Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡೆಹ್ರಡೂನ್ ದೇವಾಲಯದ ಸುತ್ತ ಇಟ್ಟ ಚಪ್ಪಲಿ ಇಟ್ಟವರಿಗೆ ಏನಾಯ್ತು ನೋಡಿ : ವೈರಲ್ ವೀಡಿಯೋ
ಸಂಸ್ಕೃತಿಯನ್ನು ಆಚರಿಸುವುದಕ್ಕಿಂತ ಮೊದಲು ಗೌರವಿಸುವು ಅತೀ ಮುಖ್ಯ. ಆಚರಣೆಯಲ್ಲಿ ತಪ್ಪಾಗಬಹುದು, ಆದರೆ ಅಗೌರವ ನೀಡಿದರೆ ಯಾರು ಸಹಿಸುವುದಿಲ್ಲ. ಹೀಗೆ ಬೆಟ್ಟದ ಮೇಲಿನ ಸುಂದರ ದೇವಸ್ಥಾನದ ಆವರಣದಲ್ಲಿ ಸಂಸ್ಕೃತಿ ಮರೆತ ಜನಕ್ಕೆ ತಕ್ಕ ಪಾಠ ಕಲಿಸಿದ ಘಟನೆ ಉತ್ತರಖಂಡದ ಡೆಹ್ರಡೂನ್ನಲ್ಲಿ ನಡೆದಿದೆ.

ಬೆಟ್ಟದ ಮೇಲಿನ ಮಂದಿರ. ನೋಡಲು ದೇವಸ್ಥಾನದ ಜೊತೆಗೆ ಪ್ರಕೃತಿ ಸೌಂದರ್ಯವೂ ಅಷ್ಟೆ ಸುಂದರವಾಗಿದೆ. ಹೀಗಾಗಿ ಇಲ್ಲಿ ಮಂದಿರಕ್ಕೆ ಆಗಮಿಸುವ ಭಕ್ತರು ದೇವಸ್ಥಾನದ ಪ್ರಾಂಗಣದೊಳಗೆ ಚಪ್ಪಲಿಗಳನ್ನು ಬಿಟ್ಟು ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸುತ್ತಿರುವ ಘಟನೆ ಪದೇ ಪದೆ ನಡೆಯುತ್ತಿದೆ. ಹಲವು ಸುತ್ತಿನ ಎಚ್ಚರಿಕೆ, ನಾಮ ಫಲಕಗಳನ್ನು ಹಾಕಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ದೇವಸ್ಥಾನದ ಸಿಬ್ಬಂದಿ, ಪ್ರಾಂಗಣದೊಳಗೆ ಬಿಟ್ಟ ಚಪ್ಪಲಿಗಳನ್ನು ಬೆಟ್ಟದ ಮೇಲಿಂದ ಕೆಳಕ್ಕೆ ಎಸೆದಿದ್ದಾರೆ.
ಇದು ಭಗವಾನ್ ಬಾಲ ಬದ್ರ ದೇವಸ್ಥಾನ. ಹೆಚ್ಚಾಗಿ ಬಾಲರಾಮ ದೇವಸ್ಥಾನ ಎಂದ ಪ್ರಸಿದ್ಧಿಯಾಗಿದೆ. ಉತ್ತರಖಂಡದ ಪ್ರಸಿದ್ಧ ಪ್ರವಾಸಿ ತಾಣ ಮುಸೋರಿಯಿಂದ ಕೇವಲ 12 ಕಿಲೋಮೀಟರ್ ದೂರದಲ್ಲಿದೆ. ಈ ದೇವಸ್ಥಾನದ ಮತ್ತೊಂದು ವಿಶೇಷ ಅಂದರೆ ಪ್ರಕೃತಿ ಸೌಂದರ್ಯದ ನಡುವೆ ಈ ದೇವಸ್ಥಾನ ನೆಲೆ ನಿಂತಿದೆ. ಜೊತೆಗೆ ಬಾಲರಾಮನ ದರ್ಶನ ಪಡೆಯಲು ಸಣ್ಣ ಟ್ರಕ್ಕಿಂಗ್ ಮಾಡಿ ಸಾಗಬೇಕು. ಹೀಗಾಗಿ ಈ ಬೆಟ್ಟ ಹಾಗೂ ದೇವಸ್ಥಾನ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿದೆ.
ದೇವಸ್ಥಾನದ ಅರ್ಚಕರು ಹಾಗೂ ಆಡಳಿತ ಮಂಡಳಿ ಪ್ರಕೃತಿಗೆ ಯಾವುದೇ ಧಕ್ಕೆ ಬರದಂತೆ ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಆಗಮಿಸುವ ಭಕ್ತಾದಿಗಳು ಸೂಚನೆಗಳನ್ನು ಪಾಲಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇಷ್ಟೇ ಅಲ್ಲ ಈ ದೇವಸ್ಥಾನದ ಮುಂಭಾಗದ ತುದಿಯಿಂದ ನೋಡಿದರೆ ಡೂನ್ ಕಣಿವೆಯ ಸುಂದರ ನೋಟ ಕಣ್ತುಂಬಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಈ ಪ್ರಕೃತಿ ಸೌಂದರ್ಯ ವೀಕ್ಷಿಸಲು ಆಗಮಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದು ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ.
ಕೆಲವರು ಈ ಸ್ಥಳವನ್ನು ಪಾರ್ಕ್, ಪಿಕ್ನಿಕ್ ಸ್ಪಾಟ್ ಅನ್ನೋ ರೀತಿ ಬಳಸಿಕೊಳ್ಳುತ್ತಿದ್ದಾರೆ. ಡೂನ್ ಕಣಿವೆ ವಿಹಂಗಮ ನೋಟ ನೋಡಲು ದೇವಸ್ಥಾನ ದಾಟಿ ಬದಿ ಸಾಗಬೇಕು. ಹೀಗಾಗಿ ಇಲ್ಲಿಗೆ ಆಗಮಿಸುವ ಕೆಲವರು ದೇವಸ್ಥಾನ ಪ್ರಾಂಗಣದೊಳಗೆ ಚಪ್ಪಲಿ ಬಿಟ್ಟು ಮುಂದೆ ಸಾಗುತ್ತಾರೆ. ಪ್ಲಾಸ್ಟಿಕ್ ಚೀಲಗಳನ್ನು ಎಸೆಯುತ್ತಿದ್ದಾರೆ.
ಸೂರಜ್ ಡೋಗ್ರಾ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬೆಟ್ಟದ ಮೇಲಿನ ದೇವಸ್ಥಾನದ ಮುಂಭಾಗದಲ್ಲೇ ಚಪ್ಪಲಿಗಳನ್ನು ಬಿಟ್ಟಿದ್ದಾರೆ. ಜೊತೆಗೆ ಅಲ್ಲೆ ಕುಳಿತುಕೊಂಡು ಎಂಜಾಯ್ ಮಾಡುತ್ತಿರುವ ದೃಶ್ಯವಿದೆ. ದೇವಸ್ಥಾನದ ಸಿಬ್ಬಂದಿ, ಬಿಟ್ಟಿರುವ ಚಪ್ಪಳಿಗಳನ್ನು ಬೆಟ್ಟದ ಮೇಲಿಂದ ಎಸೆದಿದ್ದಾರೆ. ಭಕ್ತಾದಿಗಳೇ ನಮ್ಮ ಸಂಸ್ಕೃತಿ ಹಾಗೂ ಪದ್ಧತಿಯನ್ನು ಗೌರವಿಸಿ ಎಂಬ ಸಂದೇಶವನ್ನು ಈ ವಿಡಿಯೋ ಜೊತೆ ಹಂಚಿಕೊಳ್ಳಲಾಗಿದೆ.
ಈ ದೇವಸ್ಥಾನದ ಕೆಳಭಾಗ ಹಾಗೂ ಮೇಲ್ಬಾಗದಲ್ಲಿ ಕೆಲ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಆದರೆ ಪಾಲಿಸುವವರ ಸಂಖ್ಯೆ ಮಾತ್ರ ವಿರಳವಾಗಿದೆ. ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ.
ದೇವಸ್ಥಾನ, ಆಚರಣೆ, ಪೂಜೆ, ಪದ್ಧತಿಗಳನ್ನು ಗೌರವಿಸುವನ್ನು ಮನೆಯಲ್ಲೇ ಕಲಿಸಿಕೊಡಬೇಕು ಎಂದಿದ್ದಾರೆ. ಹಲವರು ಇಲ್ಲಿ ಪ್ಲಾಸ್ಟಿಕ್ ಬ್ಯಾಗ್, ಬಾಟಲಿಗಳನ್ನು ಎಸೆದಿದ್ದಾರೆ. ದೇವಸ್ಥಾನದ ಪಾವಿತ್ರ್ಯತೆ ಜೊತೆಗೆ ಪ್ರಕೃತಿಯನ್ನು ಹಾಳುಮಾಡಬೇಡಿ ಎಂದು ಕೆಲವರು ಸೂಚಿಸಿದ್ದಾರೆ. ಈ ಕುರಿತು ಜಾಗೃತಿ ಮೂಡಬೇಕು, ಜನರು ಸ್ವಯಂ ಪ್ರೇರಿತರಾಗಿ ಪಾವಿತ್ರ್ಯ ಉಳಿಸುವಲ್ಲಿ ಹೆಜ್ಜೆ ಇಡಬೇಕು ಅನ್ನೋ ಮಾತುಗಳು ಕೇಳಿಬಂದಿದೆ.



Click it and Unblock the Notifications