Latest Updates
-
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ! -
ಪುಣೆಯಲ್ಲಿ ಮಳೆ ರಜೆ: ವರ್ಕ್ ಫ್ರಮ್ ಹೋಮ್ ಜೊತೆಗೆ ಮಕ್ಕಳನ್ನು ನಿಭಾಯಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಮುಂಬೈ ಮಳೆ ಅಬ್ಬರ: ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಮುಂಬೈ ಮಳೆ ರಜೆ: ಮನೆಯಲ್ಲೇ ಕುಟುಂಬದೊಂದಿಗೆ ಫಿಟ್ ಆಗಿರಲು 12 ನಿಮಿಷದ ಸಿಂಪಲ್ ಯೋಗ!
ನವರಾತ್ರಿ ಸಮಯದಲ್ಲಿ ಈ ವಸ್ತುಗಳನ್ನು ಮನೆಗೆ ತರುವುದು ಶುಭವಂತೆ: ಯಾವ ಕಾರ್ಯ ಮಾಡಬಾರದು
ನವರಾತ್ರಿ ಪ್ರಾರಂಭವಾಗಿದೆ, ನವರಾತ್ರಿ ಶಕ್ತಿ ದೇವತೆ ದುರ್ಗೆಯ ಒಂಭತ್ತು ಅವತಾರಗಳನ್ನು ಆರಾಧಿಸಲಾಗುವುದು.
ಮೊದಲನೇ ದಿನ ಶೈಲ ಪುತ್ರಿ
ಎರಡನೇ ದಿನ ಬ್ರಹ್ಮಚಾರಿಣಿ
ಮೂರನೇ ದಿನ ರಾಯಲ್ ನೀಲಿ ಬಣ್ಣ
4ನೇ ದಿನ ಕೂಷ್ಮಾಂಡ
5ನೇ ದಿನ ಸ್ಕಂದ ಮಾತಾ
6ನೇ ದಿನ ಕಾತ್ಯಾಯನಿ
7ನೇ ದಿನ ಕಾಳರಾತ್ರಿ
8ನೇ ದಿನ ಮಹಾಗೌರಿ
9ನೇ ದಿನ ಸಿದ್ಧಿಧಾತ್ರಿ
ದೇವಿಯರನ್ನು ಆರಾಧಿಸಲಾಗುವುದು.

ನವರಾತ್ರಿಯ ಸಮಯದಲ್ಲಿ ಕೆಲವೊಂದು ವಸ್ತುಗಳನ್ನು ಮನೆಗೆ ತಂದರೆ ಶುಭ ಎಂದು ಪರಿಗಣಿಸಲಾಗುವುದು:
ದೇವರಿಗೆ ಸಂಬಂಧಿಸಿದ ಈ ವಸ್ತುಗಳನ್ನು ಮನೆಗೆ ತಂದರೆ ಒಳ್ಳೆಯದು:
ಕೃಷ್ಣ-ರಾಧೆಯ ಫೋಟೋ: ಕೃಷ್ಣ ರಾಧೆಯ ಫೋಟೋವನ್ನು ತಂದು ಮನೆಯ ಹಾಲ್ ಅಥವಾ ಬೆಡ್ರೂಂನಲ್ಲಿಟ್ಟರೆ ಗಂಡ-ಹೆಂಡತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಕೃಷ್ಣ-ರಾಧೆಯರಂತೆ ನಿಮ್ಮ ಸಂಬಂಧ ತುಂಬಾ ಚೆನ್ನಾಗಿರಲಿದೆ.
ಶ್ರೀ ಗಣೇಶನ ಮೂರ್ತಿ: ಶ್ರೀ ಗಣೇಶನ ಮೂರ್ತಿಯನ್ನು ತಂದು ಆರಾಧಿಸಿ, ಎಲ್ಲಾ ವಿಘ್ನಗಳನ್ನು ನಿವಾರಿಸುವ ಗಣೇಶನ ಮೂರ್ತಿಯನ್ನು ತರುವುದು ಅಥವಾ ನಿಮಗೆ ಶ್ರೀ ಗಣೇಶನ ಮೂರ್ತಿ ಅಥವಾ ಫೋಟೋ ಗಿಫ್ಟ್ ಆಗಿಯೂ ಒಳ್ಳೆಯದು.
ಲಕ್ಷ್ಮಿಯ ಪೂಜೆ: ಲಕ್ಷ್ಮಿಯ ಮೂರ್ತಿ ಅಥವಾ ಫೋಟೋವನ್ನು ತರುವುದು ಹಾಗೂ ತುಪ್ಪದ ದೀಪ ಹಚ್ಚಿ ಪೂಜಿಸಿದರೆ ತುಂಬಾ ಒಳ್ಳೆಯದು.
ಮನೆಗೆ ತುಳಸಿ ಗಿಡ: ತುಳಸಿಗೆ ಹಿಂದೂ ಧರ್ಮದಲ್ಲಿ
ತುಂಬಾನೇ ಮಹತ್ವ ನೀಡಲಾಗಿದೆ. ದೇವರ ಸ್ವರೂಪ ಎಂದು ತುಳಸಿ ಗಿಡವನ್ನು ಆರಾಧಿಸುತ್ತೇವೆ. ತುಳಸಿ ಗಿಡವನ್ನು ನವರಾತ್ರಿ ಸಮಯದಲ್ಲಿ ಮನೆಗೆ ತರುವುದು ಶುಭವಾಗಿದೆ.
ಚಿನ್ನ ಅಥವಾ ಬೆಳ್ಳಿ ಖರೀದಿಸಿ
ಚಿನ್ನ, ಬೆಳ್ಳಿಯನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ, ಹಾಗಾಗಿ ನವರಾತ್ರಿಯ ಸಮಯದಲ್ಲಿ ಚಿನ್ನ, ಬೆಳ್ಳಿ ಖರೀದಿಸುವುದು ಶುಭ ಎಂದು ಹೇಳಲಾಗುವುದು.
ಈ ಆಹಾರ ವಸ್ತುಗಳನ್ನು ಮನೆಗೆ ತರುವುದು ಶುಭ
ಕಲ್ಲುಪ್ಪು: ಕಲ್ಲುಪ್ಪು ಋಣಾತ್ಮಕ ಶಕ್ತಿಯನ್ನು ಹೊರ ಹಾಕುತ್ತದೆ, ಹಾಗಾಗಿ ಮನೆಗೆ ಕಲ್ಲುಪ್ಪು ತನ್ನಿ, ಅಲ್ಲದೆ ಮನೆಯ ಮೂಲೆ-ಮೂಲೆಯಲ್ಲಿ ಕಲ್ಲುಪ್ಪು ಸ್ವಲ್ಪ ಇಡುವುದು ಒಳ್ಳೆಯದು.
ಹಣ್ಣುಗಳು: ಮನೆಗೆ ಹಣ್ಣುಗಳನ್ನು ತನ್ನಿ
ಡ್ರೈಫ್ರೂಟ್ಸ್: ನವರಾತ್ರಿಯ ಪೂಜೆಯಲ್ಲಿ ಡ್ರೈ ಫ್ರೂಟ್ಸ್ ಬಳಸಲಾಗುವುದು. ಇದನ್ನು ಮನೆಗೆ ತನ್ನಿ.
ಹಾಲಿನ ಉತ್ಪನ್ನಗಳು: ಮನೆಗೆ ಹಾಲು, ಪನ್ನೀರ್ ಈ ಬಗೆಯ ಹಾಲಿನ ಉತ್ಪನ್ನಗಳನ್ನು ತನ್ನಿ.
ಸಾಬುದಾನ: ನವರಾತ್ರಿ ಉಪವಾಸ ಮಾಡುವವರು ಸಾಬುದಾನದಿಮದ ಮಾಡಿದ ಆಹಾರ ಸೇವಿಸುತ್ತಾರೆ.
ಪ್ರತಿದಿನ ದೇವರಿಗೆ ದೀಪ ಹಚ್ಚಿ
ಪ್ರತಿದಿನ ಬೆಳಗ್ಗೆ ಸಂಜೆ ದೇವರಿಗೆ ದೀಪ ಹಚ್ಚಿ, ದುರ್ಗಾ ಮಂತ್ರಗಳನ್ನು ಪಠಿಸಿ.
ನವರಾತ್ರಿಯ ಸಮಯದಲ್ಲಿ ಏನು ಮಾಡಬಾರದು?
ನವರಾತ್ರಿ ಪೂಜೆ ಸಮಯದಲ್ಲಿ ನಿದ್ರಿಸಬೇಡಿ, ಬೆಳಗ್ಗೆ ಬೇಗ ಎದ್ದು ಪೂಜಾ ಕಾರ್ಯಗಳನ್ನು ಮಾಡಿ
ಮನೆಯಲ್ಲಿ ಜಗಳವಾಡಬೇಡಿ, ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಬೇಕು
ಶೇವಿಂಗ್ , ಕಟ್ಟಿಂಗ್ ಮಾಡಬಾರದು
ನವರಾತ್ರಿಯ ಸಮಯದಲ್ಲಿ ಶೇವಿಂಗ್, ಕಟ್ಟಿಂಗ್ ಮಾಡಬೇಡಿ, ಉಗುರು ಕತ್ತರಿಸಬೇಡಿ.
ನಿಮ್ಮ ಕೈಯಲ್ಲಾದ ದಾನ ಮಾಡಿ
ನೀವು ಈ ಸಮಯದಲ್ಲಿ ನಿಮ್ಮ ಶಕ್ತಿಗೆ ಅನುಸಾರ ದಾನ ಮಾಡಿ.



Click it and Unblock the Notifications