Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ನವರಾತ್ರಿ ಮೊದಲ ದಿನ ಶೈಲಪುತ್ರಿಯ ಆರಾಧನೆ: ಘಟಸ್ಥಾಪನಾ ಸಮಯ ಹಾಗೂ ಪವರ್ಫುಲ್ ಮಂತ್ರ
ಭಾರತದಲ್ಲಿ ಸಡಗರ ಸಂಭ್ರಮದ ನವರಾತ್ರಿ. 9 ದಿನಗಳ ಈ ಆಚರಣೆಯಲ್ಲಿ ದುರ್ಗೆಯ 9 ಸ್ವರೂಪಗಳನ್ನು ಆರಾಧಿಸುತ್ತಾರೆ, ಒಂದೊಂದು ದೇವಿ ಸ್ವರೂಪದ ಹಿಂದೆ ಅನೇಕ ಧಾರ್ಮಿಕ ನಂಬಿಕೆಗಳಿವೆ, ಅದರಂತೆ ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಅವತಾರವನ್ನು ಆರಾಧಿಸಲಾಗುವುದು.

ದುರ್ಗೆಯೆಂದರೆ ಉಗ್ರಸ್ವರೂಪಿಣಿ, ಆದರೆ ಶೈಲಪುತ್ರಿ ಸೌಮ್ಯರೂಪಿ, ಶೈಲಪುತ್ರಿ ಪಾರ್ವತಿ ದೇವಿಯ ಅವತಾರವೆಂದು ಹೇಳಲಾಗುವುದು. ಈಕೆ ತಾಯಿ ಸ್ವರೂಪಿಣಿ, ಈಕೆಯ ತಲೆಯಲ್ಲಿ ಅರ್ಧ ಚಂದ್ರನಿದ್ದಾನೆ, ಬಲಗೈಯಲ್ಲಿ ತ್ರಿಶೂಲ ಹಿಡಿದಿದ್ದಾಳೆ, ಎಡಗೈಯಲ್ಲಿ ತಾವರೆಯಿದೆ, ನಂದಿ ಈಕೆಯ ವಾಹನವಾಗಿದೆ. ಈ ತಾಯಿಯನ್ನು ಶ್ವೇತ ವರ್ಣದ ಉಡುಪಿನಲ್ಲಿ ಚಿತ್ರಿಸಲಾಗಿದೆ.
ದೇವಿಯನ್ನು ಆರಾಧನೆ ಮಾಡುವುದರಿಂದ ಜೀವನದಲ್ಲಿ ಸ್ಥಿರತೆ ಇರಲಿದೆ
ಬದುಕಿನಲ್ಲಿ ಸ್ಥಿರತೆ ತುಂಬಾನೇ ಮುಖ್ಯ, ಮನಸ್ಸು ಸ್ಥಿರತೆಯಿಂದಿರಬೇಕು, ಅಲ್ಲದೆ ಆರ್ತಿಕತೆ, ಸಂಪತ್ತು, ಕೀರ್ತಿ ಇವೆಲ್ಲದರಲ್ಲೂ ಸ್ಥಿರತೆ ಇರಬೇಕೆಂದು ಬಯಸುತ್ತೇವೆ. ಶೈಲಪುತ್ರಿಯನ್ನು ಪೂಜಿಸಿದರೆ ನಮ್ಮ ಕೀರ್ತಿ ಹೆಚ್ಚಾಗಲಿದೆ, ನಾವು ನಮ್ಮ ಕಾರ್ಯಗಳಿಂದ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಲು ಸಾಧ್ಯವಾಗುವುದು.
ದೇವಾನು ದೇವತೆಗಳೇ ಶೈಲಪುತ್ರಿಯನ್ನು ಆರಾಧಿಸುತ್ತಾರೆ
ದೇವತೆಗಳ ಅಹಂ ಶೈಲಪುತ್ರಿ ಮುಂದೆ ದ್ವಂಸವಾಗಿದೆ, ಆಕೆಯ ಶಕ್ತಿಯನ್ನರಿತ ದೇವತೆಗಳು ತುಂಬಾನೇ ವಿನಮ್ರರಾಗಿ ಕೈ ಮುಗಿದು ನಿಲ್ಲುತ್ತಾರೆ ಎಂದು ಧಾರ್ಮಿಕ ಪುರಾಣಗಳಲ್ಲಿ ಹೇಳಲಾಗಿದೆ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ಚರ ಕೂಡ ಶೈಲಪುತ್ರಿಗೆ ಅಗ್ರಸ್ಥಾನ ನೀಡಿದ್ದಾರೆ. ಶೈಲಪುತ್ರಿಗೆ ಬಿಳಿ ಬಣ್ಣದ ಹೂವುಗಳು ಮಲ್ಲಿಗೆ ಮತ್ತಿತರ ಹೂವುಗಳು, ಬಳಿ ಬಣ್ಣದ ನೈವೇದ್ಯ ಅರ್ಪಿಸಿ ಪೂಜಿಸಲಾಗುವುದು.
ಅಕ್ಟೋಬರ್ 3ಕ್ಕೆ ಘಟಸ್ಥಾಪನ ಮುಹೂರ್ತ
ಬಳಗ್ಗೆ 6:15ರಿಂದ 07:22ರ ಒಳಗಡೆ ಮಾಡಬಹುದು
ಘಟಸ್ಥಾಒನ ಅಭಿಜಿತ್ ಮುಹೂರ್ತ ಬೆಳಗ್ಗೆ 11:46ರಿಂದ ಮಧ್ಯಾಹ್ನ 12:33ರವರೆಗೆ ಇದೆ
ಪ್ರತಿಪದ ತಿಥಿ ಅಕ್ಟೋಬರ್ 2 ಮಧ್ಯರಾತ್ರಿ 12:18ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 4 ಮುಂಜಾನೆ 02:28ರವರೆಗೆ ಇದೆ.
ಶೈಲಪುತ್ರಿ ಪೂಜೆ ಮಾಡುವಾಗ ಈ ಮಂತ್ರ ಪಠಿಸಿ
ವಂದೇ ವಾಂಚಿತಲಾಭಾಯ ಚಂದ್ರಾರ್ಧ ಕೃತಶೈಖರಾಮ್ | ವೃಷರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್
ಈ ವರ್ಷ ನವರಾತ್ರಿಗೆ ಮೊದಲ ದಿನ ಯಾವ ಬಣ್ಣ ಬಂದಿದೆ?
ಪ್ರತಿವರ್ಷವೂ ನವರಾತ್ರಿಗೆ ಪ್ರತಿದಿನ ಒಂದೊಂದು ಬಣ್ಣದ ಉಡುಪು ಧರಿಸಿ ದುರ್ಗಾ ಪೂಜೆ ಮಾಡುತ್ತಾರೆ. ಈ ವರ್ಷ ಮೊದಲ ದಿನ ಹಳದಿ ಬಣ್ಣ ಬಂದಿದೆ.
ಪಲ್ಲಕ್ಕಿಯಲ್ಲಿ ಬರ್ತಾ ಇದ್ದಾಳೆ ದುರ್ಗೆ:
ನವರಾತ್ರಿ ಪ್ರಾರಂಭದ ದಿನ ದೇವಿಯ ವಾಹನ ಕೂಡ ಗಮನಹರಿಸಲಾಗುವುದು. ಈ ಬಾರಿ ಪಲ್ಲಕ್ಕಿಯಲ್ಲಿ ಬರ್ತಾ ಇರುವುದರಿಂದ ಇದು ಮುಂಬರುವ ಅಶುಭದ ಸೂಚನೆ ಎಂಬುವುದು ಧಾರ್ಮಿಕ ನಂಬಿಕೆ. ದೇಶದಲ್ಲಿ ನೈಸರ್ಗಿ ವಿಪತ್ತು, ಯುದ್ಧ ಭೀತಿ, ಆಂತರಿಕ ಕಲಹಗಳು ಉಂಟಾಗಬಹುದು, ಸಾಂಕ್ರಾಮಿಕ ರೋಗ ಬರಬಹುದು ಎಂದು ಹೇಳುತ್ತದೆ.
ದುರ್ಗೆ ತನ್ನ ಭಕ್ತರನ್ನು ಸದಾ ರಕ್ಷಣೆ ಮಾಡುತ್ತಾಳೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿಯನ್ನು ಭಕ್ತಿಯಿಂದ ಆರಾಧಿಸುವುದರಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ, ದೇವಿ ಕೃಪೆ ನಮ್ಮ ಮೇಲಿರಲಿದೆ.
ಎಲ್ಲರಿಗೂ ನವರಾತ್ರಿ ಶುಭ ತರಲಿ, ನವರಾತ್ರಿಯ ಶುಭಾಶಯಗಳು....



Click it and Unblock the Notifications
