Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ವರ್ಷ ಮಹಾ ಶಿವರಾತ್ರಿ ಯಾವಾಗ..? ದಿನಾಂಕ, ಮುಹೂರ್ತ ನೋಡಿ..!
ಹಿಂದೂ ಕ್ಯಾಲೆಂಡರ್ ಪ್ರಕಾರ ಸಂಕ್ರಾಂತಿ ಬಳಿಕ ದೇಶದೆಲ್ಲೆಡೆ ಆಚರಿಸಲಾಗುವ ಹಬ್ಬವೆಂದರೆ ಅದು ಮಹಾ ಶಿವರಾತ್ರಿಯಾಗಿದೆ. ಹಿಂದೂ ಕ್ಯಾಲೆಂಡರ್ಗೆ ಅನುಗುಣವಾಗಿ ಚಂದ್ರ-ಸೌರ ಕ್ಯಾಲೆಂಡರ್ನ ಪ್ರತಿ ತಿಂಗಳು ಶಿವರಾತ್ರಿಯನ್ನು ಆಚರಿಸಲಾಗುತ್ತದೆ ಆದರೆ ವರ್ಷಕ್ಕೊಮ್ಮೆ, ಚಳಿಗಾಲದ ಕೊನೆಯಲ್ಲಿ ದೇಶದಾದ್ಯಂತ ಈ ಮಹಾಶಿವರಾತ್ರಿ ಹಬ್ಬ ಆಚರಿಸಲಾಗುತ್ತದೆ.
ಶಿವನನ್ನು ಪೂರ್ಣ ಮನಸ್ಸಿನಿಂದ ಆರಾಧಿಸುವ ದಿನವಾಗಿದೆ. ಈ ದಿನದಲ್ಲಿ ಶಿವನಿಗಾಗಿ ವಿಶೇಷ ಪೂಜೆ, ಆರಾಧನೆ ನೆರವೇರಲಿದೆ. ಈ ಹಬ್ಬದ ದಿನದಂದು ಶಿವ ಕೈಲಾಸದಲ್ಲಿ ತಾಂಡವ ನೃತ್ಯ ಪ್ರದರ್ಶಿಸುತ್ತಾನೆ ಎಂದು ನಂಬಲಾಗಿದೆ. ಹಾಗಾದರೆ ಈ ವರ್ಷ ಮಹಾಶಿವರಾತ್ರಿ ಯಾವಾಗ ಬಂದಿದೆ? ಆಚರಣೆಯ ಮಹತ್ವ ಮತ್ತು ಮುಹೂರ್ತಗಳ ಕುರಿತು ತಿಳಿದುಕೊಳ್ಳಿ.

ಈ ವರ್ಷ ಮಾರ್ಚ್ 8 ರಂದು ಅದ್ದೂರಿ ಮಹಾ ಶಿವರಾತ್ರಿ ಆಚರಣೆ
ಪಂಚಾಂಗದ ಪ್ರಕಾರ
- ಚತುರ್ದಶಿ ತಿಥಿ ಆರಂಭ-ಮಾರ್ಚ್ 08, ರಾತ್ರಿ 09:57ಕ್ಕೆ
- ಚತುರ್ದಶಿ ತಿಥಿ ಮುಕ್ತಾಯ-ಮಾರ್ಚ್ 09, ಸಂಜೆ 06:17ಕ್ಕೆ
- ನಿಶಿತಾ ಕಾಲ ಪೂಜೆ ಸಮಯ -ಮಾರ್ಚ್ 9ರ- ಮಧ್ಯಾಹ್ನ 12:07 ರಿಂದ 12:56 ರವರೆಗೆ
- ಮಾರ್ಚ್ 09 ರಂದು, ಶಿವರಾತ್ರಿ ಪಾರಣ ಸಮಯ - ಸಂಜೆ 06:37 ರಿಂದ ಬೆಳಗಿನ ಜಾವ 03:29ರ ವರೆಗೆ
ಶಿವರಾತ್ರಿಯ ಇತಿಹಾಸ ಮತ್ತು ಮಹತ್ವ
ಹಿಂದೂ ಪುರಾಣಗಳ ಪ್ರಕಾರ, ನಾವು ಮಹಾಶಿವರಾತ್ರಿಯನ್ನು ಏಕೆ ಆಚರಿಸುತ್ತೇವೆ ಎಂಬುದಕ್ಕೆ ಹಲವಾರು ಕಾರಣಗಳಿವೆ. ಮಹಾಶಿವರಾತ್ರಿಯ ದಿನದಂದು, ಶಿವ ಮತ್ತು ಪಾರ್ವತಿ ವಿವಾಹವಾದರು ಎಂದು ನಂಬಲಾಗಿದೆ, ಆದ್ದರಿಂದ ಪ್ರತಿ ವರ್ಷ, ಅವರ ವಿವಾಹ ಮಹೋತ್ಸವ ಆಚರಿಸಲು ಶಿವರಾತ್ರಿಯನ್ನು ಆಚರಿಸಲಾಗುತ್ತದೆ.
ಇನ್ನೊಂದೆಡೆ ಸಮುದ್ರ ಮಂಥನದ ಸಮಯದಲ್ಲಿ ಶಿವನು ಸಮುದ್ರದಿಂದ ಹೊರಬಂದ ವಿಷವನ್ನು ಕುಡಿದು ಜಗತ್ತನ್ನು ಕತ್ತಲೆ ಮತ್ತು ಅಪಾಯದಿಂದ ರಕ್ಷಿಸಿದ ದಿನವನ್ನು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ.
ಈ ವಿಷವು ಅವನ ಗಂಟಲಿನಲ್ಲಿ ಸಂಗ್ರಹವಾಯಿತು, ಇದು ನೀಲಿ ಬಣ್ಣಕ್ಕೆ ತಿರುಗಿತು, ಇದು ಶಿವನನ್ನು ನೀಲಕಂಠ ಎಂದೂ ಕರೆಯಲು ಕಾರಣವಾಯಿತು. ಯಾವುದೇ ವರ್ಷದಲ್ಲಿ ಆಚರಿಸಲಾಗುವ 12 ಶಿವರಾತ್ರಿಗಳಲ್ಲಿ, ಮಹಾ ಶಿವರಾತ್ರಿಯನ್ನು ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಹಿಂದೂ ಸಂಸ್ಕೃತಿಯಲ್ಲಿ, ಇದು 'ಜೀವನದಲ್ಲಿ ಕತ್ತಲೆ ಮತ್ತು ಅಜ್ಞಾನವನ್ನು ಜಯಿಸುವ' ದಿನವಾಗಿದೆ.
ಕೆಲವರು ಈ ಹಬ್ಬವನ್ನು ಬೆಳಗ್ಗೆ ಆಚರಿಸಿದರೆ, ಮತ್ತೆ ಕೆಲವರು ಜಾಗರಣೆಯ ರಾತ್ರಿಯಲ್ಲಿ ಪೂಜೆ ಮಾಡುತ್ತಾರೆ. ಭಕ್ತರು ಮಹಾ ಶಿವರಾತ್ರಿಯಂದು ಪೂರ್ಣ ದಿನದ ಉಪವಾಸವನ್ನು ಆಚರಿಸುತ್ತಾರೆ, ಸ್ನಾನದ ನಂತರ ಮರುದಿನ ಮಾತ್ರ ಆಹಾರ ಸೇವಿಸುತ್ತಾರೆ. ಮಹಾಶಿವರಾತ್ರಿಯ ಸಮಯದಲ್ಲಿ ಉಪವಾಸವನ್ನು ಆಚರಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ನಿರ್ದಿಷ್ಟ ಸಮಯದವರೆಗೆ ಆಹಾರ ಮತ್ತು ನೀರಿನ ಸೇವನೆಯಿಂದ ದೂರವಿರುವುದು ದೇಹ ಮತ್ತು ಮನಸ್ಸಿಗೆ ಆರೋಗ್ಯಕರವಾಗಿದೆ ಮತ್ತು ಉಪವಾಸದ ನಂತರ ಶಿವನನ್ನು ಪ್ರಾರ್ಥಿಸುವುದು ಅವನಿಗೆ ಸಂತೋಷವನ್ನು ನೀಡುತ್ತದೆ ಎಂದು ನಂಬಲಾಗಿದೆ.
ಶಿವನ ವಿಗ್ರಹಕ್ಕೆ ಹಾಲು, ಜೇನುತುಪ್ಪ, ಹಣ್ಣುಗಳನ್ನು ಅರ್ಪಿಸಲಾಗುತ್ತದೆ. ಅಲ್ಲದೆ ಶಿವರಾತ್ರಿಯಂದು ಶಿವನಿಗೆ ಬಿಲ್ವ ಪತ್ರೆಗಳ ಹೊರತು ಪೂಜೆ ಸಂಪೂರ್ಣವಾಗದು. ಹಾಗಾಗಿ ಇತರ ಯಾವುದೇ ಹೂವುಗಳು ಲಭ್ಯವಿಲ್ಲದಿದ್ದರ ಬಿಲ್ವಪತ್ರೆ, ಕೇದಿಗೆ ಹೂವುಗಳಿಂದ ಶಿವನನ್ನು ಪೂಜಿಸುವುದು ಸೂಕ್ತ. ಭಕ್ತರು ಗಂಗಾನದಿಯಲ್ಲಿ ಸ್ನಾನ ಮಾಡುವ ಮೂಲಕ ದಿನವನ್ನು ಪ್ರಾರಂಭಿಸುತ್ತಾರೆ, ನಂತರ ದೇವಾಲಯಕ್ಕೆ ಭೇಟಿ ನೀಡುತ್ತಾರೆ, ಓಂ ನಮಃ ಶಿವಾಯ ಪಠಣವು ಶಿವನಿಂದ ಆಶೀರ್ವಾದ ಮತ್ತು ಇಷ್ಟಾರ್ಥಗಳು ಮತ್ತು ಬಯಕೆಗಳನ್ನು ಪೂರೈಸುತ್ತದೆ ಎಂದು ನಂಬಲಾಗಿದೆ.



Click it and Unblock the Notifications
