Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶ್ರಾವಣ ಮಾಸ 2023 : ಬುಧವಾರ ಗಣೇಶನನ್ನು ಈ ರೀತಿ ಪೂಜಿಸಿದ್ರೆ ಸಂಪತ್ತು ಸಿದ್ಧಿಸುತ್ತೆ!
ಹಿಂದೂ ಧರ್ಮದಲ್ಲಿ ಬುಧವಾರವನ್ನು ಗಣೇಶನಿಗೆ ಸಮರ್ಪಣೆ ಮಾಡಲಾಗುತ್ತದೆ. ಈ ದಿನ ವಿನಾಯಕನಿಗೆ ಪೂಜೆ ಮಾಡಿದ್ರೆ ನಮ್ಮೆಲ್ಲಾ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ಹೀಗಾಗಿ ಯಾವುದೇ ಶುಭ ಕೆಲಸ ಆಗಬೇಕಾದ್ರು ಮೊದಲ ಪೂಜೆಯನ್ನು ಗಣೇಶನಿಗೆ ಸಮರ್ಪಣೆ ಮಾಡಲಾಗುತ್ತದೆ. ನಂಬಿಕೆಗಳ ಪ್ರಕಾರ ಶ್ರಾವಣ ತಿಂಗಳಿನಲ್ಲಿ ಗಣೇಶನನ್ನು ಭಕ್ತಿಯಿಂದ ಪೂಜೆ ಮಾಡಿದ್ರೆ ಗಣೇಶ ನಮಗೆ ಎರಡರಷ್ಟು ಸಂತೋಷ, ಸಮೃದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾನಂತೆ.
ಇನ್ನೂ ಶ್ರಾವಣ ತಿಂಗಳಿನಲ್ಲಿ ಗಣೇಶನು ಮಹಾದೇವನಿಗೆ ತುಂಬಾನೇ ಹತ್ತುರವಾಗಿರ್ತಾನಂತೆ. ಗಣೇಶನು ಬುಧ ಗ್ರಹವನ್ನು ಆಳುತ್ತಿದ್ದು, ಶ್ರಾವಣ ಬುಧವಾರದಲ್ಲಿ ಗಣೇಶನನ್ನು ಪೂಜಿಸೋದ್ರಿಂದ ನಮೆಲ್ಲಾ ಬಯಕೆ ಈಡೇರುತ್ತಂತೆ. ಅಷ್ಟಕ್ಕು ಶ್ರಾವಣ ಬುಧವಾರದ ದಿನ ಗಣೇಶನನ್ನು ಯಾವ ರೀತಿ ಪೂಜಿಸಿದ್ರೆ ಆರ್ಥಿಕ ಅಭಿವೃದ್ಧಿಯಾಗುತ್ತೆ ಅನ್ನೋದನ್ನು ತಿಳಿಯೋಣ.

1. ಕೆಂಪು ತಿಲಕ ಹಚ್ಚಿ
ವಿನಾಯಕನಿಗೆ ಕೆಂಪು ಬಣ್ಣ ಅಂದ್ರೆ ತುಂಬಾನೇ ಇಷ್ಟ. ಹೀಗಾಗಿ ಶ್ರಾವಣ ಬುಧವಾರದಂದು ಕೆಂಪು ತಿಲಕವನ್ನು ಗಣೇಶನಿಗೆ ಹಚ್ಚಬೇಕು. ಪೂಜೆಯ ಬಳಿಕ ನೀವು ಕೂಡ ಕೆಂಪು ತಿಲಕವನ್ನು ಹಚ್ಚಿಕೊಳ್ಳಿ. ಈ ರೀತಿ ಮಾಡುವುದರಿಂದ ಭಕ್ತರ ಆಶೀರ್ವಾದ ಭಕ್ತರ ಮೇಲೆ ಇದ್ದೇ ಇರುತ್ತದೆ.
2. ಗಣೇಶನಿಗೆ ಗರಿಕೆ ಅರ್ಪಿಸಿ
ಗಣೇಶನಿಗೆ ಗರಿಕೆ ಎಂದರೆ ತುಂಬಾನೇ ಇಷ್ಟ. ಹೀಗಾಗಿ ಶ್ರಾವಣ ಬುಧವಾರದಂದು ವಿನಾಯಕನನ್ನು ಪೂಜಿಸೋವಾಗ ತಪ್ಪದೇ ಗರಿಕೆಯನ್ನು ಗಣೇಶನಿಗೆ ಅರ್ಪಿಸಿ. ಇದರಿಂದ ಗಣೇಶನು ತುಂಬಾನೇ ಖುಷಿಯಾಗಿ ಇರುತ್ತಾನಂತೆ. ಭಕ್ತರು ಒಂದು ವಿಚಾರವನ್ನು ಗಮನವಿಟ್ಟು ಗಮನಿಸಬೇಕು ಅದೇನೆಂದರೆ ಗಣೇಶನಿಗೆ ಗರಿಕೆ ಅರ್ಪಿಸುವಾಗ ಅದನ್ನು ಗಣೇಶನ ತಲೆಯ ಮೇಲೆ ಇಡಬೇಕು.
3. ಶಮಿ ಗಿಡವನ್ನು ಗಣೇಶನಿಗೆ ಅರ್ಪಿಸಿ
ಶಮಿ ಗಿಡವೆಂದರೆ ಗಣೇಶನಿಗೆ ತುಂಬಾನೇ ಇಷ್ಟ. ಹೀಗಾಗಿ ಶ್ರಾವಣ ಬುಧವಾರದ ದಿನ ಶಮಿ ಗಿಡಗಳನ್ನು ಗಣೇಶನಿಗೆ ಅರ್ಪಣೆ ಮಾಡಿದ್ರೆ ತುಂಬಾನೇ ಒಳ್ಳೆಯದು. ಇದರಿಂದ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುವುದು ಮಾತ್ರವಲ್ಲದೇ ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ.
4. ಅನ್ನವನ್ನು ವಿನಾಯಕನಿಗೆ ಅರ್ಪಿಸಿ
ಹಿಂದೂ ಧರ್ಮದಲ್ಲಿ ಅಕ್ಷತೆಗೆ ತುಂಬಾನೇ ಮಹತ್ವವಿದೆ. ದೇವರ ಪೂಜೆಯನ್ನು ಮಾಡುವ ಸಂದರ್ಭದಲ್ಲಿ ಅಕ್ಷತೆಯನ್ನು ಅರ್ಪಣೆ ಮಾಡಲಾಗುತ್ತದೆ. ಕಾರಣ ಹಿಂದೂ ಧರ್ಮದಲ್ಲಿ ಅಕ್ಕಿಗೆ ಮಹತ್ವದ ಸ್ಥಾನವಿದೆ. ಅನ್ನವೆಂದರೆ ವಿನಾಯಕನಿಗೂ ತುಂಬಾನೇ ಇಷ್ಟವಂತೆ. ಹೀಗಾಗಿ ಗಣೇಶನಿಗೆ ಅಕ್ಕಿಯನ್ನು ಅರ್ಪಿಸುವ ಬದಲು ಅನ್ನವನ್ನು ಅರ್ಪಿಸಿದರೆ ತುಂಬಾನೇ ಒಳ್ಳೆಯದಾಗುತ್ತಂತೆ. ಇದರಿಂದ ನಿಮ್ಮ ಮನಸ್ಸಿನ ಬಯಕೆಗಳೆಲ್ಲಾ ಈಡೇರುತ್ತಂತೆ.
5. ಈ ಆಹಾರಗಳನ್ನು ಅರ್ಪಿಸಿ
ಶ್ರಾವಣ ಬುಧವಾರದ ದಿನ ಗಣೇಶನಿಗೆ ಬೆಲ್ಲ, ತುಪ್ಪವನ್ನು ಅರ್ಪಣೆ ಮಾಡಬೇಕು. ಇದರಿಂದ ವಿನಾಯಕ ಸಂತುಷ್ಠಗೊಳ್ಳುತ್ತಾನಂತೆ. ಹಾಗೂ ಭಕ್ತರ ಮೇಲೆ ಗಣೇಶನ ಆಶೀರ್ವಾದ ಸದಾ ಇರುತ್ತಂತೆ. ಅಷ್ಟೇ ಅಲ್ಲ, ನಿಮ್ಮ ಮನೆಯಲ್ಲಿ ಎದುರಾಗಿರೋ ಆರ್ಥಿಕ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತಂತೆ. ಮನೆಯಲ್ಲಿ ಸದಾ ಖುಷಿಯೇ ತುಂಬಿರುತ್ತಂತೆ.
ಗಣೇಶನಿಗೆ ಪ್ರಿಯವಾದ ಬುಧವಾರದಂದು ಭಕ್ತಿಯಿಂದ ಕಟ್ಟು ನಿಟ್ಟಾಗಿ ಪೂಜೆಯನ್ನು ಸಲ್ಲಿಸಿದ್ರೆ ನಿಮ್ಮ ಬದುಕಿನಲ್ಲಿ ಎದುರಾದ ಎಲ್ಲಾ ಕಷ್ಟಗಳು ಬಗೆ ಹರಿದು ಸದಾ ಸಂತೋಷ ತುಂಬಿರುತ್ತದೆ.



Click it and Unblock the Notifications


