Latest Updates
-
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ! -
ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ 2026: ಬಾರ್ಸಿಲೋನಾದಲ್ಲಿ ಇಂದು ಹೈ-ವೋಲ್ಟೇಜ್ ರೇಸ್, ಮಿಸ್ ಮಾಡ್ಬೇಡಿ! -
ರಕ್ತದಾನದ ನಂತರ ಜಿಮ್ಗೆ ಹೋಗುವ ಮುನ್ನ ಎಚ್ಚರ! ಈ ತಪ್ಪುಗಳನ್ನು ಮಾಡಬೇಡಿ -
ವೀಕೆಂಡ್ ಪ್ಲಾನ್ ಮಾಡಿದ್ದೀರಾ? ಹವಾಮಾನ ವೈಪರೀತ್ಯದ ಎಚ್ಚರಿಕೆ: ನಿಮ್ಮ ಸುರಕ್ಷತೆಗಾಗಿ ಈ ಬದಲಾವಣೆ ಮಾಡಿಕೊಳ್ಳಿ! -
ಮುಂಬೈ ಬಿಸಿಲು ಮತ್ತು ಆರ್ದ್ರತೆ: 15 ನಿಮಿಷದಲ್ಲಿ ನಿಮ್ಮ ಮನೆಯನ್ನು ತಂಪಾಗಿರಿಸುವ ಸರಳ ಉಪಾಯಗಳು! -
ನಿಮ್ಮ ಆಹಾರದ ಪ್ಯಾಕೆಟ್ನಲ್ಲಿ ಸ್ಟೇಪ್ಲರ್ ಪಿನ್ ಇದೆಯೇ? ಎಚ್ಚರ, FSSAI ಕಠಿಣ ಆದೇಶ! -
ಧರ್ಮಶಾಲಾದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಮಳೆ ಆತಂಕದ ನಡುವೆ ಗೆಲ್ಲೋರು ಯಾರು? -
ದೆಹಲಿ-ಎನ್ಸಿಆರ್ ಬಿರುಗಾಳಿ: ಫಿಟ್ನೆಸ್ ಪ್ರಿಯರೇ ಎಚ್ಚರ, ಇಂದಿನ ವರ್ಕೌಟ್ ಮನೆಯಲ್ಲೇ ಮಾಡುವುದು ಏಕೆ ಸುರಕ್ಷಿತ?
ಜನ್ಮಾಷ್ಟಮಿಯಂದು ಏನು ಮಾಡಬೇಕು, ಏನು ಮಾಡಲೇಬಾರದು?
ಹಿಂದೂಗಳಿಗೆ ಜನ್ಮಾಷ್ಟಮಿ ತುಂಬಾನೇ ವಿಶೇಷವಾದ ಆಚರಣೆಯಾಗಿದೆ. ಈ ದಿನ ಶ್ರೀಕೃಷ್ಣನ ಜನ್ಮ ದಿನ. ಶ್ರಾವಣ ಮಾಸದ ಅಷ್ಟಮ ತಿಥಿಯಂದು ಜನ್ಮಾಷ್ಟಮಿಯನ್ನು ಆಚರಿಸಲಾಗುವುದು(ಉತ್ತರ ಭಾರತದ ಕಡೆ ಭಾದ್ರಪದ ಮಾಸ ಶುರುವಾಗಿದೆ). ಈ ವರ್ಷ ಅಷ್ಟಮಿ ತಿಥಿ ಸೆಪ್ಟೆಂಬರ್ 6 ಹಾಗೂ 7ಕ್ಕೆ ಬಂದಿದ್ದು ಸೆಪ್ಟೆಂಬರ್ 6 ಮಧ್ಯರಾತ್ರಿಯಂದ ಜನ್ಮಾಷ್ಟಮಿ ಆಚರಿಸಲಾಗುವುದು.
ಜನ್ಮಾಷ್ಟಮಿಯಂದು ಭಕ್ತರು ಉಪವಾಸವಿದ್ದು ಶ್ರೀಕೃಷ್ಣ ಆರಾಧನೆ ಮಾಡಲಾಗುವುದು. ಶ್ರೀ ಕೃಷ್ಣನನ್ನು ಭಕ್ತಿಯಿಂದ ಆರಾಧಿಸಿದರೆ ನಮ್ಮೆಲ್ಲಾ ಕಷ್ಟಗಳಿಗೆ ಶ್ರೀಕೃಷ್ಣ ಯಾವುದೋ ಒಂದು ರೂಪದಲ್ಲಿ ಪರಿಹಾರ ಸೂಚಿಸುತ್ತಾನೆ ಎಂಬುವುದು ಭಕ್ತರ ಅಚಲ ನಂಬಿಕೆ. ಜನ್ಮಾಷ್ಟಮಿಯಂದು ಉಪವಾಸವಿರುವವರು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಈ ದಿನ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಜನ್ಮಾಷ್ಟಮಿಗೆ ಮುನ್ನವೇ ಮನೆಯನ್ನು ಸ್ವಚ್ಛ ಮಾಡಬೇಕು
ಮನೆಯನ್ನು ಸ್ವಚ್ಛಮಾಡಬೇಕು, ಪೂಜೆಯ ಕೋಣೆಯನ್ನು ಸ್ವಚ್ಛ ಮಾಡಿ ಅಲಂಕರಿಸಿ. ಮನೆಯನ್ನೂ ಅಲಂಕರಿಸಿ
* ಶ್ರೀಕೃಷ್ಣನನ್ನು ಉಯ್ಯಾಲೆಯಲ್ಲಿ ಕೂರಿಸಿ
ಮನೆಯನ್ನು ಅಲಂಕರಿಸಿ ಶ್ರೀಕೃಷ್ಣನನ್ನು ತೂಗು ಉಯ್ಯಾಲೆಯಲ್ಲಿ ಕೂರಿಸಿ, ವಸ್ತುಗಳು ಹಾಗೂ ಆಭರಣಗಳಿಂದ ಅಲಂಕರಿಸಿ.
* ಪೂಜೆಗೆ ಮುನ್ನ ಸಂಕಲ್ಪ ತೆಗೆದುಕೊಳ್ಳಿ
ನೀವು ಪೂಜೆಗೆ ಮುನ್ನ ಸಂಕಲ್ಪ ಮಾಡಬೇಕು. ದೇಹ ಹಾಗೂ ಮನಸ್ಸು ಶುದ್ಧವಾಗಿರಬೇಕು. ಶ್ರೀಹರಿಯ ನಾಮವೊಂದೇ ಮನಸ್ಸಿನಲ್ಲಿರಬೇಕು.
* ಶ್ರೀಕೃಷ್ಣನಿಗೆ ವಿವಿಧ ಬಗೆಯ ನೈವೇದ್ಯ ಅರ್ಪಿಸಿ
ಶ್ರೀ ಕೃಷ್ಣನಿಗೆ ಪೂಜೆ ಸಲ್ಲಿಸಿದ ಬಳಿಕ ವಿವಿಧ ಬಗೆಯ ನೈವೇದ್ಯ ಅರ್ಪಿಸಿ. ಶ್ರೀ ಕೃಷ್ಣನಿಗೆ ಬಗೆ-ಬಗೆಯ ನೈವೇದ್ಯ ಅರ್ಪಿಸಿ. ಹಣ್ಣುಗಳು, ಸಿಹಿ ತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ.
ಮಂತ್ರಗಳನ್ನು ಪಠಿಸಿ, ಕೀರ್ತನೆಗಳನ್ನು ಹೇಳಿ
ಕೃಷ್ಣ ಮೂಲ ಮಂತ್ರ
ಓಂ ಕೃಷ್ಣಾಯ ಮಂತ್ರ
ಹರೇ ಕೃಷ್ಣ ಮಹಾ ಮಂತ್ರ
ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ
ಗಾಯತ್ರಿ ಮಂತ್ರ
|| ಓಂ ದೇವಕಿ ನಂದನಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ಕೃಷ್ಣಃ ಪ್ರಚೋದಯಾತ್ || || ಓಂ ದೇವಕಿನಂದನಾಯ ವಿದ್ಮಿಹೇ ವಾಸುದೇವಾಯ ಧೀಮಹಿ | ತನ್ನೋ: ಕೃಷ್ಣಃ ಪ್ರಚೋದಯಾತ್ ||
ಏನು ಮಾಡಬಾರದು?
ಈ ದಿನ ಯಾವ ಕ್ರೂರ ಕೆಲಸ ಮಾಡಬಾರದು:
ಕೃಷ್ಣ ಜನ್ಮಾಷ್ಟಮಿಯಂದು ಯಾರಿಗೂ ನೋವುಂಟು ಮಾಡಬೇಡಿ, ಹಿರಿಯರನ್ನು ಗೌರವಿಸಿ, ಕೆಟ್ಟ ಹಾಗೂ ಕ್ರೂರ ಕೆಲಸವನ್ನು ಮಾಡಬೇಡಿ.
ತಾಮಸಿಕ ಕಾರ್ಯಗಳಿಂದ ದೂರವಿರಿ
ಈ ದಿನ ಜೂಜಾಡುವುದು, ಮದ್ಯಪಾನ, ಮಾಂಸಾಹಾರ ಸೇವನೆ, ಈರುಳ್ಳಿ, ಬೆಳ್ಳುಳ್ಳಿ ಸೇವನೆ ಮಾಡುವುದು ಮಾಡಬಾರದು.



Click it and Unblock the Notifications