Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
24 ವರ್ಷಗಳ ಬಳಿಕ ಶ್ರಾವಣ ಸೋಮವಾರದಂದು ಬಂದಿದೆ ನಾಗರಪಂಚಮಿ: ಪ್ರದೋಷ ಕಾಲದಲ್ಲಿ ಪೂಜಾ ವಿಧಾನ
ಈ ವರ್ಷ ಶ್ರಾವಣ ಮಾಸ ಶಿವ ಭಕ್ತಿರಿಗೆ ತುಂಬಾನೇ ವಿಶೇಷವಾಗಿದೆ, ಅಧಿಕ ಮಾಸ ಬಂದಿದ್ದ ಕಾರಣ 2 ತಿಂಗಳು ಶ್ರಾವಣ ಮಾಸ ಬಂದಿದೆ. ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಕೂಡ ಆಗಸ್ಟ್ 21ಕ್ಕೆ ನಾಗರ ಪಂಚಮಿ ಬಂದಿದೆ. ಈ ಬಾರಿ ನಾಗರ ಪಂಚಮಿ ಹಬ್ಬದ ವಿಶೇಷವೆಂದರೆ ಶ್ರಾವಣ ಸೋಮವಾರದಂದೇ ಬಂದಿದೆ. ಅದರಲ್ಲೂ ಸುಮಾರು 24 ವರ್ಷಗಳ ಬಳಿಕ ಶ್ರಾವಣ ಸೋಮವಾರದಂದು ನಾಗರ ಪಂಚಮಿ ಬಂದಿದೆ. ಆದ್ದರಿಂದ ಈ ಪ್ರದೋಷ ಕಾಲದಲ್ಲಿ ಶಿವನಿಗೆ ಮಾಡುವ ಪೂಜೆ ಮತ್ತಷ್ಟು ವಿಶೇಷವಾಗಿದೆ.

ನಾಗರ ಪಂಚಮಿಯಂದು ನಾಗದೇವರನ್ನು ಪೂಜಿಸಲಾಗುವುದು. ನಾಗನನ್ನೇ ಶಿವ ಮಾಲೆಯಾಗಿ ಧರಿಸಿದ್ದಾನೆ. ನಾಗನನ್ನು ಪೂಜಿಸುವುದರಿಂದ ಶಿವನ ಕೃಪೆಯೂ ದೊರೆಯಲಿದೆ, ಈ ದಿನ 7ನೇ ಶ್ರಾವಣ ಸೋಮವಾರ ಆಚರಿಸಲಾಗುವುದು. ಈ ದಿನ ನೀವು ಶ್ರಾವಣ ಸೋಮವಾರ ವ್ರತ ಪಾಲಿಸುವುದರಿಂದ ನಿಮಗೆ ಸಿಗುವ ಪೂಜೆಯ ಫಲ ದ್ವಿಗುಣವಾಗಲಿದೆ. ಬೆಳಗ್ಗೆ ನಾಗಮೂರ್ತಿಗೆ ಪೂಜೆಯನ್ನು ಮಾಡಿ ಸಂಜೆ ಹೊತ್ತಿನಲ್ಲಿ ಶಿವನ ಆರಾಧನೆ ಹೇಗೆ ಮಾಡಬೇಕು ಎಂದು ನೋಡೋಣ ಬನ್ನಿ:
24 ವರ್ಷಗಳ ನಂತರ ಶ್ರಾವಣ ಸೋಮವಾರದಂದು ಬಂದಿದೆ ನಾಗರ ಪಂಚಮಿ
ಆಗಸ್ಟ್ 21ಕ್ಕೆ 7ನೇ ಶ್ರಾವಣ ಸೋಮವಾರ, ಇದೇ ದಿನ ನಾಗರ ಪಂಚಮಿ, ಈ ದಿನ ಶಿವಯೋಗವಿದೆ. ಶಿವ ಯೋಗವನ್ನು ಅತ್ಯಂತ ಶುಭ ಯೋಗ ಎಂದು ಪರಿಗಣಿಸಲಾಗಿದೆ. ಈ ದಿನ ಚಿತ್ರ ನಕ್ಷತ್ರವೂ ಇರುತ್ತದೆ. 24 ವರ್ಷಗಳ ಬಳಿಕ ಇಂಥದ್ದೊಂದು ಶುಭ ದಿನ ಬಂದಿದೆ.
ಈ ದಿನ ಶಿವ ಪೂಜೆಗೆ ಶುಭ ಮುಹೂರ್ತ
ಪ್ರದೋಷ ಕಾಲ ಮುಹೂರ್ತ: 21 ಆಗಸ್ಟ್ 2023 ಸಂಜೆ 05:27 ರಿಂದ 08:27 ರವರೆಗೆ
ಶ್ರಾವಣ ಮಾಸದ ಸೋಮವಾರದಂದು ಪ್ರದೋಷ ಪೂಜೆ
* ಶ್ರಾವಣ ಸೋಮವಾರ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಬೇಕು.
* ನಂತರ ದೀಪವನ್ನು ಹಚ್ಚಿ ಪೂಜೆ ಮಾಡಿ ನಂಗರ ನಾಗಮೂರ್ತಿಗಳಿಗೆ ಪೂಜೆಯನ್ನು ಸಲ್ಲಿಸಬೇಕು.
* ಈ ದಿನ ಉಪವಾಸವಿದ್ದರೆ ತುಂಬಾ ಒಳ್ಳೆಯದು.
* ನಂತರ ಸಂಜೆ, ಪ್ರದೋಷ ಕಾಲದ ಪೂಜೆಯ ಸಮಯದಲ್ಲಿ, ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಗಂಗಾಜಲವನ್ನು ಬೆರೆಸಿ ಪಂಚಾಮೃತದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು.
* ಶಿವನಿಗೆ ಬಿಲ್ವೆಪತ್ರೆಯನ್ನು ಅರ್ಪಿಸಿ.
* ಶಿವನಿಗೆ ಆರತಿ ಮಾಡಿ ಶಿವನ ಮಂತ್ರಗಳನ್ನು ಪಠಿಸಿ.



Click it and Unblock the Notifications
