Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ನವರಾತ್ರಿಗೆ ನವದರ್ಗೆಯರನ್ನು ಒಲಿಸಿಕೊಳ್ಳಲು ಬೀಜ ಮಂತ್ರ ಹಾಗೂ ಧ್ಯಾನ ಮಂತ್ರ
ನವರಾತ್ರಿಯ ಸಮಯದಲ್ಲಿ ದುರ್ಗೆಯ ಒಂಭತ್ತು ಅವತಾರಗಳನ್ನು ಆರಾಧಿಸಲಾಗುವುದು. ಮೊದಲ ದಿನ ಶೈಲಪುತ್ರಿ, ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇಯ ದಿನ ಚಂದ್ರಘಂಟ, ನಾಲ್ಕನೇ ದಿನ ಕೂಷ್ಮಾಂಡಾ, 5ನೇ ದಿನ ಕೂಷ್ಮಾಂಡಾ, ಆರನೇ ದಿನ ಕಾತ್ಯಾಯನಿ, 7ನೇ ದಿನ ಕಾಳರಾತ್ರಿ, ಎಂಟನೇ ದಿನ ಮಹಾಗೌರಿ, ಒಂಭತ್ತನೇ ದಿನ ಸಿದ್ಧಿದಾತ್ರಿಯನ್ನು ಆರಾಧಿಸಲಾಗುವುದು.
ಉಪವಾಸವಿದ್ದು ನವರಾತ್ರಿ ವ್ರತವನ್ನು ಮಾಡುತ್ತಾರೆ, ನವರಾತ್ರಿಯಲ್ಲಿ ಸಾತ್ವಿಕ ಆಹಾರ ಸೇವಿಸಬೇಕು, ಅಲ್ಲದೆ ನವರಾತ್ರಿಯ ಸಮಯದಲ್ಲಿ ದುರ್ಗಾ ಮಂತ್ರಗಳ ಪಠಣೆ ಮಾಡಿದರೆ ತುಂಬಾ ಒಳ್ಳೆಯದು.
ನವರಾತ್ರಿಯಲ್ಲಿ ಶಕ್ತಿ ದೇವತೆ ದುರ್ಗೆಯನ್ನು ಅವಳ ಒಂಭತ್ತು ಸ್ವರೂಪಗಳ ಬೀಜ ಮಂತ್ರ ಹಾಗೂ ಧ್ಯಾನ ಮಂತ್ರ ಪಠಣೆಮಾಡಿದರೆ ನಿಮ್ಮೆಲ್ಲಾ ಇಷ್ಟಾರ್ಥಗಳು ನೆರವೇರುವುದು:

ದುರ್ಗೆಯ ಒಂಭತ್ತು ರೂಪಗಳ ಬೀಜ ಮಂತ್ರ ಹಾಗೂ ಧ್ಯಾನ ಮಂತ್ರ
ಶೈಲಪುತ್ರಿ
ಬೀಜ ಮಂತ್ರ
ಹ್ರೀಂ ಶಿವಾಯೈ ನಮಃ
ಧ್ಯಾನ ಮಂತ್ರ
ವಂದೇ ವಾಚ್ಛಿತಲಾಭಾಯ ಚಂದ್ರಾರ್ಧಕೃತಶೇಖರಾಂ
ವೃಷಾರೂಢಾಂ ಶೂಲಧರಾಂ ಶೈಲಪುತ್ರಿಂ ಯಶಸ್ವಿನೀಂ||
ಪಾವರ್ತಿಯ ಅವತಾರವೇ ಶೈಲಪುತ್ರಿ, ಇವಳ ಆರಾಧನೆ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು, ಮೋಕ್ಷ ಸಿಗುವುದು.
ಬ್ರಹ್ಮಚಾರಿಣಿ
ಬೀಜ ಮಂತ್ರ
ಹ್ರೀಂ ಶ್ರೀ ಅಂಬಿಕಾಯೈ ನಮಃ
ಧ್ಯಾನ ಮಂತ್ರ
ದಧಾನಾ ಕರ ಪದ್ಮಾಭ್ಯಾಂ ಅಕ್ಷಮಾಲಾ ಕಮಾಂಡಲು
ದೇವೀ ಪ್ರಸೀದತು ಮಯೀ ಬ್ರಹ್ಮಚಾರಿಣ್ಯನುತ್ತಮಾ||
ಬ್ರಹ್ಮಚಾರಣಿಯ ಆರಾಧನೆಯಿಂದ ಧಾರ್ಮಿಕ ಆಸಕ್ತಿ ಹೆಚ್ಚಾಗುವುದು, ತಾಳ್ಮೆ ಹೆಚ್ಚಾಗಲಿದೆ, ಆತ್ಮವಿಶ್ವಾಸ ಒಳ್ಳೆಯ ಗುಣಗಳು ಹೆಚ್ಚಾಗಲಿದೆ.
ಚಂದ್ರಘಂಟಾ
ಬೀಜ ಮಂತ್ರ
ಏಂ ಶ್ರೀ ಶಕ್ತಾಯೈ ನಮಃ
ಧ್ಯಾನ ಮಂತ್ರ
ಪಿಂಡಜಪ್ರವರಾರೂಢ, ಚಂಡಕೋಪಾಸ್ತ್ರಕೈರ್ಯುತಾ|
ಪ್ರಸಾದಂ ತನುತೇ ಮಹ್ಯಂ, ಚಂದ್ರಘಂಟೇತಿ ವಿಶ್ರುತಾ||
ಚಂದ್ರಘಂಟಾ ದೇವಿಯ ಆರಾಧನೆಯಿಂದ ಶತ್ರು ಕಾಟ ಇರಲ್ಲ.
ಕೂಷ್ಮಾಂಡಾ
ಬೀಜ ಮಂತ್ರ
ಏಂ ಹ್ರೀ ದೇವ್ಯೈ ನಮಃ
ಧ್ಯಾನ ಮಂತ್ರ
ಸುರಸಂಪೂರ್ಣಕಲಶಂ ರುಧಿರಾಪ್ಲುತ್ಮೇವ ಚ|
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡ ಶುಭದಾಸ್ತು ಮೇ||
ಕೂಷ್ಮಾಂಡ ದೇವಿಯ ಆರಾಧನೆ ಮಾಡುವುದರಿಂದ ಶಾಂತಿ, ಸಮೃದ್ಧಿ ಹೆಚ್ಚಾಗಲಿದೆ.
ಸ್ಕಂದಮಾತಾ
ಬೀಜ ಮಂತ್ರ
ಹ್ರೀಂ ಕ್ಲೀಂ ಸ್ವಾಮಿನ್ಯೈ ನಮಃ
ಧ್ಯಾನ ಮಂತ್ರ
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ|
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ||
ಸೌಮ್ಯ ಮೂರ್ತಿಯಾದ ಸ್ಕಂದಾ ಮಾತೆಯ ಆರಾಧನೆಯಿಂದ ತಾಳ್ಮೆ ಹೆಚ್ಚಾಗುವುದು, ಆರ್ಥಿಕ ತೊಂದರೆಗಳು ದೂರಾಗಲಿದೆ, ಯಶಸ್ಸು ದೊರೆಯಲಿದೆ.
ಕಾತ್ಯಾಯನಿ
ಬೀಜ ಮಂತ್ರ
ಕ್ಲೀಂ ಶ್ರೀ ತ್ರಿನೇತ್ರಾಯೈ ನಮಃ
ಧ್ಯಾನ ಮಂತ್ರ
ಚಂದ್ರ ಹಾಸೋಜ್ವಲಕರ ಶಾರ್ದೂಲವರ ವಾಹನಾ
ಕಾತ್ಯಾಯನೀ ಶುಭಂದಧ್ಯಾ ದೇವೀ ದಾನವಘಾತಿನಿ
ಕಾತ್ಯಾಯನಿ ದೇವಿಯ ಆರಾಧನೆಯಿಂದ ಋಣಾತ್ಮಕ ಶಕ್ತಿ ದೂರಾಗಲಿದೆ.
ಕಾಳರಾತ್ರಿ
ಬೀಜ ಮಂತ್ರ
ಕ್ಲೀಂ ಏಂ ಶ್ರೀ ಕಾಳಿಕಾಯೈ ನಮಃ
ಧ್ಯಾನ ಮಂತ್ರ
ಏಕವೇಣಿ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ|
ಲಂಬೋಷ್ಟಿ ಕಾರ್ಣಿಕಾಕರ್ಣಿ ತೈಲಾಭ್ಯಕ್ತ ಶರೀರೀಣಿ||
ವಾಂಪಾದೋಲ್ಲಸಲ್ಲೋಃ ಲತಾಕಂಟಕಭೂಷಣ|
ವರ್ಧನ ಮೂರ್ಧಧ್ವಜಾ ಕೃಷ್ಣಾ ಕಾಳರಾತ್ರಿರ್ಭಯಂಕರಿ||
ಕಾಳರಾತ್ರಿಯ ಆರಾಧನೆಯಿಂದ ಆಕೆ ನಿಮಗೆ ಶುಭ ಫಲ ನೀಡುತ್ತಾಳೆ, ನಿಮ್ಮನ್ನು ಸದಾ ಕಾಯುತ್ತಾಳೆ.
ಮಹಾಗೌರಿ
ಬೀಜ ಮಂತ್ರ
ಶ್ರೀ ಕ್ಲೀಂ ಹ್ರೀಂ ವರದಾಯೈ ನಮಃ
ಧ್ಯಾನ ಮಂತ್ರ
ಶ್ವೇತೇ ವೃಷೇ ಸಮರೂಢಾ ಶ್ವೇತಾಂಬರಾಧರಾ ಶುಚಿಃ|
ಮಹಾಗೌರೀ ಶುಭಂ ದಧ್ಯಾನ್ಮಹಾದೇವಪ್ರಮೋದದಾ||
ಮಹಾಗೌರಿಯ ಆರಾಧನೆಯಿಂದ ಇಷ್ಟಾರ್ಥಗಳು ನೆರವೇರಲಿದೆ.
ಸಿದ್ಧಿದಾತ್ರಿ
ಬೀಜ ಮಂತ್ರ
ಹ್ರೀಂ ಕ್ಲೀಂ ಏಂ ಸಿದ್ಧಯೇ ನಮಃ
ಧ್ಯಾನ ಮಂತ್ರ
ಸಿದ್ಧಗಂಧರ್ವಯಕ್ಷಾಧ್ಯೈಸುರೈರಮರೈರಪಿ
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ
ನವರಾತ್ರಿಯ 9ನೇ ದಿನ ಸಿದ್ಧಿದಾತ್ರಿ ಆರಾಧನೆಯಿಂದ ಆಕೆ ಎಲ್ಲಾ ರೀತಿಯ ಸಿದ್ಧಿಯನ್ನು ಕರುಣಿಸುತ್ತಾಳೆ.



Click it and Unblock the Notifications