Latest Updates
-
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್!
ಮದುವೆ ದಿನ ನೀತಾ ಅಂಬಾನಿ ಕೈಯಲ್ಲಿತ್ತು 'ರಾಮನ್ ಡಿವೋ'! ಇದೇನು ಗೊತ್ತಾ?
ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಶುಕ್ರವಾರ ರಾತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮುಂಬೈನ ಜಿಯೋ ವರ್ಲ್ಡ್ ಡ್ರೈವ್ನಲ್ಲಿರುವ ಅಂಬಾನಿ ಒಡೆತನದ ಕನ್ವೆನ್ಷನ್ ಸೆಂಟರ್ ನಲ್ಲಿ 29 ವರ್ಷದ ಅನಂತ್ ಅಂಬಾನಿ, ಭಾರತೀಯ ಫಾರ್ಮಾ ಉದ್ಯಮಿಗಳಾದ ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ವಿವಾಹವಾದರು.

ಈ ಅದ್ದೂರಿ ವಿವಾಹಕ್ಕೆ ವಿಶ್ವದ ಗಣ್ಯಾತಿಗಣ್ಯರು ಆಗಮಿಸಿದ್ದಾರೆ. ಜೊತೆಗೆ ಇಡೀ ವಿಶ್ವವೇ ಈ ಅದ್ದೂರಿ ಮದುವೆ ಕಂಡು ಬೆರಗಾಗಿದ್ದಾರೆ. ಹಲವು ಕಾರಣಕ್ಕೆ ಈ ವಿವಾಹ ಸಮಾರಂಭ ಸುದ್ದಿಯಾಗುತ್ತಲೆ ಇದೆ. ಅದ್ದೂರಿ ತನ ಸೇರಿ ವಧು ವರರು, ನೀತಾ ಅಂಬಾನಿ, ಮುಕೇಶ್ ಅಂಬಾನಿಯ ಐಷಾರಾಮಿ ವಸ್ತುಗಳು ಕೋಟಿ ಕೋಟಿ ಬೆಲೆ ಬಾಳುವಂತಹ ಆಭರಣ ನೋಡಿ ನೋಡಿ ಅಚ್ಚರಿಗೆ ಒಳಗಾಗಿದ್ದಾರೆ.
ಇದೆಲ್ಲದ ನಡುವೆ ನೀತಾ ಅಂಬಾನಿ ನಿನ್ನೆ ಪುತ್ರ ವಿವಾಹ ಸಮಾರಂಭಕ್ಕೆ ಆಗಮಿಸುವಾಗ ತಮ್ಮ ಮುಂಬೈ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ಗೆ ಆಗಮಿಸುತ್ತಿದ್ದಂತೆ, ಅವರು ಸಾಂಪ್ರದಾಯಿಕ 'ರಾಮನ್ ಡಿವೋ' ದೀಪವನ್ನು ಹಿಡಿದು ಕಾಣಿಸಿಕೊಂಡರು. ಆದ್ರೆ ಅವರ ಕೈಯಲ್ಲಿ ಈ ರಾಮನ್ ಡೀವೋ ನೋಡಿದ ಮಂದಿ ಇದೇನು ಚಿನ್ನದ ಆಭರಣದಂತೆ ಕಾಣುತ್ತಿದೆ ಎಂದು ತಲೆ ಕೆಡಿಸಿಕೊಂಡಿದ್ದಾರೆ.
ರಾಮನ್ ಡಿವೋ ಎಂದರೇನು?
ಗುಜರಾತಿ ವಿವಾಹಗಳ ಮಹತ್ವದ ಭಾಗವಾದ 'ರಾಮನ್ ಡಿವೋ'ವನ್ನು ವರನ ತಾಯಿ ಹೊತ್ತು ತರಬೇಕು. ಅಂಧಕಾರವನ್ನು ಹೋಗಲಾಡಿಸಲು ಮತ್ತು ದಂಪತಿಗೆ ಆಶೀರ್ವಾದವನ್ನು ನೀಡಲು ಇದು ಮಂಗಳಕರ ಬೆಳಕು ಎಂಬ ಸಂಪ್ರದಾಯವಿದೆ.
ನೀತಾ ಅಂಬಾನಿ ಈ ಸಂಪ್ರದಾಯವನ್ನು ಅನುಸರಿಸುತ್ತಿರುವುದು ಇದೇ ಮೊದಲಲ್ಲ. ಆಕೆ ತನ್ನ ಹಿರಿಯ ಮಗ ಆಕಾಶ್ನ ಮದುವೆಯಲ್ಲಿ 'ರಾಮನ್ ಡಿವೋ' ಅನ್ನು ಹೊತ್ತೊಯ್ಯುತ್ತಿದ್ದರು.
ಈ ಸಂಪ್ರದಾಯ ಗುಜರಾತಿ ವಿವಾಹದಲ್ಲಿ ಸಾಮಾನ್ಯವಾಗಿದೆ. ಅದರೆ ನೀತಾ ಅಂಬಾನಿ ಹಿಡಿದು ಬಂದ ಈ ದೀಪವು ಚಿನ್ನದಿಂದ ಮಾಡಿದ್ದ ದೀಪವೇ ಎಂಬ ಅನುಮಾನ ಸಹ ಮೂಡಿದೆ. ಏಕೆಂದರೆ ಗಣೇಶನ ವಿಗ್ರಹ ಹೊಂದಿದ್ದ ಆ ರಾಮನ್ ಡಿವೋ ಚಿನ್ನದಂತೆ ಹೊಳೆಯುತ್ತಿತ್ತು.
ಇನ್ನು ನೀತಾ ಅಂಬಾನಿ ಅವರ ಕೈಗೆ ಹಾಕಲಾಗಿದ್ದ ಮದರಂಗಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಏಕೆಂದರೆ ಈ ಮದರಂಗಿ ವಿನ್ಯಾಸ ನೋಡಿದ ಮಂದಿ ಅಚ್ಚರಿ ಹೊರಹಾಕಿದ್ದಾರೆ. ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಅವರ ಹೆಸರುಗಳು ನೀತಾ ಅಂಬಾನಿಯವರ ಮೆಹಂದಿಯ ಭಾಗವಾಗಿದ್ದವು ಮತ್ತು ಅವರ ಮಗಳು ಇಶಾ ಮತ್ತು ಪತಿ ಆನಂದ್ ಪಿರಾಮಲ್ ಅವರ ಹೆಸರುಗಳು; ಮಗ ಆಕಾಶ್ ಮತ್ತು ಅವನ ಹೆಂಡತಿ ಶ್ಲೋಕಾ ಮೆಹ್ತಾ ಹೆಸರು ಕೂಡ ಅವರ ಕೈ ಮೇಲೆ ಮದರಂಗಿಯಾಗಿ ಮೂಡಿತ್ತು. ಜುಲೈ 13 ರಂದು 'ಶುಭ ಆಶೀರ್ವಾದ' ಮತ್ತು ಜುಲೈ 14 ರಂದು 'ಮಂಗಲ್ ಉತ್ಸವ' ಅಥವಾ ಮದುವೆಯ ಆರತಕ್ಷತೆ ನಡೆಯಲಿದೆ. ಜುಲೈ 15 ರಂದು ಮುಂಬೈನಲ್ಲಿ ಮತ್ತೊಂದು ಆರತಕ್ಷತೆ ಪಾರ್ಟಿ ನಡೆಯಲಿದೆ ಎಂದು ತಿಳಿದುಬಂದಿದೆ.



Click it and Unblock the Notifications