Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಶ್ರಾವಣ ಮಾಸ 2023 : ಬುಧವಾರ ಗಣೇಶನನ್ನು ಈ ರೀತಿ ಪೂಜಿಸಿದ್ರೆ ಸಂಪತ್ತು ಸಿದ್ಧಿಸುತ್ತೆ!
ಹಿಂದೂ ಧರ್ಮದಲ್ಲಿ ಬುಧವಾರವನ್ನು ಗಣೇಶನಿಗೆ ಸಮರ್ಪಣೆ ಮಾಡಲಾಗುತ್ತದೆ. ಈ ದಿನ ವಿನಾಯಕನಿಗೆ ಪೂಜೆ ಮಾಡಿದ್ರೆ ನಮ್ಮೆಲ್ಲಾ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ಹೀಗಾಗಿ ಯಾವುದೇ ಶುಭ ಕೆಲಸ ಆಗಬೇಕಾದ್ರು ಮೊದಲ ಪೂಜೆಯನ್ನು ಗಣೇಶನಿಗೆ ಸಮರ್ಪಣೆ ಮಾಡಲಾಗುತ್ತದೆ. ನಂಬಿಕೆಗಳ ಪ್ರಕಾರ ಶ್ರಾವಣ ತಿಂಗಳಿನಲ್ಲಿ ಗಣೇಶನನ್ನು ಭಕ್ತಿಯಿಂದ ಪೂಜೆ ಮಾಡಿದ್ರೆ ಗಣೇಶ ನಮಗೆ ಎರಡರಷ್ಟು ಸಂತೋಷ, ಸಮೃದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾನಂತೆ.
ಇನ್ನೂ ಶ್ರಾವಣ ತಿಂಗಳಿನಲ್ಲಿ ಗಣೇಶನು ಮಹಾದೇವನಿಗೆ ತುಂಬಾನೇ ಹತ್ತುರವಾಗಿರ್ತಾನಂತೆ. ಗಣೇಶನು ಬುಧ ಗ್ರಹವನ್ನು ಆಳುತ್ತಿದ್ದು, ಶ್ರಾವಣ ಬುಧವಾರದಲ್ಲಿ ಗಣೇಶನನ್ನು ಪೂಜಿಸೋದ್ರಿಂದ ನಮೆಲ್ಲಾ ಬಯಕೆ ಈಡೇರುತ್ತಂತೆ. ಅಷ್ಟಕ್ಕು ಶ್ರಾವಣ ಬುಧವಾರದ ದಿನ ಗಣೇಶನನ್ನು ಯಾವ ರೀತಿ ಪೂಜಿಸಿದ್ರೆ ಆರ್ಥಿಕ ಅಭಿವೃದ್ಧಿಯಾಗುತ್ತೆ ಅನ್ನೋದನ್ನು ತಿಳಿಯೋಣ.

1. ಕೆಂಪು ತಿಲಕ ಹಚ್ಚಿ
ವಿನಾಯಕನಿಗೆ ಕೆಂಪು ಬಣ್ಣ ಅಂದ್ರೆ ತುಂಬಾನೇ ಇಷ್ಟ. ಹೀಗಾಗಿ ಶ್ರಾವಣ ಬುಧವಾರದಂದು ಕೆಂಪು ತಿಲಕವನ್ನು ಗಣೇಶನಿಗೆ ಹಚ್ಚಬೇಕು. ಪೂಜೆಯ ಬಳಿಕ ನೀವು ಕೂಡ ಕೆಂಪು ತಿಲಕವನ್ನು ಹಚ್ಚಿಕೊಳ್ಳಿ. ಈ ರೀತಿ ಮಾಡುವುದರಿಂದ ಭಕ್ತರ ಆಶೀರ್ವಾದ ಭಕ್ತರ ಮೇಲೆ ಇದ್ದೇ ಇರುತ್ತದೆ.
2. ಗಣೇಶನಿಗೆ ಗರಿಕೆ ಅರ್ಪಿಸಿ
ಗಣೇಶನಿಗೆ ಗರಿಕೆ ಎಂದರೆ ತುಂಬಾನೇ ಇಷ್ಟ. ಹೀಗಾಗಿ ಶ್ರಾವಣ ಬುಧವಾರದಂದು ವಿನಾಯಕನನ್ನು ಪೂಜಿಸೋವಾಗ ತಪ್ಪದೇ ಗರಿಕೆಯನ್ನು ಗಣೇಶನಿಗೆ ಅರ್ಪಿಸಿ. ಇದರಿಂದ ಗಣೇಶನು ತುಂಬಾನೇ ಖುಷಿಯಾಗಿ ಇರುತ್ತಾನಂತೆ. ಭಕ್ತರು ಒಂದು ವಿಚಾರವನ್ನು ಗಮನವಿಟ್ಟು ಗಮನಿಸಬೇಕು ಅದೇನೆಂದರೆ ಗಣೇಶನಿಗೆ ಗರಿಕೆ ಅರ್ಪಿಸುವಾಗ ಅದನ್ನು ಗಣೇಶನ ತಲೆಯ ಮೇಲೆ ಇಡಬೇಕು.
3. ಶಮಿ ಗಿಡವನ್ನು ಗಣೇಶನಿಗೆ ಅರ್ಪಿಸಿ
ಶಮಿ ಗಿಡವೆಂದರೆ ಗಣೇಶನಿಗೆ ತುಂಬಾನೇ ಇಷ್ಟ. ಹೀಗಾಗಿ ಶ್ರಾವಣ ಬುಧವಾರದ ದಿನ ಶಮಿ ಗಿಡಗಳನ್ನು ಗಣೇಶನಿಗೆ ಅರ್ಪಣೆ ಮಾಡಿದ್ರೆ ತುಂಬಾನೇ ಒಳ್ಳೆಯದು. ಇದರಿಂದ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುವುದು ಮಾತ್ರವಲ್ಲದೇ ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ.
4. ಅನ್ನವನ್ನು ವಿನಾಯಕನಿಗೆ ಅರ್ಪಿಸಿ
ಹಿಂದೂ ಧರ್ಮದಲ್ಲಿ ಅಕ್ಷತೆಗೆ ತುಂಬಾನೇ ಮಹತ್ವವಿದೆ. ದೇವರ ಪೂಜೆಯನ್ನು ಮಾಡುವ ಸಂದರ್ಭದಲ್ಲಿ ಅಕ್ಷತೆಯನ್ನು ಅರ್ಪಣೆ ಮಾಡಲಾಗುತ್ತದೆ. ಕಾರಣ ಹಿಂದೂ ಧರ್ಮದಲ್ಲಿ ಅಕ್ಕಿಗೆ ಮಹತ್ವದ ಸ್ಥಾನವಿದೆ. ಅನ್ನವೆಂದರೆ ವಿನಾಯಕನಿಗೂ ತುಂಬಾನೇ ಇಷ್ಟವಂತೆ. ಹೀಗಾಗಿ ಗಣೇಶನಿಗೆ ಅಕ್ಕಿಯನ್ನು ಅರ್ಪಿಸುವ ಬದಲು ಅನ್ನವನ್ನು ಅರ್ಪಿಸಿದರೆ ತುಂಬಾನೇ ಒಳ್ಳೆಯದಾಗುತ್ತಂತೆ. ಇದರಿಂದ ನಿಮ್ಮ ಮನಸ್ಸಿನ ಬಯಕೆಗಳೆಲ್ಲಾ ಈಡೇರುತ್ತಂತೆ.
5. ಈ ಆಹಾರಗಳನ್ನು ಅರ್ಪಿಸಿ
ಶ್ರಾವಣ ಬುಧವಾರದ ದಿನ ಗಣೇಶನಿಗೆ ಬೆಲ್ಲ, ತುಪ್ಪವನ್ನು ಅರ್ಪಣೆ ಮಾಡಬೇಕು. ಇದರಿಂದ ವಿನಾಯಕ ಸಂತುಷ್ಠಗೊಳ್ಳುತ್ತಾನಂತೆ. ಹಾಗೂ ಭಕ್ತರ ಮೇಲೆ ಗಣೇಶನ ಆಶೀರ್ವಾದ ಸದಾ ಇರುತ್ತಂತೆ. ಅಷ್ಟೇ ಅಲ್ಲ, ನಿಮ್ಮ ಮನೆಯಲ್ಲಿ ಎದುರಾಗಿರೋ ಆರ್ಥಿಕ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತಂತೆ. ಮನೆಯಲ್ಲಿ ಸದಾ ಖುಷಿಯೇ ತುಂಬಿರುತ್ತಂತೆ.
ಗಣೇಶನಿಗೆ ಪ್ರಿಯವಾದ ಬುಧವಾರದಂದು ಭಕ್ತಿಯಿಂದ ಕಟ್ಟು ನಿಟ್ಟಾಗಿ ಪೂಜೆಯನ್ನು ಸಲ್ಲಿಸಿದ್ರೆ ನಿಮ್ಮ ಬದುಕಿನಲ್ಲಿ ಎದುರಾದ ಎಲ್ಲಾ ಕಷ್ಟಗಳು ಬಗೆ ಹರಿದು ಸದಾ ಸಂತೋಷ ತುಂಬಿರುತ್ತದೆ.



Click it and Unblock the Notifications

