Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
Kalaratri Devi Mantra In Kannada: ಕಾಳರಾತ್ರಿ ದೇವಿ ಮಂತ್ರ, ಪೂಜೆ ಏಕೆ ಮಾಡಬೇಕು?
ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದೆ. ದೇಶದ ಬಹುತೇಕ ಕಡೆಗಳಲ್ಲಿ ಶಕ್ತಿ ದೇವತೆಯ ಆರಾಧನೆ ನೋಡಬಹುದು. ಇನ್ನು ನವರಾತ್ರಿಯ 7ನೇ ದಿನದಂದು ಕಾಳರಾತ್ರಿ ದೇವಿಯ ಆರಾಧನೆ ಮಾಡುವುದು ನೋಡಬಹುದು. ದೇವಿಯ 9 ಅವತಾರಗಳ ಪೈಕಿ ಈ ಕಾಳರಾತ್ರಿ ಅವತಾರವೂ ಕೂಡ ಒಂದಾಗಿದೆ. ಕಾಳಿ ದೇವಿಯನ್ನು ಪೂಜಿಸುವ ಭಕ್ತರು ಕೆಂಪು ಹೂವು, ಕೆಂಪು ವಸ್ತ್ರ, ಬಳೆ ನೀಡುವುದು ನೋಡಬಹುದು.
ಕಾಳಿಯ ಅವತಾರದಲ್ಲಿ ದುರ್ಗೆಯು ದುಷ್ಟರ ಸಂಹಾರ ಮಾಡುವಳು ಎಂದು ಹೇಳಲಾಗಿದೆ. ಕಾಳಿ ನೋಡಲು ಭಯಾನಕ ರೂಪದಲ್ಲಿರುತ್ತಾಳೆ. ಕಾಳರಾತ್ರಿಯ ದೇಹವು ಸಂಪೂರ್ಣವಾಗಿ ಕಪ್ಪಾಗಿರುತ್ತದೆ. ಈಕೆಯ ಕೂದಲು ಸಂಪೂರ್ಣವಾಗಿ ಹರಡಿಕೊಂಡು ಮೂರು ಕಣ್ಣುಗಳು ಇರುತ್ತವೆ. ಕೊರಳಿನಲ್ಲಿ ಮುಂಡಗಳ ಜಪಮಾಲೆಯನ್ನು ಕಾಳರಾತ್ರಿ ದೇವಿ ಧರಿಸಿರುತ್ತಾಳೆ.

ಆಕೆಯ ಉಸಿರಿನಿಂದ ಬೆಂಕಿಯ ಜ್ವಾಲೆ ಹೊರಬರುತ್ತಿರುತ್ತದೆ. ಆಕೆ ದುಷ್ಟರ ನೋಡಿದರೂ ಅವರು ಸರ್ವ ನಾಶವಾಗುತ್ತಾರೆ, ಅಷ್ಟೊಂದು ಕೋಪೋದ್ರಿಕ್ತ ರೂಪ ಆಕೆಯದ್ದಾಗಿದೆ. ಕಾಳಿಯನ್ನು ಪೂಜಿಸುವುದು ದುಷ್ಟರ ಸಂಹಾರ, ಶತ್ರುನಾಶದಂತಹ ವಿಚಾರದಲ್ಲಿ ಒಳಿತು ತರಲಿದೆಯಂತೆ. ಹಾಗೆ ಆಕೆಯನ್ನು
ಶುಭಂಕರಿ, ಕಾಳಿ, ಚಂಡಿ, ಧೂಮ್ರವರ್ಣ, ಚಾಮುಂಡಿ ಎಂದು ಕೂಡ ಕರೆಯಲಾಗುತ್ತದೆ.
ಕಾಳರಾತ್ರಿ ಯಾರು?
ದೇವಿಯ ಅವತಾರದಲ್ಲೇ ಬಹಳ ಭಯ ಹುಟ್ಟಿಸುವಂತಹ ರೂಪವಿದು. ಏಕೆಂದರೆ ಆಕೆ ರಾಕ್ಷಸರ ಸಂಹಾರಕ್ಕಾಗಿ ತಾಳಿದ್ದ ಈ ರೂಪ ಹಾಗೆಯೇ ಉಳಿದಿದೆ ಎಂದು ಹೇಳಲಾಗುತ್ತದೆ. ಒಮ್ಮೆ ಶುಂಭ-ನಿಶುಂಭ ಎಂಬ ಇಬ್ಬರು ರಾಕ್ಷಸರು ದೇವರ ಲೋಕದಲ್ಲಿ ಭಯ ಹುಟ್ಟಿಸಿದ್ದರು. ಇಂದ್ರನ ಸ್ವರ್ಗಲೋಕದಲ್ಲಿ ಎಲ್ಲಾ ದೇವರನ್ನು ಸೆರೆ ಹಿಡಿದರಂತೆ.
ಈ ವೇಳೆ ಈ ರಾಕ್ಷಸರನ್ನು ಸಂಹರಿಸಲು ದೇವರೆಲ್ಲ ಸೇರಿ ಶಿವನ ಭೇಟಿಗೆ ತೆರಳಿದರು. ಶಿವನು ಇಬ್ಬರು ರಾಕ್ಷಸರ ಸಂಹಾರಕ್ಕಾಗಿ ಪಾರ್ವತಿ ಬಳಿ ಪ್ರಾರ್ಥಿಸಿದನು. ಶಿವನಿಂದ ಆಶೀರ್ವಾದ ಪಡೆದ ಪಾರ್ವತಿಯು ಇಬ್ಬರನ್ನು ಸಂಹಾರ ಮಾಡಿದಳು. ಆದ್ರೆ ಈ ಇಬ್ಬರ ರಕ್ತದಿಂದ ನೂರಾರು ರ್ತ ಬಿಜಾಸುರರು ಜನಿಸಿದರು. ಅವರೆಲ್ಲರನ್ನು ಸಂಹರಿಸಲು ಸಾಧ್ಯವಾಗದೇ ಇದ್ದಾಗ ಪಾರ್ವತಿಯು ತನ್ನ ತೇಜಸ್ಸಿನ ಶಕ್ತಿಯಿಂದ ಭಯಂಕರವಾದ ಕಾಳಿಯನ್ನು ಸೃಷ್ಟಿಸಿದಳು. ರಕ್ತಬಿಜಾಸುರರನ್ನು ಕೊಂದ ಕಾಳಿಯು ಅವರ ರಕ್ತ ನೆಲದ ಮೇಲೆ ಬಿಳದಂತೆ ಎಲ್ಲಾ ರಕ್ತವನ್ನು ಕುಡಿದಳು ಎಂದು ಹೇಳಲಾಗಿದೆ.
ಕಾಳರಾತ್ರಿ ದೇವಿಯ ಮಂತ್ರ
ಓಂ ದೇವಿ ಕಾಲರಾತ್ರೈ ನಮಃ
ಓಂ ದೇವಿ ಕಾಲರಾತ್ರೈ ನಮಃ ಏಕವೇನಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿನಿ
ವಾಮ್ ಪಾದೋಲ್ಲಸಲ್ಲೋಲತಾ ಕಂಠಕ್ಬುಷಾನಾ
ವರ್ಧನ್ ಮೂರ್ಧಮ್ ಧ್ವಜಾ ಕೃಷ್ಣ ಕಾಳರಾತ್ರಿಭಯಂಕರಿ
ಕಾಳಿ ದೇವಿಯ ಸ್ಥೋತ್ರ
ಯಾ ದೇವಿ ಸರ್ವಭುತೇಶ್ ಮಾ ಕಾಲರಾತ್ರಿ ರೂಪೇನಾ ಸಂಹಿತಾ
ನಮಸ್ತಾಸ್ಯೈ ನಮಸ್ತಾಸ್ಯೈ ನಮಸ್ತಾಸ್ಯೈ ನಮೋ ನಮಃ
ಏಕವೇನಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿನಿ
ವಾಮ್ ಪಾದೋಲ್ಲಸಲ್ಲೋಲತಾ ಕಂಠಕ್ಬುಷಾನಾ
ವರ್ಧನ್ ಮೂರ್ಧಮ್ ಧ್ವಜಾ ಕೃಷ್ಣ ಕಾಲರಾತ್ರಿಭಯಂಕರಿ
ಹಿಮ್ ಕಲಾರತ್ರಿ ಶಿಮ್ ಕರಾಳಿ ಚಾ ಕ್ಲೈಮ್ ಕಲ್ಯಾಣಿ ಕಲಾವತಿ
ಕಲಾಮತಾ ಕಾಳಿದರ್ಪದ್ನಿ ಕಾಮದಿಶಾ ಕುಪನ್ವಿತಾ
ಕಾಮಬಿಜಪಂದ ಕಮಬಿಜಸ್ವರ್ಪಿನಿ
ಕುಮತಿಘಿನಿ ಕುಲಿನಾರ್ನಾನಿಶಿ ಕುಲಾ ಕಾಮಿನಿ
ಕೃಪಮಾಯಿ ಕೃಪಾಧಾರ ಕೃಪಾಪಾರಾ ಕೃಪಾಗಾಮಾ
ಈ ಕಾಳರಾತ್ರಿ ದೇವಿಯನ್ನು ಶನಿ ಹಾಗೂ ರಾತ್ರಿಯನ್ನು ನಿಯಂತ್ರಿಸುವ ದೇವತೆ ಎಂದು ಕರೆಯಲಾಗುತ್ತದೆ. ತಾಯಿ ಪೂಜೆಯಿಂದ ದುಷ್ಟ ಶಕ್ತಿ ನಿವಾರಣೆಯಾಗಿ ಮನೆಯಲ್ಲಿ ಅಭಯ ನೆಲೆಸಲಿದೆ. ಕಾಳರಾತ್ರಿ ದೇವಿಯನ್ನು ಪ್ರತಿಷ್ಠಾಪಿಸಿ, ಹೂವು, ಹಣ್ಣು, ಕರ್ಪೂರ, ಧೂಪ, ಅಲಂಕಾರಿಕ ವಸ್ತುಗಳು, ತೆಂಗಿನಕಾಯಿ, ಎಲೆ, ಅಡಿಕೆ, ಸಿಹಿ ನೈವೇದ್ಯ ಇತ್ಯಾದಿಗಳನ್ನು ಇಟ್ಟು ಪೂಜೆ ಮಾಡಬೇಕು. ಕಾಳರಾತ್ರಿ ತಾಯಿಯನ್ನು ಏಳನೇ ದಿನದಂದು ಪೂಜಿಸುವುದರಿಂದ ಭಕ್ತರಲ್ಲಿರುವಂತಹ ಎಲ್ಲಾ ರೀತಿಯ ಭಯವು ನಿವಾರಣೆಯಾಗುವುದು. ಅವರ ಅಭಿವೃದ್ಧಿಗೆ ಇರುವಂತಹ ಎಲ್ಲಾ ಅಡೆತಡೆಗಳು ನಿವಾರಣೆಯಾಗುವುದು.



Click it and Unblock the Notifications