Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ನವರಾತ್ರಿಗೆ ನವದರ್ಗೆಯರನ್ನು ಒಲಿಸಿಕೊಳ್ಳಲು ಬೀಜ ಮಂತ್ರ ಹಾಗೂ ಧ್ಯಾನ ಮಂತ್ರ
ನವರಾತ್ರಿಯ ಸಮಯದಲ್ಲಿ ದುರ್ಗೆಯ ಒಂಭತ್ತು ಅವತಾರಗಳನ್ನು ಆರಾಧಿಸಲಾಗುವುದು. ಮೊದಲ ದಿನ ಶೈಲಪುತ್ರಿ, ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇಯ ದಿನ ಚಂದ್ರಘಂಟ, ನಾಲ್ಕನೇ ದಿನ ಕೂಷ್ಮಾಂಡಾ, 5ನೇ ದಿನ ಕೂಷ್ಮಾಂಡಾ, ಆರನೇ ದಿನ ಕಾತ್ಯಾಯನಿ, 7ನೇ ದಿನ ಕಾಳರಾತ್ರಿ, ಎಂಟನೇ ದಿನ ಮಹಾಗೌರಿ, ಒಂಭತ್ತನೇ ದಿನ ಸಿದ್ಧಿದಾತ್ರಿಯನ್ನು ಆರಾಧಿಸಲಾಗುವುದು.
ಉಪವಾಸವಿದ್ದು ನವರಾತ್ರಿ ವ್ರತವನ್ನು ಮಾಡುತ್ತಾರೆ, ನವರಾತ್ರಿಯಲ್ಲಿ ಸಾತ್ವಿಕ ಆಹಾರ ಸೇವಿಸಬೇಕು, ಅಲ್ಲದೆ ನವರಾತ್ರಿಯ ಸಮಯದಲ್ಲಿ ದುರ್ಗಾ ಮಂತ್ರಗಳ ಪಠಣೆ ಮಾಡಿದರೆ ತುಂಬಾ ಒಳ್ಳೆಯದು.
ನವರಾತ್ರಿಯಲ್ಲಿ ಶಕ್ತಿ ದೇವತೆ ದುರ್ಗೆಯನ್ನು ಅವಳ ಒಂಭತ್ತು ಸ್ವರೂಪಗಳ ಬೀಜ ಮಂತ್ರ ಹಾಗೂ ಧ್ಯಾನ ಮಂತ್ರ ಪಠಣೆಮಾಡಿದರೆ ನಿಮ್ಮೆಲ್ಲಾ ಇಷ್ಟಾರ್ಥಗಳು ನೆರವೇರುವುದು:

ದುರ್ಗೆಯ ಒಂಭತ್ತು ರೂಪಗಳ ಬೀಜ ಮಂತ್ರ ಹಾಗೂ ಧ್ಯಾನ ಮಂತ್ರ
ಶೈಲಪುತ್ರಿ
ಬೀಜ ಮಂತ್ರ
ಹ್ರೀಂ ಶಿವಾಯೈ ನಮಃ
ಧ್ಯಾನ ಮಂತ್ರ
ವಂದೇ ವಾಚ್ಛಿತಲಾಭಾಯ ಚಂದ್ರಾರ್ಧಕೃತಶೇಖರಾಂ
ವೃಷಾರೂಢಾಂ ಶೂಲಧರಾಂ ಶೈಲಪುತ್ರಿಂ ಯಶಸ್ವಿನೀಂ||
ಪಾವರ್ತಿಯ ಅವತಾರವೇ ಶೈಲಪುತ್ರಿ, ಇವಳ ಆರಾಧನೆ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು, ಮೋಕ್ಷ ಸಿಗುವುದು.
ಬ್ರಹ್ಮಚಾರಿಣಿ
ಬೀಜ ಮಂತ್ರ
ಹ್ರೀಂ ಶ್ರೀ ಅಂಬಿಕಾಯೈ ನಮಃ
ಧ್ಯಾನ ಮಂತ್ರ
ದಧಾನಾ ಕರ ಪದ್ಮಾಭ್ಯಾಂ ಅಕ್ಷಮಾಲಾ ಕಮಾಂಡಲು
ದೇವೀ ಪ್ರಸೀದತು ಮಯೀ ಬ್ರಹ್ಮಚಾರಿಣ್ಯನುತ್ತಮಾ||
ಬ್ರಹ್ಮಚಾರಣಿಯ ಆರಾಧನೆಯಿಂದ ಧಾರ್ಮಿಕ ಆಸಕ್ತಿ ಹೆಚ್ಚಾಗುವುದು, ತಾಳ್ಮೆ ಹೆಚ್ಚಾಗಲಿದೆ, ಆತ್ಮವಿಶ್ವಾಸ ಒಳ್ಳೆಯ ಗುಣಗಳು ಹೆಚ್ಚಾಗಲಿದೆ.
ಚಂದ್ರಘಂಟಾ
ಬೀಜ ಮಂತ್ರ
ಏಂ ಶ್ರೀ ಶಕ್ತಾಯೈ ನಮಃ
ಧ್ಯಾನ ಮಂತ್ರ
ಪಿಂಡಜಪ್ರವರಾರೂಢ, ಚಂಡಕೋಪಾಸ್ತ್ರಕೈರ್ಯುತಾ|
ಪ್ರಸಾದಂ ತನುತೇ ಮಹ್ಯಂ, ಚಂದ್ರಘಂಟೇತಿ ವಿಶ್ರುತಾ||
ಚಂದ್ರಘಂಟಾ ದೇವಿಯ ಆರಾಧನೆಯಿಂದ ಶತ್ರು ಕಾಟ ಇರಲ್ಲ.
ಕೂಷ್ಮಾಂಡಾ
ಬೀಜ ಮಂತ್ರ
ಏಂ ಹ್ರೀ ದೇವ್ಯೈ ನಮಃ
ಧ್ಯಾನ ಮಂತ್ರ
ಸುರಸಂಪೂರ್ಣಕಲಶಂ ರುಧಿರಾಪ್ಲುತ್ಮೇವ ಚ|
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡ ಶುಭದಾಸ್ತು ಮೇ||
ಕೂಷ್ಮಾಂಡ ದೇವಿಯ ಆರಾಧನೆ ಮಾಡುವುದರಿಂದ ಶಾಂತಿ, ಸಮೃದ್ಧಿ ಹೆಚ್ಚಾಗಲಿದೆ.
ಸ್ಕಂದಮಾತಾ
ಬೀಜ ಮಂತ್ರ
ಹ್ರೀಂ ಕ್ಲೀಂ ಸ್ವಾಮಿನ್ಯೈ ನಮಃ
ಧ್ಯಾನ ಮಂತ್ರ
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ|
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ||
ಸೌಮ್ಯ ಮೂರ್ತಿಯಾದ ಸ್ಕಂದಾ ಮಾತೆಯ ಆರಾಧನೆಯಿಂದ ತಾಳ್ಮೆ ಹೆಚ್ಚಾಗುವುದು, ಆರ್ಥಿಕ ತೊಂದರೆಗಳು ದೂರಾಗಲಿದೆ, ಯಶಸ್ಸು ದೊರೆಯಲಿದೆ.
ಕಾತ್ಯಾಯನಿ
ಬೀಜ ಮಂತ್ರ
ಕ್ಲೀಂ ಶ್ರೀ ತ್ರಿನೇತ್ರಾಯೈ ನಮಃ
ಧ್ಯಾನ ಮಂತ್ರ
ಚಂದ್ರ ಹಾಸೋಜ್ವಲಕರ ಶಾರ್ದೂಲವರ ವಾಹನಾ
ಕಾತ್ಯಾಯನೀ ಶುಭಂದಧ್ಯಾ ದೇವೀ ದಾನವಘಾತಿನಿ
ಕಾತ್ಯಾಯನಿ ದೇವಿಯ ಆರಾಧನೆಯಿಂದ ಋಣಾತ್ಮಕ ಶಕ್ತಿ ದೂರಾಗಲಿದೆ.
ಕಾಳರಾತ್ರಿ
ಬೀಜ ಮಂತ್ರ
ಕ್ಲೀಂ ಏಂ ಶ್ರೀ ಕಾಳಿಕಾಯೈ ನಮಃ
ಧ್ಯಾನ ಮಂತ್ರ
ಏಕವೇಣಿ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ|
ಲಂಬೋಷ್ಟಿ ಕಾರ್ಣಿಕಾಕರ್ಣಿ ತೈಲಾಭ್ಯಕ್ತ ಶರೀರೀಣಿ||
ವಾಂಪಾದೋಲ್ಲಸಲ್ಲೋಃ ಲತಾಕಂಟಕಭೂಷಣ|
ವರ್ಧನ ಮೂರ್ಧಧ್ವಜಾ ಕೃಷ್ಣಾ ಕಾಳರಾತ್ರಿರ್ಭಯಂಕರಿ||
ಕಾಳರಾತ್ರಿಯ ಆರಾಧನೆಯಿಂದ ಆಕೆ ನಿಮಗೆ ಶುಭ ಫಲ ನೀಡುತ್ತಾಳೆ, ನಿಮ್ಮನ್ನು ಸದಾ ಕಾಯುತ್ತಾಳೆ.
ಮಹಾಗೌರಿ
ಬೀಜ ಮಂತ್ರ
ಶ್ರೀ ಕ್ಲೀಂ ಹ್ರೀಂ ವರದಾಯೈ ನಮಃ
ಧ್ಯಾನ ಮಂತ್ರ
ಶ್ವೇತೇ ವೃಷೇ ಸಮರೂಢಾ ಶ್ವೇತಾಂಬರಾಧರಾ ಶುಚಿಃ|
ಮಹಾಗೌರೀ ಶುಭಂ ದಧ್ಯಾನ್ಮಹಾದೇವಪ್ರಮೋದದಾ||
ಮಹಾಗೌರಿಯ ಆರಾಧನೆಯಿಂದ ಇಷ್ಟಾರ್ಥಗಳು ನೆರವೇರಲಿದೆ.
ಸಿದ್ಧಿದಾತ್ರಿ
ಬೀಜ ಮಂತ್ರ
ಹ್ರೀಂ ಕ್ಲೀಂ ಏಂ ಸಿದ್ಧಯೇ ನಮಃ
ಧ್ಯಾನ ಮಂತ್ರ
ಸಿದ್ಧಗಂಧರ್ವಯಕ್ಷಾಧ್ಯೈಸುರೈರಮರೈರಪಿ
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ
ನವರಾತ್ರಿಯ 9ನೇ ದಿನ ಸಿದ್ಧಿದಾತ್ರಿ ಆರಾಧನೆಯಿಂದ ಆಕೆ ಎಲ್ಲಾ ರೀತಿಯ ಸಿದ್ಧಿಯನ್ನು ಕರುಣಿಸುತ್ತಾಳೆ.



Click it and Unblock the Notifications