Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಹೆರಿಗೆ ಆಪರೇಷನ್ ವೇಳೆ ಶ್ರೀಕೃಷ್ಣನ ಮಂತ್ರ ಪಠಿಸುತ್ತಿರುವ ತಾಯಿ..! ವಿಡಿಯೋ
ಹಿಂದೂ ಧರ್ಮದಲ್ಲಿ ಮಂತ್ರಗಳಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ವೇದ, ಶಾಸ್ತ್ರಗಳ ಪ್ರಕಾರ ಈ ಮಂತ್ರಗಳು ಅತೀವ ಶಕ್ತಿ ನೀಡುವ ಬಾಹ್ಯ ಬಲಗಳಂತೆ, ಯುದ್ಧ ಭೂಮಿಯಿಂದ ಹಿಡಿದು ಮನೆ ಮಕ್ಕಳ ಪಾಲನೆಗೂ ಒಂದೊಂದು ಮಂತ್ರವಿದೆ. ಈ ಮಂತ್ರಗಳು ವ್ಯಕ್ತಿಯೊಬ್ಬರ ಜೀವನವನ್ನೇ ಬದಲಿಸುವಷ್ಟು ಪ್ರಖರ ಹಾಗೂ ಶಕ್ತಿಶಾಲಿ ಎಂದು ನಾವು ಸಹ ನಂಬುತ್ತೇವೆ.
ಅದೇ ರೀತಿ ಸಂಕಷ್ಟ ಕಾಲದಲ್ಲಿ ಯಾವ ಮಂತ್ರ ಪಠಿಸಿದರೆ ಒಳತಾಗುತ್ತದೆ. ಯಾವ ಮಂತ್ರದಿಂದ ಯಾವ ಫಲ ಪ್ರಾಪ್ತಿಯಾಗುತ್ತದೆ. ಯಾವ ಸಮಯದಲ್ಲಿ ಯಾವ ಮಂತ್ರ ಮಠಿಸಬೇಕು ಎಂಬುದನ್ನೂ ವೇದ ಶಾಸ್ತ್ರದಲ್ಲಿ ಹೇಳಲಾಗಿದೆ. ಇಲ್ಲಿಯೂ ಸಹ ಮಹಿಳೆಯೊಬ್ಬರು ಹೆರಿಗೆಯ ಸಮಯದಲ್ಲಿ ಶ್ರೀ ಕೃಷ್ಣ ಮಂತ್ರ ಪಠಿಸುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಆಪರೇಷನ್ ಮಾಡುವಾಗ ಶ್ರೀಕೃಷ್ಣನ ಕುರಿತಾದ ಮಂತ್ರ ಪಠಿಸುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಆಕೆ ಆಸ್ಪತ್ರೆಯಲ್ಲಿ ಹೆರಿಗೆ ಆಪರೇಷನ್ಗೆ ಒಳಗಾಗಿದ್ದು, ಈ ವೇಳೆ ಕೃಷ್ಣ ಧ್ಯಾನ ಮಾಡುತ್ತಿದ್ದಾಳೆ. ಈ ವಿಡಿಯೋ ನೋಡಿದ ಮಂದಿ ಅಚ್ಚರಿಗೆ ಒಳಗಾಗಿದ್ದಾರೆ.
ಹಿಂದೂ ಧರ್ಮದ ಪ್ರಕಾರ ವೇದಗಳಲ್ಲಿನ ಈ ಮಂತ್ರಗಳು ಧನಾತ್ಮಕ ಬಲವನ್ನು ನೀಡುತ್ತದೆ ಎಂದು ನಂಬಲಾಗಿದೆ. ಇಲ್ಲಿಯೂ ಸಹ ಆಕೆ ಆಪರೇಷನ್ ನಡೆಯುವಾಗ ಸಾಮಾನ್ಯ ವ್ಯಕ್ತಿಯಂತೆ ಮಂತ್ರ ಪಠಿಸುತ್ತಿದ್ದಾಳೆ. ಮತ್ತೊಂದೆಡೆ ವೈದ್ಯರ ತಂಡ ಆಕೆಗೆ ಶಸ್ತ್ರ ಚಿಕಿತ್ಸೆ ನೆರವೇರಿಸುತ್ತಿದ್ದಾರೆ.
ಹೆರಿಗೆ ಆಪರೇಷನ್ ಎಂದರೆ ಮಹಿಳೆಯರಿಗೆ ಭಯವಂತು ಇದ್ದೇ ಇರುತ್ತದೆ. ಅದರಲ್ಲೂ ನೈಸರ್ಗಿಕವಾಗಿ ಆಗುವ ಹೆರಿಗೆಗಿಂತಲೂ ಶಸ್ತ್ರ ಚಿಕಿತ್ಸೆ ನೆರವೇರಿಸುವಾಗ ಎಲ್ಲರಲ್ಲೂ ಒಂದು ರೀತಿ ಭಯವಿರುತ್ತದೆ. ಮಹಿಳೆಯ ಜೊತೆಗೆ ಮಗುವಿನ ಆರೋಗ್ಯ ಸಹ ಇಲ್ಲಿ ಮುಖ್ಯವಾಗಿರುತ್ತದೆ. ಜೊತೆಗೆ ಆಪರೇಷನ್ ಎಂದರೆ ಎಲ್ಲರಲ್ಲೂ ಭಯವಿರುತ್ತದೆ. ಈ ಭಯ ನಿವಾರಣೆಯಾಗಬೇಕು ಎಂಬ ಕಾರಣಕ್ಕೆ ತಾಯಿ ಶ್ರೀ ಕೃಷ್ಣನ ಕುರಿತ ಜಪ ಮಾಡುತ್ತಿದ್ದಾಳೆ.
ಈ ವಿಡಿಯೋವನ್ನು rajahmudry_pointofview2.0 ಎಂಬ ಇನ್ಸ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಮಂದಿ ಆಕೆಯ ಧೈರ್ಯ ಹಾಗೂ ಕಠಿಣ ಪರಿಸ್ಥಿತಿಯಲ್ಲೂ ಆಕೆ ಪರಿಸ್ಥಿತಿ ನಿಭಾಯಿಸುತ್ತಿರುವುದಕ್ಕೆ ಸೆಲ್ಯೂಟ್ ಎಂದಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಬರೋಬ್ಬರಿ 6 ಮಿಲಿಯನ್ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಈ ಶಸ್ತ್ರ ಚಿಕಿತ್ಸೆಯ ವೇಳೆ ಆಕೆ ಶ್ರೀ ಕೃಷ್ಣ ಗೋವಿಂದ ಹರೇ ಮುರಾರೇ..ಎಂಬ ಮಂತ್ರ ಪಠಿಸುತ್ತಿರುವುದು ಕಾಣಬಹುದು. ಆಕೆ ನಿರಂತರವಾಗಿ ಈ ಮಂತ್ರ ಪಠಿಸುತ್ತಿದ್ದರೆ ಇತ್ತ ವೈದ್ಯರು ಆಕೆಯನ್ನು ಹುರಿದುಂಬಿಸುತ್ತಿದ್ದಾರೆ. ಅಂತಿಮವಾಗಿ ಆಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದುಬಂದಿದೆ.
ಈ ವಿಡಿಯೋ ನೋಡಿದ ಮಂದಿ ಆಕೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ವೇದಗಳ ಸಾರವನ್ನು ಬಹಳ ಚೆನ್ನಾಗಿ ಅರಿತುಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಮೆಚ್ಚುಗೆ ಕಮೆಂಟ್ಗಳಿಂದ ತುಂಬಿದೆ. ಈ ವಿಡಿಯೋ ನೋಡಿದ ಮಂದಿ ತಾಯಿಯನ್ನು ಏಕೆ ಯೋಧನಿಗೆ ಹೋಲಿಸುತ್ತಾರೆ ಅನ್ನೋದಕ್ಕೆ ಈ ವಿಡಿಯೋವೊಂದು ಸಾಕ್ಷಿಯಾಗಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಜೊತೆಗೆ ಈ ಮಹಾತಾಯಿಯ ಧೈರ್ಯಕ್ಕೆ ಎಲ್ಲರು ಮೆಚ್ಚುಗೆ ನೀಡಲೇಬೇಕು. ಮಕ್ಕಳಿಗಾಗಿ ಆಕೆ ತನ್ನ ಜೀವನ ಮುಡಿಪಾಗಿಡುವ ಕೆಲಸ ಇಂದಿನಿಂದಲೇ ಆರಂಭಗೊಂಡಿದೆ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಸಂಕಷ್ಟ ಹಾಗೂ ಧೈರ್ಯಕ್ಕಾಗಿ ಹಿಂದೂ ವೇಗಳಲ್ಲಿರುವ ಮಂತ್ರಗಳ ಪಠಿಸುವ ಪ್ರಕರಣ ಇದೇನು ಮೊದಲಲ್ಲ. ಹಲವು ಬಾರಿ ಇಂತಹ ಘಟನೆಗಳು ನಡೆದಿರುವುದನ್ನು ಸಹ ನಾವಿಲ್ಲ ನೆನಪಿಸಿಕೊಳ್ಳಬಹುದು.



Click it and Unblock the Notifications