Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಇಂದು ವರ್ಷದ ಕೊನೆಯ ಅಮಾವಾಸ್ಯೆ: ಸೋಮಾವತಿ ಅಮಾವಾಸ್ಯೆ ಏಕೆ ಆಚರಿಸುತ್ತಾರೆ ಗೊತ್ತಾ?
ಈ ವರ್ಷ ಮುಗಿಯುವ ಹಂತ ತಲುಪಿದೆ. 2024ನೇ ವರ್ಷ ಮುಗಿದು 2025ನೇ ವರ್ಷ ಸ್ವಾಗತಿಸಲು ನಾವು ತುದಿಗಾಲಿನಲ್ಲಿ ನಿಂತಿದ್ದೇವೆ. ಹಾಗೆ ಈ ವರ್ಷದ ಕೊನೆಯ ಅಮಾವಾಸ್ಯೆ ಕೂಡ ಇಂದು ಸಂಭವಿಸುತ್ತಿದೆ. ವರ್ಷದ ಕೊನೆಯ ಅಮಾವಾಸ್ಯೆಯೂ ಸೋಮಾವತಿ ಅಮಾವಾಸ್ಯೆ ಆಗಿದೆ. ಸೋಮಾವತಿ ಅಮಾವಾಸ್ಯೆ, ಇತರ ಅಮಾವಾಸ್ಯೆಗಿಂತ ಈ ಅಮವಾಸ್ಯೆ ತುಂಬಾ ವಿಶೇಷವಾಗಿದೆ.
ಸಾಮಾನ್ಯವಾಗಿ ಸೋಮವಾರದಂದು ಬರುವಂತಹ ಅಮಾವಾಸ್ಯೆಯನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನದಂದು ಪಿತೃಗಳಿಗೆ ಪಿಂಡ ಪ್ರಧಾನ, ಆಹಾರ ನೀಡುವುದು ಮಾಡುವುದು, ವಿಶೇಷ ಪೂಜೆಯಂತಹ ಕಾರ್ಯ ಮಾಡುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಸಂಪತ್ತು ವೃದ್ಧಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.

ಈ ದಿನದ ಪೂಜೆಯು ವ್ಯಕ್ತಿಯನ್ನು ಪಾಪಗಳಿಂದ ಮುಕ್ತನನ್ನಾಗಿ ಮಾಡುತ್ತದೆ. ಸುಖಮಯ ಜೀವನವನ್ನು ನೀಡುತ್ತದೆ ಎಂಬುದು ಈ ಅಮಾವಾಸ್ಯೆಯ ನಂಬಿಕೆಗಳಲ್ಲಿ ಒಂದಾಗಿದೆ. ಈ ದಿನದಂದು ವಿಷ್ಣುವಿನ ಜೊತೆಗೆ ಶಿವನನ್ನು ಕೂಡ ಪೂಜಿಸಲಾಗುತ್ತದೆ. ಹೀಗಾಗಿ ಈ ಸೋಮಾವತಿ ಅಮಾವಾಸ್ಯೆ ವಿಶೇಷವಾಗಿದೆ. ಈ ದಿನ ಪೀತೃ ಪೂಜೆಯು ಆತ್ಮಾವಲೋಕನ ಹಾಗೂ ಶಾಂತಿ ನೀಡಲಿದೆ. ಮುಖ್ಯವಾಗಿ ಪಿತೃ ದೋಷದಂತಹ ಸಮಸ್ಯೆಗಳಿಂದ ನೀವು ದೂರಾಗಬಹುದು.
ಇಂದು ಈ ವರ್ಷದ ಕೊನೆಯ ಅಮಾವಾಸ್ಯೆ. 2024 ರ ಡಿಸೆಂಬರ್ 30 ರಂದು ಸೋಮವಾರ ಮುಂಜಾನೆ 4:01 ರಿಂದ ಆರಂಭಗೊಳ್ಳುವ ಈ ಸಮಯ ಡಿಸೆಂಬರ್ 31 ರ ಮಂಗಳವಾರ ಮುಂಜಾನೆ 3:56 ರವರೆಗೆ ಅಮಾವಾಸ್ಯೆ ತಿಥಿ ಇರಲಿದೆ. ಈ ಸಮಯದಲ್ಲಿ ನೀವು ಪಿತೃ ಪೂಜಾ ಕಾರ್ಯ ಹಾಗೂ ವಿಶೇಷ ಅಮಾವಾಸ್ಯೆ ಪೂಜೆ ಮಾಡಬಹುದು.
ಸೋಮಾವತಿ ಅಮಾವಾಸ್ಯೆ ದಿನ ಹೇಗೆ ಪೂಜೆ ಮಾಡಬೇಕು?
ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಅದರಲ್ಲೂ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ತುಂಬಾನೇ ಪುಣ್ಯ ಸಿಗುತ್ತದೆ. ಇಲ್ಲದಿದ್ದರೆ ಸ್ನಾನ ಮಾಡುವ ನೀರಿಗೆ ಸ್ವಲ್ಪ ಗಂಗಾಜಲ ಹಾಕಿ ಸ್ನಾನ ಮಾಡಬೇಕು. ನಂತರ ಪೂರ್ವಜರಿಗೆ ಅನ್ನ ಇಡುವುದು, ವಸ್ತ್ರದಾನ ಮಾಡುವುದು, ಪ್ರಾಣಿಗಳಿಗೆ ಆಹಾರ ನೀಡುವ ಕಾರ್ಯ ಮಾಡಬೇಕು. ಇದರಿಂದ ಪುಣ್ಯ ಲಭಿಸಲಿದೆ. ಸೋಮಾವತಿ ಅಮಾವಾಸ್ಯೆಯಂದು ಪೂರ್ವಜರಿಗೆ ತರ್ಪಣವನ್ನು ಅರ್ಪಿಸಬೇಕು. ಈ ಅಮಾವಾಸ್ಯೆಯ ದಿನದಂದು ತುಳಸಿ ಗಿಡಕ್ಕೆ ಪೂಜೆ ಮಾಡುವುದರಿಂದ ನಿಮ್ಮ ಜಾತಕ ದೋಷ ಹಾಗೂ ಪಿತೃ ದೋಷಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದು. ಹಾಗೆ ಪೂರ್ವಿಕರ ಆಶೀರ್ವಾದ ಪಡೆಯಲು ಈ ದಿನ ಅತ್ಯಂತ ಶುಭ ದಿನ ಎಂಬ ನಂಬಿಕೆ ಕೂಡ ಇದೆ.
ಸೋಮಾವತಿ ಅಮಾವಾಸ್ಯೆಯ ಮಂತ್ರವೇನು?
ಓಂ ನಾರಾಯಣಾಯ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ವಿಷ್ಣು ಪ್ರಚೋದಯಾತ್
ಓಂ ಹ್ರೀಂ ಕಾರ್ತವೀರ್ಯಾರ್ಜುನೋ ನಾಮ ರಾಜ ಬಾಹು ಸಹಸ್ತ್ರವಾನ
ಓಂ ನಮಃ ಶಿವಾಯ
ಓಂ ಆಪಾದಂಪಹರ್ತಾರಂ ದಾತಾರಂ ಸರ್ವಸಂಪದಂ
ಲೋಕಾಭಿರಾಮಂ ಶ್ರೀರಾಮ ಭೂಯೋ-ಭೂಯೋ ನಮಾಮ್ಯಹಂ
ಓಂ ಕುಲ ದೇವತಾಭ್ಯೋ ನಮಃ



Click it and Unblock the Notifications
