರು ಸೇರಿ ಒಟ್ಟು ಮಾಡಿದ ಹಣವನ್ನು ಅಜ್ಜಿಯ ಕೈಗಿಟ್ಟಾಗ ಆಕೆಯ ಕಣ್ಣಲ್ಲಿ ಸಂತೋಷ ಕಣ್ಣೀರು ಕಂಡು ಜನರು ಸಹ ಭಾವುಕರಾಗಿದ್ದಾರೆ.
ಈ ಕಾಲದಲ್ಲಿ 5 ಸಾವಿರ ರೂಪಾಯಿ ಆಕೆಗೆ ಎಷ್ಟು ಅಗತ್ಯವಿತ್ತೋ ಆದರೆ ಆ ಹಣ ಯಾರು ಕದ್ದಿರುತ್ತಾನೋ ಆತನಿಗೆ ಒಳಿತಾಗುವುದಿಲ್ಲ ಎಂದು ಶಾಪ ಹಾಕಿದ್ದಾರೆ. ಆಕೆಗೆ ಯಾವ ಅನಿವಾರ್ಯದ ಕೆಲಸವಿತ್ತೋ ಗೊತ್ತಿಲ್ಲ ಆದರೆ ಅಜ್ಜಿ ಕಣ್ಣಿನಲ್ಲಿ ಸಹಾಯ ಮಾಡಿದ ಎಲ್ಲರೂ ಈಗ ದೇವರಾಗಿದ್ದಾರೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಈ ರೀತಿಯ ಮತ್ತಷ್ಟು ಕಾರ್ಯಗಳು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತೆ. ಜೊತೆಗೆ ಒಂದಿಷ್ಟು ಮಂದಿಯ ಮನ ಪರಿವರ್ತನೆಗೂ ಕಾರಣವಾಗುತ್ತೆ. ಒಗ್ಗಟ್ಟು ಅನ್ನೋದು ಇದ್ದರೆ ಎಂತಹ ಕೆಲಸವೂ ಕಷ್ಟವಾಗುವುದಿಲ್ಲ ಎಂಬುದನ್ನು ಇದು ತೋರಿಸುತ್ತೆ. ಜೊತೆಗೆ ಒಂದು ಹಿರಿಯ ಜೀವಕ್ಕೆ ಮತ್ತೆ ಜೀವದಾನ ಮಾಡಿದಷ್ಟೇ ಪುಣ್ಯ ಸಿಗುತ್ತೆ. ಹೀಗಾಗಿ ಈ ವಿಡಿಯೋಗೆ ಭಾರೀ ಮೆಚ್ಚುಗೆ ಕೇಳಿಬಂದಿದೆ. ಪ್ರಯಾಣಿಕರ ಕಾರ್ಯಕ್ಕೆ ಜನರು ಜೈಕಾರ ಹಾಕಿದ್ದಾರೆ. ಈ ವಿಡಿಯೋ ಇಷ್ಟ ಪಟ್ಟ ಮಂದಿ ಹಂಚಿಕೊಂಡಿದ್ದು, ಇಂತಹ ಕಾರ್ಯಗಳ ಸಮಾಜದ ಬದಲಾವಣೆಗೆ ಕಾರಣವಾಗುತ್ತೆ ಎನ್ನುತ್ತಿದ್ದಾರೆ.



Click it and Unblock the Notifications