Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪರಿವರ್ತನಿ ಏಕಾದಶಿಯಂದು ವಾಮನ ರೂಪವನ್ನು ಏಕೆ ಆರಾಧಿಸಲಾಗುವುದು?
ಭಾದ್ರಪದ ಮಾಸವೆಂದರೆ ಗಣೇಶ ಹಬ್ಬದ ಸಂಭ್ರಮ... ಅನಂತ ಚತುರ್ದಶಿಯವರೆಗೆ ಗಣೇಶ ಹಬ್ಬವನ್ನು ಬಹು ಅದ್ಧೂರಿಯಿಂದ ಆಚರಣೆ ಮಾಡಲಾಗುವುದು. ಈ ಹಬ್ಬದ ಸಂಭ್ರಮದ ನಡುವೆಯೇ ಪರಿವರ್ತನಿ ಏಕಾದಶಿ ಬಂದಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ಏಕಾದಶಿಯಂದು ಪರಿವರ್ತನಿ ಏಕಾದಶಿ ಅಥವಾ ಪದ್ಮ ಏಕಾದಶಿಯನ್ನು ಆಚರಿಸಲಾಗುವುದು.

ಈ ವರ್ಷ ಪರಿವರ್ತಿನಿ ಏಕಾದಶಿ ಯಾವಾಗ , ಈ ಪರಿವರ್ತನಿ ಏಕಾದಶಿಯ ವಿಶೇಷತೆಯೇನು ಎಂದು ನೋಡೋಣ ಬನ್ನಿ:
ಈ ವರ್ಷ ಪರಿವರ್ತಿನಿ ಏಕಾದಶಿಯನ್ನು ಸೆಪ್ಟೆಂಬರ್ 26ರಂದು ಆಚರಿಸಲಾಗುವುದು.
ಏಕಾದಶಿ ತಿಥಿ ಆರಂಭ: ಸೆಪ್ಟೆಂಬರ್ 25 ಬೆಳಗ್ಗೆ 07:55ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಸೆಪ್ಟೆಂಬರ್ 26 ಬೆಳಗ್ಗೆ 05 ಗಂಟೆಗೆ
ಪರಿವರ್ತಿನಿ ಏಕಾದಶಿಯ ಮಹತ್ವವೇನು?
ಧಾರ್ಮಿಕ ನಂಬಿಕೆಗಳ ಪ್ರಕಾತ ಪರಿವರ್ತಿನಿ ಏಕಾದಶಿಯಂದು ಶ್ರೀ ವಿಷ್ಣುವಿನ ಆರಾಧನೆ ಮಾಡುವುದರಿಂದ ಲಕ್ಷ್ಮಿಯ ಕೃಪೆ ಪಾತ್ರರಾಗುತ್ತೇವೆ. ಜೀವನದಲ್ಲಿ ಹಣದ ಕೊರತೆಯೇ ಉಂಟಾಗುವುದಿಲ್ಲ ಎಂದು ಹೇಳಲಾಗಿದೆ.
ಹಿಂದೂ ಪುರಾಣದ ಪ್ರಕಾರ ಯೋಗ ನಿದ್ರೆಯಲ್ಲಿರುವ ವಿಷ್ಣು ಪರಿವರ್ತಿನಿ ಏಕಾದಶಿಯಂದು ಬದಿಗೆ ಬದಲಾಗುತ್ತಾನೆ, ಇದರಿಂದ ವಿಷ್ಣುವಿನ ಸ್ಥಾನ ಬದಲಾಗಲಿದೆ ಎಂದು ಹೇಳಲಾಗುವುದು.
ಆದ್ದರಿಂದ ಈ ದಿನ ಮಾಡುವ ಉಪವಾಸಕ್ಕೆ ತುಂಬಾನೇ ಮಹತ್ವವಿದೆ. ಯಾರು ಭಕ್ತಿಯಿಂದ ಈ ಉಪವಾಸವನ್ನು ಮಾಡುತ್ತಾರೋ ಅವರು ಎಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆಯಿದೆ.
ಧಾರ್ಮಿಕ ಮಹತ್ವ
ಧಾರ್ಮಿಕ ನಂಬಿಕೆಯ ಪ್ರಕಾರ ಈ ದಿನ ವಿಷ್ಣುವಿನ ವಾಮನ ರೂಪವನ್ನು ಆಚರಿಸಲಾಗುವುದು. ವಿಷ್ಣುವು ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನಾಂಕದಂದು ಮಲಗುವ ಸ್ಥಿತಿಯನ್ನು ಬದಲಾಯಿಸುತ್ತಾನೆ. ಇದರಿಂದ ಅನೇಕ ಬದಲಾವಣೆಗಳಾಗುತ್ತವೆ, ಆದ್ದರಿಂದ ಈ ಏಕಾದಶಿಯನ್ನು ಪರಿವರ್ತಿನಿ ಏಕಾದಶಿಯಂದು ಕರೆಯಲಾಗುವುದು. ಈ ಸಮಯದಲ್ಲಿ ವಿಷ್ಣು ವಾಮನನ ರೂಪದಲ್ಲಿರುತ್ತಾನೆ ಎಂದು ಅವನ ವಾಮನ ಮೂರ್ತಿಯನ್ನು ಆರಾಧಿಸಲಾಗುವುದು.
ವ್ರತ ಕತೆ
ಬಲಿ ಚಕ್ರವರ್ತಿ ತುಂಬಾ ಕ್ರೂರಿಯಾಗಿದ್ದ, ಆದರೆ ವಿಷ್ಣುವಿನ ಮಹಾಭಕ್ತನಾಗಿದ್ದ. ಪ್ರತಿದಿನ ಶ್ರೀವಿಷ್ಣುವಿಗೆ ಯಜ್ಞ ಮಾಡುತ್ತಾನೆ. ಆದರೆ ಈತನ ದುಷ್ಟತನಕ್ಕೆ ಬುದ್ಧಿ ಕಲಿಸುವಂತೆ ಬೃಹಸ್ಪತಿ ಸೇರಿ ಎಲ್ಲಾ ದೇವತೆಗಳು ಶ್ರೀ ವಿಷ್ಣುವಿನ ಮೊರೆ ಹೋಗುತ್ತಾರೆ. ದೇವತೆಗಳ ಮೊರೆಯನ್ನು ಕೇಳಿ ಶ್ರೀ ವಿಷ್ಣು ವಾಮನನ ಅವತಾರವನ್ನು ತಾಳಿ ಬಲಿ ಚಕ್ರವರ್ತಿ ಬಳಿ ಬರುತ್ತಾನೆ. ಬಲಿ ಚಕ್ರವರ್ತಿ ದಾನ ಶೂರನಾಗಿದ್ದ, ವಾಮನನ ಬಳಿ ನಿನಗೆ ಏನು ದಾನವಾಗಿ ಕೇಳು ಎಂದು ಅಹಂಕಾರದಿಂದ ಕೇಳುತ್ತಾನೆ. ವಾಮನ ಮೂರ್ತಿ 3 ಅಡಿ ಜಾಗವನ್ನು ಕೇಳುತ್ತಾನೆ. ಆದರೆ ವಾಮನ ಮೂರ್ತಿ ಬೃಹದಾಕಾರವಾಗಿ ಬೆಳೆಯಲಾರಂಭಿಸುತ್ತಾನೆ. ಒಂದು ಹೆಜ್ಜೆ ಇಡೀ ಭೂ ಲೋಕವನ್ನು ಆವರಿಸುತ್ತದೆ, ಮತ್ತೊಂದು ಹೆಜ್ಜೆ ಪಾತಾಳ ಲೋಕವನ್ನು ಆವರಿಸುತ್ತದೆ. ಆವಾಗ ಬಲಿ ಚಕ್ರವರ್ತಿಗೆ ತನ್ನ ತಪ್ಪಿನ ಅರಿವಾಗುವುದು, ಮತ್ತೊಂದು ಹೆಜ್ಜೆ ತನ್ನ ತಲೆ ಮೇಲೆ ಇಡುವಂತೆ ಕೇಳಿಕೊಳ್ಳುತ್ತಾನೆ. ಹೀಗೆ ಬಲಿಚಕ್ರವರ್ತಿಯ ಅಹಂಕಾರ ಮುರಿಯುತ್ತಾನೆ.
ಪರಿವರ್ತನಿ ಏಕಾದಶಿ ಉಪವಾಸದ ನಿಯಮಗಳೇನು?
* ಬೆಳಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛ ಮಾಡಿ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ
* ದೇವರ ಕೋಣೆಯನ್ನು ಗಂಗಾಜಲ ಚಿಮುಕಿಸಿ ಶುದ್ಧ ಮಾಡಿ
* ದೇವರ ದೀಪ ಹಚ್ಚಿ
* ದೇವರಿಗೆ ಆರತಿ ಮಾಡುವ ಮೂಲಕ ಉಪವಾಸವನ್ನು ಪ್ರಾರಂಭಿಸಿ
* ವಿಷ್ಣು ಮಂತ್ರಗಳನ್ನು ಪಠಿಸಿ
* ದ್ವಾದಶಿ ತಿಥಿಗೆ ಉಪವಾಸವನ್ನು ಮುರಿಯಿರಿ
* ಬಡವರಿಗೆ ಆಹಾರವನ್ನು ದಾನ ಮಾಡಿ.



Click it and Unblock the Notifications











