Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಂದ್ರನ ಮೇಲೆ ಮತ್ತಷ್ಟು ಮಂಜುಗಡ್ಡೆ..! ಇಸ್ರೋ ಹೇಳಿದ್ದೇನು.?
ಚಂದ್ರನ ಕುರಿತು ಅಧ್ಯಯನ ಮಾಡಲು ಎಲ್ಲಾ ದೇಶಗಳು ಹೆಚ್ಚು ಕುತೂಹಲ ಹೊಂದಿವೆ. ಅದರಂತೆ ಇಸ್ರೋ ಸಹ ಚಂದ್ರಯಾನ ಯೋಜನೆ ಮೂಲಕ ಚಂದ್ರನ ಮೇಲೆ ಇಳಿದಿದೆ. ಈಗಾಗಲೇ ಚಂದ್ರನ ಮೇಲೆ ಅಧ್ಯಯನಕ್ಕೆ ಮುಂದಾಗಿರುವ ರೋವರ್ ಹಲವು ಮಾಹಿತಿಗಳ ಹಂಚಿಕೊಂಡಿದೆ.
ಇದೀಗ ಇಸ್ರೋ ಪ್ರಕಾರ ಚಂದ್ರನ ಮೇಲೆ ಮಂಜುಗಡ್ಡೆ ರೂಪದಲ್ಲಿ ನೀರು ಇರುವುದಾಗಿ ಅಧ್ಯಯನದಲ್ಲಿ ತಿಳಿದಿದೆ. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಮತ್ತು ಐಐಟಿ (ಐಎಸ್ಎಂ) ಧನ್ಬಾದ್ನ ಸಂಶೋಧಕರ ಸಹಯೋಗದೊಂದಿಗೆ ಬಾಹ್ಯಾಕಾಶ ಅಪ್ಲಿಕೇಶನ್ಗಳ ಕೇಂದ್ರ (ಎಸ್ಎಸಿ)/ಇಸ್ರೋ ವಿಜ್ಞಾನಿಗಳು ಈ ಅಧ್ಯಯನವನ್ನು ನಡೆಸಿದ್ದಾರೆ.

ಇತ್ತೀಚಿನ ಅಧ್ಯಯನದ ಪ್ರಕಾರ ಮೊದಲ ಎರಡು ಮೀಟರ್ಗಳಲ್ಲಿ ಭೂಗರ್ಭದ ಮಂಜುಗಡ್ಡೆಯ ಪ್ರಮಾಣವು ಎರಡೂ ಧ್ರುವಗಳಲ್ಲಿನ ಮೇಲ್ಮೈಗಿಂತ ಐದರಿಂದ ಎಂಟು ಪಟ್ಟು ದೊಡ್ಡದಾಗಿದೆ ಎಂದು ಇಸ್ರೋ ತಿಳಿಸಿದೆ. ಅಂದರೆ ಅಲ್ಲಿ ಮೊದಲು ನೀರು ದ್ರವ ರೂಪದಲ್ಲಿತ್ತು ಎಂಬುದನ್ನು ಇದು ಸೂಚಿಸುತ್ತದೆ.
ಅಂದಹಾಗೆ, ಆ ಮಂಜುಗಡ್ಡೆಯ ಉತ್ಖನನ ಮಾಡಲು ಚಂದ್ರನ ಮೇಲೆ ಕೊರೆಯುವುದು ಮುಂದಿನ ಕಾರ್ಯಾಚರಣೆಯ ಭಾಗವಾಗಿರಲಿದೆ ಎಂಬುದು ಇಸ್ರೋ ತಿಳಿಸಿದೆ.
ಇದಲ್ಲದೆ, ಉತ್ತರ ಧ್ರುವ ಪ್ರದೇಶದಲ್ಲಿ ಮಂಜುಗಡ್ಡೆಯ ಪ್ರಮಾಣವು ದಕ್ಷಿಣ ಧ್ರುವ ಪ್ರದೇಶದಲ್ಲಿ ಎರಡು ಪಟ್ಟು ಹೆಚ್ಚಿದೆ ಎಂದು ಅಧ್ಯಯನವು ಸೂಚಿಸುತ್ತದೆ. ಇಂಬ್ರಿಯನ್ ಅವಧಿಯಲ್ಲಿ ಜ್ವಾಲಾಮುಖಿಯ ಸ್ಪೋಟದ ಸಮಯದಲ್ಲಿ ಚಂದ್ರನ ಧ್ರುವಗಳಲ್ಲಿನ ಭೂಗರ್ಭದ ನೀರು ಮಂಜುಗಡ್ಡೆಯ ಪ್ರಾಥಮಿಕ ಮೂಲ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಚಂದ್ರನ ಮೇಲಿನ ನೀರಿನ ಮಂಜುಗಡ್ಡೆಯ ಮೂಲ ಯಾವುದು ಎಂದು ಕಂಡುಕೊಳ್ಳಲು ವಿಚಕ್ಷಣ ಆರ್ಬಿಟರ್ನಲ್ಲಿ ರಾಡಾರ್, ಲೇಸರ್, ಆಪ್ಟಿಕಲ್, ನ್ಯೂಟ್ರಾನ್ ಸ್ಪೆಕ್ಟ್ರೋಮೀಟರ್, ಅಲ್ಟ್ರಾ-ವೈಲೆಟ್ ಸ್ಪೆಕ್ಟ್ರೋಮೀಟರ್ ಮತ್ತು ಥರ್ಮಲ್ ರೇಡಿಯೊಮೀಟರ್ ಅನ್ನು ಒಳಗೊಂಡಿರುವ ಏಳು ಉಪಕರಣಗಳನ್ನು ಸಂಶೋಧನಾ ತಂಡವು ಬಳಸಿದ್ದು, ಈ ಮೂಲಕ ಅದರ ಮೂಲ ಪತ್ತೆಗೆ ಮುಂದಾಗಿದೆ.
ಚಂದ್ರಯಾನ-2 ಡ್ಯುಯಲ್-ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಕರಣದಿಂದ ಪೋಲಾರಿಮೆಟ್ರಿಕ್ ರಾಡಾರ್ ಡೇಟಾವನ್ನು ಬಳಸಿಕೊಂಡು ಚಂದ್ರನ ಮೇಲೆ ಮಂಜುಗಡ್ಡೆಯ ಮೂಲ ಹುಡುಕುವ ಅಧ್ಯಯನ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಹೀಗೆ ಚಂದ್ರನ ಮೇಲ್ಮೈಯಲ್ಲಿ ಮಂಜುಗಡ್ಡೆ ಉತ್ಕನನ ಪ್ರಕ್ರಿಯೆಯ ಕುರಿತು ಇಸ್ರೋ ಆಳ ಅಧ್ಯಯನ ನಡೆಸಲಿದೆ ಎಂದು ತಿಳಿದುಬಂದಿದೆ.
ಬಾಹ್ಯಾಕಾಶಕ್ಕೆ ಹಾರಲು ಸಿದ್ಧರಾದ ಗಗನಯಾತ್ರಿಗಳು
ಈ ನಡುವೆ ಇಸ್ರೋ ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲು ಮುಂದಾಗಿದೆ. ಈಗ 'ಗಗನ್ಯಾನ್ ಮಿಷನ್ಗೆ' ಭರದ ಸಿದ್ಧತೆ ನಡೆಸಿದೆ. ಇದು ಅಂತರಿಕ್ಷಕ್ಕೆ ಮಾನವನನ್ನು ಕಳುಹಿಸಲು ಭಾರತದ ಮೊಟ್ಟ ಮೊದಲ ಯೋಜನೆಯಾಗಿದ್ದು, ಭಾರತದ ಪಾಲಿಗೆ ಇದೊಂದು ಮಹತ್ವದ ಕಾರ್ಯವಾಗಲಿದೆ.
ದೇಶದ ಚೊಚ್ಚಲ ಮಾನವ ಬಾಹ್ಯಾಕಾಶ ಯಾನಕ್ಕಾಗಿ ಗಗನಯಾತ್ರಿಗಳು ತರಬೇತಿ ಪಡೆಯುತ್ತಿದ್ದಾರೆ. ಇದಕ್ಕಾಗಿ ಪ್ರಶಾಂತ್ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹಾರಲು ಸಿದ್ಧತೆ ನಡೆಸಿದ್ದಾರೆ.
ಗಗನಯಾನ್ ಮಿಷನ್ ಭಾರತದ ಮೊದಲ ಮಾನವ ಬಾಹ್ಯಾಕಾಶ ಕಾರ್ಯಕ್ರಮವಾಗಿದ್ದು, ವಿವಿಧ ಇಸ್ರೋ ಕೇಂದ್ರಗಳಲ್ಲಿ ವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ.ಗಗನ್ಯಾನ್ ಯೋಜನೆಯು ಮೂರು ದಿನಗಳ ಕಾರ್ಯಾಚರಣೆಗಾಗಿ ಸಿಬ್ಬಂದಿ ಸದಸ್ಯರನ್ನು 400 ಕಿ.ಮೀ ಕಕ್ಷೆಗೆ ಉಡಾಯಿಸುವ ಮೂಲಕ ಮತ್ತು ಇಂಡಿಯನ್ ಸಮುದ್ರದಲ್ಲಿ ಇಳಿಯುವ ಮೂಲಕ ಅವರನ್ನು ಸುರಕ್ಷಿತವಾಗಿ ಭೂಮಿಗೆ ತರುವ ಮೂಲಕ ಈ ಯೋಜನೆಗೆ ಯಶಸ್ಸಿಗೆ ಇಸ್ರೋ ಮುಂದಾಗಿದೆ.



Click it and Unblock the Notifications


