Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ಕಾರ್ತಿಕ ಸೋಮವಾರ: ಈ ದಿನ ಎಷ್ಟು ದೀಪ ಹಚ್ಚಿಡಬೇಕು?
ನವೆಂಬರ್ 20, ಕಾರ್ತಿಕ ಮೊದಲ ಸೋಮವಾರ. ಶ್ರಾವಣ ಸೋಮವಾರದಂತೆಯೇ ಕಾರ್ತಿಕ ಸೋಮವಾರದಂದು ಶಿವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಶಿವನು ಜ್ಞಾನದ ಪ್ರತೀಕ, ಓಂಕಾರದ ಸ್ವರೂಪಿ, ಭಕ್ತರಿಗೆ ಬೇಡಿದ್ದನ್ನು ನೀಡುವ ಕರುಣಾಮಯಿ. ಈ ದಿನ ಶಿವನ ಆರಾಧನೆ ಮಾಡಿದರೆ ಶಿವನ ವಿಶೇಷ ಕೃಪೆಗೆ ಪಾತ್ರರಾಗಬಹುದು.
ಕಾರ್ತಿಕ ಸೋಮವಾರದ ಮಹತ್ವ'
ಕಾರ್ತಿಕ ಸೋಮವಾರದಂದುನ ಶಿವನ ಆರಾಧನೆ ಮಾಡಿದರೆ ಹೆಚ್ಚಿನ ಫಲ ದೊರೆಯುವುದು ಎಂದು ಹೇಳಲಾಗುವುದು. ಈ ದಿನ ಉಪವಾಸವಿದ್ದು ಶಿವನ ಆರಾಧನೆ ಮಾಡಲಾಗುವುದು.

ಕಾರ್ತಿಕ ಸೋಮವಾರದಂದು ಉಪವಾಸ
* ಈ ದಿನ ಒಂದು ಹಣಿ ನೀರು ಕೂಡ ಸೇವಿಸದೆ ಉಪವಾಸ ಮಾಡಿದರೆ ಒಳ್ಳೆಯದು, ಆದರೆ ಅದು ಸಾಧ್ಯವಿಲ್ಲ ಎನ್ನುವವರು ಹಣ್ಣುಗಳನ್ನು ಸೇವಿಸಬಹುದು.
* ಈ ದಿನ ಮಜ್ಜಿಗೆ, ಟೀ, ಕಾಫಿ ಏನೂ ಸೇವಿಸಬಾರದು.
* ಸಂಜೆ ಸ್ನಾನ ಮಾಡಿ ಶಿವನಿಗೆ ಪೂಜೆ ಸಲ್ಲಿಸಿ ನಂತರ ನಕ್ಷತ್ರಗಳನ್ನು ನೋಡಿದ ಬಳಿಕ ಆಹಾರವನ್ನು ಸೇವಿಸಬೇಕು.
ಕಾರ್ತಿಕ ಸೋಮವಾರದಂದು ಎಷ್ಟು ದೀಪ ಹಚ್ಚಬೇಕು?
ಈ ದಿನ ಎರಡು ಅಥವಾ 27 ದೀಪಗಳನ್ನು ತುಳಸಿ ಕಟ್ಟೆ ಹಾಗೂ ಮನೆ ಮುಂದೆ ಹಚ್ಚಿಡಿ.
ಕಾರ್ತಿಕ ಸೋಮವಾರದಲ್ಲಿ ಈ ಬಗೆಯ ಉಪವಾಸ ಮಾಡಲಾಗುವುದು
ಸೋಮವಾರದ ಉಪವಾಸ: ಕಾರ್ತಿಕ ಮಾಸದ ಸೋಮವಾರದಂದು ಮಾಡುವ ಉಪವಾಸ
ಸೋಮವಾರ ಪ್ರದೋಷ ಉಪವಾಸ: ಸೋಮವಾರದಂದು ಪ್ರದೋಷ ಬಂದರೆ ಕಾರ್ತಿಕ ಸೋಮವಾರ ಪ್ರದೋಷ ಉಪವಾಸ ಎಂದು ಮಾಡಲಾಗುವುದು
16 ಸೋಮವಾರದ ಉಪವಾಸ: ಕಾರ್ತಿಕ ಮಾಸ ಒಂದು ತಿಂಗಳು ಆದರೆ ಕೆಲವರು ಕಾರ್ತಿಕ ಸೋಮವಾರದಿಂದ 16 ಸೋಮವಾರ ಶಿವನ ಕೃಪೆಗಾಗಿ ಉಪವಾಸ ಮಾಡುತ್ತಾರೆ.
ಕಾರ್ತಿಕ ಸೋಮವಾರ ಆಚರಣೆ ಮಾಡುವುದರಿಂದ ದೊರೆಯುವ ಪ್ರಯೋಜನಗಳು
* ಕಾರ್ತಿಕ ಸೋಮವಾರ ಆಚರಣೆ ಮಾಡುವುದರಿಂದ ಕಷ್ಟಗಳು ದೂರಾಗುವುದು. ಮನೆಯಲ್ಲಿ ಏನಾದರೂ ಕೌಟುಂಬಿಕ ಸಮಸ್ಯೆಯಿದ್ದರೆ, ಹಣಕಾಸಿನ ತೊಂದರೆ ಇದ್ದರೆ ಅದೆಲ್ಲವೂ ದೂರಾಗುವುದು.
* ಮದುವೆ ವಿಳಂಬವಾಗಿದ್ದರೆ: ಮದುವೆಗೆ ಕೆಲವು ಕಾರಣಗಳಿಂದ ಅಡೆತಡೆಗಳು ಉಂಟಾಗುತ್ತಿದ್ದರೆ ಕಾರ್ತಿಕ ಸೋಮವಾರದಂದು ಉಪವಾಸ ಮಾಡಿದರೆ ಅಂಥ ಅಡೆತಡೆಗಳು ದೂರಾಗುವುದು. ಹುಡುಗಿಯರು ತಮಗೆ ಒಳ್ಳೆಯ ಗುಣದ ಹುಡುಗ ಸಿಗಲಿ ಎಂದು ಈ ದಿನ ಉಪವಾಸವಿದ್ದು ಶಿವನ ಆರಾಧನೆ ಮಾಡಲಾಗುವುದು.
* ಕಾರ್ತಿಕ ಸೋಮವಾರದಂದು ಪೂಜೆ ಮಾಡುವುದರಿಂದ ಕೋಟಿ ಸೋಮವಾರದ ಪುಣ್ಯ ಸುಗುವುದು ಎಂದು ಹೇಳಲಾಗುವುದು.
ಪ್ರದೋಷಕಾಲದಲ್ಲಿ ಶಿವ ಆರಾಧನೆ
* ಚಂದ್ರೋದಯ ನಂತರ ಶಿವನ ದೇವಾಲಯದಲ್ಲಿ ದೀಪಗಳನ್ನು ಹಚ್ಚಬೇಕು
* ಶಿವ ಪಂಚಾಕ್ಷರಿ ಮಂತ್ರ ಪಠಿಸಬೇಕು
* ಉಪವಾಸ ಮಾಡದೆ ಇರುವವರು ಸಾತ್ವಿಕ ಆಹಾರವನ್ನಷ್ಟೇ ಸೇವಿಸಿ.
ತಪಸ್ಸು, ಸಾಧನೆಗೆ ಮೀಸಲಾದ
ಕಾರ್ತಿಕ ಮಾಸವನ್ನು ತಪಸ್ಸು ಸಾಧನೆಗೆ ಮೀಸಲಾದ ತಿಂಗಳು ಎಂದು ಪರಿಗಣಿಸಲಾಗಿದೆ. ಈ ತಿಂಗಳಿನಲ್ಲಿ ನದಿ ಸ್ನಾನ ಮಾಡಿದರೆ ಪುಣ್ಯ ಸಿಗುವುದು, ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುವುದು.
ಪಂಚಾಕ್ಷರಿ ಮಂತ್ರ
ಓಂ ನಮಃ ಶಿವಾಯಃ
ಶಿವ ನಾಮ ಮಂತ್ರ
ಶ್ರೀ ಶಿವಾಯ ನಮಃ ಶ್ರೀ ಶಂಕರಾಯ ನಮಃ
ಶ್ರೀ ಮಹೇಶ್ವರಾಯ ನಮಃ
ಶ್ರೀ ರುದ್ರಾಯ ನಮಃ ಓಂ ಪಾರ್ವತೀಪತ್ಯೇ ನಮಃ
ಓಂ ನಮೋ ನೀಲಕಂಠಾಯ ನಮಃ
ಮಹಾ ಮೃತ್ಯುಂಜಯ ಮಂತ್ರ
ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ ಉರ್ವಾರುಕಮಿವ ಬಂಧನಾನ್ ಮೃತ್ಯೋರ್ ಮುಕ್ಷೀಯ ಮಾಮೃತಾತ್
ಶಿವ ಗಾಯತ್ರಿ ಮಂತ್ರ
ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಯೇ ಧೀಮಹಿ ತನ್ನಃ ಶಿವಃ ಪ್ರಚೋದಯಾತ್ ।
ಶಿವ ಮಂತ್ರ
ಶಿವಾಯ ವಿಷ್ಣು ರೂಪಾಯ
ಶಿವರೂಪಾಯ ವಿಷ್ಣವೆ
ಶಿವಸ್ಯ ಹೃದಯಂ ವಿಷ್ಣು
ವಿಷ್ಣೋಶ್ಚ ಹೃದಯಗುಂ ಶಿವಃ
ಯಥಾ ಶಿವಮಯೋ ವಿಷ್ಣುಃ
ಏವಂ ವಿಷ್ಣು ಮಯಃ ಶಿವಃ



Click it and Unblock the Notifications