Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Chaitra Purnima 2021: ವೃತದ ದಿನಾಂಕ, ಸಮಯ, ಆಚರಣೆ ಹಾಗೂ ಮಹತ್ವದ ಕುರಿತು ಇಲ್ಲಿದೆ ಮಾಹಿತಿ
ಪೂರ್ಣಿಮಾ ಅಥವಾ ಹುಣ್ಣಿಮೆಯ ದಿನವನ್ನು ಹಿಂದೂ ಧರ್ಮದಲ್ಲಿ ಶುಭವೆಂದು ಪರಿಗಣಿಸಲಾಗಿದೆ. ಅನೇಕರು ಎಲ್ಲಾ ಪೂರ್ಣಿಮಾ ತಿಥಿಗಳಂದು ಉಪವಾಸ ಮಾಡುತ್ತಾರೆ. ಹಿಂದೂ ಪಂಚಾಂಗದ ಪ್ರಕಾರ, ಚೈತ್ರ ಪೂರ್ಣಿಮವು ಮೊದಲ ಪೂರ್ಣಿಮವಾಗಿದ್ದು, ಮತ್ತು ಇದು ಯುಗಾದಿಯ ನಂತರ ಬರುತ್ತದೆ. ಹಾಗಾದರೆ ಈ ವರ್ಷದ ಚೈತ್ರ ಪೂರ್ಣಿಮ ಯಾವಾಗ ಬರುತ್ತದೆ? ಅದರ ಮಹತ್ವವೇನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಚೈತ್ರ ಪೂರ್ಣಿಮದ ದಿನಾಂಕ ಮತ್ತು ಸಮಯ:
ಚೈತ್ರ ಪೂರ್ಣಿಮ ವ್ರತವನ್ನು ಏಪ್ರಿಲ್ 27, 2021 ಮಂಗಳವಾರದಂದು ಆಚರಣೆ ಮಾಡಲಾಗುವುದು.
ಪೂರ್ಣಿಮಾ ತಿಥಿ ಪ್ರಾರಂಭ - 11.14 PM, ಎಪ್ರಿಲ್ 26
ಪೂರ್ಣಿಮಾ ತಿಥಿ ಅಂತ್ಯ - 07.31 AM, ಎಪ್ರಿಲ್ 27

ಚೈತ್ರ ಪೂರ್ಣಿಮಾ ವೃತದ ಕಥೆ:
ಚೈತ್ರ ಪೂರ್ಣಿಮೆಯ ದಿನದಂದು ಚಂದ್ರನ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪೂರ್ಣಿಮಾ ದಿನದಂದು ಚಂದ್ರನನ್ನು ಸಂಪೂರ್ಣವಾಗಿ ಕಾಣಬಹುದು. ಧಾರ್ಮಿಕ ನಂಬಿಕೆಗಳು ಮತ್ತು ಗ್ರಂಥಗಳ ಪ್ರಕಾರ, ಈ ದಿನ ಚಂದ್ರನ ಪೂಜೆಯನ್ನು ಮಾಡುವುದು ಅದೃಷ್ಟ ಮತ್ತು ಸಂತೋಷವನ್ನು ತರುತ್ತದೆ. ಈ ದಿನ, ಭೂಮಿಯ ಮೇಲೆ ಬೀಳುವ ಚಂದ್ರನ ಕಿರಣಗಳು ಅಮೃತಕ್ಕೆ ಸಮನಾಗಿರುತ್ತವೆ, ಇದನ್ನು ಎಲ್ಲರೂ ಸೇವಿಸಬೇಕು. ಈ ದಿನದಂದು ಚಂದ್ರನ ಕಿರಣಗಳು ಅತ್ಯುತ್ತಮವಾಗಿರುತ್ತವೆ. ಪೂರ್ಣಿಮಾ ತಿಥಿ ವಿಶೇಷ ಆಚರಣೆಗಳು ಮತ್ತು ಮಂತ್ರ ಸಿದ್ಧಿಗೆ ಸೂಕ್ತ ಸಮಯವೆಂದು ಪರಿಗಣಿಸಲಾಗಿದೆ. ಏಕಾಗ್ರತೆಯನ್ನು ಸುಧಾರಿಸಲು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಪೂರ್ಣಿಮಾ ತಿಥಿಯಲ್ಲಿ ಚಂದ್ರನನ್ನು ಪೂಜಿಸಬೇಕು.
ಚೈತ್ರ ಪೂರ್ಣಿಮ ರಾತ್ರಿಯಲ್ಲಿ ಹಸಿ ಹಾಲು, ನೀರು ಮತ್ತು ಸಕ್ಕರೆಯ ಮಿಶ್ರಣವನ್ನು ತಯಾರಿಸಿ ಚಂದ್ರನಿಗೆ ಅರ್ಪಿಸಲಾಗುತ್ತದೆ. ನೀರನ್ನು ಅರ್ಪಿಸುವಾಗ ಈ ಕೆಳಗಿನ ಮಂತ್ರವನ್ನು ಪಠಿಸಬೇಕು - "ಓಂ ಸೋಮ ಸೋಮಯಾ ನಮ". ಇದರೊಂದಿಗೆ ಚಂದ್ರ ಆರತಿ ಮತ್ತು ಮಂತ್ರಗಳನ್ನು ಸಹ ಪೂಜೆಯ ಸಮಯದಲ್ಲಿ ಪಠಿಸಬೇಕು. ಚಂದ್ರನ ಬೆಳಕಿನಲ್ಲಿ ಧ್ಯಾನವನ್ನು ಮಾಡಬೇಕು. ಚಂದ್ರನ ಕಾರಣದಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಅಥವಾ ಏಕಾಗ್ರತೆಯ ಕೊರತೆಯನ್ನು ಎದುರಿಸುತ್ತಿರುವ ಮಕ್ಕಳು, ಅವರು ವಿಶೇಷವಾಗಿ ಈ ದಿನ ಚಂದ್ರದೇವನನ್ನು ಪೂಜಿಸಬೇಕು. ಖೀರ್ ಅನ್ನು ಚಂದ್ರನಿಗೆ ಅರ್ಪಿಸಬೇಕು ಮತ್ತು ನಂತರ ಅದನ್ನು ಬಡವರಿಗೆ ವಿತರಿಸಬೇಕು.

ಚೈತ್ರ ಪೂರ್ಣಿಮಾ ಪೂಜಾ ವಿಧಿ:
- ಬೆಳಿಗ್ಗೆ ಬೇಗ ಎದ್ದು ಸ್ನಾನ ಇತ್ಯಾದಿಗಳಿಂದ ಶುಭ್ರರಾಗಿ ಮತ್ತು ಉಪವಾಸವನ್ನು ಕೈಗೊಳ್ಳಿ.
- ಹುಣ್ಣಿಮೆಯ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಸಾಕಷ್ಟು ಮಹತ್ವವಿದೆ. ಈ ಬಾರಿ ಕರೋನಾ ವೈರಸ್ನಿಂದ ಸುರಕ್ಷಿತವಾಗಿರಲು ಮನೆಯಲ್ಲಿಯೇ ಇರುವುದು ಉತ್ತಮ. ಸ್ನಾನದ ನೀರಿಗೆ ಗಂಗಾ ಜಲವನ್ನು ಸೇರಿಸುವ ಮೂಲಕ ನೀವು ಸ್ನಾನ ಮಾಡಿ.
- ಈ ದಿನ, ಹನುಮನನ್ನು ಬಹಳ ಶ್ರದ್ಧೆಯಿಂದ ಪೂಜಿಸಿ. ಹನುಮಾನ್ ಚಾಲಿಸಾ ಪಠಿಸಿ.
- ಈ ಶುಭ ದಿನದಂದು ವಿಷ್ಣುವಿನ ಆರಾಧನೆಗೂ ವಿಶೇಷ ಮಹತ್ವವಿದೆ.
- ಈ ದಿನದಂದು ಸತ್ಯನಾರಾಯಣ ಕಥೆಯನ್ನೂ ಓದಬಹುದು.
- ರಾತ್ರಿ ಹುಣ್ಣಿಮೆ ಚಂದ್ರನಿಗೆ ಪ್ರಾರ್ಥನೆ ಸಲ್ಲಿಸಿ.
- ಎಲ್ಲಾ ಪೂರ್ಣಿಮಾ ದಿನಗಳು ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತವೆ. ಹನುಮನ ಜನ್ಮ ದಿನಾಚರಣೆಯನ್ನು ಚೈತ್ರ ಪೂರ್ಣಿಮಾ ದಿನದಂದು ಆಚರಿಸಲಾಗುತ್ತದೆ.
- ಗಂಗಾ ಮುಂತಾದ ಪವಿತ್ರ ನದಿಗಳಲ್ಲಿ ಸ್ನಾನ ಮಾಡಲು ಚೈತ್ರ ಪೂರ್ಣಿಮಾವನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದ ಕೊನೆಯ ಶಾಹಿ ಸ್ನಾನ ಚೈತ್ರ ಪೂರ್ಣಿಮಾ ತಿಥಿಯಲ್ಲಿ ನಡೆಯಲಿದೆ. ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಜನರು ತಮ್ಮ ದುಃಖಗಳು, ಸಂಕಟಗಳು, ಪಾಪಗಳು ಮತ್ತು ತೊಂದರೆಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
- ಇದಲ್ಲದೆ, ಹನುಮ ಚೈತ್ರ ಪೂರ್ಣಿಮಾ ತಿಥಿಯಲ್ಲಿ ಜನಿಸಿದನು. ಭಕ್ತರು ಈ ದಿನ ಹನುಮಾನ್ ಜಯಂತಿಯನ್ನು ಆಚರಿಸುತ್ತಾರೆ. ಈತ ಜ್ಞಾನ ಮತ್ತು ಶಕ್ತಿಗೆ ಹೆಸರುವಾಸಿ. ಇದರಿಂದ ಈ ದಿನದ ಮಹತ್ವ ದುಪ್ಪಟ್ಟಾಗುತ್ತದೆ.
- ವಿಷ್ಣುವಿನ ಅವತಾರವಾದ ಸತ್ಯನಾರಾಯಣನನ್ನು ಪೂಜಿಸಲು ಈ ದಿನ ಸೂಕ್ತವಾಗಿದೆ. ಆದ್ದರಿಂದ ಜನರು ಈ ದಿನದಂದು ವ್ರತವನ್ನು ಆಚರಿಸುತ್ತಾರೆ ಮತ್ತು ಸತ್ಯನಾರಾಯಣಯನಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಸತ್ಯನಾರಾಯಣ ಕಥೆಯನ್ನು ಓದುತ್ತಾರೆ.
- ಕೊನೆಯದಾಗಿ ಲೋಕೋಪಕಾರಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಈ ಪೂರ್ಣಿಮಾ ತಿಥಿ ಅತ್ಯುತ್ತಮ ದಿನವಾಗಿದೆ. ಅನೇಕ ಜನರು ಆಹಾರ ಮತ್ತು / ಅಥವಾ ಇತರ ಅಗತ್ಯ ವಸ್ತುಗಳನ್ನು ದಾನ ಮಾಡುವ ಮೂಲಕ ಅಗತ್ಯವಿರುವವರಿಗೆ ನೆರವಾಗುತ್ತಾರೆ.
- ಈ ದಿನ ವಿಷ್ಣುವನ್ನು ಪೂಜಿಸುವುದರಿಂದ ಸಂತೋಷ, ಸಂಪತ್ತು ಮತ್ತು ಸಂಪತ್ತು ಬರುತ್ತದೆ.




Click it and Unblock the Notifications