Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ವಿಮಾ ಹಣಕ್ಕಾಗಿ ತನ್ನ ಎರಡೂ ಕಾಲನ್ನು ಕತ್ತರಿಸಿಕೊಂಡ..! ಆದ್ರೆ ಆಮೇಲೆ ಆಗಿದ್ದೇ ಬೇರೆ..!
ನಮ್ಮ ಜೀವನದಲ್ಲಿ ಯಾವಾಗ ಬೇಕಾದರು ಅಪಾಯಗಳು ಎದುರಾಗಬಹುದು. ಅದರಲ್ಲೂ ಆರೋಗ್ಯದಲ್ಲಿ ಯಾವಾಗ ಬೇಕಾದರು ಹದಗೆಟ್ಟು ಆಸ್ಪತ್ರೆ ಸೇರಬಹುದು. ಅಪಘಾತ, ಅಕಾಲಿಕವಾಗಿ ಉಂಟಾಗುವ ಅನಾರೋಗ್ಯ ಸಮಸ್ಯೆ ಇದೆಲ್ಲದರಿಂದ ಪಾರಾಗಲು ನಾವು ವಿಮೆ ಮಾಡಿಸಿರುತ್ತೇವೆ. ವಾಹನ ವಿಮೆ, ಆರೋಗ್ಯ ವಿಮೆ ಹೀಗೆ ಹತ್ತಾರು ರೀತಿಯ ವಿಮೆಗಳಿವೆ.
ನಾವು ಸಹ ನಮ್ಮ ಮರಣದ ನಂತರ ಕುಟುಂಬಕ್ಕೆ ಇಂತಿಷ್ಟು ಹಣ ಸಿಗುವಂತೆ ವಿಮೆ ಮಾಡಬಹುದು. ಇದರ ಜೊತೆ ನಮ್ಮ ದೇಹದ ಎಲ್ಲಾ ಅಂಗಗಳಿಗೂ ವಿಮೆ ಮಾಡಿಸಬಹುದು. ಒಂದು ವೇಳೆ ನಮಗೆ ಅಪಘಾತವಾದರೆ ಈ ವಿಮೆ ಮೂಲಕ ಆಸ್ಪತ್ರೆ ಖರ್ಚು ಭರಿಸಬಹುದು. ಇಷ್ಟೆಲ್ಲಾ ಲಾಭವಿರುವ ವಿಮೆಯನ್ನು ಹಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಹೌದು ವಿಮೆಯನ್ನು ದುರುಪಯೋಗ ಪಡಿಸಿಕೊಂಡ ಹಲವು ಘಟನೆಗಳನ್ನು ನಾವು ಕೇಳಿದ್ದೇವೆ. ಹಣ ಹೊಡೆಯಲು ತಮ್ಮ ಸಾವನ್ನೇ ನಕಲು ಮಾಡಿರುವುದು, ವಿಮಾ ಹಣಕ್ಕಾಗಿ ಬೇರೆಯವರನ್ನು ಸಾಯಿಸಿರುವುದು ಹೀಗೆ ಹಲವು ರೀತಿಯ ಘಟನೆಗಳ ಬಗ್ಗೆ ನಾವು ಕೇಳಿರುತ್ತೇವೆ. ಇದೇ ರೀತಿ ಇಲ್ಲೊಬ್ಬ ವಿಮಾ ಹಣ ಪಡೆಯಲು ತನ್ನ ಕಾಲು ಕತ್ತರಿಸಲು ವ್ಯಕ್ತಿಯೊಬ್ಬನ ನೇಮಿಸಿಕೊಂಡಿದ್ದ ಘಟನೆ ವರದಿಯಾಗಿದೆ.
ವಿಮಾ ಹಣ ಪಡೆದುಕೊಳ್ಳಲು ತಾನೇ ಒಬ್ಬ ವ್ಯಕ್ತಿಯನ್ನು ನೇಮಿಸಿ ತನ್ನ ಕಾಲನ್ನು ಆತನಿಂದ ಕತ್ತರಿಸಲು ಹೇಳಿದ್ದ ಎಂದು ತಿಳಿದುಬಂದಿದೆ. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ? ಮುಂದಾಗಿದ್ದು ಏನು ಎಂಬುದನ್ನು ನಾವಿಂದು ನೋಡೋಣ.
ಈ ಘಟನೆ ನಡೆದಿರುವುದು ಅಮೆರಿಕದ ಮಿಸೌರಿ ಪ್ರದೇಶದ ಹೋವೆಲ್ ಕೌಂಟಿಯಲ್ಲಿ ಟ್ರ್ಯಾಕ್ಟರ್ ಹೊಂದಿದ್ದ ಆತ ಹಣಕ್ಕಾಗಿ ಈ ರೀತಿಯ ಯೋಜನೆ ರೂಪಿಸಿದ್ದ ತನ್ನ ಎರಡೂ ಕಾಲುಗಳನ್ನು ಕತ್ತರಿಸಲು ವ್ಯಕ್ತಿಯೊಬ್ಬನಿಗೆ ಹಣ ನೀಡಿ ನೇಮಿಸಿದ. ಬಳಿಕ ಟ್ರ್ಯಾಕ್ಟರ್ ಅಪಘಾತದಲ್ಲಿ ಕಾಲು ಕಳೆದುಕೊಂಡಂತೆ ಪ್ಲಾನ್ ಮಾಡಿದ್ದ.
ಕಾಲು ಕತ್ತರಿಸಿದ ವ್ಯಕ್ತಿ
ವಿಮಾ ಹಣ ಪಡೆಯಲು ಆತ ತನ್ನ ಕಾಲು ಕತ್ತರಿಸಲು ವ್ಯಕ್ತಿಯ ನೇಮಿಸಿದ. ಆತನಿಗೆ ಹಣ ನೀಡಿ ತನ್ನ ಎರಡೂ ಕಾಲು ಕತ್ತರಿಸಲು ಹೇಳಿದ. ಬಳಿಕ ಮದ್ಯ ಸೇವಿಸಿ ಆತನಿಗೆ ಕಾಲು ಕತ್ತರಿಸಲು ಹೇಳಿದ. ಆತ ಹೇಳಿದ್ದಂತೆ ವಿಲೋ ಎಂಬಾತನ ಎರಡೂ ಕಾಲುಗಳನ್ನು ಕತ್ತರಿಸಿದ.
ವಿಲೋ ಸ್ಪ್ರಿಂಗ್ಸ್ನ 60 ವರ್ಷದ ವ್ಯಕ್ತಿಯೊಬ್ಬರು ಬ್ರಷ್ ಹಾಗ್ (ಟ್ರ್ಯಾಕ್ಟರ್ ಹಿಂದೆ ಇರುವ ರೋಟರಿ) ಅಪಘಾತದಿಂದ ಬಳಲುತ್ತಿದ್ದ ನಂತರ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ರೋಟರಿಗೆ ಸಿಲುಕಿ ಕಾಲು ಕಳೆದುಕೊಂಡಿರುವುದಾಗಿ ಆತ ಹೇಳಿಕೊಂಡಿದ್ದ.
ಆದರೆ ಪೊಲೀಸರು ಇದರಲ್ಲಿ ಏನೋ ಬೇರೆ ವಿಚಾರ ಇದೆ ಎಂದು ಮೊದಲ ಬಾರಿಗೆ ಅನುಮಾನಿಸಿದ್ದರು. ಏಕೆಂದರೆ ರೋಟರಿಗೆ ಸಿಲುಕಿ ಕಾಲುಗಳು ತುಂಡಾದಂತೆ ಅದು ಕಾಣಿಸುತ್ತಿರಲಿಲ್ಲ. ಯಾರೋ ಕತ್ತರಿಸಿದಂತೆ ಕಾಣುತ್ತಿತ್ತು. ಏಕೆಂದರೆ ಕಾಲು ಕತ್ತರಿಸಿದ ಗಾಯಬಿಟ್ಟರೆ ಬೇರೆಲ್ಲು ಒಂದು ಸಣ್ಣ ಗಾಯವೂ ಆಗಿರಲಿಲ್ಲ. ಅಪಘಾತ ಸಂಭವಿಸಿದ್ದೇ ಆದರೆ ಒಂದಿಷ್ಟು ಗಾಯಗಳು ಆಗಬೇಕಿತ್ತು ಎಂಬುದು ಪೊಲೀಸರ ವಾದವಾಗಿತ್ತು.
ಅಪಘಾತ ನಡೆದ ಸ್ಥಳಕ್ಕೆ ಬಂದಾಗಲು ಅಚ್ಚರಿ ಇತ್ತು. ಆತನ ಎರಡು ಕಾಲುಗಳನ್ನು ರೋಟರಿ ಮೇಲೆ ಹಾಕಲಾಗಿತ್ತು. ಇದು ರೋಟರಿಗೆ ಸಿಕ್ಕಂತ ಕಾಣದಿದ್ದರೂ ಯಾರೋ ಬೇಕಂತಲೇ ಕಾಲನ್ನು ಅಲ್ಲಿ ಇಟ್ಟು ಹೋದಂತೆ ಕಾಣುತ್ತಿತ್ತು. ಇಲ್ಲಿಂದ ತನಿಖೆ ಚುರುಕುಗೊಂಡಿತು. ಆತನನ್ನು ಎಲ್ಲಾ ಆಯಾಮದಿಂದಲೂ ವಿಚಾರಣೆ ನಡೆಸಿದಾಗ ಆತ ನಿಜಾಂಶವೇನು ಎಂಬುದನ್ನು ತಿಳಿಸಿದ್ದ.
60 ವರ್ಷದ ಅಂಗವೈಕಲ್ಯ ವಿಮಾ ಹಣ ಪಡೆಯಲು ಈ ರೀತಿಯ ವಂಚನೆ ಮಾಡಲು ಯೋಜನೆಯನ್ನು ರೂಪಿಸಿದೆ ಎಂದು ನಂತರ ಬಹಿರಂಗಪಡಿಸಲಾಯಿತು. ಜೊತೆಗೆ ಆತನಿಗೆ ವಿಮಾ ಕಂಪನಿಯಿಂದ ಯಾವುದೇ ಹಣ ಸಿಗದೆ ಹೋಯಿತು. ಆದರೆ ಕಾಲುಗಳಿಲ್ಲದೆ ಆತ ಕಷ್ಟಪಡುತ್ತಿದ್ದ, ಅಲ್ಲದೆ ಗಾಯಗಳು ದೊಡ್ಡದಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು.



Click it and Unblock the Notifications