Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ದೆಹಲಿ ಮೆಟ್ರೋದಲ್ಲಿ ಕಾವಾಡಿಯ ಯಾತ್ರಿಕರ ನೃತ್ಯ ವೈರಲ್: ಈ ಯಾತ್ರೆಯ ಧಾರ್ಮಿಕ ಮಹತ್ವವೇನು?
ದೆಹಲಿ ಮೆಟ್ರೋ ವೀಡಿಯೋ ಅನೇಕ ಕಾರಣಗಳಿಂದ ಆಗಾಗ ವೈರಲ್ ಆಗುತ್ತಿರುತ್ತದೆ, ಇದೀಗ ಕಾವಾಡಿಯಾ ಯಾತ್ರಿಕರು ಶಿವನ ಕುರಿತ ಭಜನೆಗಳನ್ನು ಹಾಡುತ್ತಾ ನೃತ್ಯ ಮಾಡುತ್ತಿರುವ ವೀಡಿಯೋ ತುಂಬಾನೇ ವೈರಲ್ ಆಗಿದೆ. ಈ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಸದ್ದು ಮಾಡುತ್ತಿದೆ.
'Now it's Kanwariya's dance in Delhi Metro 😃' ಎಂದು ಕ್ಯಾಪ್ಷನ್ ನೀಡಿ ಪಂಕಜ್ ಉಪಾಧ್ಯಾಯ ಎಂಬುವರು ಈ ವೀಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದು ಹಳದಿ ವಸ್ತ್ರ, ಕಪ್ಪು ಸಾಲು ಧರಿಸಿ ಬರಿಗಾಲಿನಲ್ಲಿ ನೃತ್ಯ ಮಾಡುತ್ತಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಸದ್ದು ಮಾಡುತ್ತಿದೆ.

ಕಾನ್ವಾರ್ ಯಾತ್ರೆ
ವಾರ್ಷಿಕ ಕಾವಾಡಿಯಾ / ಕಾನ್ವಾರ್ ಯಾತ್ರೆ ಪ್ರಾರಂಭವಾಗಿದೆ. ಉತ್ತರ ಭಾರತದ ಕಡೆ ಶ್ರಾವಣ ಪ್ರಾರಂಭವಾಗಿದೆ, ನಮ್ಮಲ್ಲಿ ಇನ್ನೂ ಆಷಾಢ ಮುಗಿದಿಲ್ಲ. ಈ ಶ್ರಾವಣ ಮಾಸದಲ್ಲಿ ಕಾವಾಡಿಯ ಯಾತ್ರೆ ಅಂತ ಮಾಡಲಾಗುವುದು. ಪಂಜಾಬ್, ಹರಿಯಾಣ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ದೆಹಲಿಗೆ ಬರುತ್ತಾರೆ. ಈ ಸಮಯದಲ್ಲಿ ದೆಹಲಿಯಲ್ಲಿ ಎಲ್ಲಿ ನೋಡಿದರೂ ಕೇಸರಿ ಬಟ್ಟೆ ಧರಿಸಿದ ಕಾವಾಡಿಯಾ ಯಾತ್ರಿಕರೇ ಕಾಣ ಸಿಗುತ್ತಾರೆ.
ಕಾವಾಡಿಯಾ ಯಾತ್ರೆಯ ಧಾರ್ಮಿಕ ಮಹತ್ವ
ಕಾವಾಡಿಯ ಯಾತ್ರೆಯಲ್ಲಿ ಭಕ್ತರು ಹರಿಧ್ವಾರ, ಗಂಗೋತ್ರಿ, ರಿಷಿಕೇಷದಿಮದ ಗಂಗಾ ನದಿಯ ನೀರಿನ್ನು ಒಂದು ಮಡಿಕೆಯಲ್ಲಿ ತುಂಬುತ್ತಾರೆ. ಆ ಮಡಿಕೆಯನ್ನು ಮುಚ್ಚಳ ಹಾಕಿ ಭದ್ರಪಡಿಸಿರುತ್ತಾರೆ, ಆ ಮಡಿಕೆ ಅಲಂಕಾರ ಮಾಡಿರುತ್ತಾರೆ, ಅದನ್ನು ತೋಳಿನಲ್ಲಿ ಎತ್ತಿಕೊಂಡು ಸಾಗುತ್ತಾರೆ. ಹರಿಧ್ವಾರದಿಂದ ಅವರ ಪ್ರಯಾಣ ಪ್ರಾರಂಭವಾಗಿ ಮನೆಗೆ ತಲುಪುವವರೆಗೆ ಆ ಮಡಿಕೆಯನ್ನು ಕೆಳಗೆ ಇಡುವಂತೆ ಇಲ್ಲ, ಮಡಿಕೆ ಎತ್ತಿಕೊಂಡಿರುವವರಿಗೆ ಸುಸ್ತಾದಾಗ ಆ ಗುಂಪಿನಲ್ಲಿರುವ ಇತರರು ಹೊತ್ತುಕೊಳ್ಳುತ್ತಾರೆ, ಹೀಗೆ ಆ ಪವಿತ್ರ ನೀರನ್ನು ತಂದು ಊರಿನಲ್ಲಿರುವ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುವುದು. ಈ ಸಮಯದಲ್ಲಿ ಭಕ್ತರು ಹರ ಹರ ಮಹಾದೇವ ಎಂದು ದೇವರ ಸ್ಮರಣೆ ಮಾಡುತ್ತಾರೆ.
ಪೌರಾಣಿಕ ಹಿನ್ನಲೆ
ದಾನವರು ಹಾಗೂ ದೇವತೆಗಳ ನಡುವೆ ಅಮೃತಕ್ಕಾಗಿ ಸಮುದ್ರಮಂಥನ ಮಾಡುವಾಗ ಮೊದಲು ಹಾಲಾಹಲ ಅಂದರೆ ವಿಷ ಉಕ್ಕುತ್ತೆ, ಅದನ್ನು ಶಿವ ಕುಡಿದು ಮೂರು ಲೋಕದ ರಕ್ಷಣೆ ಮಾಡುತ್ತಾನೆ. ಆದರೆ ವಿಷ ಕುಡಿದಾಗ ಶಿವನಿಗೆ ಗಂಟಲಿನಲ್ಲಿ ತುಂಬಾ ಉರಿ ಉಂಟಾಗುತ್ತದೆ. ಆವಾಗ ಗಂಗೆಯ ನೀರನ್ನು ಶಿವನ ಮೇಲೆ ಸುರಿದಾಗ ಶಿವನಿಗೆ ಉರಿ ಕಡಿಮೆಯಾಯಿತು, ಅಲ್ಲಿಂದ ಶಿವಲಿಂಗಕ್ಕೆ ಗಂಗಾ ನೀರನ್ನು ಸುರಿಯುವ ಆಚರಣೆ ಜಾರಿಗೆ ಬಂತು ಎಂದು ಹೇಳಲಾಗುತ್ತಿದೆ.



Click it and Unblock the Notifications