Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
30 ದೇಶಗಳ ಮತದಾನಕ್ಕೆ ರಾಜ್ಯದ ಶಾಯಿ..! ಮೈಸೂರಿಗೆ 'ಮೈಲ್ಯಾಕ್' ಹಿರಿಮೆ
ಪ್ರಜಾಪ್ರಭುತ್ವದ ಹಬ್ಬ ಎಂದು ಪರಿಗಣಿಸಲಾಗುವ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ದೇಶದಲ್ಲಿ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಬೇಕಿದೆ. ನಾವು ಪ್ರತಿ ವರ್ಷ ಚುನಾವಣೆ ಬಂದಾಗಲು ಒಬ್ಬ ನಾಯಕನನ್ನು ನಮ್ಮ ಕ್ಷೇತ್ರದಿಂದ ಆರಿಸುತ್ತೇವೆ. ನೀವು ಮತದಾನದ ದಿನ ನಿಮ್ಮ ಕೈ ಬೆರಳ ಮೇಲೆ ಅಚ್ಚಾಗುವ ಶಾಯಿ ಬಗ್ಗೆ ಎಂದಾದರು ಯೋಚಿಸಿದ್ದೀರಾ?
ಹೌದು ನಾವು ಪ್ರತಿ ವರ್ಷ ಮತದಾನ ಮಾಡಿದಾಗ ನಮ್ಮ ಕೈ ಬೆರಳ ಮೇಲೆ ಕಪ್ಪು ಶಾಯಿ ಹಾಕಲಾಗುತ್ತದೆ. ಈ ಇಂಕ್ ಎಷ್ಟು ತೊಳೆದರೂ ಹೋಗುವುದಿಲ್ಲ. ಮತದಾನದಲ್ಲಿ ಅಕ್ರಮ ತಡೆಯಲು, ನಕಲಿ ಓಟುಗಳ ತಡೆಯಲು ಈ ರೀತಿ ಶಾಯಿ ಉಪಯೋಗಿಸಲಾಗುತ್ತದೆ. ಆದರೆ ಈ ಶಾಯಿ ತಯಾರಾಗುವುದು ನಮ್ಮ ರಾಜ್ಯದಲ್ಲಿ.

ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ಸ್ 1962ರಿಂದ ಚುನಾವಣೆಗಳಿಗೆ ಈ ಶಾಯಿ ನೀಡುತ್ತಿದೆ. ಹಾಗಾದರೆ ಈ ಶಾಯಿ ಹಿಂದಿರುವ ಇತಿಹಾಸವೇನು?, ಆರಂಭಿಸಿದ್ದು ಯಾರು? ಎಂಬ ಕುರಿತು ಮಾಹಿತಿ ಇಲ್ಲಿದೆ.
ಈ ಕಪ್ಪು ಶಾಯಿಯನ್ನು ಪೂರೈಸುವ ಏಕೈಕ ರಾಷ್ಟ್ರ ಭಾರತವಾಗಿದೆ. ಅದರಲ್ಲೂ ನಮ್ಮ ಮೈಸೂರಿನಲ್ಲಿ ಈ ಶಾಯಿ ಉತ್ಪಾದನೆಯಾಗುತ್ತದೆ. 1937ರಲ್ಲಿ ಅಂದಿನ ಮೈಸೂರು ಪ್ರಾಂತ್ಯದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಲ್ಯಾಕ್ & ಪೇಂಟ್ ವರ್ಕ್ಸ್ ಹೆಸರಿನಲ್ಲಿ ಈ ಘಟಕ ಸ್ಥಾಪಿಸಿದರು, ಘಟಕದ ಮೊದಲ ಉತ್ಪನ್ನವು ಲ್ಯಾಕ್ (ಮೇಣ) ಆಗಿತ್ತು, ಇದನ್ನು ಮೈಸೂರು ಮತ್ತು ನಾಗರಹೊಳೆ ಬಳಿಯಿರುವ ಕಾಡುಗಳಿಂದ ಪಡೆಯಲಾಗುತ್ತಿತ್ತು.
ಸ್ಥಳೀಯರಿಗೆ ಉದ್ಯೋಗವನ್ನು ಒದಗಿಸುವ ಆಶಯದೊಂದಿಗೆ, ಕಾರ್ಮಿಕರು ಲ್ಯಾಕ್ ಅನ್ನು ಸಂಗ್ರಹಿಸಲು ತೊಡಗಿದ್ದರು - ಈ ಮೇಣವು ಕೀಟಗಳು, ಮರದ ತೊಗಟೆಗಳಿಂದ ಮಾತ್ರ ಪಡೆಯಲಾಗುತ್ತದೆ. ಕೆಲವು ಜಾತಿಯ ಮರಗಳು ಈ ಮೇಣವನ್ನು ಸ್ರವಿಸುತ್ತಿದ್ದವು, ಇದನ್ನು ಸಂಗ್ರಹಿಸಲು ಸ್ಥಳೀಯರು ಕಾಡುಗಳಲ್ಲಿ ಅಲೆಯುತ್ತಿದ್ದರು. ಇದನ್ನು ಭಾರತೀಯ ರೈಲ್ವೆ, ಭಾರತೀಯ ಅಂಚೆ ಮತ್ತು ಚುನಾವಣಾ ಆಯೋಗವು ಸರ್ಕಾರದ ಪ್ರಮುಖ ರಹಸ್ಯಗಳು ಮತ್ತು ಮತಪೆಟ್ಟಿಗೆಗಳನ್ನು ಕಾಪಾಡಲು ಮೇಣ ಬಳಸುತ್ತದೆ.
ಆದರೆ ಇಂದಿರಾ ಗಾಂಧಿಯವರು ಅರಣ್ಯ (ಸಂರಕ್ಷಣೆ) ಕಾಯಿದೆ, 1980ರ ಅಂಗೀಕಾರಗೊಂಡಾಗಿನಿಂದ ಈ ಕಂಪನಿಗೆ ಮೇಣ ಸಂಗ್ರಹಿಸುವ ಪರವಾನಗಿ ರದ್ದಾಯಿತು. ಹೀಗಾಗಿ ಮೈಸೂರು ಲ್ಯಾಕ್ ಮತ್ತು ಪೇಂಟ್ ವರ್ಕ್ಸ್ ಮುಂದೆ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಎಂದು ಮರುನಾಮಕರಣಗೊಂಡಿತು.
ಕಂಪನಿಯು ಇಂದು ಭಾರತ, ಥೈಲ್ಯಾಂಡ್, ಸಿಂಗಾಪುರ್, ನೈಜೀರಿಯಾ, ಮಲೇಷ್ಯಾ, ಕಾಂಬೋಡಿಯಾ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ 30 ದೇಶಗಳಲ್ಲಿ ಚುನಾವಣೆಗಳನ್ನು ಸುಗಮವಾಗಿ ನಡೆಸಲು ಸಹಾಯ ಮಾಡುತ್ತಿದೆ. 1962 ರಿಂದ, ಅದರ ಪೇಟೆಂಟ್ ಪಡೆದ ಅಳಿಸಲಾಗದ ಚುನಾವಣಾ ಶಾಯಿ'ಯ ಸೂತ್ರವು ರಹಸ್ಯವಾಗಿದೆ.
2016-17ನೇ ಸಾಲಿನಲ್ಲಿ ಮೈಸೂರು ಪೇಂಟ್ಸ್ 6.18 ಕೋಟಿ ಲಾಭ ಗಳಿಸಿದೆ. ಚುನಾವಣಾ ವರ್ಷದಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಬಹುದು. ಕಂಪನಿಯ ಆದಾಯದ 40-60%ರ ನಡುವೆ ಅಳಿಸಲಾಗದ ಶಾಯಿ ಮಾರಾಟದಿಂದ ಬರುತ್ತದೆ. 100 ಕಾರ್ಮಿಕರು, ಎಂಜಿನಿಯರ್ಗಳು ಮತ್ತು ರಸಾಯನಶಾಸ್ತ್ರಜ್ಞರನ್ನು ನೇಮಿಸಿಕೊಳ್ಳುತ್ತಿರುವ ಸಾರ್ವಜನಿಕ ವಲಯದ ಉದ್ಯಮ (ಪಿಎಸ್ಯು) 1991 ರಿಂದ ಲಾಭದಾಯಕವಾಗಿದೆ.
ಐದು ದಶಕಗಳ ಹಿಂದೆಯೇ ಮತದಾನದಲ್ಲಿ ನಡೆಯುವ ಅಕ್ರಮ ತಡೆಯಲು ಚುನಾವಣಾ ಆಯೋಗ ಮತದಾರನ ಬೆರಳಿಗೆ ಕಪ್ಪು ಶಾಯಿ (ಮಸಿ) ಬಳಸುವ ವಿಧಾನವನ್ನು ಜಾರಿಗೆ ತಂದಿತ್ತು. ಅಲ್ಲಿಂದ ಇಲ್ಲಿಯವರೆಗೂ ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಮೈಸೂರಿನಿಂದಲೇ ಶಾಯಿಯನ್ನು ಸರಬರಾಜು ಮಾಡಲಾಗುತ್ತಿರುವುದು ವಿಶೇಷವಾಗಿದೆ. ಸ್ವಾತಂತ್ರ್ಯಾನಂತರ 1951, 57ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಾಗ ಇದರಲ್ಲಿ ಒಬ್ಬರೇ ಹಲವು ಬಾರಿ ಮತ ಚಲಾಯಿಸಿದ ಆರೋಪ ಕೇಳಿ ಬಂದಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಚುನಾವಣಾ ಆಯೋಗ ಮತದಾರರ ಬೆರಳಿಗೆ ಕಪ್ಪು ಮಸಿ ಅಥವಾ ಶಾಯಿ ಹಾಕುವ ನಿರ್ಧಾರ ಕೈಗೊಂಡಿತು.



Click it and Unblock the Notifications
