Just In
- 11 min ago ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- 1 hr ago ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- 2 hrs ago ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- 5 hrs ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
Don't Miss
- News Zero Shadow Day: ನಾಳೆ ಬುಧವಾರ ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ; ಸಮಯ, ವಿವರ
- Sports David Warner: ಊಟನೂ ಬೇಡ, ಹುಡುಗಿನೂ ಬೇಡ; ಆಧಾರ್ ಕಾರ್ಡ್ ಬೇಕೆಂದ ಡೇವಿಡ್ ವಾರ್ನರ್!
- Technology Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Movies Sathya : ತಾಜ್ ಮಹಲ್ ಎದುರು ನಿಂತ ಸತ್ಯಾ, ಪತಿ ಜೊತೆ ಗೌತಮಿ ಪ್ರವಾಸ...!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾಯಿ ಪ್ರೀತಿಗೆ ಯಮನೇ ಸೋತನು, ಸತ್ತಿದ್ದ ಮಗ ಬದುಕಿ ಬಂದ
ಹಲವಾರು ಪವಾಡ ಕತೆಗಳ ಬಗ್ಗೆ ಕೇಳುತ್ತೇವೆ, ಕೆಲವರು ಆ ಪವಾಡಗಳ ಬಗ್ಗೆ ಹೇಳುವಾಗ ಹೀಗೆಲ್ಲಾ ಕೂಡ ನಡೆಯುವುದೇ ಎಂದು ಆಶ್ಚರ್ಯಚಕಿತರಾಗುತ್ತೇವೆ, ಹರಿಯಾಣದ ಒಂದು ಕುಟುಂಬದಲ್ಲಿ ಅಂಥದ್ದೊಂದು ಪವಾಡ ನಡೆದಿದೆ. ಆ ತಾಯಿಯ ಪ್ರೀತಿಗೆ ಯಮನೇ ಸೋತು ಆಕೆಯ ಮಗನನ್ನು ಹಿಂತಿರುಗಿಸಿದ್ದಾನೆ.
ತನ್ನ ಮಗನ ಪಾರ್ಥಿವ ಶರೀರದ ಮುಂದೆ ಕೂತಿರುವ ತಾಯಿಗೆ ಮಗ ಬದುಕಿ ಬರುತ್ತಾನೆ ಎಂಬ ನಂಬಿಕೆ. ಮಗನ ಮೇಲಿದ್ದ ಬಟ್ಟೆ ಸರಿಸಿ,ಮಗನ ಹಣೆಗೆ ಆಗಾಗ ಮುತ್ತಿಕ್ಕುತ್ತಾ ಮರಳಿ ಬಾ...ಮರಳಿ ಬಾ ಎಂದು ಕರೆಯುತ್ತಿದ್ದಳು. ಆದರೆ ಪವಾಡವೆಂಬಂತೆ ಹುಡುಗನ ಶರೀರದಲ್ಲಿ ಚಲನೆ ಕಂಡು ಬಂದಿದೆ, ಕೂಡಲೇ ಆತನ ಬಾಯಿಗೆ ಬಾಯಿಟ್ಟು ತಂದೆ ಉಸಿರು ನೀಡಿದ್ದಾರೆ, ಮತ್ತೊಬ್ಬರು ಹೃದಯ-ಶ್ವಾಸಕೋಶದ ಚೇತರಿಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ, ನಂತರ ಅವನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಈತ ಬದುಕುವ ಸಾಧ್ಯತೆ ಶೇ. 15ರಷ್ಟಿದೆ ಎಂದಿದ್ದಾರೆ. ಆದರೆ ಆ ತಾಯಿಯ ಮಡಿಲು ಬರಿದಾಗಲಿಲ್ಲ, ಹುಡುಗನಲ್ಲಿ ನಿಧಾನಕ್ಕೆ ಚೇತರಿಕೆ ಕಂಡು ಬಂದು ಸಾವನ್ನು ಗೆದ್ದು ಬಂದಿದ್ದಾನೆ.
ಹರಿಯಾಣದ ಜಜ್ಜರ್ ಜಿಲ್ಲೆಯ ಕ್ವಿಲ್ಲಾ ಪ್ರದೇಶದ ಕುನಲ್ ಶರ್ಮರ ಮೊಮ್ಮಗನಿಗೆ ಟೈಫಾಯ್ಡ್ ಬಂದಿತು. ಆತನನ್ನು ಚಿಕಿತ್ಸೆಗಾಗಿ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಆತನ ಸಾವಿನ ಸುದ್ದಿಯನ್ನು ತಿಳಿಸಿದರು. ಮಗನ ಪಾರ್ಥೀವ ಶರೀರ ತಗೊಂಡು ಬಹದ್ದೂರ್ಗಢಕ್ಕೆ ಬಂದರು. ಹುಡುಗನ ಅಜ್ಜಿಗೆ ಮೊಮ್ಮಗನ ಕೊನೆಯ ದರ್ಶನ ಮಾಡಿಸಲು ಮಾವನ ಮನೆಯಲ್ಲಿ ಪಾರ್ಥೀವ ಶರೀರ ಇಡಲು ತೀರ್ಮಾನಿಸಿ ತೆಗೆದುಕೊಂಡು ಬಂದಿದ್ದರು.
ದುಃಖದಿಂದ ಆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹುಡುಗನ ತಾಯಿ ಮಗನ ಶವ ಶರೀರ ಹಿಡಿದು ಬಾ ಮಗನೇ.. ಬಾ ಎಂದು ಹಿಡಿದು ಅಲುಗಾಡಿಸಿದಾಗ ಆ ಶರೀರದಲ್ಲಿ ಚಲನೆ ಕಂಡು ಬಂದಿದೆ.
ಕೂಡಲೇ ಹುಡುಗನನ್ನು ಅಲ್ಲಿಂದ ಎತ್ತಿದ ಮನೆಯವರು ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾರಂಭಿಸಿದರು. ಬಾಯಿಗೆ-ಬಾಯಿಟ್ಟು ಊದಿದರು, ಆತನ ಎದೆಗೆ ಮೆಲ್ಲನೆ ಗುದ್ದಿ ಹೃದಯ ಬಡಿಯುವಂತೆ ಮಾಡಿದರು, ನಂತರ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯದ್ದರು. ಆಗಲೂ ಹುಡುಗ ಬದುಕುವ ಸಾಧ್ಯತೆ ತುಂಬಾನೆ ಕಡಿಮೆ ಇದೆ ಎಂದು ವೈದ್ಯರು ಹೇಳಿದ್ದರು. ತಾಯಿಗೆ ಮಗ ಬಂದೇ ಬರುತ್ತಾನೆ ಎಂಬ ನಂಬಿಕೆ ಇತ್ತು, ಆ ತಾಯಿಯ ನಂಬಿಕೆ ಹುಸಿಯಾಗಲಿಲ್ಲ, ಹುಡುಗ ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದಾನೆ.
ಹೀಗೆ ಹುಡುಗ ಯಮನನ್ನೇ ಗೆದ್ದು ತಾಯಿ ಮಡಿಲು ಸೇರಿ ಪವಾಡಕ್ಕೆ ಕಾರಣನಾಗಿದ್ದಾನೆ.