Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
'ಬಾ ಗುರು ಶೆಡ್ಗೆ ಟೀ ಕುಡಿ': ವೈರಲ್ ಆಗುತ್ತಿದೆ ಹೊಸ ಟೀ ಅಂಗಡಿ ಪೋಸ್ಟರ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಪೊಲೀಸರು ಇನ್ನು ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ, ಈ ನಡುವೆ ದರ್ಶನ್ ಅವರನ್ನ ಬಳ್ಳಾರಿ ಸೆಂಟ್ರಲ್ ಜೈಲ್ಗೆ ಶಿಫ್ಟ್ ಮಾಡಲಾಗಿದೆ. ಸದ್ಯ ದರ್ಶನ್ ಜೊತೆಗಿದ್ದ ಹಲವರನ್ನು ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾಯಿಸಲಾಗಿದೆ.
ಈಗ ದರ್ಶನ್ ಬಳ್ಳಾರಿಗೆ ಶಿಫ್ಟ್ ಆಗುವಾಗ ಹಾಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಂಟಾಗಿದ್ದ ಘಟನೆ ಸಂಬಂಧ ತನಿಖೆಯೂ ನಡೆಯುತ್ತಿದೆ. ಆದ್ರೆ ಬಳ್ಳಾರಿ ಜೈಲು ಸೇರುವ ಮುನ್ನ ದರ್ಶನ್ ಅಭಿಮಾನಿಗಳು ಜೈಲು ಹೊರಗೆ ಸೇರಿ ಜೈಕಾರ ಕೂಗಿದ್ದರು. ಅಲ್ಲದೆ ಅವರು ಜೈಲು ಸೇರಿದ ಬಳಿಕ ಅವರ ಫ್ಯಾನ್ಸ್ ಕ್ರೇಜ್ ಹೆಚ್ಚಾಗುತ್ತಲೇ ಇದೆ.

ಇದಕ್ಕೆ ಉದಾಹರಣೆಯಾಗಿ ನಾವು ಸಾಮಾಜಿಕ ಜಾಲತಾಣದಲ್ಲಿ ಹತ್ತು ಹಲವು ರೀತಿಯ ಘಟನೆಗಳ ನೋಡಬಹುದು. ಈ ಮೊದಲು ದರ್ಶನ್ಗೆ ನೀಡಲಾದ ಕೈದಿ ನಂಬರ್ ಅನ್ನು ಸಹ ಹಚ್ಚೆ ಹಾಕಿಸಿಕೊಳ್ಳುವುದು, ವಾಹನಗಳ ಮೇಲೆ ಬರೆಸಿಕೊಳ್ಳುವುದು. ಅವರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಹೀಗೆ ಹತ್ತಾರು ಘಟನೆ ನೋಡಿದ್ದೆವು.
ಈಗ ಅವರ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಮತ್ತೊಂದು ಸಾಹಸ ಮಾಡಿದ್ದಾರೆ. ದರ್ಶನ್ ಪ್ರಕರಣದ ಬಳಿಕ ಪಟ್ಟಣಗೆರೆ ಶೆಡ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪಟ್ಟಣಗೆರೆ ಶೆಡ್ ಕುರಿತಂತೆ ಹತ್ತಾರು ವಿಡಿಯೋಗಳ ನಾವು ನೋಡಬಹುದು. ಆದ್ರೆ ಈಗೊಂದು ವಿಡಿಯೋ ಫುಲ್ ವೈರಲ್ ಆಗಿದೆ.
ಈ ಹಿಂದೆ ವೈರಲ್ ಆಗಿದ್ದ ಶೆಡ್ಗೆ ಹೋಗೋಣ ಬಾ ಎಂಬ ಡೈಲಾಗ್ ಈಗ ಟೀ ಅಂಗಡಿಯಾಗಿ ಬದಲಾಗಿದೆ. ಹೌದು ಶೆಡ್ ಟೀ ಸ್ಟಾಲ್ ಎಂಬ ಟೀ ಅಂಗಡಿ ತಲೆ ಎತ್ತಿದ್ದು, 'ಬಾ ಗುರು ಶೆಡ್ಗೆ ಟೀ ಕುಡಿ' ಎಂಬ ಬರಹ ಅದರಲ್ಲಿದ್ದು, ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ.
ಶೆಡ್ ಟೀ ಸ್ಟಾಲ್ ಎಂಬ ಪೋಸ್ಟರ್ ಅನ್ನು ಅಂಗಡಿ ಮುಂದೆ ಹಾಕಲಾಗಿದ್ದು, ಬಾ ಗುರು ಶೆಡ್ಗೆ ಟೀ ಕುಡಿ ಎಂದು ಬರೆಯಲಾಗಿದೆ. ಈ ಪೋಸ್ಟ್ ಅನ್ನು ಕನ್ನಡ ಬೀಟ್ ಬಾಕ್ಸ್ (kannada_beatbox) ಎಂಭ ಇನ್ಸ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಸ್ ಸಹ ಆಗುತ್ತಿದೆ.
ಪೋಸ್ಟರ್ನಲ್ಲಿ ತಿಳಿಸುವಂತೆ ಈ ಅಂಗಡಿ ಇರುವು ಚಿಕ್ಕಮಗಳೂರಿನ ತರೀಕೆರೆ ಪಟ್ಟಣದ ಎಂ.ಜಿ ರಸ್ತೆ ಎಂಬ ಮಾಹಿತಿ ಸಿಗುತ್ತದೆ. ಪೋಸ್ಟರ್ ಮೇಲೂ ಈ ವಿಳಾಸ ನೋಡಬಹುದು. ಬುದ್ಧಿವಂತ ವ್ಯಾಪಾರಿಯೊಬ್ಬ ಈ ರೀತಿ ಟ್ರಿಕ್ಸ್ ಮಾಡಿರುವುದು ಜನರ ಗಮನ ಸೆಳೆಯುತ್ತಿದೆ. ಹಾಗೆ ಪೋಸ್ಟರ್ನಲ್ಲಿ 'ನಮ್ಮಲ್ಲಿ ಬೀಡಾ, ಟೀ, ಕಾಫಿ, ಬೂಸ್ಟ್, ಹಾಲು ದೊರೆಯುತ್ತದೆ ಎಂದು ಬರೆಯಲಾಗಿದೆ. ಅಂದ್ರೆ ಇದೊಂದು ಚಿಕ್ಕ ಪೆಟ್ಟಿ ಅಂಗಡಿಯಾಗಿದ್ದು, ಗ್ರಾಹಕರ ಸೆಳೆಯಲು ಆತ ಈ ರೀತಿ ಪ್ಲಾನ್ ಮಾಡಿದ್ದಾನೆ.
ಈ ಫೋಟೋ ನೋಡಿದ ಮಂದಿ ತಮಾಷೆಯ ಕಮೆಂಟ್ಗಳ ಮಾಡಿದ್ದಾರೆ. ಟೀ ಕುಡಿಯೋಣ ಶೆಡ್ ಹತ್ರ ಬಾ ಎಂದು ಬಳಕೆದಾರನೊಬ್ಬ ತಮಾಷೆಯಾಗಿ ಬರೆದುಕೊಂಡಿದ್ದರೆ ಮತ್ತೋರ್ವ ಟೀ ಕುಡಿಯಲು ನನ್ನ ಸ್ನೇಹಿತನ ಶೆಡ್ಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದಾನೆ.



Click it and Unblock the Notifications