Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಕಾರ್ತಿಕ ಸೋಮವಾರ: ಈ ದಿನ ಎಷ್ಟು ದೀಪ ಹಚ್ಚಿಡಬೇಕು?
ನವೆಂಬರ್ 20, ಕಾರ್ತಿಕ ಮೊದಲ ಸೋಮವಾರ. ಶ್ರಾವಣ ಸೋಮವಾರದಂತೆಯೇ ಕಾರ್ತಿಕ ಸೋಮವಾರದಂದು ಶಿವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಶಿವನು ಜ್ಞಾನದ ಪ್ರತೀಕ, ಓಂಕಾರದ ಸ್ವರೂಪಿ, ಭಕ್ತರಿಗೆ ಬೇಡಿದ್ದನ್ನು ನೀಡುವ ಕರುಣಾಮಯಿ. ಈ ದಿನ ಶಿವನ ಆರಾಧನೆ ಮಾಡಿದರೆ ಶಿವನ ವಿಶೇಷ ಕೃಪೆಗೆ ಪಾತ್ರರಾಗಬಹುದು.
ಕಾರ್ತಿಕ ಸೋಮವಾರದ ಮಹತ್ವ'
ಕಾರ್ತಿಕ ಸೋಮವಾರದಂದುನ ಶಿವನ ಆರಾಧನೆ ಮಾಡಿದರೆ ಹೆಚ್ಚಿನ ಫಲ ದೊರೆಯುವುದು ಎಂದು ಹೇಳಲಾಗುವುದು. ಈ ದಿನ ಉಪವಾಸವಿದ್ದು ಶಿವನ ಆರಾಧನೆ ಮಾಡಲಾಗುವುದು.

ಕಾರ್ತಿಕ ಸೋಮವಾರದಂದು ಉಪವಾಸ
* ಈ ದಿನ ಒಂದು ಹಣಿ ನೀರು ಕೂಡ ಸೇವಿಸದೆ ಉಪವಾಸ ಮಾಡಿದರೆ ಒಳ್ಳೆಯದು, ಆದರೆ ಅದು ಸಾಧ್ಯವಿಲ್ಲ ಎನ್ನುವವರು ಹಣ್ಣುಗಳನ್ನು ಸೇವಿಸಬಹುದು.
* ಈ ದಿನ ಮಜ್ಜಿಗೆ, ಟೀ, ಕಾಫಿ ಏನೂ ಸೇವಿಸಬಾರದು.
* ಸಂಜೆ ಸ್ನಾನ ಮಾಡಿ ಶಿವನಿಗೆ ಪೂಜೆ ಸಲ್ಲಿಸಿ ನಂತರ ನಕ್ಷತ್ರಗಳನ್ನು ನೋಡಿದ ಬಳಿಕ ಆಹಾರವನ್ನು ಸೇವಿಸಬೇಕು.
ಕಾರ್ತಿಕ ಸೋಮವಾರದಂದು ಎಷ್ಟು ದೀಪ ಹಚ್ಚಬೇಕು?
ಈ ದಿನ ಎರಡು ಅಥವಾ 27 ದೀಪಗಳನ್ನು ತುಳಸಿ ಕಟ್ಟೆ ಹಾಗೂ ಮನೆ ಮುಂದೆ ಹಚ್ಚಿಡಿ.
ಕಾರ್ತಿಕ ಸೋಮವಾರದಲ್ಲಿ ಈ ಬಗೆಯ ಉಪವಾಸ ಮಾಡಲಾಗುವುದು
ಸೋಮವಾರದ ಉಪವಾಸ: ಕಾರ್ತಿಕ ಮಾಸದ ಸೋಮವಾರದಂದು ಮಾಡುವ ಉಪವಾಸ
ಸೋಮವಾರ ಪ್ರದೋಷ ಉಪವಾಸ: ಸೋಮವಾರದಂದು ಪ್ರದೋಷ ಬಂದರೆ ಕಾರ್ತಿಕ ಸೋಮವಾರ ಪ್ರದೋಷ ಉಪವಾಸ ಎಂದು ಮಾಡಲಾಗುವುದು
16 ಸೋಮವಾರದ ಉಪವಾಸ: ಕಾರ್ತಿಕ ಮಾಸ ಒಂದು ತಿಂಗಳು ಆದರೆ ಕೆಲವರು ಕಾರ್ತಿಕ ಸೋಮವಾರದಿಂದ 16 ಸೋಮವಾರ ಶಿವನ ಕೃಪೆಗಾಗಿ ಉಪವಾಸ ಮಾಡುತ್ತಾರೆ.
ಕಾರ್ತಿಕ ಸೋಮವಾರ ಆಚರಣೆ ಮಾಡುವುದರಿಂದ ದೊರೆಯುವ ಪ್ರಯೋಜನಗಳು
* ಕಾರ್ತಿಕ ಸೋಮವಾರ ಆಚರಣೆ ಮಾಡುವುದರಿಂದ ಕಷ್ಟಗಳು ದೂರಾಗುವುದು. ಮನೆಯಲ್ಲಿ ಏನಾದರೂ ಕೌಟುಂಬಿಕ ಸಮಸ್ಯೆಯಿದ್ದರೆ, ಹಣಕಾಸಿನ ತೊಂದರೆ ಇದ್ದರೆ ಅದೆಲ್ಲವೂ ದೂರಾಗುವುದು.
* ಮದುವೆ ವಿಳಂಬವಾಗಿದ್ದರೆ: ಮದುವೆಗೆ ಕೆಲವು ಕಾರಣಗಳಿಂದ ಅಡೆತಡೆಗಳು ಉಂಟಾಗುತ್ತಿದ್ದರೆ ಕಾರ್ತಿಕ ಸೋಮವಾರದಂದು ಉಪವಾಸ ಮಾಡಿದರೆ ಅಂಥ ಅಡೆತಡೆಗಳು ದೂರಾಗುವುದು. ಹುಡುಗಿಯರು ತಮಗೆ ಒಳ್ಳೆಯ ಗುಣದ ಹುಡುಗ ಸಿಗಲಿ ಎಂದು ಈ ದಿನ ಉಪವಾಸವಿದ್ದು ಶಿವನ ಆರಾಧನೆ ಮಾಡಲಾಗುವುದು.
* ಕಾರ್ತಿಕ ಸೋಮವಾರದಂದು ಪೂಜೆ ಮಾಡುವುದರಿಂದ ಕೋಟಿ ಸೋಮವಾರದ ಪುಣ್ಯ ಸುಗುವುದು ಎಂದು ಹೇಳಲಾಗುವುದು.
ಪ್ರದೋಷಕಾಲದಲ್ಲಿ ಶಿವ ಆರಾಧನೆ
* ಚಂದ್ರೋದಯ ನಂತರ ಶಿವನ ದೇವಾಲಯದಲ್ಲಿ ದೀಪಗಳನ್ನು ಹಚ್ಚಬೇಕು
* ಶಿವ ಪಂಚಾಕ್ಷರಿ ಮಂತ್ರ ಪಠಿಸಬೇಕು
* ಉಪವಾಸ ಮಾಡದೆ ಇರುವವರು ಸಾತ್ವಿಕ ಆಹಾರವನ್ನಷ್ಟೇ ಸೇವಿಸಿ.
ತಪಸ್ಸು, ಸಾಧನೆಗೆ ಮೀಸಲಾದ
ಕಾರ್ತಿಕ ಮಾಸವನ್ನು ತಪಸ್ಸು ಸಾಧನೆಗೆ ಮೀಸಲಾದ ತಿಂಗಳು ಎಂದು ಪರಿಗಣಿಸಲಾಗಿದೆ. ಈ ತಿಂಗಳಿನಲ್ಲಿ ನದಿ ಸ್ನಾನ ಮಾಡಿದರೆ ಪುಣ್ಯ ಸಿಗುವುದು, ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುವುದು.
ಪಂಚಾಕ್ಷರಿ ಮಂತ್ರ
ಓಂ ನಮಃ ಶಿವಾಯಃ
ಶಿವ ನಾಮ ಮಂತ್ರ
ಶ್ರೀ ಶಿವಾಯ ನಮಃ ಶ್ರೀ ಶಂಕರಾಯ ನಮಃ
ಶ್ರೀ ಮಹೇಶ್ವರಾಯ ನಮಃ
ಶ್ರೀ ರುದ್ರಾಯ ನಮಃ ಓಂ ಪಾರ್ವತೀಪತ್ಯೇ ನಮಃ
ಓಂ ನಮೋ ನೀಲಕಂಠಾಯ ನಮಃ
ಮಹಾ ಮೃತ್ಯುಂಜಯ ಮಂತ್ರ
ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ ಉರ್ವಾರುಕಮಿವ ಬಂಧನಾನ್ ಮೃತ್ಯೋರ್ ಮುಕ್ಷೀಯ ಮಾಮೃತಾತ್
ಶಿವ ಗಾಯತ್ರಿ ಮಂತ್ರ
ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಯೇ ಧೀಮಹಿ ತನ್ನಃ ಶಿವಃ ಪ್ರಚೋದಯಾತ್ ।
ಶಿವ ಮಂತ್ರ
ಶಿವಾಯ ವಿಷ್ಣು ರೂಪಾಯ
ಶಿವರೂಪಾಯ ವಿಷ್ಣವೆ
ಶಿವಸ್ಯ ಹೃದಯಂ ವಿಷ್ಣು
ವಿಷ್ಣೋಶ್ಚ ಹೃದಯಗುಂ ಶಿವಃ
ಯಥಾ ಶಿವಮಯೋ ವಿಷ್ಣುಃ
ಏವಂ ವಿಷ್ಣು ಮಯಃ ಶಿವಃ



Click it and Unblock the Notifications
