Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮೊದಲ ಶ್ರಾವಣ ಸೋಮವಾರ: ಶ್ರಾವಣದಲ್ಲಿ ಯಾವೆಲ್ಲಾ ದಿನಗಳಲ್ಲಿ ಉಪವಾಸ ಮಾಡಬೇಕು?
ಶ್ರಾವಣ ಬಂತೆಂದರೆ ಸಡಗರ ಶುರು, ಏಕೆಂದರೆ ಈ ಶ್ರಾವಣ ಸಾಲು-ಸಾಲು ಹಬ್ಬಗಳನ್ನು ಹೊತ್ತು ತರುವುದರಿಂದ ಸಡಗರ ಮಾಸ.ಶ್ರಾವಣ ಮಾಸ ಶಿವನ ಆರಾಧನೆಗೆ ಮೀಸಲಿರುವ ಮಾಸ, ಅದರಲ್ಲಿಯೂ ಶ್ರಾವಣ ಸೋಮವಾರ ಎಂದರೆ ಇನ್ನೂ ವಿಶೇಷ, ಶಿವನ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.

ಶ್ರಾವಣ ಮಾಸದಲ್ಲಿ ರುದ್ರಾಭಿಷೇಕಕ್ಕೆ ತುಂಬಾನೇ ಮಹತ್ವವಿದೆ
ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ ಮಾಡಿಸಿದರೆ ಒಳ್ಳೆಯದು, ಶಿವನಿಗೆ, ಜಲ, ಹಾಲು, ತುಪ್ಪ, ಮೊಸರು, ಜೇನು ಇವುಗಳಿಂದಲೂ ಅಭಿಷೇಕ ಮಾಡಿಸಬಹುದು, ಶಿವನಿಗೆ ಬಿಲ್ವೆಪತ್ರೆ ಎಲೆಯನ್ನು ಅರ್ಪಿಸಿ, ಶಿವ ಮಂತ್ರಗಳನ್ನು ಹೇಳುತ್ತಾ ವಿಶೇಷ ಪೂಜೆ ಸಲ್ಲಿಸಲಾಗುವುದು. ಹೀಗೆ ಪೂಜೆ ಸಲ್ಲಿಸುವುದರಿಂದ ಎಲ್ಲಾ ಕಷ್ಟಗಳು ದೂರಾಗುವುದು ಎಂಬ ನಂಬಿಕೆ.
ಶ್ರಾವಣ ಮಾಸದಲ್ಲಿ ಈ ದಿನಗಳಲ್ಲಿ ಉಪವಾಸವಿದ್ದರೆ ಒಳ್ಳೆಯದು
ಶ್ರಾವಣ ಸೋಮವಾರ: ಉಪವಾಸವಿದ್ದು ಶಿವನಿಗೆ ಪೂಜೆ ಸಲ್ಲಿಸುತ್ತಾರೆ.
16 ಸೊಮವಾರ ವ್ರತ: ಈ ವ್ರತವನ್ನು ಒಂದು ಸೊಮವಾರ ಕೈಗೊಂಡರೆ 16 ಸೊಮವಾರದವರೆಗೆ ಮಾಡಬೇಕು.
ಪ್ರದೋಷ ವ್ರತ: ಕರಷ್ಣ ಪಕ್ಷ ಹಾಗೂ ಶುಕ್ಲ ಪಕ್ಷದ ತ್ರಯೋದಶಿಯಂದು ಪ್ರದೋಷವನ್ನು ಆಚರಿಸಲಾಗುವುದು, ಈ ದಿನದಲ್ಲಿ ಕೂಡ ಉಪವಾಸವಿದ್ದು ಶಿವನ ಆರಾಧನೆ ಮಾಡುತ್ತಾರೆ.
ಮಂಗಳ ಗೌರಿ ವ್ರತ: ಶ್ರಾವಣ ಮಾಸದ ಮಂಗಳವಾರ ಮುತ್ತೈದೆಯರು ಮಂಗಳಗೌರಿ ವ್ರತ ಅಚರಿಸುತ್ತಾರೆ.
ಶನಿ ವ್ರತ: ಶ್ರಾವನ ಮಾಸದ ಶನಿವಾರದಲ್ಲಿ ಶ್ರನಿ ವ್ರತ ಕೈಗೊಳ್ಳಲಾಗುವುದು.
ಈ ವ್ರತಗಳನ್ನು ಮಾಡುವುದು ಕಷ್ಟಗಳು ದುರಾಗುವುದು, ಇಷ್ಟಾರ್ಥಗಳು ನೆರವೇರುವುದು ಎಂಬ ಧಾರ್ಮಿಕ ನಂಬಿಕೆ.
ಶ್ರಾವಣ ಮಾಸದ ವಿಶೇಷತೆಯೇನು?
ಶ್ರಾವಣ ಮಾಸದಲ್ಲಿ ಸಾತ್ವಿಕ ಅಹಾರವನ್ನು ಮಾತ್ರ ಸೇವಿಸಬೇಕು.
ಶ್ರಾವಣ ಮಾಸದಲ್ಲಿ ವ್ರತ ನಿಯಮವನ್ನು ಅನುಸರಿಸುವುದರಿಂದ ಧಾರ್ಮಿಕ ಜ್ಞಾನ ಹೆಚ್ಚುವುದು, ಮನಸ್ಸಿಗೆ ನೆಮ್ಮದಿ ದೊರೆಯುವುದು.
ನಕಾರಾತ್ಮಕ ಶಕ್ತಿಗಳನ್ನು ದೂರವಿಡುತ್ತದೆ: ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡುವುದರಿಂದ ಶಿವನ ಕೃಪೆಯಿಂದ ಎಲ್ಲಾ ಕಷ್ಟಗಳು ದೂರಾಗುವುದು ಅಲ್ಲದೆ ಯಾವುದೇ ನಕಾರಾತ್ಮಕ ಶಕ್ತಿಗಳು ನಮ್ಮನ್ನು ಬಾಧಿಸುವುದಿಲ್ಲ.
ಕುಟಂಬದಲ್ಲಿ ಸಂತೋಷ ಇರಲಿದೆ: ಮನೆಯ ಸದಸ್ಯರ ಆರೋಗ್ಯ ಚೆನ್ನಾಗಿರಲಿದೆ, ಕುಟುಂಬದಲ್ಲಿ ಸಂತೋಷ ನೆಲೆಸಲಿದೆ.



Click it and Unblock the Notifications
