Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
24 ವರ್ಷಗಳ ಬಳಿಕ ಶ್ರಾವಣ ಸೋಮವಾರದಂದು ಬಂದಿದೆ ನಾಗರಪಂಚಮಿ: ಪ್ರದೋಷ ಕಾಲದಲ್ಲಿ ಪೂಜಾ ವಿಧಾನ
ಈ ವರ್ಷ ಶ್ರಾವಣ ಮಾಸ ಶಿವ ಭಕ್ತಿರಿಗೆ ತುಂಬಾನೇ ವಿಶೇಷವಾಗಿದೆ, ಅಧಿಕ ಮಾಸ ಬಂದಿದ್ದ ಕಾರಣ 2 ತಿಂಗಳು ಶ್ರಾವಣ ಮಾಸ ಬಂದಿದೆ. ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಕೂಡ ಆಗಸ್ಟ್ 21ಕ್ಕೆ ನಾಗರ ಪಂಚಮಿ ಬಂದಿದೆ. ಈ ಬಾರಿ ನಾಗರ ಪಂಚಮಿ ಹಬ್ಬದ ವಿಶೇಷವೆಂದರೆ ಶ್ರಾವಣ ಸೋಮವಾರದಂದೇ ಬಂದಿದೆ. ಅದರಲ್ಲೂ ಸುಮಾರು 24 ವರ್ಷಗಳ ಬಳಿಕ ಶ್ರಾವಣ ಸೋಮವಾರದಂದು ನಾಗರ ಪಂಚಮಿ ಬಂದಿದೆ. ಆದ್ದರಿಂದ ಈ ಪ್ರದೋಷ ಕಾಲದಲ್ಲಿ ಶಿವನಿಗೆ ಮಾಡುವ ಪೂಜೆ ಮತ್ತಷ್ಟು ವಿಶೇಷವಾಗಿದೆ.

ನಾಗರ ಪಂಚಮಿಯಂದು ನಾಗದೇವರನ್ನು ಪೂಜಿಸಲಾಗುವುದು. ನಾಗನನ್ನೇ ಶಿವ ಮಾಲೆಯಾಗಿ ಧರಿಸಿದ್ದಾನೆ. ನಾಗನನ್ನು ಪೂಜಿಸುವುದರಿಂದ ಶಿವನ ಕೃಪೆಯೂ ದೊರೆಯಲಿದೆ, ಈ ದಿನ 7ನೇ ಶ್ರಾವಣ ಸೋಮವಾರ ಆಚರಿಸಲಾಗುವುದು. ಈ ದಿನ ನೀವು ಶ್ರಾವಣ ಸೋಮವಾರ ವ್ರತ ಪಾಲಿಸುವುದರಿಂದ ನಿಮಗೆ ಸಿಗುವ ಪೂಜೆಯ ಫಲ ದ್ವಿಗುಣವಾಗಲಿದೆ. ಬೆಳಗ್ಗೆ ನಾಗಮೂರ್ತಿಗೆ ಪೂಜೆಯನ್ನು ಮಾಡಿ ಸಂಜೆ ಹೊತ್ತಿನಲ್ಲಿ ಶಿವನ ಆರಾಧನೆ ಹೇಗೆ ಮಾಡಬೇಕು ಎಂದು ನೋಡೋಣ ಬನ್ನಿ:
24 ವರ್ಷಗಳ ನಂತರ ಶ್ರಾವಣ ಸೋಮವಾರದಂದು ಬಂದಿದೆ ನಾಗರ ಪಂಚಮಿ
ಆಗಸ್ಟ್ 21ಕ್ಕೆ 7ನೇ ಶ್ರಾವಣ ಸೋಮವಾರ, ಇದೇ ದಿನ ನಾಗರ ಪಂಚಮಿ, ಈ ದಿನ ಶಿವಯೋಗವಿದೆ. ಶಿವ ಯೋಗವನ್ನು ಅತ್ಯಂತ ಶುಭ ಯೋಗ ಎಂದು ಪರಿಗಣಿಸಲಾಗಿದೆ. ಈ ದಿನ ಚಿತ್ರ ನಕ್ಷತ್ರವೂ ಇರುತ್ತದೆ. 24 ವರ್ಷಗಳ ಬಳಿಕ ಇಂಥದ್ದೊಂದು ಶುಭ ದಿನ ಬಂದಿದೆ.
ಈ ದಿನ ಶಿವ ಪೂಜೆಗೆ ಶುಭ ಮುಹೂರ್ತ
ಪ್ರದೋಷ ಕಾಲ ಮುಹೂರ್ತ: 21 ಆಗಸ್ಟ್ 2023 ಸಂಜೆ 05:27 ರಿಂದ 08:27 ರವರೆಗೆ
ಶ್ರಾವಣ ಮಾಸದ ಸೋಮವಾರದಂದು ಪ್ರದೋಷ ಪೂಜೆ
* ಶ್ರಾವಣ ಸೋಮವಾರ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಬೇಕು.
* ನಂತರ ದೀಪವನ್ನು ಹಚ್ಚಿ ಪೂಜೆ ಮಾಡಿ ನಂಗರ ನಾಗಮೂರ್ತಿಗಳಿಗೆ ಪೂಜೆಯನ್ನು ಸಲ್ಲಿಸಬೇಕು.
* ಈ ದಿನ ಉಪವಾಸವಿದ್ದರೆ ತುಂಬಾ ಒಳ್ಳೆಯದು.
* ನಂತರ ಸಂಜೆ, ಪ್ರದೋಷ ಕಾಲದ ಪೂಜೆಯ ಸಮಯದಲ್ಲಿ, ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಗಂಗಾಜಲವನ್ನು ಬೆರೆಸಿ ಪಂಚಾಮೃತದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು.
* ಶಿವನಿಗೆ ಬಿಲ್ವೆಪತ್ರೆಯನ್ನು ಅರ್ಪಿಸಿ.
* ಶಿವನಿಗೆ ಆರತಿ ಮಾಡಿ ಶಿವನ ಮಂತ್ರಗಳನ್ನು ಪಠಿಸಿ.



Click it and Unblock the Notifications