Latest Updates
-
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ -
ದೆಹಲಿ ಬಿಸಿಲು: ಸುಡುವ ತಾಪಮಾನದಲ್ಲೂ ಸ್ಟೈಲಿಶ್ ಆಗಿ ಕಾಣಲು ವೈರಲ್ ಆಗ್ತಿವೆ ಈ ಸಿಂಪಲ್ ಹ್ಯಾಕ್ಸ್! -
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ!
ದೆಹಲಿ ಮೆಟ್ರೋದಲ್ಲಿ ಕಾವಾಡಿಯ ಯಾತ್ರಿಕರ ನೃತ್ಯ ವೈರಲ್: ಈ ಯಾತ್ರೆಯ ಧಾರ್ಮಿಕ ಮಹತ್ವವೇನು?
ದೆಹಲಿ ಮೆಟ್ರೋ ವೀಡಿಯೋ ಅನೇಕ ಕಾರಣಗಳಿಂದ ಆಗಾಗ ವೈರಲ್ ಆಗುತ್ತಿರುತ್ತದೆ, ಇದೀಗ ಕಾವಾಡಿಯಾ ಯಾತ್ರಿಕರು ಶಿವನ ಕುರಿತ ಭಜನೆಗಳನ್ನು ಹಾಡುತ್ತಾ ನೃತ್ಯ ಮಾಡುತ್ತಿರುವ ವೀಡಿಯೋ ತುಂಬಾನೇ ವೈರಲ್ ಆಗಿದೆ. ಈ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಸದ್ದು ಮಾಡುತ್ತಿದೆ.
'Now it's Kanwariya's dance in Delhi Metro 😃' ಎಂದು ಕ್ಯಾಪ್ಷನ್ ನೀಡಿ ಪಂಕಜ್ ಉಪಾಧ್ಯಾಯ ಎಂಬುವರು ಈ ವೀಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದು ಹಳದಿ ವಸ್ತ್ರ, ಕಪ್ಪು ಸಾಲು ಧರಿಸಿ ಬರಿಗಾಲಿನಲ್ಲಿ ನೃತ್ಯ ಮಾಡುತ್ತಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಸದ್ದು ಮಾಡುತ್ತಿದೆ.

ಕಾನ್ವಾರ್ ಯಾತ್ರೆ
ವಾರ್ಷಿಕ ಕಾವಾಡಿಯಾ / ಕಾನ್ವಾರ್ ಯಾತ್ರೆ ಪ್ರಾರಂಭವಾಗಿದೆ. ಉತ್ತರ ಭಾರತದ ಕಡೆ ಶ್ರಾವಣ ಪ್ರಾರಂಭವಾಗಿದೆ, ನಮ್ಮಲ್ಲಿ ಇನ್ನೂ ಆಷಾಢ ಮುಗಿದಿಲ್ಲ. ಈ ಶ್ರಾವಣ ಮಾಸದಲ್ಲಿ ಕಾವಾಡಿಯ ಯಾತ್ರೆ ಅಂತ ಮಾಡಲಾಗುವುದು. ಪಂಜಾಬ್, ಹರಿಯಾಣ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ದೆಹಲಿಗೆ ಬರುತ್ತಾರೆ. ಈ ಸಮಯದಲ್ಲಿ ದೆಹಲಿಯಲ್ಲಿ ಎಲ್ಲಿ ನೋಡಿದರೂ ಕೇಸರಿ ಬಟ್ಟೆ ಧರಿಸಿದ ಕಾವಾಡಿಯಾ ಯಾತ್ರಿಕರೇ ಕಾಣ ಸಿಗುತ್ತಾರೆ.
ಕಾವಾಡಿಯಾ ಯಾತ್ರೆಯ ಧಾರ್ಮಿಕ ಮಹತ್ವ
ಕಾವಾಡಿಯ ಯಾತ್ರೆಯಲ್ಲಿ ಭಕ್ತರು ಹರಿಧ್ವಾರ, ಗಂಗೋತ್ರಿ, ರಿಷಿಕೇಷದಿಮದ ಗಂಗಾ ನದಿಯ ನೀರಿನ್ನು ಒಂದು ಮಡಿಕೆಯಲ್ಲಿ ತುಂಬುತ್ತಾರೆ. ಆ ಮಡಿಕೆಯನ್ನು ಮುಚ್ಚಳ ಹಾಕಿ ಭದ್ರಪಡಿಸಿರುತ್ತಾರೆ, ಆ ಮಡಿಕೆ ಅಲಂಕಾರ ಮಾಡಿರುತ್ತಾರೆ, ಅದನ್ನು ತೋಳಿನಲ್ಲಿ ಎತ್ತಿಕೊಂಡು ಸಾಗುತ್ತಾರೆ. ಹರಿಧ್ವಾರದಿಂದ ಅವರ ಪ್ರಯಾಣ ಪ್ರಾರಂಭವಾಗಿ ಮನೆಗೆ ತಲುಪುವವರೆಗೆ ಆ ಮಡಿಕೆಯನ್ನು ಕೆಳಗೆ ಇಡುವಂತೆ ಇಲ್ಲ, ಮಡಿಕೆ ಎತ್ತಿಕೊಂಡಿರುವವರಿಗೆ ಸುಸ್ತಾದಾಗ ಆ ಗುಂಪಿನಲ್ಲಿರುವ ಇತರರು ಹೊತ್ತುಕೊಳ್ಳುತ್ತಾರೆ, ಹೀಗೆ ಆ ಪವಿತ್ರ ನೀರನ್ನು ತಂದು ಊರಿನಲ್ಲಿರುವ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುವುದು. ಈ ಸಮಯದಲ್ಲಿ ಭಕ್ತರು ಹರ ಹರ ಮಹಾದೇವ ಎಂದು ದೇವರ ಸ್ಮರಣೆ ಮಾಡುತ್ತಾರೆ.
ಪೌರಾಣಿಕ ಹಿನ್ನಲೆ
ದಾನವರು ಹಾಗೂ ದೇವತೆಗಳ ನಡುವೆ ಅಮೃತಕ್ಕಾಗಿ ಸಮುದ್ರಮಂಥನ ಮಾಡುವಾಗ ಮೊದಲು ಹಾಲಾಹಲ ಅಂದರೆ ವಿಷ ಉಕ್ಕುತ್ತೆ, ಅದನ್ನು ಶಿವ ಕುಡಿದು ಮೂರು ಲೋಕದ ರಕ್ಷಣೆ ಮಾಡುತ್ತಾನೆ. ಆದರೆ ವಿಷ ಕುಡಿದಾಗ ಶಿವನಿಗೆ ಗಂಟಲಿನಲ್ಲಿ ತುಂಬಾ ಉರಿ ಉಂಟಾಗುತ್ತದೆ. ಆವಾಗ ಗಂಗೆಯ ನೀರನ್ನು ಶಿವನ ಮೇಲೆ ಸುರಿದಾಗ ಶಿವನಿಗೆ ಉರಿ ಕಡಿಮೆಯಾಯಿತು, ಅಲ್ಲಿಂದ ಶಿವಲಿಂಗಕ್ಕೆ ಗಂಗಾ ನೀರನ್ನು ಸುರಿಯುವ ಆಚರಣೆ ಜಾರಿಗೆ ಬಂತು ಎಂದು ಹೇಳಲಾಗುತ್ತಿದೆ.



Click it and Unblock the Notifications