Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಮೊದಲ ಶ್ರಾವಣ ಸೋಮವಾರ: ಶ್ರಾವಣದಲ್ಲಿ ಯಾವೆಲ್ಲಾ ದಿನಗಳಲ್ಲಿ ಉಪವಾಸ ಮಾಡಬೇಕು?
ಶ್ರಾವಣ ಬಂತೆಂದರೆ ಸಡಗರ ಶುರು, ಏಕೆಂದರೆ ಈ ಶ್ರಾವಣ ಸಾಲು-ಸಾಲು ಹಬ್ಬಗಳನ್ನು ಹೊತ್ತು ತರುವುದರಿಂದ ಸಡಗರ ಮಾಸ.ಶ್ರಾವಣ ಮಾಸ ಶಿವನ ಆರಾಧನೆಗೆ ಮೀಸಲಿರುವ ಮಾಸ, ಅದರಲ್ಲಿಯೂ ಶ್ರಾವಣ ಸೋಮವಾರ ಎಂದರೆ ಇನ್ನೂ ವಿಶೇಷ, ಶಿವನ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.

ಶ್ರಾವಣ ಮಾಸದಲ್ಲಿ ರುದ್ರಾಭಿಷೇಕಕ್ಕೆ ತುಂಬಾನೇ ಮಹತ್ವವಿದೆ
ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ ಮಾಡಿಸಿದರೆ ಒಳ್ಳೆಯದು, ಶಿವನಿಗೆ, ಜಲ, ಹಾಲು, ತುಪ್ಪ, ಮೊಸರು, ಜೇನು ಇವುಗಳಿಂದಲೂ ಅಭಿಷೇಕ ಮಾಡಿಸಬಹುದು, ಶಿವನಿಗೆ ಬಿಲ್ವೆಪತ್ರೆ ಎಲೆಯನ್ನು ಅರ್ಪಿಸಿ, ಶಿವ ಮಂತ್ರಗಳನ್ನು ಹೇಳುತ್ತಾ ವಿಶೇಷ ಪೂಜೆ ಸಲ್ಲಿಸಲಾಗುವುದು. ಹೀಗೆ ಪೂಜೆ ಸಲ್ಲಿಸುವುದರಿಂದ ಎಲ್ಲಾ ಕಷ್ಟಗಳು ದೂರಾಗುವುದು ಎಂಬ ನಂಬಿಕೆ.
ಶ್ರಾವಣ ಮಾಸದಲ್ಲಿ ಈ ದಿನಗಳಲ್ಲಿ ಉಪವಾಸವಿದ್ದರೆ ಒಳ್ಳೆಯದು
ಶ್ರಾವಣ ಸೋಮವಾರ: ಉಪವಾಸವಿದ್ದು ಶಿವನಿಗೆ ಪೂಜೆ ಸಲ್ಲಿಸುತ್ತಾರೆ.
16 ಸೊಮವಾರ ವ್ರತ: ಈ ವ್ರತವನ್ನು ಒಂದು ಸೊಮವಾರ ಕೈಗೊಂಡರೆ 16 ಸೊಮವಾರದವರೆಗೆ ಮಾಡಬೇಕು.
ಪ್ರದೋಷ ವ್ರತ: ಕರಷ್ಣ ಪಕ್ಷ ಹಾಗೂ ಶುಕ್ಲ ಪಕ್ಷದ ತ್ರಯೋದಶಿಯಂದು ಪ್ರದೋಷವನ್ನು ಆಚರಿಸಲಾಗುವುದು, ಈ ದಿನದಲ್ಲಿ ಕೂಡ ಉಪವಾಸವಿದ್ದು ಶಿವನ ಆರಾಧನೆ ಮಾಡುತ್ತಾರೆ.
ಮಂಗಳ ಗೌರಿ ವ್ರತ: ಶ್ರಾವಣ ಮಾಸದ ಮಂಗಳವಾರ ಮುತ್ತೈದೆಯರು ಮಂಗಳಗೌರಿ ವ್ರತ ಅಚರಿಸುತ್ತಾರೆ.
ಶನಿ ವ್ರತ: ಶ್ರಾವನ ಮಾಸದ ಶನಿವಾರದಲ್ಲಿ ಶ್ರನಿ ವ್ರತ ಕೈಗೊಳ್ಳಲಾಗುವುದು.
ಈ ವ್ರತಗಳನ್ನು ಮಾಡುವುದು ಕಷ್ಟಗಳು ದುರಾಗುವುದು, ಇಷ್ಟಾರ್ಥಗಳು ನೆರವೇರುವುದು ಎಂಬ ಧಾರ್ಮಿಕ ನಂಬಿಕೆ.
ಶ್ರಾವಣ ಮಾಸದ ವಿಶೇಷತೆಯೇನು?
ಶ್ರಾವಣ ಮಾಸದಲ್ಲಿ ಸಾತ್ವಿಕ ಅಹಾರವನ್ನು ಮಾತ್ರ ಸೇವಿಸಬೇಕು.
ಶ್ರಾವಣ ಮಾಸದಲ್ಲಿ ವ್ರತ ನಿಯಮವನ್ನು ಅನುಸರಿಸುವುದರಿಂದ ಧಾರ್ಮಿಕ ಜ್ಞಾನ ಹೆಚ್ಚುವುದು, ಮನಸ್ಸಿಗೆ ನೆಮ್ಮದಿ ದೊರೆಯುವುದು.
ನಕಾರಾತ್ಮಕ ಶಕ್ತಿಗಳನ್ನು ದೂರವಿಡುತ್ತದೆ: ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡುವುದರಿಂದ ಶಿವನ ಕೃಪೆಯಿಂದ ಎಲ್ಲಾ ಕಷ್ಟಗಳು ದೂರಾಗುವುದು ಅಲ್ಲದೆ ಯಾವುದೇ ನಕಾರಾತ್ಮಕ ಶಕ್ತಿಗಳು ನಮ್ಮನ್ನು ಬಾಧಿಸುವುದಿಲ್ಲ.
ಕುಟಂಬದಲ್ಲಿ ಸಂತೋಷ ಇರಲಿದೆ: ಮನೆಯ ಸದಸ್ಯರ ಆರೋಗ್ಯ ಚೆನ್ನಾಗಿರಲಿದೆ, ಕುಟುಂಬದಲ್ಲಿ ಸಂತೋಷ ನೆಲೆಸಲಿದೆ.



Click it and Unblock the Notifications