Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮದುವೆ ದಿನ ನೀತಾ ಅಂಬಾನಿ ಕೈಯಲ್ಲಿತ್ತು 'ರಾಮನ್ ಡಿವೋ'! ಇದೇನು ಗೊತ್ತಾ?
ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಶುಕ್ರವಾರ ರಾತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮುಂಬೈನ ಜಿಯೋ ವರ್ಲ್ಡ್ ಡ್ರೈವ್ನಲ್ಲಿರುವ ಅಂಬಾನಿ ಒಡೆತನದ ಕನ್ವೆನ್ಷನ್ ಸೆಂಟರ್ ನಲ್ಲಿ 29 ವರ್ಷದ ಅನಂತ್ ಅಂಬಾನಿ, ಭಾರತೀಯ ಫಾರ್ಮಾ ಉದ್ಯಮಿಗಳಾದ ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ವಿವಾಹವಾದರು.

ಈ ಅದ್ದೂರಿ ವಿವಾಹಕ್ಕೆ ವಿಶ್ವದ ಗಣ್ಯಾತಿಗಣ್ಯರು ಆಗಮಿಸಿದ್ದಾರೆ. ಜೊತೆಗೆ ಇಡೀ ವಿಶ್ವವೇ ಈ ಅದ್ದೂರಿ ಮದುವೆ ಕಂಡು ಬೆರಗಾಗಿದ್ದಾರೆ. ಹಲವು ಕಾರಣಕ್ಕೆ ಈ ವಿವಾಹ ಸಮಾರಂಭ ಸುದ್ದಿಯಾಗುತ್ತಲೆ ಇದೆ. ಅದ್ದೂರಿ ತನ ಸೇರಿ ವಧು ವರರು, ನೀತಾ ಅಂಬಾನಿ, ಮುಕೇಶ್ ಅಂಬಾನಿಯ ಐಷಾರಾಮಿ ವಸ್ತುಗಳು ಕೋಟಿ ಕೋಟಿ ಬೆಲೆ ಬಾಳುವಂತಹ ಆಭರಣ ನೋಡಿ ನೋಡಿ ಅಚ್ಚರಿಗೆ ಒಳಗಾಗಿದ್ದಾರೆ.
ಇದೆಲ್ಲದ ನಡುವೆ ನೀತಾ ಅಂಬಾನಿ ನಿನ್ನೆ ಪುತ್ರ ವಿವಾಹ ಸಮಾರಂಭಕ್ಕೆ ಆಗಮಿಸುವಾಗ ತಮ್ಮ ಮುಂಬೈ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ಗೆ ಆಗಮಿಸುತ್ತಿದ್ದಂತೆ, ಅವರು ಸಾಂಪ್ರದಾಯಿಕ 'ರಾಮನ್ ಡಿವೋ' ದೀಪವನ್ನು ಹಿಡಿದು ಕಾಣಿಸಿಕೊಂಡರು. ಆದ್ರೆ ಅವರ ಕೈಯಲ್ಲಿ ಈ ರಾಮನ್ ಡೀವೋ ನೋಡಿದ ಮಂದಿ ಇದೇನು ಚಿನ್ನದ ಆಭರಣದಂತೆ ಕಾಣುತ್ತಿದೆ ಎಂದು ತಲೆ ಕೆಡಿಸಿಕೊಂಡಿದ್ದಾರೆ.
ರಾಮನ್ ಡಿವೋ ಎಂದರೇನು?
ಗುಜರಾತಿ ವಿವಾಹಗಳ ಮಹತ್ವದ ಭಾಗವಾದ 'ರಾಮನ್ ಡಿವೋ'ವನ್ನು ವರನ ತಾಯಿ ಹೊತ್ತು ತರಬೇಕು. ಅಂಧಕಾರವನ್ನು ಹೋಗಲಾಡಿಸಲು ಮತ್ತು ದಂಪತಿಗೆ ಆಶೀರ್ವಾದವನ್ನು ನೀಡಲು ಇದು ಮಂಗಳಕರ ಬೆಳಕು ಎಂಬ ಸಂಪ್ರದಾಯವಿದೆ.
ನೀತಾ ಅಂಬಾನಿ ಈ ಸಂಪ್ರದಾಯವನ್ನು ಅನುಸರಿಸುತ್ತಿರುವುದು ಇದೇ ಮೊದಲಲ್ಲ. ಆಕೆ ತನ್ನ ಹಿರಿಯ ಮಗ ಆಕಾಶ್ನ ಮದುವೆಯಲ್ಲಿ 'ರಾಮನ್ ಡಿವೋ' ಅನ್ನು ಹೊತ್ತೊಯ್ಯುತ್ತಿದ್ದರು.
ಈ ಸಂಪ್ರದಾಯ ಗುಜರಾತಿ ವಿವಾಹದಲ್ಲಿ ಸಾಮಾನ್ಯವಾಗಿದೆ. ಅದರೆ ನೀತಾ ಅಂಬಾನಿ ಹಿಡಿದು ಬಂದ ಈ ದೀಪವು ಚಿನ್ನದಿಂದ ಮಾಡಿದ್ದ ದೀಪವೇ ಎಂಬ ಅನುಮಾನ ಸಹ ಮೂಡಿದೆ. ಏಕೆಂದರೆ ಗಣೇಶನ ವಿಗ್ರಹ ಹೊಂದಿದ್ದ ಆ ರಾಮನ್ ಡಿವೋ ಚಿನ್ನದಂತೆ ಹೊಳೆಯುತ್ತಿತ್ತು.
ಇನ್ನು ನೀತಾ ಅಂಬಾನಿ ಅವರ ಕೈಗೆ ಹಾಕಲಾಗಿದ್ದ ಮದರಂಗಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಏಕೆಂದರೆ ಈ ಮದರಂಗಿ ವಿನ್ಯಾಸ ನೋಡಿದ ಮಂದಿ ಅಚ್ಚರಿ ಹೊರಹಾಕಿದ್ದಾರೆ. ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಅವರ ಹೆಸರುಗಳು ನೀತಾ ಅಂಬಾನಿಯವರ ಮೆಹಂದಿಯ ಭಾಗವಾಗಿದ್ದವು ಮತ್ತು ಅವರ ಮಗಳು ಇಶಾ ಮತ್ತು ಪತಿ ಆನಂದ್ ಪಿರಾಮಲ್ ಅವರ ಹೆಸರುಗಳು; ಮಗ ಆಕಾಶ್ ಮತ್ತು ಅವನ ಹೆಂಡತಿ ಶ್ಲೋಕಾ ಮೆಹ್ತಾ ಹೆಸರು ಕೂಡ ಅವರ ಕೈ ಮೇಲೆ ಮದರಂಗಿಯಾಗಿ ಮೂಡಿತ್ತು. ಜುಲೈ 13 ರಂದು 'ಶುಭ ಆಶೀರ್ವಾದ' ಮತ್ತು ಜುಲೈ 14 ರಂದು 'ಮಂಗಲ್ ಉತ್ಸವ' ಅಥವಾ ಮದುವೆಯ ಆರತಕ್ಷತೆ ನಡೆಯಲಿದೆ. ಜುಲೈ 15 ರಂದು ಮುಂಬೈನಲ್ಲಿ ಮತ್ತೊಂದು ಆರತಕ್ಷತೆ ಪಾರ್ಟಿ ನಡೆಯಲಿದೆ ಎಂದು ತಿಳಿದುಬಂದಿದೆ.



Click it and Unblock the Notifications
