Latest Updates
-
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ?
ಪರಿವರ್ತನಿ ಏಕಾದಶಿಯಂದು ವಾಮನ ರೂಪವನ್ನು ಏಕೆ ಆರಾಧಿಸಲಾಗುವುದು?
ಭಾದ್ರಪದ ಮಾಸವೆಂದರೆ ಗಣೇಶ ಹಬ್ಬದ ಸಂಭ್ರಮ... ಅನಂತ ಚತುರ್ದಶಿಯವರೆಗೆ ಗಣೇಶ ಹಬ್ಬವನ್ನು ಬಹು ಅದ್ಧೂರಿಯಿಂದ ಆಚರಣೆ ಮಾಡಲಾಗುವುದು. ಈ ಹಬ್ಬದ ಸಂಭ್ರಮದ ನಡುವೆಯೇ ಪರಿವರ್ತನಿ ಏಕಾದಶಿ ಬಂದಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ಏಕಾದಶಿಯಂದು ಪರಿವರ್ತನಿ ಏಕಾದಶಿ ಅಥವಾ ಪದ್ಮ ಏಕಾದಶಿಯನ್ನು ಆಚರಿಸಲಾಗುವುದು.

ಈ ವರ್ಷ ಪರಿವರ್ತಿನಿ ಏಕಾದಶಿ ಯಾವಾಗ , ಈ ಪರಿವರ್ತನಿ ಏಕಾದಶಿಯ ವಿಶೇಷತೆಯೇನು ಎಂದು ನೋಡೋಣ ಬನ್ನಿ:
ಈ ವರ್ಷ ಪರಿವರ್ತಿನಿ ಏಕಾದಶಿಯನ್ನು ಸೆಪ್ಟೆಂಬರ್ 26ರಂದು ಆಚರಿಸಲಾಗುವುದು.
ಏಕಾದಶಿ ತಿಥಿ ಆರಂಭ: ಸೆಪ್ಟೆಂಬರ್ 25 ಬೆಳಗ್ಗೆ 07:55ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಸೆಪ್ಟೆಂಬರ್ 26 ಬೆಳಗ್ಗೆ 05 ಗಂಟೆಗೆ
ಪರಿವರ್ತಿನಿ ಏಕಾದಶಿಯ ಮಹತ್ವವೇನು?
ಧಾರ್ಮಿಕ ನಂಬಿಕೆಗಳ ಪ್ರಕಾತ ಪರಿವರ್ತಿನಿ ಏಕಾದಶಿಯಂದು ಶ್ರೀ ವಿಷ್ಣುವಿನ ಆರಾಧನೆ ಮಾಡುವುದರಿಂದ ಲಕ್ಷ್ಮಿಯ ಕೃಪೆ ಪಾತ್ರರಾಗುತ್ತೇವೆ. ಜೀವನದಲ್ಲಿ ಹಣದ ಕೊರತೆಯೇ ಉಂಟಾಗುವುದಿಲ್ಲ ಎಂದು ಹೇಳಲಾಗಿದೆ.
ಹಿಂದೂ ಪುರಾಣದ ಪ್ರಕಾರ ಯೋಗ ನಿದ್ರೆಯಲ್ಲಿರುವ ವಿಷ್ಣು ಪರಿವರ್ತಿನಿ ಏಕಾದಶಿಯಂದು ಬದಿಗೆ ಬದಲಾಗುತ್ತಾನೆ, ಇದರಿಂದ ವಿಷ್ಣುವಿನ ಸ್ಥಾನ ಬದಲಾಗಲಿದೆ ಎಂದು ಹೇಳಲಾಗುವುದು.
ಆದ್ದರಿಂದ ಈ ದಿನ ಮಾಡುವ ಉಪವಾಸಕ್ಕೆ ತುಂಬಾನೇ ಮಹತ್ವವಿದೆ. ಯಾರು ಭಕ್ತಿಯಿಂದ ಈ ಉಪವಾಸವನ್ನು ಮಾಡುತ್ತಾರೋ ಅವರು ಎಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆಯಿದೆ.
ಧಾರ್ಮಿಕ ಮಹತ್ವ
ಧಾರ್ಮಿಕ ನಂಬಿಕೆಯ ಪ್ರಕಾರ ಈ ದಿನ ವಿಷ್ಣುವಿನ ವಾಮನ ರೂಪವನ್ನು ಆಚರಿಸಲಾಗುವುದು. ವಿಷ್ಣುವು ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನಾಂಕದಂದು ಮಲಗುವ ಸ್ಥಿತಿಯನ್ನು ಬದಲಾಯಿಸುತ್ತಾನೆ. ಇದರಿಂದ ಅನೇಕ ಬದಲಾವಣೆಗಳಾಗುತ್ತವೆ, ಆದ್ದರಿಂದ ಈ ಏಕಾದಶಿಯನ್ನು ಪರಿವರ್ತಿನಿ ಏಕಾದಶಿಯಂದು ಕರೆಯಲಾಗುವುದು. ಈ ಸಮಯದಲ್ಲಿ ವಿಷ್ಣು ವಾಮನನ ರೂಪದಲ್ಲಿರುತ್ತಾನೆ ಎಂದು ಅವನ ವಾಮನ ಮೂರ್ತಿಯನ್ನು ಆರಾಧಿಸಲಾಗುವುದು.
ವ್ರತ ಕತೆ
ಬಲಿ ಚಕ್ರವರ್ತಿ ತುಂಬಾ ಕ್ರೂರಿಯಾಗಿದ್ದ, ಆದರೆ ವಿಷ್ಣುವಿನ ಮಹಾಭಕ್ತನಾಗಿದ್ದ. ಪ್ರತಿದಿನ ಶ್ರೀವಿಷ್ಣುವಿಗೆ ಯಜ್ಞ ಮಾಡುತ್ತಾನೆ. ಆದರೆ ಈತನ ದುಷ್ಟತನಕ್ಕೆ ಬುದ್ಧಿ ಕಲಿಸುವಂತೆ ಬೃಹಸ್ಪತಿ ಸೇರಿ ಎಲ್ಲಾ ದೇವತೆಗಳು ಶ್ರೀ ವಿಷ್ಣುವಿನ ಮೊರೆ ಹೋಗುತ್ತಾರೆ. ದೇವತೆಗಳ ಮೊರೆಯನ್ನು ಕೇಳಿ ಶ್ರೀ ವಿಷ್ಣು ವಾಮನನ ಅವತಾರವನ್ನು ತಾಳಿ ಬಲಿ ಚಕ್ರವರ್ತಿ ಬಳಿ ಬರುತ್ತಾನೆ. ಬಲಿ ಚಕ್ರವರ್ತಿ ದಾನ ಶೂರನಾಗಿದ್ದ, ವಾಮನನ ಬಳಿ ನಿನಗೆ ಏನು ದಾನವಾಗಿ ಕೇಳು ಎಂದು ಅಹಂಕಾರದಿಂದ ಕೇಳುತ್ತಾನೆ. ವಾಮನ ಮೂರ್ತಿ 3 ಅಡಿ ಜಾಗವನ್ನು ಕೇಳುತ್ತಾನೆ. ಆದರೆ ವಾಮನ ಮೂರ್ತಿ ಬೃಹದಾಕಾರವಾಗಿ ಬೆಳೆಯಲಾರಂಭಿಸುತ್ತಾನೆ. ಒಂದು ಹೆಜ್ಜೆ ಇಡೀ ಭೂ ಲೋಕವನ್ನು ಆವರಿಸುತ್ತದೆ, ಮತ್ತೊಂದು ಹೆಜ್ಜೆ ಪಾತಾಳ ಲೋಕವನ್ನು ಆವರಿಸುತ್ತದೆ. ಆವಾಗ ಬಲಿ ಚಕ್ರವರ್ತಿಗೆ ತನ್ನ ತಪ್ಪಿನ ಅರಿವಾಗುವುದು, ಮತ್ತೊಂದು ಹೆಜ್ಜೆ ತನ್ನ ತಲೆ ಮೇಲೆ ಇಡುವಂತೆ ಕೇಳಿಕೊಳ್ಳುತ್ತಾನೆ. ಹೀಗೆ ಬಲಿಚಕ್ರವರ್ತಿಯ ಅಹಂಕಾರ ಮುರಿಯುತ್ತಾನೆ.
ಪರಿವರ್ತನಿ ಏಕಾದಶಿ ಉಪವಾಸದ ನಿಯಮಗಳೇನು?
* ಬೆಳಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛ ಮಾಡಿ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ
* ದೇವರ ಕೋಣೆಯನ್ನು ಗಂಗಾಜಲ ಚಿಮುಕಿಸಿ ಶುದ್ಧ ಮಾಡಿ
* ದೇವರ ದೀಪ ಹಚ್ಚಿ
* ದೇವರಿಗೆ ಆರತಿ ಮಾಡುವ ಮೂಲಕ ಉಪವಾಸವನ್ನು ಪ್ರಾರಂಭಿಸಿ
* ವಿಷ್ಣು ಮಂತ್ರಗಳನ್ನು ಪಠಿಸಿ
* ದ್ವಾದಶಿ ತಿಥಿಗೆ ಉಪವಾಸವನ್ನು ಮುರಿಯಿರಿ
* ಬಡವರಿಗೆ ಆಹಾರವನ್ನು ದಾನ ಮಾಡಿ.



Click it and Unblock the Notifications
