Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಜನ್ಮಾಷ್ಟಮಿಯಂದು ಏನು ಮಾಡಬೇಕು, ಏನು ಮಾಡಲೇಬಾರದು?
ಹಿಂದೂಗಳಿಗೆ ಜನ್ಮಾಷ್ಟಮಿ ತುಂಬಾನೇ ವಿಶೇಷವಾದ ಆಚರಣೆಯಾಗಿದೆ. ಈ ದಿನ ಶ್ರೀಕೃಷ್ಣನ ಜನ್ಮ ದಿನ. ಶ್ರಾವಣ ಮಾಸದ ಅಷ್ಟಮ ತಿಥಿಯಂದು ಜನ್ಮಾಷ್ಟಮಿಯನ್ನು ಆಚರಿಸಲಾಗುವುದು(ಉತ್ತರ ಭಾರತದ ಕಡೆ ಭಾದ್ರಪದ ಮಾಸ ಶುರುವಾಗಿದೆ). ಈ ವರ್ಷ ಅಷ್ಟಮಿ ತಿಥಿ ಸೆಪ್ಟೆಂಬರ್ 6 ಹಾಗೂ 7ಕ್ಕೆ ಬಂದಿದ್ದು ಸೆಪ್ಟೆಂಬರ್ 6 ಮಧ್ಯರಾತ್ರಿಯಂದ ಜನ್ಮಾಷ್ಟಮಿ ಆಚರಿಸಲಾಗುವುದು.
ಜನ್ಮಾಷ್ಟಮಿಯಂದು ಭಕ್ತರು ಉಪವಾಸವಿದ್ದು ಶ್ರೀಕೃಷ್ಣ ಆರಾಧನೆ ಮಾಡಲಾಗುವುದು. ಶ್ರೀ ಕೃಷ್ಣನನ್ನು ಭಕ್ತಿಯಿಂದ ಆರಾಧಿಸಿದರೆ ನಮ್ಮೆಲ್ಲಾ ಕಷ್ಟಗಳಿಗೆ ಶ್ರೀಕೃಷ್ಣ ಯಾವುದೋ ಒಂದು ರೂಪದಲ್ಲಿ ಪರಿಹಾರ ಸೂಚಿಸುತ್ತಾನೆ ಎಂಬುವುದು ಭಕ್ತರ ಅಚಲ ನಂಬಿಕೆ. ಜನ್ಮಾಷ್ಟಮಿಯಂದು ಉಪವಾಸವಿರುವವರು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಈ ದಿನ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಜನ್ಮಾಷ್ಟಮಿಗೆ ಮುನ್ನವೇ ಮನೆಯನ್ನು ಸ್ವಚ್ಛ ಮಾಡಬೇಕು
ಮನೆಯನ್ನು ಸ್ವಚ್ಛಮಾಡಬೇಕು, ಪೂಜೆಯ ಕೋಣೆಯನ್ನು ಸ್ವಚ್ಛ ಮಾಡಿ ಅಲಂಕರಿಸಿ. ಮನೆಯನ್ನೂ ಅಲಂಕರಿಸಿ
* ಶ್ರೀಕೃಷ್ಣನನ್ನು ಉಯ್ಯಾಲೆಯಲ್ಲಿ ಕೂರಿಸಿ
ಮನೆಯನ್ನು ಅಲಂಕರಿಸಿ ಶ್ರೀಕೃಷ್ಣನನ್ನು ತೂಗು ಉಯ್ಯಾಲೆಯಲ್ಲಿ ಕೂರಿಸಿ, ವಸ್ತುಗಳು ಹಾಗೂ ಆಭರಣಗಳಿಂದ ಅಲಂಕರಿಸಿ.
* ಪೂಜೆಗೆ ಮುನ್ನ ಸಂಕಲ್ಪ ತೆಗೆದುಕೊಳ್ಳಿ
ನೀವು ಪೂಜೆಗೆ ಮುನ್ನ ಸಂಕಲ್ಪ ಮಾಡಬೇಕು. ದೇಹ ಹಾಗೂ ಮನಸ್ಸು ಶುದ್ಧವಾಗಿರಬೇಕು. ಶ್ರೀಹರಿಯ ನಾಮವೊಂದೇ ಮನಸ್ಸಿನಲ್ಲಿರಬೇಕು.
* ಶ್ರೀಕೃಷ್ಣನಿಗೆ ವಿವಿಧ ಬಗೆಯ ನೈವೇದ್ಯ ಅರ್ಪಿಸಿ
ಶ್ರೀ ಕೃಷ್ಣನಿಗೆ ಪೂಜೆ ಸಲ್ಲಿಸಿದ ಬಳಿಕ ವಿವಿಧ ಬಗೆಯ ನೈವೇದ್ಯ ಅರ್ಪಿಸಿ. ಶ್ರೀ ಕೃಷ್ಣನಿಗೆ ಬಗೆ-ಬಗೆಯ ನೈವೇದ್ಯ ಅರ್ಪಿಸಿ. ಹಣ್ಣುಗಳು, ಸಿಹಿ ತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ.
ಮಂತ್ರಗಳನ್ನು ಪಠಿಸಿ, ಕೀರ್ತನೆಗಳನ್ನು ಹೇಳಿ
ಕೃಷ್ಣ ಮೂಲ ಮಂತ್ರ
ಓಂ ಕೃಷ್ಣಾಯ ಮಂತ್ರ
ಹರೇ ಕೃಷ್ಣ ಮಹಾ ಮಂತ್ರ
ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ
ಗಾಯತ್ರಿ ಮಂತ್ರ
|| ಓಂ ದೇವಕಿ ನಂದನಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ಕೃಷ್ಣಃ ಪ್ರಚೋದಯಾತ್ || || ಓಂ ದೇವಕಿನಂದನಾಯ ವಿದ್ಮಿಹೇ ವಾಸುದೇವಾಯ ಧೀಮಹಿ | ತನ್ನೋ: ಕೃಷ್ಣಃ ಪ್ರಚೋದಯಾತ್ ||
ಏನು ಮಾಡಬಾರದು?
ಈ ದಿನ ಯಾವ ಕ್ರೂರ ಕೆಲಸ ಮಾಡಬಾರದು:
ಕೃಷ್ಣ ಜನ್ಮಾಷ್ಟಮಿಯಂದು ಯಾರಿಗೂ ನೋವುಂಟು ಮಾಡಬೇಡಿ, ಹಿರಿಯರನ್ನು ಗೌರವಿಸಿ, ಕೆಟ್ಟ ಹಾಗೂ ಕ್ರೂರ ಕೆಲಸವನ್ನು ಮಾಡಬೇಡಿ.
ತಾಮಸಿಕ ಕಾರ್ಯಗಳಿಂದ ದೂರವಿರಿ
ಈ ದಿನ ಜೂಜಾಡುವುದು, ಮದ್ಯಪಾನ, ಮಾಂಸಾಹಾರ ಸೇವನೆ, ಈರುಳ್ಳಿ, ಬೆಳ್ಳುಳ್ಳಿ ಸೇವನೆ ಮಾಡುವುದು ಮಾಡಬಾರದು.



Click it and Unblock the Notifications