Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಅಂಬಾನಿ ಮದುವೆ ಹೊಗಳಲು ₹3.6 ಲಕ್ಷ..! ಹಣ ತಿರಸ್ಕರಿಸಿದ ಕಂಟೆಂಟ್ ಕ್ರಿಯೇಟರ್!!
ಇದೇ ತಿಂಗಳ ಕೆಲ ದಿನಗಳ ಹಿಂದೆ ನಡೆದ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹವೂ ಅದ್ದೂರಿಯಾಗಿ ನೆರವೇರಿರುವುದು ವಿಶ್ವದೆಲ್ಲೆಡೆ ಸುದ್ದಿಯಾಗಿತ್ತು. ಅನೇಕ ದಿಗ್ಗಜರು, ಬಾಲಿವುಡ್ ನಟ-ನಟಿಯರು, ಖ್ಯಾತ ನಾಮರು ಈ ಮದುವೆಗೆ ಸಾಕ್ಷಿಯಾಗಿದ್ದರು.
ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಭಾಗಿಯಾಗಿದ್ದರು. ಹಾಲಿವುಡ್ ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ರೂಪಾಯಿ ನೀಡಿ ಕರೆಸಲಾಗಿತ್ತು. ಆದ್ರೆ ಅವರ ಮದುವೆಗೆ ಬಂದವರಿಗಿಂತ ಯಾರೆಲ್ಲಾ ಬಂದಿಲ್ಲಾ ಎಂಬುದು ಮತ್ತೊಂದು ರೀತಿಯ ಚರ್ಚೆ ಹುಟ್ಟುಹಾಕಿತ್ತು.

ಅಚ್ಚರಿ ಎಂದರೆ ಈ ಮದುವೆಗೆ ಆಹ್ವಾನ ನೀಡಿದ್ದ ಹಲವರಲ್ಲಿ ಬಹುಪಾಲು ಮಂದಿ ಆಗಮಿಸಿದ್ದರು. ಆದರೆ ಬೆರಳೆಣಿಕೆ ಮಂದಿ ಈ ಮದುವೆಯಲ್ಲಿ ಭಾಗಿಯಾಗಿರಲಿಲ್ಲ. ಅದ್ರಲ್ಲಿ ಪ್ರಮುಖವಾಗಿ ವಿರಾಟ್ ಕೊಹ್ಲಿ-ಅನುಷ್ಕಾ ಸೇರಿ ಒಂದಿಷ್ಟು ಮಂದಿ ಈ ಮದುವೆಯಲ್ಲಿ ಭಾಗಿಯಾಗಿರಲಿಲ್ಲ.
ಇನ್ನೂ ಅಚ್ಚರಿಯ ವಿಚಾರ ಏನಂದ್ರೆ ಅಂಬಾನಿ ಅವರ ಮದುವೆ ಹೇಗೆ ಭಾರತದ ಆರ್ಥಿಕತೆಗೆ ನೆರವಾಗಲಿದೆ ಎಂಬ ಕುರಿತು ವಿಡಿಯೋಗಳು ಹರಿದಾಡುತ್ತಿದ್ದವು. ಆದರೆ ಈ ವಿಡಿಯೋಗಳು ಭಾರೀ ಚರ್ಚೆಗೆ ಕಾರಣವಾಗಿತ್ತು. ಆದ್ರೆ ಈಗೊಬ್ಬರು ಯುವ ಇನ್ಫ್ಲೂಯನ್ಸರ್ ಅಂಬಾನಿ ಮದುವೆ ಹೊಗಳಲು ಲಕ್ಷ ಲಕ್ಷ ಹಣದ ಆಮಿಷ ನೀಡಿದ್ದರು ಎಂದು ಹೇಳಿದ್ದಾರೆ.
ಹೌದು ಕಾವ್ಯಾ ಎಂಬಾಕೆ ತನಗೆ ಅಂಬಾನಿ ಮದುವೆ ಹೊಗಳಲು 3.6 ಲಕ್ಷ ರೂಪಾಯಿ ನೀಡಲು ಮುಂದಾಗಿದ್ದರು ಆದರೆ ನಾನು ತಿರಸ್ಕರಿಸಿದ್ದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಕಾವ್ಯಾ ಕರ್ನಾಟಕ್ ಎಂಬಾಕೆ ಇನ್ಸ್ಸ್ಟಾಗ್ರಾಮ್ನಲ್ಲಿ ಅಂಬಾನಿ ಮದುವೆ ಭಾರತದ ಆರ್ಥಿಕತೆಗೆ ಹೇಗೆ ಸಹಾಯ ಮಾಡಿತು ಎಂದು ಹೇಳಲು ಈ ಹಣ ನೀಡಿದ್ದರಂತೆ.
ಆದರೆ ಈ ಕುರಿತು ವಿಡಿಯೋ ಮಾಡಲು ನಾನು ಏಕೆ ಒಪ್ಪಿಕೊಳ್ಳಲಿಲ್ಲ ಎಂಬುದಕ್ಕೆ ಕಾರಣಗಳನ್ನು ಸಹ ಕಾವ್ಯಾ ಹಂಚಿಕೊಂಡಿದ್ದಾರೆ. ಜಿಯೋ ಇಂಟರ್ನೆಟ್ ಶುಲ್ಕಗಳನ್ನು ಹೆಚ್ಚಿಸಿರುವ ಸಮಯದಲ್ಲಿ, ಅಂಬಾನಿಯಂತಹ ಕಾರ್ಪೊರೇಟ್ ದೈತ್ಯರನ್ನು ಉತ್ತೇಜಿಸುವ ಸಮಯದಲ್ಲಿ ಪ್ರಾಮಾಣಿಕತೆ ತೋರಲಿಲ್ಲ. ನಂಬಿಕೆ ದುರ್ಬಲವಾಗಿದೆ ಮತ್ತು ಸ್ಥಿರವಾದ ಪ್ರಾಮಾಣಿಕತೆಯ ಮೂಲಕ ಕಾಲಾನಂತರದಲ್ಲಿ ನಿರ್ಮಿಸಲಾಗಿದೆ. ನನ್ನ ಪ್ರೇಕ್ಷಕರು ವಿವೇಚನಾಶೀಲರಾಗಿದ್ದಾರೆ; ಅವರು ಪಾವತಿಸಿದ ಪ್ರಚಾರಗಳು ಮತ್ತು ನಿಜವಾದ ವಿಷಯದ ನಡುವೆ ವ್ಯತ್ಯಾಸವನ್ನು ತೋರಿಸಬಹುದು. ಹೀಗಾಗಿ, ಅವರ ನಂಬಿಕೆಯನ್ನು ಕಾಪಾಡುವುದು ಬಹಳ ಮುಖ್ಯ ಎಂದಿದ್ದಾರೆ.
ಭಾರತದಲ್ಲಿ ಜಾತಿ, ವರ್ಗ, ಲಿಂಗ ಮತ್ತು ಧರ್ಮದ ಕಾರಣದಿಂದ ಆಗಾಗ್ಗೆ ಮದುವೆಗಳು ರದ್ದಾಗುತ್ತವೆ. ಇವು ತನ್ನ ಮೌಲ್ಯಗಳು ಹೊಂದಿಕೆಯಾಗುವುದಿಲ್ಲ, ಇದಲ್ಲದೆ ನಾನೊಬ್ಬ ಶಿಕ್ಷಣ ಪಡೆದ ವ್ಯಕ್ತಿಯಾಗಿ ಈ ರೀತಿ ದಾರಿ ತಪ್ಪಿಸುವ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ.
3.6 ಲಕ್ಷ ಹಣ ನನ್ನ ಕಣ್ಣು ಕುಕ್ಕಿತ್ತು. ಆದರೆ ಇದು ನನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಇದು ತೊಡಕಾಗಲಿದೆ. ನನ್ನ ನಿಷ್ಠಾವಂತ ಫಾಲೋವರ್ಸ್ಗಳ ಕಟ್ಟಿ ಬೆಳೆಸಿರುತ್ತೇವೆ. ಇದು ಅಮೂಲ್ಯವಾಗಿದೆ ಎಂದು ಕಾವ್ಯಾ ವಿವರಿಸಿದ್ದಾಳೆ.
ಆಕೆಯ ಈ ಪೋಸ್ಟ್ ಹಲವರ ಗಮನ ಸೆಳೆದಿದೆ. ಅಲ್ಲದೆ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ, ಹಣ ತೆಗೆದುಕೊಂಡು ಹಲವರು ಯಾವು ವಿಚಾರವನ್ನಾದರೂ ಪ್ರಮೋಟ್ ಮಾಡುವ ಈ ಕಾಲದಲ್ಲಿ ಈಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಗಾದ್ರೆ ಈಗ ಇನ್ಸ್ಸ್ಟಾಗ್ರಾಮ್ನಲ್ಲಿ ಕೇಳಿಬರುತ್ತಿರುವ ಅಂಬಾನಿ ಮದುವೆಯ ಕುರಿತ ಎಲ್ಲಾ ವಿಡಿಯೋಗಳಿಗೂ ಹಣ ನೀಡಲಾಗಿದ್ಯಾ? ಎಂಬ ಅನುಮಾನ ಸಹ ಮೂಡುತ್ತಿವೆ. ಅಂಬಾನಿ ಮದುವೆಯನ್ನು ಹೊಗಳಿ ನೂರಾರು ಮಂದಿ ವಿಡಿಯೋ ಮಾಡಿದ್ದಾರೆ. ಇವರಲ್ಲಿ ಹಲವರಿಗೆ ಹಣ ಸಿಕ್ಕಿರಬಹುದು ಎಂಬ ಶಂಕೆ ಸಹ ವ್ಯಕ್ತವಾಗಿದೆ.
ಇನ್ಸ್ಸ್ಟಾಗ್ರಾಮ್ನಲ್ಲಿ ಕಾವ್ಯಾ ಬಹಳ ಕಡಿಮೆ ಅವಧಿಯಲ್ಲಿ ಬರೋಬ್ಬರಿ 1.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರ ವಿಡಿಯೋಗಳು ಲಕ್ಷ ಲಕ್ಷ ವೀಕ್ಷಣೆ ಪಡೆಯುತ್ತವೆ.



Click it and Unblock the Notifications