Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ದೆಹಲಿ ಮೆಟ್ರೋದಲ್ಲಿ ಕಾವಾಡಿಯ ಯಾತ್ರಿಕರ ನೃತ್ಯ ವೈರಲ್: ಈ ಯಾತ್ರೆಯ ಧಾರ್ಮಿಕ ಮಹತ್ವವೇನು?
ದೆಹಲಿ ಮೆಟ್ರೋ ವೀಡಿಯೋ ಅನೇಕ ಕಾರಣಗಳಿಂದ ಆಗಾಗ ವೈರಲ್ ಆಗುತ್ತಿರುತ್ತದೆ, ಇದೀಗ ಕಾವಾಡಿಯಾ ಯಾತ್ರಿಕರು ಶಿವನ ಕುರಿತ ಭಜನೆಗಳನ್ನು ಹಾಡುತ್ತಾ ನೃತ್ಯ ಮಾಡುತ್ತಿರುವ ವೀಡಿಯೋ ತುಂಬಾನೇ ವೈರಲ್ ಆಗಿದೆ. ಈ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಸದ್ದು ಮಾಡುತ್ತಿದೆ.
'Now it's Kanwariya's dance in Delhi Metro 😃' ಎಂದು ಕ್ಯಾಪ್ಷನ್ ನೀಡಿ ಪಂಕಜ್ ಉಪಾಧ್ಯಾಯ ಎಂಬುವರು ಈ ವೀಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದು ಹಳದಿ ವಸ್ತ್ರ, ಕಪ್ಪು ಸಾಲು ಧರಿಸಿ ಬರಿಗಾಲಿನಲ್ಲಿ ನೃತ್ಯ ಮಾಡುತ್ತಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಸದ್ದು ಮಾಡುತ್ತಿದೆ.

ಕಾನ್ವಾರ್ ಯಾತ್ರೆ
ವಾರ್ಷಿಕ ಕಾವಾಡಿಯಾ / ಕಾನ್ವಾರ್ ಯಾತ್ರೆ ಪ್ರಾರಂಭವಾಗಿದೆ. ಉತ್ತರ ಭಾರತದ ಕಡೆ ಶ್ರಾವಣ ಪ್ರಾರಂಭವಾಗಿದೆ, ನಮ್ಮಲ್ಲಿ ಇನ್ನೂ ಆಷಾಢ ಮುಗಿದಿಲ್ಲ. ಈ ಶ್ರಾವಣ ಮಾಸದಲ್ಲಿ ಕಾವಾಡಿಯ ಯಾತ್ರೆ ಅಂತ ಮಾಡಲಾಗುವುದು. ಪಂಜಾಬ್, ಹರಿಯಾಣ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ದೆಹಲಿಗೆ ಬರುತ್ತಾರೆ. ಈ ಸಮಯದಲ್ಲಿ ದೆಹಲಿಯಲ್ಲಿ ಎಲ್ಲಿ ನೋಡಿದರೂ ಕೇಸರಿ ಬಟ್ಟೆ ಧರಿಸಿದ ಕಾವಾಡಿಯಾ ಯಾತ್ರಿಕರೇ ಕಾಣ ಸಿಗುತ್ತಾರೆ.
ಕಾವಾಡಿಯಾ ಯಾತ್ರೆಯ ಧಾರ್ಮಿಕ ಮಹತ್ವ
ಕಾವಾಡಿಯ ಯಾತ್ರೆಯಲ್ಲಿ ಭಕ್ತರು ಹರಿಧ್ವಾರ, ಗಂಗೋತ್ರಿ, ರಿಷಿಕೇಷದಿಮದ ಗಂಗಾ ನದಿಯ ನೀರಿನ್ನು ಒಂದು ಮಡಿಕೆಯಲ್ಲಿ ತುಂಬುತ್ತಾರೆ. ಆ ಮಡಿಕೆಯನ್ನು ಮುಚ್ಚಳ ಹಾಕಿ ಭದ್ರಪಡಿಸಿರುತ್ತಾರೆ, ಆ ಮಡಿಕೆ ಅಲಂಕಾರ ಮಾಡಿರುತ್ತಾರೆ, ಅದನ್ನು ತೋಳಿನಲ್ಲಿ ಎತ್ತಿಕೊಂಡು ಸಾಗುತ್ತಾರೆ. ಹರಿಧ್ವಾರದಿಂದ ಅವರ ಪ್ರಯಾಣ ಪ್ರಾರಂಭವಾಗಿ ಮನೆಗೆ ತಲುಪುವವರೆಗೆ ಆ ಮಡಿಕೆಯನ್ನು ಕೆಳಗೆ ಇಡುವಂತೆ ಇಲ್ಲ, ಮಡಿಕೆ ಎತ್ತಿಕೊಂಡಿರುವವರಿಗೆ ಸುಸ್ತಾದಾಗ ಆ ಗುಂಪಿನಲ್ಲಿರುವ ಇತರರು ಹೊತ್ತುಕೊಳ್ಳುತ್ತಾರೆ, ಹೀಗೆ ಆ ಪವಿತ್ರ ನೀರನ್ನು ತಂದು ಊರಿನಲ್ಲಿರುವ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುವುದು. ಈ ಸಮಯದಲ್ಲಿ ಭಕ್ತರು ಹರ ಹರ ಮಹಾದೇವ ಎಂದು ದೇವರ ಸ್ಮರಣೆ ಮಾಡುತ್ತಾರೆ.
ಪೌರಾಣಿಕ ಹಿನ್ನಲೆ
ದಾನವರು ಹಾಗೂ ದೇವತೆಗಳ ನಡುವೆ ಅಮೃತಕ್ಕಾಗಿ ಸಮುದ್ರಮಂಥನ ಮಾಡುವಾಗ ಮೊದಲು ಹಾಲಾಹಲ ಅಂದರೆ ವಿಷ ಉಕ್ಕುತ್ತೆ, ಅದನ್ನು ಶಿವ ಕುಡಿದು ಮೂರು ಲೋಕದ ರಕ್ಷಣೆ ಮಾಡುತ್ತಾನೆ. ಆದರೆ ವಿಷ ಕುಡಿದಾಗ ಶಿವನಿಗೆ ಗಂಟಲಿನಲ್ಲಿ ತುಂಬಾ ಉರಿ ಉಂಟಾಗುತ್ತದೆ. ಆವಾಗ ಗಂಗೆಯ ನೀರನ್ನು ಶಿವನ ಮೇಲೆ ಸುರಿದಾಗ ಶಿವನಿಗೆ ಉರಿ ಕಡಿಮೆಯಾಯಿತು, ಅಲ್ಲಿಂದ ಶಿವಲಿಂಗಕ್ಕೆ ಗಂಗಾ ನೀರನ್ನು ಸುರಿಯುವ ಆಚರಣೆ ಜಾರಿಗೆ ಬಂತು ಎಂದು ಹೇಳಲಾಗುತ್ತಿದೆ.



Click it and Unblock the Notifications