Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಸಂಪತ್ತು, ಸಂತಾನ ಭಾಗ್ಯಕ್ಕಾಗಿ ಜನ್ಮಾಷ್ಟಮಿಯಂದು ಈ ಕಾರ್ಯಗಳನ್ನು ಮಾಡಿ
ಸಮಸ್ಯೆ ಅಂತ ಬಂದಾಗ ನಾವು ದೇವರ ಮೊರೆ ಹೋಗುತ್ತೇವೆ, ದೇವರ ಕೃಪೆಯಿದ್ದರೆ ಎಲ್ಲವೂ ಸರಿಹೋಗುವುದು ಎಂಬ ನಂಬಿಕೆ. ಶ್ರೀಕೃಷ್ಣ ಭಕ್ತರು ಕೂಡ ನಮ್ಮೆಲ್ಲಾ ಸಮಸ್ಯೆಗಳಿಗೆ ಶ್ರೀಕೃಷ್ಣ ಯಾವುದೋ ಒಂದು ರೂಪದಲ್ಲಿ ಪರಿಹಾರ ನೀಡುತ್ತಾನೆ ಎಂದು ಬಲವಾಗಿ ನಂಬುತ್ತಾರೆ. ಭಕ್ತರ ನಂಬಿಕೆಯಂತೆಯೇ ಎಷ್ಟೂ ಸಮಸ್ಯೆಗಳು ಪರಿಹಾರವಾಗುವುದರಿಂದ ಈ ನಂಬಿಕೆ ಎಂಬುವುದು ಮತ್ತಷ್ಟು ಹೆಚ್ಚಾಗುವುದು.

ಶ್ರೀಕೃಷ್ಣನ ಆರಾಧನೆ ಮಾಡುವವರಿಗೆ ಕೃಷ್ಣ ಜನ್ಮಾಷ್ಟಮಿ ಇನ್ನೂ ವಿಶೇಷವಾಗಿರುತ್ತದೆ, ಈ ದಿನ ಕೃಷ್ಣ ಜನಿಸಿದ ದಿನ. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಶ್ರೀ ಕೃಷ್ಣನ ಜನ್ಮದಿನವನ್ನು ಆಚರಿಸಲಾಗುವುದು. ಈ ದಿನ ಶ್ರೀಕೃಷ್ಣನ ಮೂರ್ತಿಯನ್ನು ಅಲಂಕರಿಸಿ ವಿಶೇಷ ಪೂಜೆಯನ್ನು ಮಾಡಲಾಗುವುದು. ಶ್ರೀ ಕೃಷ್ಣ ದೇವಾಲಯಗಳಿಗೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಲಾಗುವುದು. ಜನ್ಮಾಷ್ಟಮಿಯಂದು ಕೆಲವೊಂದು ಪರಿಹಾರ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ, ಅದರ ಬಗ್ಗೆ ನೋಡುವುದಾದರೆ
* ದೇವರಿಗೆ ನೈವೇದ್ಯ ಅರ್ಪಿಸುವಾಗ ಅದರಲ್ಲಿ ತುಳಸಿಯನ್ನು ಹಾಕಲು ಮರೆಯದಿರಿ. ಪಾಯಸಕ್ಕೆ ತುಳಸಿ ಹಾಕಿ ಅರ್ಪಿಸುವುದರಿಂದ ಆರ್ಥಿಕ ಸ್ಥಿತಿ ಮತ್ತಷ್ಟು ಉತ್ತಮವಾಗುವುದು.
* ಜನ್ಮಾಷ್ಟಮಿಯಂದು ಕೃಷ್ಣನಿಗೆ ಕೇಸರಿ ಮಿಶ್ರಿತ ಹಾಲಿನೊಂದಿಗೆ ಅಭಿಷೇಕ ಮಾಡಿ. ಈ ಪರಿಹಾರವನ್ನು ಮಾಡುವುದರಿಂದ ಶ್ರೀಕೃಷ್ಣನ ಜೊತೆಗೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಆಶೀರ್ವಾದವೂ ಸಿಗಲಿದೆ.
* ಕೃಷ್ಣ ಜನ್ಮಾಷ್ಟಮಿಯ ದಿನದಂದು ಕೃಷ್ಣನಿಗೆ ಬೆಳ್ಳಿಯ ಕೊಳಲು ಅರ್ಪಿಸಿ. ಹೀಗೆ ಮಾಡುವುದರಿಂದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ, ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮುಂದುವರಿದರೆ, ಅದು ಸಹ ಕೊನೆಯಾಗುವುದು.
* ನಿಮ್ಮ ಸಮಸ್ಯೆಗಳಿಗೆ ಯಾವುದೇ ಶತ್ರು ಪ್ರಮುಖ ಕಾರಣವಾಗುತ್ತಿದ್ದರೆ, ಅವನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಜನ್ಮಾಷ್ಟಮಿಯ ದಿನದಂದು "ಕ್ಲೀಂ ಕೃಷ್ಣಾಯ ವಾಸುದೇವಾಯ ಹರಿ: ಪರಮಾತ್ಮನೇ ಪ್ರಣಾತ್: ಕ್ಲೇಶಶಾಯ ಗೋವಿಂದಾಯ ನಮೋ ನಮಃ" ಎಂಬ ಮಂತ್ರ ಪಠಿಸಿ ಇದರಿಂದ ಶತ್ರು ಕಾಟ ಕಡಿಮೆಯಾಗುವುದು.
* ಶ್ರೀ ಕೃಷ್ಣನನ್ನು ಪೀತಾಂಬರಧಾರಿ ಎಂದೂ ಕರೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಪೂಜೆಯ ಪೂರ್ಣ ಫಲವನ್ನು ಪಡೆಯಲು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ ಹಳದಿ ಹಣ್ಣು, ಹಳದಿ ಹೂ, ಹಳದಿ ಸಿಹಿಯನ್ನು ಶ್ರೀ ಕೃಷ್ಣನಿಗೆ ಅರ್ಪಿಸಿ.
* ಕೃಷ್ಣ ಜನ್ಮಾಷ್ಟಮಿಯ ದಿನದಂದು 'ಓಂ ಕ್ಲೀಂ ಕೃಷ್ಣಾಯ ವಾಸುದೇವಾಯ ಹರಿ: ಪರಮಾತ್ಮನೇ ಪ್ರಣತ್: ಕ್ಲೇಷ್ಣಾಶಾಯ ಗೋವಿಂದಾಯ ನಮೋ ನಮಃ: ಕ್ಲೀನ ಕೃಷ್ಣಾಯ ಗೋವಿಂದಾಯ ಗೋಪಿಜನವಲ್ಲಭಾಯ ಸ್ವಾಹಾ' ಎಂಬ ಮಂತ್ರವನ್ನು ಜಪಿಸಿದರೆ ವೈವಾಹಿಕ ಸಂಬಂಧ ಚೆನ್ನಾಗಿರಲಿದೆ.
* ಜನ್ಮಾಷ್ಟಮಿ ದಿನದಿಂದ 27 ದಿನದವರೆಗೆ ಪ್ರತಿದಿನ ಶ್ರೀಕೃಷ್ಣ ನ ದೇವಾಲಯಕ್ಕೆ ತೆಂಗಿನಕಾಯಿಯನ್ನು ಅರ್ಪಿಸಿ.
* ಸಂತಾನಭಾಗ್ಯಕ್ಕಾಗಿ ನೀವು ಸಂತಾನ ಗೋಪಾಲ ಸ್ತೋತ್ರ ಪಠಿಸುವುದು ಒಳ್ಳೆಯದು.
* ಶ್ರೀಕೃಷ್ಣನ ಕೃಪೆಯಿಂದ ಶನಿದೋಷಕ್ಕೆ ಕೂಡ ಪರಿಹಾರ ಸಿಗುವುದು. ಶನಿಯ ಸಂಖ್ಯೆ ಕೂಡ 8, ಆದ್ದರಿಂದ ಅಷ್ಟಮಿಯಂದು ಶ್ರೀಕೃಷ್ಣನ ಆರಾಧನೆ ಮಾಡುವುದರಿಂದ ಶನಿ ಕಾಟ ಕಡಿಮೆಯಗುವುದು.



Click it and Unblock the Notifications
