Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ತಾಯಿ ಪ್ರೀತಿಗೆ ಯಮನೇ ಸೋತನು, ಸತ್ತಿದ್ದ ಮಗ ಬದುಕಿ ಬಂದ
ಹಲವಾರು ಪವಾಡ ಕತೆಗಳ ಬಗ್ಗೆ ಕೇಳುತ್ತೇವೆ, ಕೆಲವರು ಆ ಪವಾಡಗಳ ಬಗ್ಗೆ ಹೇಳುವಾಗ ಹೀಗೆಲ್ಲಾ ಕೂಡ ನಡೆಯುವುದೇ ಎಂದು ಆಶ್ಚರ್ಯಚಕಿತರಾಗುತ್ತೇವೆ, ಹರಿಯಾಣದ ಒಂದು ಕುಟುಂಬದಲ್ಲಿ ಅಂಥದ್ದೊಂದು ಪವಾಡ ನಡೆದಿದೆ. ಆ ತಾಯಿಯ ಪ್ರೀತಿಗೆ ಯಮನೇ ಸೋತು ಆಕೆಯ ಮಗನನ್ನು ಹಿಂತಿರುಗಿಸಿದ್ದಾನೆ.

ತನ್ನ ಮಗನ ಪಾರ್ಥಿವ ಶರೀರದ ಮುಂದೆ ಕೂತಿರುವ ತಾಯಿಗೆ ಮಗ ಬದುಕಿ ಬರುತ್ತಾನೆ ಎಂಬ ನಂಬಿಕೆ. ಮಗನ ಮೇಲಿದ್ದ ಬಟ್ಟೆ ಸರಿಸಿ,ಮಗನ ಹಣೆಗೆ ಆಗಾಗ ಮುತ್ತಿಕ್ಕುತ್ತಾ ಮರಳಿ ಬಾ...ಮರಳಿ ಬಾ ಎಂದು ಕರೆಯುತ್ತಿದ್ದಳು. ಆದರೆ ಪವಾಡವೆಂಬಂತೆ ಹುಡುಗನ ಶರೀರದಲ್ಲಿ ಚಲನೆ ಕಂಡು ಬಂದಿದೆ, ಕೂಡಲೇ ಆತನ ಬಾಯಿಗೆ ಬಾಯಿಟ್ಟು ತಂದೆ ಉಸಿರು ನೀಡಿದ್ದಾರೆ, ಮತ್ತೊಬ್ಬರು ಹೃದಯ-ಶ್ವಾಸಕೋಶದ ಚೇತರಿಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ, ನಂತರ ಅವನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಈತ ಬದುಕುವ ಸಾಧ್ಯತೆ ಶೇ. 15ರಷ್ಟಿದೆ ಎಂದಿದ್ದಾರೆ. ಆದರೆ ಆ ತಾಯಿಯ ಮಡಿಲು ಬರಿದಾಗಲಿಲ್ಲ, ಹುಡುಗನಲ್ಲಿ ನಿಧಾನಕ್ಕೆ ಚೇತರಿಕೆ ಕಂಡು ಬಂದು ಸಾವನ್ನು ಗೆದ್ದು ಬಂದಿದ್ದಾನೆ.
ಹರಿಯಾಣದ ಜಜ್ಜರ್ ಜಿಲ್ಲೆಯ ಕ್ವಿಲ್ಲಾ ಪ್ರದೇಶದ ಕುನಲ್ ಶರ್ಮರ ಮೊಮ್ಮಗನಿಗೆ ಟೈಫಾಯ್ಡ್ ಬಂದಿತು. ಆತನನ್ನು ಚಿಕಿತ್ಸೆಗಾಗಿ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಆತನ ಸಾವಿನ ಸುದ್ದಿಯನ್ನು ತಿಳಿಸಿದರು. ಮಗನ ಪಾರ್ಥೀವ ಶರೀರ ತಗೊಂಡು ಬಹದ್ದೂರ್ಗಢಕ್ಕೆ ಬಂದರು. ಹುಡುಗನ ಅಜ್ಜಿಗೆ ಮೊಮ್ಮಗನ ಕೊನೆಯ ದರ್ಶನ ಮಾಡಿಸಲು ಮಾವನ ಮನೆಯಲ್ಲಿ ಪಾರ್ಥೀವ ಶರೀರ ಇಡಲು ತೀರ್ಮಾನಿಸಿ ತೆಗೆದುಕೊಂಡು ಬಂದಿದ್ದರು.
ದುಃಖದಿಂದ ಆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹುಡುಗನ ತಾಯಿ ಮಗನ ಶವ ಶರೀರ ಹಿಡಿದು ಬಾ ಮಗನೇ.. ಬಾ ಎಂದು ಹಿಡಿದು ಅಲುಗಾಡಿಸಿದಾಗ ಆ ಶರೀರದಲ್ಲಿ ಚಲನೆ ಕಂಡು ಬಂದಿದೆ.
ಕೂಡಲೇ ಹುಡುಗನನ್ನು ಅಲ್ಲಿಂದ ಎತ್ತಿದ ಮನೆಯವರು ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾರಂಭಿಸಿದರು. ಬಾಯಿಗೆ-ಬಾಯಿಟ್ಟು ಊದಿದರು, ಆತನ ಎದೆಗೆ ಮೆಲ್ಲನೆ ಗುದ್ದಿ ಹೃದಯ ಬಡಿಯುವಂತೆ ಮಾಡಿದರು, ನಂತರ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯದ್ದರು. ಆಗಲೂ ಹುಡುಗ ಬದುಕುವ ಸಾಧ್ಯತೆ ತುಂಬಾನೆ ಕಡಿಮೆ ಇದೆ ಎಂದು ವೈದ್ಯರು ಹೇಳಿದ್ದರು. ತಾಯಿಗೆ ಮಗ ಬಂದೇ ಬರುತ್ತಾನೆ ಎಂಬ ನಂಬಿಕೆ ಇತ್ತು, ಆ ತಾಯಿಯ ನಂಬಿಕೆ ಹುಸಿಯಾಗಲಿಲ್ಲ, ಹುಡುಗ ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದಾನೆ.
ಹೀಗೆ ಹುಡುಗ ಯಮನನ್ನೇ ಗೆದ್ದು ತಾಯಿ ಮಡಿಲು ಸೇರಿ ಪವಾಡಕ್ಕೆ ಕಾರಣನಾಗಿದ್ದಾನೆ.



Click it and Unblock the Notifications
