Latest Updates
-
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ!
ತಾಯಿ ಪ್ರೀತಿಗೆ ಯಮನೇ ಸೋತನು, ಸತ್ತಿದ್ದ ಮಗ ಬದುಕಿ ಬಂದ
ಹಲವಾರು ಪವಾಡ ಕತೆಗಳ ಬಗ್ಗೆ ಕೇಳುತ್ತೇವೆ, ಕೆಲವರು ಆ ಪವಾಡಗಳ ಬಗ್ಗೆ ಹೇಳುವಾಗ ಹೀಗೆಲ್ಲಾ ಕೂಡ ನಡೆಯುವುದೇ ಎಂದು ಆಶ್ಚರ್ಯಚಕಿತರಾಗುತ್ತೇವೆ, ಹರಿಯಾಣದ ಒಂದು ಕುಟುಂಬದಲ್ಲಿ ಅಂಥದ್ದೊಂದು ಪವಾಡ ನಡೆದಿದೆ. ಆ ತಾಯಿಯ ಪ್ರೀತಿಗೆ ಯಮನೇ ಸೋತು ಆಕೆಯ ಮಗನನ್ನು ಹಿಂತಿರುಗಿಸಿದ್ದಾನೆ.

ತನ್ನ ಮಗನ ಪಾರ್ಥಿವ ಶರೀರದ ಮುಂದೆ ಕೂತಿರುವ ತಾಯಿಗೆ ಮಗ ಬದುಕಿ ಬರುತ್ತಾನೆ ಎಂಬ ನಂಬಿಕೆ. ಮಗನ ಮೇಲಿದ್ದ ಬಟ್ಟೆ ಸರಿಸಿ,ಮಗನ ಹಣೆಗೆ ಆಗಾಗ ಮುತ್ತಿಕ್ಕುತ್ತಾ ಮರಳಿ ಬಾ...ಮರಳಿ ಬಾ ಎಂದು ಕರೆಯುತ್ತಿದ್ದಳು. ಆದರೆ ಪವಾಡವೆಂಬಂತೆ ಹುಡುಗನ ಶರೀರದಲ್ಲಿ ಚಲನೆ ಕಂಡು ಬಂದಿದೆ, ಕೂಡಲೇ ಆತನ ಬಾಯಿಗೆ ಬಾಯಿಟ್ಟು ತಂದೆ ಉಸಿರು ನೀಡಿದ್ದಾರೆ, ಮತ್ತೊಬ್ಬರು ಹೃದಯ-ಶ್ವಾಸಕೋಶದ ಚೇತರಿಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ, ನಂತರ ಅವನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಈತ ಬದುಕುವ ಸಾಧ್ಯತೆ ಶೇ. 15ರಷ್ಟಿದೆ ಎಂದಿದ್ದಾರೆ. ಆದರೆ ಆ ತಾಯಿಯ ಮಡಿಲು ಬರಿದಾಗಲಿಲ್ಲ, ಹುಡುಗನಲ್ಲಿ ನಿಧಾನಕ್ಕೆ ಚೇತರಿಕೆ ಕಂಡು ಬಂದು ಸಾವನ್ನು ಗೆದ್ದು ಬಂದಿದ್ದಾನೆ.
ಹರಿಯಾಣದ ಜಜ್ಜರ್ ಜಿಲ್ಲೆಯ ಕ್ವಿಲ್ಲಾ ಪ್ರದೇಶದ ಕುನಲ್ ಶರ್ಮರ ಮೊಮ್ಮಗನಿಗೆ ಟೈಫಾಯ್ಡ್ ಬಂದಿತು. ಆತನನ್ನು ಚಿಕಿತ್ಸೆಗಾಗಿ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಆತನ ಸಾವಿನ ಸುದ್ದಿಯನ್ನು ತಿಳಿಸಿದರು. ಮಗನ ಪಾರ್ಥೀವ ಶರೀರ ತಗೊಂಡು ಬಹದ್ದೂರ್ಗಢಕ್ಕೆ ಬಂದರು. ಹುಡುಗನ ಅಜ್ಜಿಗೆ ಮೊಮ್ಮಗನ ಕೊನೆಯ ದರ್ಶನ ಮಾಡಿಸಲು ಮಾವನ ಮನೆಯಲ್ಲಿ ಪಾರ್ಥೀವ ಶರೀರ ಇಡಲು ತೀರ್ಮಾನಿಸಿ ತೆಗೆದುಕೊಂಡು ಬಂದಿದ್ದರು.
ದುಃಖದಿಂದ ಆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹುಡುಗನ ತಾಯಿ ಮಗನ ಶವ ಶರೀರ ಹಿಡಿದು ಬಾ ಮಗನೇ.. ಬಾ ಎಂದು ಹಿಡಿದು ಅಲುಗಾಡಿಸಿದಾಗ ಆ ಶರೀರದಲ್ಲಿ ಚಲನೆ ಕಂಡು ಬಂದಿದೆ.
ಕೂಡಲೇ ಹುಡುಗನನ್ನು ಅಲ್ಲಿಂದ ಎತ್ತಿದ ಮನೆಯವರು ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾರಂಭಿಸಿದರು. ಬಾಯಿಗೆ-ಬಾಯಿಟ್ಟು ಊದಿದರು, ಆತನ ಎದೆಗೆ ಮೆಲ್ಲನೆ ಗುದ್ದಿ ಹೃದಯ ಬಡಿಯುವಂತೆ ಮಾಡಿದರು, ನಂತರ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯದ್ದರು. ಆಗಲೂ ಹುಡುಗ ಬದುಕುವ ಸಾಧ್ಯತೆ ತುಂಬಾನೆ ಕಡಿಮೆ ಇದೆ ಎಂದು ವೈದ್ಯರು ಹೇಳಿದ್ದರು. ತಾಯಿಗೆ ಮಗ ಬಂದೇ ಬರುತ್ತಾನೆ ಎಂಬ ನಂಬಿಕೆ ಇತ್ತು, ಆ ತಾಯಿಯ ನಂಬಿಕೆ ಹುಸಿಯಾಗಲಿಲ್ಲ, ಹುಡುಗ ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದಾನೆ.
ಹೀಗೆ ಹುಡುಗ ಯಮನನ್ನೇ ಗೆದ್ದು ತಾಯಿ ಮಡಿಲು ಸೇರಿ ಪವಾಡಕ್ಕೆ ಕಾರಣನಾಗಿದ್ದಾನೆ.



Click it and Unblock the Notifications