Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಸೆ. 4ಕ್ಕೆ ಗುರು ವಕ್ರೀಯ ಚಲನೆ: 118 ದಿನ ಈ 4 ರಾಶಿಯವರು ತುಂಬಾನೇ ಜಾಗ್ರತೆ
ಜ್ಯೋತಿಷ್ಯದ ಪ್ರಕಾರ ಗುರು ಸಂಚಾರಕ್ಕೆ ತುಂಬಾನೇ ಮಹತ್ವವಿದೆ. ಗುರು ಮೇಷ ರಾಶಿಯಲ್ಲಿದೆ. ಈ ಸೆಪ್ಟೆಂಬರ್ 4ಕ್ಕೆ ಗುರು ವಕ್ರೀಯ ಚಲನೆ ಮಾಡಲಿದೆ. ಗುರು ದುರ್ಬಲ ಸ್ಥಾನದಲ್ಲಿದ್ದಾಗ ಅದು ರಾಶಿಗಳ ಮೇಲೆ ಕೆಟ್ಟ ಪ್ರಭಾವ ಬೀರಲಿದೆ. ಗುರು ವಕ್ರೀಯ ಚಲನೆ ಮಾಡಿದಾಗ ಈ ರಾಶಿಗಳಲ್ಲಿ ದುರ್ಬಲ ಸ್ಥಾನದಲ್ಲಿ ಇರಲಿದೆ. 118 ದಿನಗಳವರೆಗೆ ಗುರು ವಕ್ರೀಯ ಚಲನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಯಾವೆಲ್ಲಾ ರಾಶಿಯವರು ಜಾಗ್ರತೆವಹಿಸಬೇಕು ನೋಡೋಣ ಬನ್ನಿ:

ಮೇಷ ರಾಶಿ
ಗುರು ಹಿಮ್ಮುಖ ಚಲನೆ ಮಾಡಲಾರಂಭಿಸಿದಾಗ ಈ ಅವಧಿಯಲ್ಲಿ ಗೊಂದಲವಿರಲಿದೆ, ನೀವು ಈ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುವುದು. ಈ ಅವಧಿಯಲ್ಲಿ ನಿಮ್ಮ ತಂದೆಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಖರ್ಚು ಹೆಚ್ಚಾಗಲಿದೆ, ಆದರೆ ಮಿತಿಯಲ್ಲಿ ಖರ್ಚು ಮಾಡಿದರೆ ಆರ್ಥಿಕ ಸಂಕಷ್ಟ ಉಂಟಾಗುವುದನ್ನು ತಡೆಗಟ್ಟಬಹುದು.
ವೃಷಭ ರಾಶಿ
ಈ ಅವಧಿಯಲ್ಲಿ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗಬಹುದು. ಲಿವರ್ಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು, ಆರೋಗ್ಯದ ಕಡೆ ಗಮನಹರಿಸಿ. ವೃತ್ತಿ ಜೀವನದಲ್ಲಿ ಸವಾಲುಗಳು ಎದುರಾಗುವುದು, ಕುಟುಂಬದ ವಿಷಯದಲ್ಲೂ ಕೆಲ ಸಮಸ್ಯೆಗಳಿರಬಹುದು.
ಕರ್ಕ ರಾಶಿ
ಈ ಅವಧಿಯಲ್ಲಿ ಕೆಲಸದಲ್ಲಿ ತುಂಬಾನೇ ಒತ್ತಡ ಇರಲಿದೆ. ಕೆಲಸದಲ್ಲಿ ನಿರ್ಲಕ್ಷ್ಯ ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚಿಸುವುದು. ನೀವು ಕೆಲಸದ ಬದಲಾವಣೆ ಬಗ್ಗೆ ಯೋಚಿಸುತ್ತಿದ್ದರೆ ಸ್ವಲ್ಪ ಕಾಯುವುದು ಒಳ್ಳೆಯದು. ತಂದೆಯೊಂದಿಗಿನ ಸಂಬಂಧದಲ್ಲಿ ಏರಳಿತಗಳಿರಬಹುದು.ಅನೇಕ ಆರೋಗ್ಯ ಸಮಸ್ಯೆ ಕೂಡ ಉಂಟಾಗುವುದು.
ಸಿಂಹ ರಾಶಿ
ಈ ಅವಧಿಯಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗುವುದು, ಇದರಿಂದ ನಿಮಗೆ ಒತ್ತಡ ಹೆಚ್ಚಾಗಲಿದೆ. ದೂರ ಪ್ರಯಾಣ ಖುಷಿ ನೀಡುವುದಕ್ಕಿಂತ ಆಯಾಸ ಹೆಚ್ಚಾಗುವುದು. ಸಂಬಂಧದಲ್ಲೂ ಏರಳಿತ ಉಂಟಾಗುವುದು. ಅನಗ್ಯತ ಚರ್ಚೆಗೆ ಹೋಗಬೇಡಿ, ನೀವು ನಿಮ್ಮ ಕೆಲಸ ಕಾರ್ಯದತ್ತ ಗಮನಹರಿಸಿ.
ಗುರು ದುರ್ಬಲ ಸ್ಥಾನದಲ್ಲಿದ್ದಾಗ ಏನಾಗುತ್ತದೆ?
* ಈ ಅವಧಿಯಲ್ಲಿ ಆಲೋಚನೆಗಳು ದುರ್ಬಲವಾಗುವುದು
* ಈ ಅವಧಿಯಲ್ಲಿ ನಿಮ್ಮ ಇಮೇಜ್ಗೆ ಧಕ್ಕೆಯಾಗಬಹುದು, ಆದ್ದರಿಂದ ಜಾಗ್ರತೆವಹಿಸಿ.
* ವಿದ್ಯಾರ್ಥಿಗಳಿಗೆ ಶಿಕ್ಷಣದ ಕಡೆ ಗಮನ ಹರಿಸಲು ಸಾಧ್ಯವಾಗಲ್ಲ
* ಗುರು ದುರ್ಬಲ ಸ್ಥಾನದಲ್ಲಿದ್ದರೆ ಆತ್ಮವಿಶ್ವಾಸ ಕಡಿಮೆಯಾಗುವುದು.
* ಗುರು ದುರ್ಬಲವಾಗಿದ್ದಾಗ ಆರೋಗ್ಯ ಸಮಸ್ಯೆಗಳು ಉಂಟಾಗುವುದು.
ಪರಿಹಾರವೇನು?
* ಹಳದಿ ಆಭರಣ ಧರಿಸಿ, ಚಿನ್ನ ಧರಿಸುವುದು ಕೂಡ ಉತ್ತಮ ಪರಿಹಾರವಾಗಿದೆ
* ಏನಾದರೂ ಪ್ರಮುಖ ಕಾರ್ಯಕ್ಕೆ ಹೋಗುವಾಗ ಹಳದಿ ಬಟ್ಟೆ ಧರಿಸಿ, ಒಂದು ಹಳದಿ ಕರ್ಚೀಫ್ ಆದರೂ ನಿಮ್ಮ ಬಳಿಯಿರಲಿ
* ಗುರುವಾರ ಉಪವಾಸ ಮಾಡಿ
* ಗುರು ಬೀಜ ಮಂತ್ರ ಪಠಿಸಿ
* ಜನರಿಗೆ ಗುರುವಾಗ ಬೆಲ್ಲದಿಂದ ಮಾಡಿದ ಸಿಹಿ ಅಥವಾ ಬೆಲ್ಲವನ್ನು ಅರ್ಪಿಸಿ.
* ನಿರ್ಗತಿಕರಿಗೆ ದಾನ ಮಾಡಿ
* ಕಾಗೆಗಳಿಗೆ ಆಹಾರ ಹಾಕಿ.



Click it and Unblock the Notifications