Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಶ್ರಾವಣ ಮಾಸ 2023 : ಬುಧವಾರ ಗಣೇಶನನ್ನು ಈ ರೀತಿ ಪೂಜಿಸಿದ್ರೆ ಸಂಪತ್ತು ಸಿದ್ಧಿಸುತ್ತೆ!
ಹಿಂದೂ ಧರ್ಮದಲ್ಲಿ ಬುಧವಾರವನ್ನು ಗಣೇಶನಿಗೆ ಸಮರ್ಪಣೆ ಮಾಡಲಾಗುತ್ತದೆ. ಈ ದಿನ ವಿನಾಯಕನಿಗೆ ಪೂಜೆ ಮಾಡಿದ್ರೆ ನಮ್ಮೆಲ್ಲಾ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ಹೀಗಾಗಿ ಯಾವುದೇ ಶುಭ ಕೆಲಸ ಆಗಬೇಕಾದ್ರು ಮೊದಲ ಪೂಜೆಯನ್ನು ಗಣೇಶನಿಗೆ ಸಮರ್ಪಣೆ ಮಾಡಲಾಗುತ್ತದೆ. ನಂಬಿಕೆಗಳ ಪ್ರಕಾರ ಶ್ರಾವಣ ತಿಂಗಳಿನಲ್ಲಿ ಗಣೇಶನನ್ನು ಭಕ್ತಿಯಿಂದ ಪೂಜೆ ಮಾಡಿದ್ರೆ ಗಣೇಶ ನಮಗೆ ಎರಡರಷ್ಟು ಸಂತೋಷ, ಸಮೃದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾನಂತೆ.
ಇನ್ನೂ ಶ್ರಾವಣ ತಿಂಗಳಿನಲ್ಲಿ ಗಣೇಶನು ಮಹಾದೇವನಿಗೆ ತುಂಬಾನೇ ಹತ್ತುರವಾಗಿರ್ತಾನಂತೆ. ಗಣೇಶನು ಬುಧ ಗ್ರಹವನ್ನು ಆಳುತ್ತಿದ್ದು, ಶ್ರಾವಣ ಬುಧವಾರದಲ್ಲಿ ಗಣೇಶನನ್ನು ಪೂಜಿಸೋದ್ರಿಂದ ನಮೆಲ್ಲಾ ಬಯಕೆ ಈಡೇರುತ್ತಂತೆ. ಅಷ್ಟಕ್ಕು ಶ್ರಾವಣ ಬುಧವಾರದ ದಿನ ಗಣೇಶನನ್ನು ಯಾವ ರೀತಿ ಪೂಜಿಸಿದ್ರೆ ಆರ್ಥಿಕ ಅಭಿವೃದ್ಧಿಯಾಗುತ್ತೆ ಅನ್ನೋದನ್ನು ತಿಳಿಯೋಣ.

1. ಕೆಂಪು ತಿಲಕ ಹಚ್ಚಿ
ವಿನಾಯಕನಿಗೆ ಕೆಂಪು ಬಣ್ಣ ಅಂದ್ರೆ ತುಂಬಾನೇ ಇಷ್ಟ. ಹೀಗಾಗಿ ಶ್ರಾವಣ ಬುಧವಾರದಂದು ಕೆಂಪು ತಿಲಕವನ್ನು ಗಣೇಶನಿಗೆ ಹಚ್ಚಬೇಕು. ಪೂಜೆಯ ಬಳಿಕ ನೀವು ಕೂಡ ಕೆಂಪು ತಿಲಕವನ್ನು ಹಚ್ಚಿಕೊಳ್ಳಿ. ಈ ರೀತಿ ಮಾಡುವುದರಿಂದ ಭಕ್ತರ ಆಶೀರ್ವಾದ ಭಕ್ತರ ಮೇಲೆ ಇದ್ದೇ ಇರುತ್ತದೆ.
2. ಗಣೇಶನಿಗೆ ಗರಿಕೆ ಅರ್ಪಿಸಿ
ಗಣೇಶನಿಗೆ ಗರಿಕೆ ಎಂದರೆ ತುಂಬಾನೇ ಇಷ್ಟ. ಹೀಗಾಗಿ ಶ್ರಾವಣ ಬುಧವಾರದಂದು ವಿನಾಯಕನನ್ನು ಪೂಜಿಸೋವಾಗ ತಪ್ಪದೇ ಗರಿಕೆಯನ್ನು ಗಣೇಶನಿಗೆ ಅರ್ಪಿಸಿ. ಇದರಿಂದ ಗಣೇಶನು ತುಂಬಾನೇ ಖುಷಿಯಾಗಿ ಇರುತ್ತಾನಂತೆ. ಭಕ್ತರು ಒಂದು ವಿಚಾರವನ್ನು ಗಮನವಿಟ್ಟು ಗಮನಿಸಬೇಕು ಅದೇನೆಂದರೆ ಗಣೇಶನಿಗೆ ಗರಿಕೆ ಅರ್ಪಿಸುವಾಗ ಅದನ್ನು ಗಣೇಶನ ತಲೆಯ ಮೇಲೆ ಇಡಬೇಕು.
3. ಶಮಿ ಗಿಡವನ್ನು ಗಣೇಶನಿಗೆ ಅರ್ಪಿಸಿ
ಶಮಿ ಗಿಡವೆಂದರೆ ಗಣೇಶನಿಗೆ ತುಂಬಾನೇ ಇಷ್ಟ. ಹೀಗಾಗಿ ಶ್ರಾವಣ ಬುಧವಾರದ ದಿನ ಶಮಿ ಗಿಡಗಳನ್ನು ಗಣೇಶನಿಗೆ ಅರ್ಪಣೆ ಮಾಡಿದ್ರೆ ತುಂಬಾನೇ ಒಳ್ಳೆಯದು. ಇದರಿಂದ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುವುದು ಮಾತ್ರವಲ್ಲದೇ ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ.
4. ಅನ್ನವನ್ನು ವಿನಾಯಕನಿಗೆ ಅರ್ಪಿಸಿ
ಹಿಂದೂ ಧರ್ಮದಲ್ಲಿ ಅಕ್ಷತೆಗೆ ತುಂಬಾನೇ ಮಹತ್ವವಿದೆ. ದೇವರ ಪೂಜೆಯನ್ನು ಮಾಡುವ ಸಂದರ್ಭದಲ್ಲಿ ಅಕ್ಷತೆಯನ್ನು ಅರ್ಪಣೆ ಮಾಡಲಾಗುತ್ತದೆ. ಕಾರಣ ಹಿಂದೂ ಧರ್ಮದಲ್ಲಿ ಅಕ್ಕಿಗೆ ಮಹತ್ವದ ಸ್ಥಾನವಿದೆ. ಅನ್ನವೆಂದರೆ ವಿನಾಯಕನಿಗೂ ತುಂಬಾನೇ ಇಷ್ಟವಂತೆ. ಹೀಗಾಗಿ ಗಣೇಶನಿಗೆ ಅಕ್ಕಿಯನ್ನು ಅರ್ಪಿಸುವ ಬದಲು ಅನ್ನವನ್ನು ಅರ್ಪಿಸಿದರೆ ತುಂಬಾನೇ ಒಳ್ಳೆಯದಾಗುತ್ತಂತೆ. ಇದರಿಂದ ನಿಮ್ಮ ಮನಸ್ಸಿನ ಬಯಕೆಗಳೆಲ್ಲಾ ಈಡೇರುತ್ತಂತೆ.
5. ಈ ಆಹಾರಗಳನ್ನು ಅರ್ಪಿಸಿ
ಶ್ರಾವಣ ಬುಧವಾರದ ದಿನ ಗಣೇಶನಿಗೆ ಬೆಲ್ಲ, ತುಪ್ಪವನ್ನು ಅರ್ಪಣೆ ಮಾಡಬೇಕು. ಇದರಿಂದ ವಿನಾಯಕ ಸಂತುಷ್ಠಗೊಳ್ಳುತ್ತಾನಂತೆ. ಹಾಗೂ ಭಕ್ತರ ಮೇಲೆ ಗಣೇಶನ ಆಶೀರ್ವಾದ ಸದಾ ಇರುತ್ತಂತೆ. ಅಷ್ಟೇ ಅಲ್ಲ, ನಿಮ್ಮ ಮನೆಯಲ್ಲಿ ಎದುರಾಗಿರೋ ಆರ್ಥಿಕ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತಂತೆ. ಮನೆಯಲ್ಲಿ ಸದಾ ಖುಷಿಯೇ ತುಂಬಿರುತ್ತಂತೆ.
ಗಣೇಶನಿಗೆ ಪ್ರಿಯವಾದ ಬುಧವಾರದಂದು ಭಕ್ತಿಯಿಂದ ಕಟ್ಟು ನಿಟ್ಟಾಗಿ ಪೂಜೆಯನ್ನು ಸಲ್ಲಿಸಿದ್ರೆ ನಿಮ್ಮ ಬದುಕಿನಲ್ಲಿ ಎದುರಾದ ಎಲ್ಲಾ ಕಷ್ಟಗಳು ಬಗೆ ಹರಿದು ಸದಾ ಸಂತೋಷ ತುಂಬಿರುತ್ತದೆ.



Click it and Unblock the Notifications

