Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವರಾತ್ರಿ ಮೊದಲ ದಿನ ಶೈಲಪುತ್ರಿಯ ಆರಾಧನೆ: ಘಟಸ್ಥಾಪನಾ ಸಮಯ ಹಾಗೂ ಪವರ್ಫುಲ್ ಮಂತ್ರ
ಭಾರತದಲ್ಲಿ ಸಡಗರ ಸಂಭ್ರಮದ ನವರಾತ್ರಿ. 9 ದಿನಗಳ ಈ ಆಚರಣೆಯಲ್ಲಿ ದುರ್ಗೆಯ 9 ಸ್ವರೂಪಗಳನ್ನು ಆರಾಧಿಸುತ್ತಾರೆ, ಒಂದೊಂದು ದೇವಿ ಸ್ವರೂಪದ ಹಿಂದೆ ಅನೇಕ ಧಾರ್ಮಿಕ ನಂಬಿಕೆಗಳಿವೆ, ಅದರಂತೆ ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಅವತಾರವನ್ನು ಆರಾಧಿಸಲಾಗುವುದು.

ದುರ್ಗೆಯೆಂದರೆ ಉಗ್ರಸ್ವರೂಪಿಣಿ, ಆದರೆ ಶೈಲಪುತ್ರಿ ಸೌಮ್ಯರೂಪಿ, ಶೈಲಪುತ್ರಿ ಪಾರ್ವತಿ ದೇವಿಯ ಅವತಾರವೆಂದು ಹೇಳಲಾಗುವುದು. ಈಕೆ ತಾಯಿ ಸ್ವರೂಪಿಣಿ, ಈಕೆಯ ತಲೆಯಲ್ಲಿ ಅರ್ಧ ಚಂದ್ರನಿದ್ದಾನೆ, ಬಲಗೈಯಲ್ಲಿ ತ್ರಿಶೂಲ ಹಿಡಿದಿದ್ದಾಳೆ, ಎಡಗೈಯಲ್ಲಿ ತಾವರೆಯಿದೆ, ನಂದಿ ಈಕೆಯ ವಾಹನವಾಗಿದೆ. ಈ ತಾಯಿಯನ್ನು ಶ್ವೇತ ವರ್ಣದ ಉಡುಪಿನಲ್ಲಿ ಚಿತ್ರಿಸಲಾಗಿದೆ.
ದೇವಿಯನ್ನು ಆರಾಧನೆ ಮಾಡುವುದರಿಂದ ಜೀವನದಲ್ಲಿ ಸ್ಥಿರತೆ ಇರಲಿದೆ
ಬದುಕಿನಲ್ಲಿ ಸ್ಥಿರತೆ ತುಂಬಾನೇ ಮುಖ್ಯ, ಮನಸ್ಸು ಸ್ಥಿರತೆಯಿಂದಿರಬೇಕು, ಅಲ್ಲದೆ ಆರ್ತಿಕತೆ, ಸಂಪತ್ತು, ಕೀರ್ತಿ ಇವೆಲ್ಲದರಲ್ಲೂ ಸ್ಥಿರತೆ ಇರಬೇಕೆಂದು ಬಯಸುತ್ತೇವೆ. ಶೈಲಪುತ್ರಿಯನ್ನು ಪೂಜಿಸಿದರೆ ನಮ್ಮ ಕೀರ್ತಿ ಹೆಚ್ಚಾಗಲಿದೆ, ನಾವು ನಮ್ಮ ಕಾರ್ಯಗಳಿಂದ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಲು ಸಾಧ್ಯವಾಗುವುದು.
ದೇವಾನು ದೇವತೆಗಳೇ ಶೈಲಪುತ್ರಿಯನ್ನು ಆರಾಧಿಸುತ್ತಾರೆ
ದೇವತೆಗಳ ಅಹಂ ಶೈಲಪುತ್ರಿ ಮುಂದೆ ದ್ವಂಸವಾಗಿದೆ, ಆಕೆಯ ಶಕ್ತಿಯನ್ನರಿತ ದೇವತೆಗಳು ತುಂಬಾನೇ ವಿನಮ್ರರಾಗಿ ಕೈ ಮುಗಿದು ನಿಲ್ಲುತ್ತಾರೆ ಎಂದು ಧಾರ್ಮಿಕ ಪುರಾಣಗಳಲ್ಲಿ ಹೇಳಲಾಗಿದೆ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ಚರ ಕೂಡ ಶೈಲಪುತ್ರಿಗೆ ಅಗ್ರಸ್ಥಾನ ನೀಡಿದ್ದಾರೆ. ಶೈಲಪುತ್ರಿಗೆ ಬಿಳಿ ಬಣ್ಣದ ಹೂವುಗಳು ಮಲ್ಲಿಗೆ ಮತ್ತಿತರ ಹೂವುಗಳು, ಬಳಿ ಬಣ್ಣದ ನೈವೇದ್ಯ ಅರ್ಪಿಸಿ ಪೂಜಿಸಲಾಗುವುದು.
ಅಕ್ಟೋಬರ್ 3ಕ್ಕೆ ಘಟಸ್ಥಾಪನ ಮುಹೂರ್ತ
ಬಳಗ್ಗೆ 6:15ರಿಂದ 07:22ರ ಒಳಗಡೆ ಮಾಡಬಹುದು
ಘಟಸ್ಥಾಒನ ಅಭಿಜಿತ್ ಮುಹೂರ್ತ ಬೆಳಗ್ಗೆ 11:46ರಿಂದ ಮಧ್ಯಾಹ್ನ 12:33ರವರೆಗೆ ಇದೆ
ಪ್ರತಿಪದ ತಿಥಿ ಅಕ್ಟೋಬರ್ 2 ಮಧ್ಯರಾತ್ರಿ 12:18ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 4 ಮುಂಜಾನೆ 02:28ರವರೆಗೆ ಇದೆ.
ಶೈಲಪುತ್ರಿ ಪೂಜೆ ಮಾಡುವಾಗ ಈ ಮಂತ್ರ ಪಠಿಸಿ
ವಂದೇ ವಾಂಚಿತಲಾಭಾಯ ಚಂದ್ರಾರ್ಧ ಕೃತಶೈಖರಾಮ್ | ವೃಷರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್
ಈ ವರ್ಷ ನವರಾತ್ರಿಗೆ ಮೊದಲ ದಿನ ಯಾವ ಬಣ್ಣ ಬಂದಿದೆ?
ಪ್ರತಿವರ್ಷವೂ ನವರಾತ್ರಿಗೆ ಪ್ರತಿದಿನ ಒಂದೊಂದು ಬಣ್ಣದ ಉಡುಪು ಧರಿಸಿ ದುರ್ಗಾ ಪೂಜೆ ಮಾಡುತ್ತಾರೆ. ಈ ವರ್ಷ ಮೊದಲ ದಿನ ಹಳದಿ ಬಣ್ಣ ಬಂದಿದೆ.
ಪಲ್ಲಕ್ಕಿಯಲ್ಲಿ ಬರ್ತಾ ಇದ್ದಾಳೆ ದುರ್ಗೆ:
ನವರಾತ್ರಿ ಪ್ರಾರಂಭದ ದಿನ ದೇವಿಯ ವಾಹನ ಕೂಡ ಗಮನಹರಿಸಲಾಗುವುದು. ಈ ಬಾರಿ ಪಲ್ಲಕ್ಕಿಯಲ್ಲಿ ಬರ್ತಾ ಇರುವುದರಿಂದ ಇದು ಮುಂಬರುವ ಅಶುಭದ ಸೂಚನೆ ಎಂಬುವುದು ಧಾರ್ಮಿಕ ನಂಬಿಕೆ. ದೇಶದಲ್ಲಿ ನೈಸರ್ಗಿ ವಿಪತ್ತು, ಯುದ್ಧ ಭೀತಿ, ಆಂತರಿಕ ಕಲಹಗಳು ಉಂಟಾಗಬಹುದು, ಸಾಂಕ್ರಾಮಿಕ ರೋಗ ಬರಬಹುದು ಎಂದು ಹೇಳುತ್ತದೆ.
ದುರ್ಗೆ ತನ್ನ ಭಕ್ತರನ್ನು ಸದಾ ರಕ್ಷಣೆ ಮಾಡುತ್ತಾಳೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿಯನ್ನು ಭಕ್ತಿಯಿಂದ ಆರಾಧಿಸುವುದರಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ, ದೇವಿ ಕೃಪೆ ನಮ್ಮ ಮೇಲಿರಲಿದೆ.
ಎಲ್ಲರಿಗೂ ನವರಾತ್ರಿ ಶುಭ ತರಲಿ, ನವರಾತ್ರಿಯ ಶುಭಾಶಯಗಳು....



Click it and Unblock the Notifications











