Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ವಿಮಾ ಹಣಕ್ಕಾಗಿ ತನ್ನ ಎರಡೂ ಕಾಲನ್ನು ಕತ್ತರಿಸಿಕೊಂಡ..! ಆದ್ರೆ ಆಮೇಲೆ ಆಗಿದ್ದೇ ಬೇರೆ..!
ನಮ್ಮ ಜೀವನದಲ್ಲಿ ಯಾವಾಗ ಬೇಕಾದರು ಅಪಾಯಗಳು ಎದುರಾಗಬಹುದು. ಅದರಲ್ಲೂ ಆರೋಗ್ಯದಲ್ಲಿ ಯಾವಾಗ ಬೇಕಾದರು ಹದಗೆಟ್ಟು ಆಸ್ಪತ್ರೆ ಸೇರಬಹುದು. ಅಪಘಾತ, ಅಕಾಲಿಕವಾಗಿ ಉಂಟಾಗುವ ಅನಾರೋಗ್ಯ ಸಮಸ್ಯೆ ಇದೆಲ್ಲದರಿಂದ ಪಾರಾಗಲು ನಾವು ವಿಮೆ ಮಾಡಿಸಿರುತ್ತೇವೆ. ವಾಹನ ವಿಮೆ, ಆರೋಗ್ಯ ವಿಮೆ ಹೀಗೆ ಹತ್ತಾರು ರೀತಿಯ ವಿಮೆಗಳಿವೆ.
ನಾವು ಸಹ ನಮ್ಮ ಮರಣದ ನಂತರ ಕುಟುಂಬಕ್ಕೆ ಇಂತಿಷ್ಟು ಹಣ ಸಿಗುವಂತೆ ವಿಮೆ ಮಾಡಬಹುದು. ಇದರ ಜೊತೆ ನಮ್ಮ ದೇಹದ ಎಲ್ಲಾ ಅಂಗಗಳಿಗೂ ವಿಮೆ ಮಾಡಿಸಬಹುದು. ಒಂದು ವೇಳೆ ನಮಗೆ ಅಪಘಾತವಾದರೆ ಈ ವಿಮೆ ಮೂಲಕ ಆಸ್ಪತ್ರೆ ಖರ್ಚು ಭರಿಸಬಹುದು. ಇಷ್ಟೆಲ್ಲಾ ಲಾಭವಿರುವ ವಿಮೆಯನ್ನು ಹಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಹೌದು ವಿಮೆಯನ್ನು ದುರುಪಯೋಗ ಪಡಿಸಿಕೊಂಡ ಹಲವು ಘಟನೆಗಳನ್ನು ನಾವು ಕೇಳಿದ್ದೇವೆ. ಹಣ ಹೊಡೆಯಲು ತಮ್ಮ ಸಾವನ್ನೇ ನಕಲು ಮಾಡಿರುವುದು, ವಿಮಾ ಹಣಕ್ಕಾಗಿ ಬೇರೆಯವರನ್ನು ಸಾಯಿಸಿರುವುದು ಹೀಗೆ ಹಲವು ರೀತಿಯ ಘಟನೆಗಳ ಬಗ್ಗೆ ನಾವು ಕೇಳಿರುತ್ತೇವೆ. ಇದೇ ರೀತಿ ಇಲ್ಲೊಬ್ಬ ವಿಮಾ ಹಣ ಪಡೆಯಲು ತನ್ನ ಕಾಲು ಕತ್ತರಿಸಲು ವ್ಯಕ್ತಿಯೊಬ್ಬನ ನೇಮಿಸಿಕೊಂಡಿದ್ದ ಘಟನೆ ವರದಿಯಾಗಿದೆ.
ವಿಮಾ ಹಣ ಪಡೆದುಕೊಳ್ಳಲು ತಾನೇ ಒಬ್ಬ ವ್ಯಕ್ತಿಯನ್ನು ನೇಮಿಸಿ ತನ್ನ ಕಾಲನ್ನು ಆತನಿಂದ ಕತ್ತರಿಸಲು ಹೇಳಿದ್ದ ಎಂದು ತಿಳಿದುಬಂದಿದೆ. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ? ಮುಂದಾಗಿದ್ದು ಏನು ಎಂಬುದನ್ನು ನಾವಿಂದು ನೋಡೋಣ.
ಈ ಘಟನೆ ನಡೆದಿರುವುದು ಅಮೆರಿಕದ ಮಿಸೌರಿ ಪ್ರದೇಶದ ಹೋವೆಲ್ ಕೌಂಟಿಯಲ್ಲಿ ಟ್ರ್ಯಾಕ್ಟರ್ ಹೊಂದಿದ್ದ ಆತ ಹಣಕ್ಕಾಗಿ ಈ ರೀತಿಯ ಯೋಜನೆ ರೂಪಿಸಿದ್ದ ತನ್ನ ಎರಡೂ ಕಾಲುಗಳನ್ನು ಕತ್ತರಿಸಲು ವ್ಯಕ್ತಿಯೊಬ್ಬನಿಗೆ ಹಣ ನೀಡಿ ನೇಮಿಸಿದ. ಬಳಿಕ ಟ್ರ್ಯಾಕ್ಟರ್ ಅಪಘಾತದಲ್ಲಿ ಕಾಲು ಕಳೆದುಕೊಂಡಂತೆ ಪ್ಲಾನ್ ಮಾಡಿದ್ದ.
ಕಾಲು ಕತ್ತರಿಸಿದ ವ್ಯಕ್ತಿ
ವಿಮಾ ಹಣ ಪಡೆಯಲು ಆತ ತನ್ನ ಕಾಲು ಕತ್ತರಿಸಲು ವ್ಯಕ್ತಿಯ ನೇಮಿಸಿದ. ಆತನಿಗೆ ಹಣ ನೀಡಿ ತನ್ನ ಎರಡೂ ಕಾಲು ಕತ್ತರಿಸಲು ಹೇಳಿದ. ಬಳಿಕ ಮದ್ಯ ಸೇವಿಸಿ ಆತನಿಗೆ ಕಾಲು ಕತ್ತರಿಸಲು ಹೇಳಿದ. ಆತ ಹೇಳಿದ್ದಂತೆ ವಿಲೋ ಎಂಬಾತನ ಎರಡೂ ಕಾಲುಗಳನ್ನು ಕತ್ತರಿಸಿದ.
ವಿಲೋ ಸ್ಪ್ರಿಂಗ್ಸ್ನ 60 ವರ್ಷದ ವ್ಯಕ್ತಿಯೊಬ್ಬರು ಬ್ರಷ್ ಹಾಗ್ (ಟ್ರ್ಯಾಕ್ಟರ್ ಹಿಂದೆ ಇರುವ ರೋಟರಿ) ಅಪಘಾತದಿಂದ ಬಳಲುತ್ತಿದ್ದ ನಂತರ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ರೋಟರಿಗೆ ಸಿಲುಕಿ ಕಾಲು ಕಳೆದುಕೊಂಡಿರುವುದಾಗಿ ಆತ ಹೇಳಿಕೊಂಡಿದ್ದ.
ಆದರೆ ಪೊಲೀಸರು ಇದರಲ್ಲಿ ಏನೋ ಬೇರೆ ವಿಚಾರ ಇದೆ ಎಂದು ಮೊದಲ ಬಾರಿಗೆ ಅನುಮಾನಿಸಿದ್ದರು. ಏಕೆಂದರೆ ರೋಟರಿಗೆ ಸಿಲುಕಿ ಕಾಲುಗಳು ತುಂಡಾದಂತೆ ಅದು ಕಾಣಿಸುತ್ತಿರಲಿಲ್ಲ. ಯಾರೋ ಕತ್ತರಿಸಿದಂತೆ ಕಾಣುತ್ತಿತ್ತು. ಏಕೆಂದರೆ ಕಾಲು ಕತ್ತರಿಸಿದ ಗಾಯಬಿಟ್ಟರೆ ಬೇರೆಲ್ಲು ಒಂದು ಸಣ್ಣ ಗಾಯವೂ ಆಗಿರಲಿಲ್ಲ. ಅಪಘಾತ ಸಂಭವಿಸಿದ್ದೇ ಆದರೆ ಒಂದಿಷ್ಟು ಗಾಯಗಳು ಆಗಬೇಕಿತ್ತು ಎಂಬುದು ಪೊಲೀಸರ ವಾದವಾಗಿತ್ತು.
ಅಪಘಾತ ನಡೆದ ಸ್ಥಳಕ್ಕೆ ಬಂದಾಗಲು ಅಚ್ಚರಿ ಇತ್ತು. ಆತನ ಎರಡು ಕಾಲುಗಳನ್ನು ರೋಟರಿ ಮೇಲೆ ಹಾಕಲಾಗಿತ್ತು. ಇದು ರೋಟರಿಗೆ ಸಿಕ್ಕಂತ ಕಾಣದಿದ್ದರೂ ಯಾರೋ ಬೇಕಂತಲೇ ಕಾಲನ್ನು ಅಲ್ಲಿ ಇಟ್ಟು ಹೋದಂತೆ ಕಾಣುತ್ತಿತ್ತು. ಇಲ್ಲಿಂದ ತನಿಖೆ ಚುರುಕುಗೊಂಡಿತು. ಆತನನ್ನು ಎಲ್ಲಾ ಆಯಾಮದಿಂದಲೂ ವಿಚಾರಣೆ ನಡೆಸಿದಾಗ ಆತ ನಿಜಾಂಶವೇನು ಎಂಬುದನ್ನು ತಿಳಿಸಿದ್ದ.
60 ವರ್ಷದ ಅಂಗವೈಕಲ್ಯ ವಿಮಾ ಹಣ ಪಡೆಯಲು ಈ ರೀತಿಯ ವಂಚನೆ ಮಾಡಲು ಯೋಜನೆಯನ್ನು ರೂಪಿಸಿದೆ ಎಂದು ನಂತರ ಬಹಿರಂಗಪಡಿಸಲಾಯಿತು. ಜೊತೆಗೆ ಆತನಿಗೆ ವಿಮಾ ಕಂಪನಿಯಿಂದ ಯಾವುದೇ ಹಣ ಸಿಗದೆ ಹೋಯಿತು. ಆದರೆ ಕಾಲುಗಳಿಲ್ಲದೆ ಆತ ಕಷ್ಟಪಡುತ್ತಿದ್ದ, ಅಲ್ಲದೆ ಗಾಯಗಳು ದೊಡ್ಡದಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು.



Click it and Unblock the Notifications