Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಶ್ರಾವಣ ಮಾಸದಲ್ಲಿದೆ 17 ಪ್ರಮುಖ ಹಬ್ಬಗಳು, ವ್ರತಗಳಿವೆ
ಆಗಸ್ಟ್ 17ರಿಂದ ನಿಜ ಶ್ರಾವಣ ಮಾಸ ಶುರುವಾಗಿದೆ. ನಿಜ ಶ್ರಾವಣ ಮಾಸ ಶುರುವಾಯಿತೆಂದರೆ ಹಬ್ಬಗಳು ಶುರುವಾಯಿತೆಂದರ್ಥ. ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ತಿಂಗಳೆಂದು ಪರಿಗಣಿಸಲಾಗಿದೆ. ಈ ಪವಿತ್ರ ತಿಂಗಳಿನಲ್ಲಿ ಹಲವಾರು ಪ್ರಮುಖ ಹಬ್ಬಗಳು, ವ್ರತಗಳಿವೆ.
ಈ ತಿಂಗಳಿನ ಮೊದಲ ಹಬ್ಬ ನಾಗರ ಪಂಚಮಿಯಿಂದ ಶುರುವಾಗುವುದು. ಈ ತಿಂಗಳಿನಲ್ಲಿ ಯಾವೆಲ್ಲಾ ಹಬ್ಬಗಳು, ವ್ರತಗಳಿವೆ ಎಂದು ನೋಡೋಣ ಬನ್ನಿ:

ಆಗಸ್ಟ್ 21: ನಾಗರ ಪಂಚಮಿ
ಆಗಸ್ಟ್ 25: ಮಹಾ ವರಲಕ್ಷ್ಮಿ ವ್ರತ
ಆಗಸ್ಟ್ 30: ಶ್ರಾವಣ ಪೂರ್ಣಿಮಾ
ಸೆಪ್ಟೆಂಬರ್ 6: ಗೋಕುಲಾಷ್ಟಮಿ, ಕೃಷ್ಣ ಜನ್ಮಾಷ್ಟಮಿ
ಶ್ರಾವಣ ಸೋಮವಾರ
ಆಗಸ್ಟ್ 21
ಆಗಸ್ಟ್ 28
ಸೆಪ್ಟೆಂಬರ್ 4
ಸೆಪ್ಟೆಂಬರ್ 11
ಮಂಗಳ ಗೌರಿ ವ್ರತ
ಆಗಸ್ಟ್ 22
ಆಗಸ್ಟ್ 29
ಸೆಪ್ಟೆಂಬರ್ 56
ಸೆಪ್ಟೆಂಬರ್ 12
ಶ್ರಾವಣ ಶುಕ್ರವಾರ
ಆಗಸ್ಟ್ 18
ಆಗಸ್ಟ್ 25
ಸೆಪ್ಟೆಂಬರ್ 1
ಸೆಪ್ಟೆಂಬರ್ 8
ಸೆಪ್ಟೆಂಬರ್ 15
ನಾಗ ಪಂಚಮಿ
ನಾಗರ ಪಂಚಮಿ:ಎಲ್ಲಾ ಹಬ್ಬಗಳಿಗೆ ಮುನ್ನುಡಿಯಾಗಿ ನಗರ ಪಂಚಮಿ ಹಬ್ಬ ಬರುತ್ತಿದೆ,ನಾಗರ ಪಂಚಮಿ ಹಬ್ಬವನ್ನು ದೇಶದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ನಾಗ ಮೂರ್ತಿಗಳಿಗೆ ಹಾಲೆರೆದು ಈ ಹಬ್ಬವನ್ನು ಆಚರಿಸಲಾಗುವುದು. ನಾವು ಆಚರಣೆ ಮಾಡುವ ಹಬ್ಬಗಳಿಗೂ ಪ್ರಕೃತಿಗೂ ಸಂಬಂಧವಿದೆ. ನಾಗರ ಪಂಚಮಿ ಎಂದರೆ ಮಳೆಗಾಲ, ಮಳೆಗಾಲದಲ್ಲಿ ಹಾವುಗಳು ಹುತ್ತವನ್ನು ಸೇರಿರುತ್ತದೆ, ನಮಗೆ ಏನೂ ತೊಂದರೆ ಮಾಡಬೇಡ ಎಂದು ಹಾವುಗಳನ್ನು ಪ್ರಾರ್ಥಿಸಿದರೆ ಹಾವುಗಳು ನಮಗೆ ಯಾವುದೇ ತೊಂದರೆ ಮಾಡುವುದಿಲ್ಲ ಎಂಬ ನಂಬಿಕೆ. ಹೀಗಾಗಿ ನಾಗರ ಪಂಚಮಿಯಂದು ಹಾವಿಗೆ ಹಾಲೆರೆದು ಹಬ್ಬವನ್ನು ಆಚರಿಸಲಾಗುವುದು.
ಶ್ರಾವಣ ಸೋಮವಾರ: ಪ್ರತಿ ಶ್ರಾವಣ ಸೋಮವಾರದಂದು ಶಿವನಿಗೆ ವಿಶೇಷ ಪೂಜೆಯಲ್ಲಿ ಸಲ್ಲಿಸಲಾಗುವುದು. ಶ್ರಾವಣ ಸೋಮವಾರ ಶಿವನ ಆರಾಧನೆ ಮಾಡುವುದರಿಂದ ಶಿವನ ವಿಶೇಷ ಕೃಪೆಗೆ ಪಾತ್ರರಾಗಬಹುದು, ಇದರಿಂದ ಜೀವನದಲ್ಲಿನ ಕಷ್ಟಗಳು ದೂರಾಗುವುದು ಎಂಬುವುದು ಭಕ್ತರ ಅಚಲ ನಂಬಿಕೆ.
ಮಂಗಳ ಗೌರಿ ವ್ರತ: ಶ್ರಾವಣ ಮಾಸದ ಪ್ರತಿ ಮಂಗಳವಾರ ಮಂಗಳ ಗೌರಿ ವ್ರತವನ್ನು ಆಚರಿಸಲಾಗುವುದು. ಪತಿಯ ಆಯುಸ್ಸು ಹಾಗೂ ಸಂತಾನ ಭಾಗ್ಯಕ್ಕಾಗಿ ವಿವಾಹವಾದ 5 ವರ್ಷದೊಳಗಿನ ಮುತ್ತೈದೆಯರು ಈ ವ್ರತವನ್ನು ಆಚರಿಸುತ್ತಾರೆ.
ಶ್ರಾವಣ ಶುಕ್ರವಾರ: ಶ್ರಾವಣ ಶುಕ್ರವಾರದಂದು ಲಕ್ಷ್ಮಿಯ ಆರಾಧನೆ ಮಾಡುವುದು. ಲಕ್ಷ್ಮಿಯ ಆರಾಧನೆ ಮಾಡುವುದರಿಂದ ಸಂಪತ್ತು ವೃದ್ಧಿಸಲಿದೆ.
ಮಹಾ ವರಲಕ್ಷ್ಮಿ ವ್ರತ: ಶ್ರಾವಣ ಮಾಸದ ಹುಣ್ಣಿಮೆಗಿಂತ ಮೊದಲು ಬರುವ ಶುಕ್ರವಾರದಂದು ಮಹಾ ವರಲಕ್ಷ್ಮಿ ವ್ರತ ಆಚರಿಸಲಾಗುವುದು.
ಶ್ರಾವಣ ಪೂರ್ಣಿಮಾ: ಶ್ರಾವಣ ಮಾಸದ ಹುಣ್ಣಮೆಯೆಂದು ರಕ್ಷಾಬಂಧನ ಪೂಜೆ ಮಾಡಲಾಗುವುದು.
ಗೋಕುಲಾಷ್ಟಮಿ: ಈ ದಿನ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಈ ದಿನ ಆಚರಿಸಲಾಗುವುದು.



Click it and Unblock the Notifications











