Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಈ ನಗರದಲ್ಲಿ ಇನ್ಮುಂದೆ ಕಾಯಿಲೆ ಬೀಳುವುದು ನಿಷೇಧ.! ಇಂತಹ ವಿಚಿತ್ರ ಆದೇಶ ಎಲ್ಲಿ ಗೊತ್ತಾ?
ಕೆಲವು ದೇಶಗಳಲ್ಲಿ ಕೆಲವೊಂದು ವಸ್ತುಗಳು ನಿಷೇಧ ಹೇರಿರುವ ಕುರಿತು ನಾವು ಕೇಳಿರುತ್ತೇವೆ. ನಮ್ಮ ದೇಶದಲ್ಲಿ ಹೇಗೆ ಹಲವು ವಿಚಾರಗಳನ್ನು ನಿಷೇಧಿಸಲಾಗಿದ್ಯೋ ಹಾಗೆ ಹಲವು ದೇಶಗಳಲ್ಲಿಯೂ ಕೂಡ ಒಂದಿಷ್ಟು ವಿಚಾರಗಳು ನಿಷೇಧವಾಗಿವೆ. ಆದ್ರೆ ನಾವಿಂದು ವಿಚಿತ್ರ ದೇಶದ ವಿಚಿತ್ರವಾದ ನಿಷೇಧ ಕುರಿತ ನಿರ್ಧಾರ ಕುರಿತು ನಾವಿಂದು ತಿಳಿದುಕೊಳ್ಳೋಣ.
ಅದರಲ್ಲೂ ಯಾವುದಾದರು ದೇಶದಲ್ಲಿ ಅಥವಾ ರಾಜ್ಯದಲ್ಲಿ ನೀವು ಕಾಯಿಲೆ ಬೀಳುವುದನ್ನೇ ನಿಷೇಧ ಮಾಡಿದ್ದರೆ ಹೇಗೆ? ಯಾವೊಬ್ಬ ವ್ಯಕ್ತಿ ಹೇಗೆ, ಏಕೆ ಕಾಯಿಲೆ ಬೀಳುತ್ತಾನೆ ಎಂಬುದನ್ನು ಪತ್ತೆ ಮಾಡಲು ಆಗುವುದಿಲ್ಲ. ಅವರು ಕಾಯಿಲೆಗೆ ಬೀಳುವುದು ಯಾರಿಗೂ ತಿಳಿಯೋದಿಲ್ಲ. ಹಾಗೆ ಕಾಯಿಲೆ ಉಂಟಾದಾಗ ಆಸ್ಪತ್ರೆಗೆ ಹೋಗವುದು ಸಾಮಾನ್ಯ ವಿಚಾರ. ಆದ್ರೆ ಈ ದೇಶದಲ್ಲಿ ಎಲ್ಲವೂ ವಿರುದ್ಧ.

ಇಲ್ಲಿ ಯಾರು ಕಾಯಿಲೆ ಬೀಳಬಾರದು ಎಂದು ಅಲ್ಲಿನ ಮೇಯರ್ ಆದೇಶ ಹೊರಡಿಸಿದ್ದಾರೆ. ಇನ್ಮುಂದೆ ಕಾಯಿಲೆ ಬೀಳುವುದು ನಿಷೇಧ ಎಂದು ಮೇಯರ್ ಘೋಷಿಸಿರುವುದು ಅಚ್ಚರಿಯ ಜೊತೆಗೆ ಶಾಕ್ ಕೂಡ ನೀಡಿದೆ. ಹಾಗಾದ್ರೆ ಈ ರೀತಿಯ ನಿರ್ಧಾರಕ್ಕೆ ಕಾರಣವಾಗಿದ್ದೇನು? ಯಾವ ದೇಶದಲ್ಲಿ ಈ ರೀತಿಯ ನಿರ್ಧಾರ ಮಾಡಲಾಗಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಇಟಲಿಯ ಕ್ಯಾಲಬ್ರಿಯಾದಲ್ಲಿ ಇಂತಹದೊಂದು ವಿಚಿತ್ರ ನಿಷೇಧ ಹೇರಲಾಗಿದೆ. ಅಲ್ಲಿನ ಜನರು ಅನಾರೋಗ್ಯಕ್ಕೆ ಒಳಗಾಗುವುದನ್ನೇ ನಿಷೇಧಿಸಲಾಗಿದೆ. ಅಲ್ಲಿನ ಮೇಯರ್ ಮೇಯರ್ ಆಂಟೋನಿಯೊ ಟೋರ್ಚಿಯಾ ಹೊರಡಿಸಿದ ಈ ಪ್ರಕಟಣೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹಾಗೆ ಟೀಕೆಯ ಜೊತೆಗೆ ಚರ್ಚೆ ಹುಟ್ಟುಹಾಕುವಂತೆ ಮಾಡಿದೆ.
ಈ ಆದೇಶದ ಹಿಂದೆ ಮೇಯರ್ ಉತ್ತಮ ಕಾಳಜಿ ಹೊಂದಿರುವುದು ಎಲ್ಲರ ಗಮನ ಸೆಳೆದಿದೆ. ಏಕೆಂದರೆ ಈ ಕ್ಯಾಲಬ್ರಿಯಾದಲ್ಲಿ ವೈದ್ಯಕೀಯ ಸೌಲಭ್ಯ ಪಡೆಯಲು ಜನರು ಹರಸಾಹಸ ಪಡಬೇಕಿದೆ. ಇದೇ ಕಾರಣಕ್ಕೆ ಜನರು ಅನಾರೋಗ್ಯಕ್ಕೆ ಒಳಗಾಗುವುದನ್ನೇ ನಿಷೇಧಿಸಿ ಈ ಸಮಸ್ಯೆಗೆ ಒಂದಿಷ್ಟು ಪರಿಹಾರ ಕಂಡುಕೊಳ್ಳುವ ಉದ್ದೇಶ ಈ ಆದೇಶದಲ್ಲಿದೆ ವರದಿಯಾಗವಿದೆ.
ಈ ನಿರ್ಧಾರದ ಹಿಂದಿದೆ ಅಚ್ಚರಿ ಕಾರಣ
ಮೇಯರ್ ಒಬ್ಬರು ಈ ರೀತಿ ನಿರ್ಧಾರ ಪ್ರಕಟಿಸುವ ಹಿಂದೆ ಅತೀ ದೊಡ್ಡ ಕಾರಣವೊಂದಿದೆ. ಈ ನಗರದಲ್ಲಿ ಅನಾರೋಗ್ಯಕ್ಕೆ ಒಳಗಾದವರು ವೈದ್ಯಕೀಯ ಸೇವೆ ಪಡೆಯಬೇಕು ಅಂದರೆ 45 ಕಿ.ಮೀಟರ್ ದೂರ ಪ್ರಯಾಣಿಸಬೇಕು. ಏಕೆಂದರೆ ನಗರದಲ್ಲಿ ವೈದ್ಯಕೀಯ ಸೇವೆ ಪಡೆಯಲು ಆರೋಗ್ಯ ಕೇಂದ್ರಗಳೇ ಇಲ್ಲ. ಸುಮಾರು 1,300 ನಿವಾಸಿಗಳಿಗೆ ನೆಲೆಯಾಗಿರುವ ಬೆಲ್ಕಾಸ್ಟ್ರೋ ಪಟ್ಟಣದ ಏಕೈಕ ಆರೋಗ್ಯ ಕೇಂದ್ರವು ಬಹುತೇಕ ದಿನ ಮುಚ್ಚಿರುತ್ತದೆ.
ರಜಾದಿನಗಳು, ತುರ್ತು ಪರಿಸ್ಥಿತಿಗಳು ಅಥವಾ ರಾತ್ರಿಯ ಸಮಯದಲ್ಲಿ ವೈದ್ಯಕೀಯ ಸೇವೆ ಪಡೆಯುವುದು ಅಸಾಧ್ಯ. ಹೀಗಾಗಿ ಈ ಸೇವೆ ಪಡೆಯಬೇಕು ಎಂದರೆ ದೊಡ್ಡ ಸಾಹಸ ಮಾಡಬೇಕಿದೆ. ಇದರಿಂದ ನಗರದಲ್ಲಿ ಯಾರು ಕೂಡ ಅನಾರೋಗ್ಯಕ್ಕೆ ಒಳಗಾಗದೇ ಇರಲು ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಮೇಯರ್ ಹೇಳಿದ್ದಾರೆ.
ಅಂದರೆ ನಗರವಾಸಿಗಳು, ದೂರ ಪ್ರಯಾಣದಲ್ಲಿ ಎಚ್ಚರಿಕೆ ವಹಿಸಬೇಕು, ಕ್ರೀಡೆಯಲ್ಲಿ ಗಾಯಗಳಾಗದಂತೆ ತೊಡಗುವುದು, ಹಾಗೆ ಕಾಯಿಲೆ ಬೀಳುವಂತಹ ಅಭ್ಯಾಸಗಳನ್ನು ತ್ಯಜಿಸಬೇಕು ಎಂದು ಹೇಳಿದ್ದಾರೆ. ಈ ಆದೇಶ ಸ್ಥಳೀಯವಾಗಿ ಆರೋಗ್ಯ ಕೇಂದ್ರ ಕಾರ್ಯಾರಂಭ ಮಾಡುವವರೆಗೂ ಜಾರಿಯಲ್ಲಿರಲಿದೆ ಎಂದು ಹೇಳಲಾಗಿದೆ.



Click it and Unblock the Notifications
