Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
24 ವರ್ಷಗಳ ಬಳಿಕ ಶ್ರಾವಣ ಸೋಮವಾರದಂದು ಬಂದಿದೆ ನಾಗರಪಂಚಮಿ: ಪ್ರದೋಷ ಕಾಲದಲ್ಲಿ ಪೂಜಾ ವಿಧಾನ
ಈ ವರ್ಷ ಶ್ರಾವಣ ಮಾಸ ಶಿವ ಭಕ್ತಿರಿಗೆ ತುಂಬಾನೇ ವಿಶೇಷವಾಗಿದೆ, ಅಧಿಕ ಮಾಸ ಬಂದಿದ್ದ ಕಾರಣ 2 ತಿಂಗಳು ಶ್ರಾವಣ ಮಾಸ ಬಂದಿದೆ. ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಕೂಡ ಆಗಸ್ಟ್ 21ಕ್ಕೆ ನಾಗರ ಪಂಚಮಿ ಬಂದಿದೆ. ಈ ಬಾರಿ ನಾಗರ ಪಂಚಮಿ ಹಬ್ಬದ ವಿಶೇಷವೆಂದರೆ ಶ್ರಾವಣ ಸೋಮವಾರದಂದೇ ಬಂದಿದೆ. ಅದರಲ್ಲೂ ಸುಮಾರು 24 ವರ್ಷಗಳ ಬಳಿಕ ಶ್ರಾವಣ ಸೋಮವಾರದಂದು ನಾಗರ ಪಂಚಮಿ ಬಂದಿದೆ. ಆದ್ದರಿಂದ ಈ ಪ್ರದೋಷ ಕಾಲದಲ್ಲಿ ಶಿವನಿಗೆ ಮಾಡುವ ಪೂಜೆ ಮತ್ತಷ್ಟು ವಿಶೇಷವಾಗಿದೆ.

ನಾಗರ ಪಂಚಮಿಯಂದು ನಾಗದೇವರನ್ನು ಪೂಜಿಸಲಾಗುವುದು. ನಾಗನನ್ನೇ ಶಿವ ಮಾಲೆಯಾಗಿ ಧರಿಸಿದ್ದಾನೆ. ನಾಗನನ್ನು ಪೂಜಿಸುವುದರಿಂದ ಶಿವನ ಕೃಪೆಯೂ ದೊರೆಯಲಿದೆ, ಈ ದಿನ 7ನೇ ಶ್ರಾವಣ ಸೋಮವಾರ ಆಚರಿಸಲಾಗುವುದು. ಈ ದಿನ ನೀವು ಶ್ರಾವಣ ಸೋಮವಾರ ವ್ರತ ಪಾಲಿಸುವುದರಿಂದ ನಿಮಗೆ ಸಿಗುವ ಪೂಜೆಯ ಫಲ ದ್ವಿಗುಣವಾಗಲಿದೆ. ಬೆಳಗ್ಗೆ ನಾಗಮೂರ್ತಿಗೆ ಪೂಜೆಯನ್ನು ಮಾಡಿ ಸಂಜೆ ಹೊತ್ತಿನಲ್ಲಿ ಶಿವನ ಆರಾಧನೆ ಹೇಗೆ ಮಾಡಬೇಕು ಎಂದು ನೋಡೋಣ ಬನ್ನಿ:
24 ವರ್ಷಗಳ ನಂತರ ಶ್ರಾವಣ ಸೋಮವಾರದಂದು ಬಂದಿದೆ ನಾಗರ ಪಂಚಮಿ
ಆಗಸ್ಟ್ 21ಕ್ಕೆ 7ನೇ ಶ್ರಾವಣ ಸೋಮವಾರ, ಇದೇ ದಿನ ನಾಗರ ಪಂಚಮಿ, ಈ ದಿನ ಶಿವಯೋಗವಿದೆ. ಶಿವ ಯೋಗವನ್ನು ಅತ್ಯಂತ ಶುಭ ಯೋಗ ಎಂದು ಪರಿಗಣಿಸಲಾಗಿದೆ. ಈ ದಿನ ಚಿತ್ರ ನಕ್ಷತ್ರವೂ ಇರುತ್ತದೆ. 24 ವರ್ಷಗಳ ಬಳಿಕ ಇಂಥದ್ದೊಂದು ಶುಭ ದಿನ ಬಂದಿದೆ.
ಈ ದಿನ ಶಿವ ಪೂಜೆಗೆ ಶುಭ ಮುಹೂರ್ತ
ಪ್ರದೋಷ ಕಾಲ ಮುಹೂರ್ತ: 21 ಆಗಸ್ಟ್ 2023 ಸಂಜೆ 05:27 ರಿಂದ 08:27 ರವರೆಗೆ
ಶ್ರಾವಣ ಮಾಸದ ಸೋಮವಾರದಂದು ಪ್ರದೋಷ ಪೂಜೆ
* ಶ್ರಾವಣ ಸೋಮವಾರ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಬೇಕು.
* ನಂತರ ದೀಪವನ್ನು ಹಚ್ಚಿ ಪೂಜೆ ಮಾಡಿ ನಂಗರ ನಾಗಮೂರ್ತಿಗಳಿಗೆ ಪೂಜೆಯನ್ನು ಸಲ್ಲಿಸಬೇಕು.
* ಈ ದಿನ ಉಪವಾಸವಿದ್ದರೆ ತುಂಬಾ ಒಳ್ಳೆಯದು.
* ನಂತರ ಸಂಜೆ, ಪ್ರದೋಷ ಕಾಲದ ಪೂಜೆಯ ಸಮಯದಲ್ಲಿ, ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಗಂಗಾಜಲವನ್ನು ಬೆರೆಸಿ ಪಂಚಾಮೃತದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು.
* ಶಿವನಿಗೆ ಬಿಲ್ವೆಪತ್ರೆಯನ್ನು ಅರ್ಪಿಸಿ.
* ಶಿವನಿಗೆ ಆರತಿ ಮಾಡಿ ಶಿವನ ಮಂತ್ರಗಳನ್ನು ಪಠಿಸಿ.



Click it and Unblock the Notifications