Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
24 ವರ್ಷಗಳ ಬಳಿಕ ಶ್ರಾವಣ ಸೋಮವಾರದಂದು ಬಂದಿದೆ ನಾಗರಪಂಚಮಿ: ಪ್ರದೋಷ ಕಾಲದಲ್ಲಿ ಪೂಜಾ ವಿಧಾನ
ಈ ವರ್ಷ ಶ್ರಾವಣ ಮಾಸ ಶಿವ ಭಕ್ತಿರಿಗೆ ತುಂಬಾನೇ ವಿಶೇಷವಾಗಿದೆ, ಅಧಿಕ ಮಾಸ ಬಂದಿದ್ದ ಕಾರಣ 2 ತಿಂಗಳು ಶ್ರಾವಣ ಮಾಸ ಬಂದಿದೆ. ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಕೂಡ ಆಗಸ್ಟ್ 21ಕ್ಕೆ ನಾಗರ ಪಂಚಮಿ ಬಂದಿದೆ. ಈ ಬಾರಿ ನಾಗರ ಪಂಚಮಿ ಹಬ್ಬದ ವಿಶೇಷವೆಂದರೆ ಶ್ರಾವಣ ಸೋಮವಾರದಂದೇ ಬಂದಿದೆ. ಅದರಲ್ಲೂ ಸುಮಾರು 24 ವರ್ಷಗಳ ಬಳಿಕ ಶ್ರಾವಣ ಸೋಮವಾರದಂದು ನಾಗರ ಪಂಚಮಿ ಬಂದಿದೆ. ಆದ್ದರಿಂದ ಈ ಪ್ರದೋಷ ಕಾಲದಲ್ಲಿ ಶಿವನಿಗೆ ಮಾಡುವ ಪೂಜೆ ಮತ್ತಷ್ಟು ವಿಶೇಷವಾಗಿದೆ.

ನಾಗರ ಪಂಚಮಿಯಂದು ನಾಗದೇವರನ್ನು ಪೂಜಿಸಲಾಗುವುದು. ನಾಗನನ್ನೇ ಶಿವ ಮಾಲೆಯಾಗಿ ಧರಿಸಿದ್ದಾನೆ. ನಾಗನನ್ನು ಪೂಜಿಸುವುದರಿಂದ ಶಿವನ ಕೃಪೆಯೂ ದೊರೆಯಲಿದೆ, ಈ ದಿನ 7ನೇ ಶ್ರಾವಣ ಸೋಮವಾರ ಆಚರಿಸಲಾಗುವುದು. ಈ ದಿನ ನೀವು ಶ್ರಾವಣ ಸೋಮವಾರ ವ್ರತ ಪಾಲಿಸುವುದರಿಂದ ನಿಮಗೆ ಸಿಗುವ ಪೂಜೆಯ ಫಲ ದ್ವಿಗುಣವಾಗಲಿದೆ. ಬೆಳಗ್ಗೆ ನಾಗಮೂರ್ತಿಗೆ ಪೂಜೆಯನ್ನು ಮಾಡಿ ಸಂಜೆ ಹೊತ್ತಿನಲ್ಲಿ ಶಿವನ ಆರಾಧನೆ ಹೇಗೆ ಮಾಡಬೇಕು ಎಂದು ನೋಡೋಣ ಬನ್ನಿ:
24 ವರ್ಷಗಳ ನಂತರ ಶ್ರಾವಣ ಸೋಮವಾರದಂದು ಬಂದಿದೆ ನಾಗರ ಪಂಚಮಿ
ಆಗಸ್ಟ್ 21ಕ್ಕೆ 7ನೇ ಶ್ರಾವಣ ಸೋಮವಾರ, ಇದೇ ದಿನ ನಾಗರ ಪಂಚಮಿ, ಈ ದಿನ ಶಿವಯೋಗವಿದೆ. ಶಿವ ಯೋಗವನ್ನು ಅತ್ಯಂತ ಶುಭ ಯೋಗ ಎಂದು ಪರಿಗಣಿಸಲಾಗಿದೆ. ಈ ದಿನ ಚಿತ್ರ ನಕ್ಷತ್ರವೂ ಇರುತ್ತದೆ. 24 ವರ್ಷಗಳ ಬಳಿಕ ಇಂಥದ್ದೊಂದು ಶುಭ ದಿನ ಬಂದಿದೆ.
ಈ ದಿನ ಶಿವ ಪೂಜೆಗೆ ಶುಭ ಮುಹೂರ್ತ
ಪ್ರದೋಷ ಕಾಲ ಮುಹೂರ್ತ: 21 ಆಗಸ್ಟ್ 2023 ಸಂಜೆ 05:27 ರಿಂದ 08:27 ರವರೆಗೆ
ಶ್ರಾವಣ ಮಾಸದ ಸೋಮವಾರದಂದು ಪ್ರದೋಷ ಪೂಜೆ
* ಶ್ರಾವಣ ಸೋಮವಾರ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಬೇಕು.
* ನಂತರ ದೀಪವನ್ನು ಹಚ್ಚಿ ಪೂಜೆ ಮಾಡಿ ನಂಗರ ನಾಗಮೂರ್ತಿಗಳಿಗೆ ಪೂಜೆಯನ್ನು ಸಲ್ಲಿಸಬೇಕು.
* ಈ ದಿನ ಉಪವಾಸವಿದ್ದರೆ ತುಂಬಾ ಒಳ್ಳೆಯದು.
* ನಂತರ ಸಂಜೆ, ಪ್ರದೋಷ ಕಾಲದ ಪೂಜೆಯ ಸಮಯದಲ್ಲಿ, ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಗಂಗಾಜಲವನ್ನು ಬೆರೆಸಿ ಪಂಚಾಮೃತದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು.
* ಶಿವನಿಗೆ ಬಿಲ್ವೆಪತ್ರೆಯನ್ನು ಅರ್ಪಿಸಿ.
* ಶಿವನಿಗೆ ಆರತಿ ಮಾಡಿ ಶಿವನ ಮಂತ್ರಗಳನ್ನು ಪಠಿಸಿ.



Click it and Unblock the Notifications