Latest Updates
-
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ!
ಜೈಪುರದಿಂದ 6 ಕೋಟಿ ಕೊಟ್ಟು ಚಿನ್ನ ಖರೀದಿಸಿದ ಮಹಿಳೆಗೆ ನಂತರ ತಿಳಿಯಿತು ಆ ಆಭರಣ 300 ರುಪಾಯಿಗೂ ಇಲ್ಲ!
ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ, ಆದ್ದರಿಂದ ಮೋಸ ಹೋಗದಂತೆ ನಾವು ಜಾಗ್ರತೆವಹಿಸಬೇಕು, ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಅಮೆರಿಕದ ಮಹಿಳೆ ಬರೋಬರಿ 6 ಕೋಟಿ ಕೊಟ್ಟು ಚಿನ್ನ ಖರೀದಿಸಿದ್ದಾಳೆ, ಆದರೆ ಚಿನ್ನವಲ್ಲ ಅವಳು ಖರೀದಿಸಿ ಆಭರಣ ಬೆಲೆ ಬರೀ 300 ರುಪಾಯಿ ಅಷ್ಟೇ ಎಂದು ತಿಳಿದಾಗ ಶಾಕ್ ಆಗಿದ್ದಾಳೆ. ಅಷ್ಟಕ್ಕೂ ಆಕೆಗೆ ಮೋಸ ಮಾಡಿರುವುದು ಭಾರತದ ವ್ಯಾಪಾರಿ.

ಇಂಥ ವಂಚಕರಿಂದ ಸುಮ್ಮನೆ ಭಾರತಕ್ಕೆ ಕೆಟ್ಟ ಹೆಸರು
ಹೌದು ವಿದೇಶಿಗರು ಇಲ್ಲಿಗೆ ಬಂದು ಖರೀದಿ ಮಾಡಿದಾಗ ಅವರು ಆ ವ್ಯಾಪಾರಿಯಿಂದ ಖರೀದಿಸಿದೆ ಎಂದು ಹೇಳುವುದಿಲ್ಲ, ಇದರ ಬದಲಿಗೆ ಭಾರತದಿಂದ ಖರೀದಿಸಿದೆ ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬ ವ್ಯಾಪಾರಿ ಆ ಅಮೆರಿಕದ ಮಹಿಳೆಗೆ ಬರೋಬರಿ 6 ಕೋಟಿ ವಂಚನೆ ಮಾಡಿದ್ದಾನೆ.
ಆಕೆಯ ಹೆಸರು ಚೆರಿಶ್, ಯುಎಸ್ನಲ್ಲಿ ವಾಸವಾಗಿದ್ದಾರೆ, ಇವರು ಭಾರತಕ್ಕೆ ಬಂದಿದ್ದಾಗ ಜೈಪುರದ ಜೋಹರಿ ಬಜಾರ್ಗೆ ಬಂದಾಗ ಅಲ್ಲಿಯ ಮನಾಕ್ ಚೌಕ್ ಪೊಲೀಸ್ ಸ್ಟೇಷನ್ ಸಮೀಪದಲ್ಲಿರುವ ಆಭರಣ ಖರೀದಿಸಿದ್ದಾಳೆ. ಆಕೆ ವ್ಯಾಪಾರಿಗೆ ಕೊಟ್ಟಿರುವುದು 6 ಕೋಟಿ ರುಪಾಯಿ.
ಎಕ್ಸಿಬಿಷನ್ನಲ್ಲಿ ಆಭರಣ ಪ್ರದರ್ಶನಕ್ಕೆ ಇಡಲು ಮುಂದಾದಗ ವಿಷಯ ಗೊತ್ತಾಗಿದ್ದು
ಯುಎಸ್ನಲ್ಲಿ ಒಂದು ಎಕ್ಸಿಬಿಷನ್ ನಡೆಯುತ್ತಿರುತ್ತದೆ, ಅದರಲ್ಲಿ ತಾನು ತಂದ ಎಕ್ಸಿಬಿಷನ್ ಪ್ರದರ್ಶನ ಇಡಲು ಯೋಚಿಸುತ್ತಾಳೆ, ಅದೆಲ್ಲಾ ಪ್ರೆಸ್ಟೇಜ್ ವಿಷಯವಲ್ಲ, ನನ್ನ ಬಳಿ ಇಷ್ಟೊಂದು ಆಭರಣವಿದೆ ಎಂದು ಪ್ರದರ್ಶನಕ್ಕೆ ಇಡಲು ಬಯಸುತ್ತಾಳೆ,ಆದರೆ ಅಲ್ಲಿ ಅವಳಿಗೆ ಶಾಕಿಂಗ್ ಕಾದಿರುತ್ತದೆ. ಏಕೆಂದರೆ ಆಕೆಯ ಬಳಿ ಇರುವುದು ಅಸಲಿ ಅಲ್ಲ ನಕಲಿ ಎಂಬುವುದು ತಿಳಿಯುತ್ತದೆ.
ಮೇ 18ಕ್ಕೆ ಕಂಪ್ಲೇಂಟ್ ಕೊಟ್ಟ ಮಹಿಳೆ
ತಾನು ಮೋಸ ಹೋದ ವಿಷಯ ತಿಳಿಯುತ್ತಿದ್ದಂತೆ ಮೇ 18ಕ್ಕೆ ಈ ಮಹಿಳೆ ದೂರು ನೀಡುತ್ತಾಳೆ, ಆದರೆ ಆರೋಪಿ ಆಕೆಯ ವಿರುದ್ಧ ಸುಳ್ಳು ಕೇಸ್ ಹಾಕುತ್ತಾನೆ.
ಆಕೆ ಯುಎಸ್ ರಾಯಬಾರಿ ಕಚೇರಿಗೆ ದೂರು ಸಲ್ಲಿಸುತ್ತಾಳೆ, ಅವರು ಇದರ ಕುರಿತಂತೆ ಅವರು ಜೈಪುರದ ಪೊಲೀಸರಿಗೆ ತಿಳಿಸುತ್ತಾರೆ. ಈಗ ಈ ಆಭರಣ ಮಾಡಿದ ವ್ಯಾಪಾರಿ ಹಾಗೂ ಅವರ ಮಗ ಪರಾರಿಯಾಗಿದ್ದಾರೆ. ಆ ವ್ಯಾಪಾರಿ ಹೆಸರು ರಾಜೇಂದ್ರ ಸೋನಿ ಹಾಗೂ ಮಗ ಗೌರವ್ ಈಗ ಪರಾರಿಯಾಗಿದ್ದು ಇವರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.
ಇವರು ಇತ್ತೀಚೆಗೆ 3 ಕೋಟಿಯ ಫ್ಲ್ಯಾಟ್ ಖರೀದಿಸಿದ್ದಾರಂತೆ
ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಇವರು ಇವರು ಮಹಿಳೆಗೆ ಮೋಸ ಮಾಡಿ ಪಡೆದ ಹಣದಿಂದ 3 ಕೋಟಿಯ ಫ್ಲ್ಯಾಟ್ ಕೂಡ ಖರೀದಿಸಿದ್ದಾರೆ ಎಂಬುವುದು ತಿಳಿದು ಬಂದಿದೆ.
ವಿದೇಶಿ ಮಹಿಳೆ ಎಂದು ಮೋಸ ಮಾಡಿದ್ರಾ?
ಈ ಮಹಿಳೆ ವಿದೇಶದವಳು, ಮತ್ತೆ ಹುಡುಕಿಕೊಂಡು ಬರಲ್ಲ, ಅಲ್ಲದೆ ಆ ಚಿನ್ನ ಅಸಲಿಯೋ ನಕಲಿಯೋ ನೋಡುವುದು ಇಲ್ಲ ಎಂದು ಇವರಿಗೆ ಅನಿಸಿರಬಹುದು, ಹಾಗಾಗಿ ಅವಳನ್ನು ಸುಲಭವಾಗಿ ಯಾಮಾರಿಸಿದ್ದಾರೆ.



Click it and Unblock the Notifications