Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
250 ಗ್ರಾಮ್ ಆಲೂಗಡ್ಡೆ ಕಾಣಿಸುತ್ತಿಲ್ಲ: ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ..! ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ನಮಗೆ ಎಂತಹ ವಿಚಿತ್ರ, ಕುತೂಹಲ ಮೂಡಿಸುವಂತಹ ಘಟನೆಗಳು ನೋಡಲು ಸಿಗುತ್ತವೆ ಅಂದ್ರೆ ಕೆಲವೊಮ್ಮೆ ಈ ರೀತಿ ಘಟನೆಗಳು ನಡೆಯುತ್ತವೆ ಅನ್ನೋದನ್ನ ಯೋಚಿಸಲು ಸಹ ಸಾಧ್ಯವಾಗೋದಿಲ್ಲ. ಅಂತಹ ವಿಚಿತ್ರ ಘಟನೆಗಳಿಂದ, ವಿಡಿಯೋಗಳಿಂದ ಸೋಶಿಯಲ್ ಮೀಡಿಯಾ ತುಂಬಿಕೊಂಡಿರುತ್ತೆ. ಅದರಲ್ಲೂ ಕೆಲವು ಘಟನೆಗಳು ಎಲ್ಲರ ಕುತೂಹಲ ಮೂಡಿಸುತ್ತವೆ.
ಹಾಗೆ ನೀವು ಮದ್ಯಪಾನ ಮಾಡಿ ಗಲಾಟೆ ಮಾಡುವುದು, ಎಲ್ಲೆಂದರಲ್ಲಿ ಬಿದ್ದಿರುವುದು, ಇಲ್ಲವೆ ನಡೆಯಲಾಗದೆ ಮನೆಗೆ ತೆರಳಲು ಪರದಾಡುವುದು ಇಂತಹ ಹಲವು ವಿಇಡಯೋಗಳನ್ನ ನೋಡಿರಬಹುದು. ಕೆಲವರು ಕುಡಿದ ಮತ್ತಿನಲ್ಲಿ ಪ್ರಾಣಕ್ಕೆ ಸಂಚಕಾರ ತರುವಂತಹ ಕೆಲಸ ಮಾಡುವುದು ಸಹ ನೋಡಿರುತ್ತೇವೆ. ಹಾವು ಹಿಡಿಯಲು ಮುಂದಾಗುವುದು, ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುವುದು ಕೂಡ ನೋಡಿರುತ್ತೇವೆ.

ಈಗ ಇಲ್ಲೊಬ್ಬ ಮದ್ಯಪಾನ ಮಾಡಿದ ವ್ಯಕ್ತಿ ಕುಡಿದ ಮತ್ತಿನಲ್ಲಿ ಯಾರು ಮಾಡದಂತಹ ಕೆಲಸ ಮಾಡಿ ಸುದ್ದಿಯಾಗಿದ್ದಾನೆ. ಆತ ಮದ್ಯ ಸೇವಿಸಿ ಪೊಲೀಸರಿಗೆ ಕರೆ ಮಾಡಿ ಆಲೂಗಡ್ಡೆ ಹುಡುಕಿ ಕೊಡುವಂತೆ ಕೇಳಿಕೊಂಡಿದ್ದಾನೆ. ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಇಂತಹ ಕೆಲಸ ಮಾಡಿ ಈಗ ಸುದ್ದಿಯಾಗಿದ್ದಾನೆ. ಆತ ಮನೆಯಲ್ಲಿ ಅಡುಗೆ ಮಾಡಲು ತಂದಿದ್ದ ಆಲೂಗಡ್ಡೆಯನ್ನು ಯಾರೋ ಕದ್ದಿದ್ದಾರೆ ಎಂದು ಪೊಲೀಸರಿಗೆ ಕರೆ ಮಾಡಿದ್ದಾನೆ.
ಕ್ವಿಂಟಾಲ್, ಕೆ.ಜಿಯ ಆಲೂಗಡ್ಡೆ ಕಳ್ಳತನವಾಗಿದ್ದರೆ ಪೊಲೀಸರಿಗೆ ದೂರು ನೀಡುವು ಸರಿ, ಆದ್ರೆ ಆತ ಕೇವಲ 250 ಗ್ರಾಮ್ ಆಲೂಗಡ್ಡೆ ಕಾಣಿಸುತ್ತಿಲ್ಲ ಎಂಬ ಕಾರಣಕ್ಕೆ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಆತನ ಹೆಸರು, ವಿಳಾಸ ಏನು ಎಂಬುದನ್ನು ಕೇಳಿದ್ದಾರೆ. ಈ ವೇಳೆ ಆತ ವಿಜಯ್ ವರ್ಮಾ ಎಂದು ತಿಳಿಸಿದ್ದಾನೆ.
ಹಾಗೆ ದೀಪಾವಳಿ ಹಿಂದಿನ ದಿನ ಮನೆಯಲ್ಲಿ ಅಡುಗೆ ಮಾಡಲು ತಂದಿರುವ 250 ಗ್ರಾಮ್ ಆಲೂಗಡ್ಡೆ ಕಳ್ಳತನವಾಗಿದೆ ಎಂದು ಆತ ಪೊಲೀಸರ ಎದುರು ಹೇಳುತ್ತಿದ್ದಾರೆ. ಆಲೂಗಡ್ಡೆ ಬೇಯಿಸಿ ಮದ್ಯದೊಂದಿಗೆ ಸೇವಿಸಲು ತಯಾರಿಸಲು ಇಟ್ಟಿದೆ, ಆದ್ರೆ ಆ ಆಲೂಗಡ್ಡೆಗಳು ಈಗ ಕಾಣಿಸುತ್ತಿಲ್ಲ ಎಂದು ದೂರು ನೀಡಿದ್ದಾನೆ. ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ ಮತ್ತು ಸಂಜೆ ಕೆಲವು ದಿನಗಳವರೆಗೆ ಮದ್ಯಪಾನ ಮಾಡುತ್ತೇವೆ, ಆದರೆ ಪ್ರಶ್ನೆಯು ಮದ್ಯದ ಬಗ್ಗೆ ಅಲ್ಲ. ಇದು ಆಲೂಗಡ್ಡೆ ಬಗ್ಗೆ. ಅದನ್ನು ಹುಡುಕಿ ಕೊಡಿ ಎಂದು ಆತ ಹೇಳುತ್ತಿದ್ದಾನೆ.
ಪೊಲೀಸರು ಕೂಡ ಶಾಂತ ರೀತಿಯಲ್ಲಿ ಆತನ ವಿಚಾರಿಸುತ್ತಿದ್ದಾರೆ, ಎಷ್ಟು ಕೆ.ಜಿ ಆಲೂಗಡ್ಡೆ ಇತ್ತು, ಮದ್ಯ ಸೇವಿಸಿದ್ದೀಯಾ? ಎಲ್ಲಿ ಸಿಗುತ್ತೆ? ಎಷ್ಟು ಕುಡಿದಿದ್ದೀಯಾ ಎಂಬೆಲ್ಲಾ ವಿಚಾರ ಆತನಿಂದ ಕೇಳುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಸದ್ಯ ಘಟನೆಯಲ್ಲಿ ಆಲೂಗಡ್ಡೆ ಸಂಬಂಧ ಆತನಿಗೆ ಯಾವುದೇ ನ್ಯಾಯ ಸಿಕ್ಕಂತಿಲ್ಲ. ಏಕೆಂದರೆ ಪೊಲೀಸರು ಆತನಿಗೆ ಹಣ ನೀಡಿ ಮತ್ತೆ ಖರೀದಿಸಲು ಹೇಳಿ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕುಡುಕನ ಈ ಕಾರ್ಯ ನೋಡಿ ಜನರು ಅಚ್ಚರಿಗೆ ಒಳಗಾಗಿದ್ದಾರೆ. ಆತ ನಿಷ್ಟಾವಂತ, ತಾನು ದುಡಿದ ಹಣದಲ್ಲಿ ಆಲೂಗಡ್ಡೆ ಖರೀದಿಸಿ ತಂದು ಸವಿಯಲು ಮುಂದಾಗಿದ್ದ, ಆದ್ರೆ ಯಾರೋ ಅದನ್ನು ಕದ್ದಿದ್ದಾರೆ. ಆತನ ಮಾತಿನಲ್ಲಿ ನೋವಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications