Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು!
ಅಂಬಾನಿ ಮದುವೆ ಹೊಗಳಲು ₹3.6 ಲಕ್ಷ..! ಹಣ ತಿರಸ್ಕರಿಸಿದ ಕಂಟೆಂಟ್ ಕ್ರಿಯೇಟರ್!!
ಇದೇ ತಿಂಗಳ ಕೆಲ ದಿನಗಳ ಹಿಂದೆ ನಡೆದ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹವೂ ಅದ್ದೂರಿಯಾಗಿ ನೆರವೇರಿರುವುದು ವಿಶ್ವದೆಲ್ಲೆಡೆ ಸುದ್ದಿಯಾಗಿತ್ತು. ಅನೇಕ ದಿಗ್ಗಜರು, ಬಾಲಿವುಡ್ ನಟ-ನಟಿಯರು, ಖ್ಯಾತ ನಾಮರು ಈ ಮದುವೆಗೆ ಸಾಕ್ಷಿಯಾಗಿದ್ದರು.
ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಭಾಗಿಯಾಗಿದ್ದರು. ಹಾಲಿವುಡ್ ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ರೂಪಾಯಿ ನೀಡಿ ಕರೆಸಲಾಗಿತ್ತು. ಆದ್ರೆ ಅವರ ಮದುವೆಗೆ ಬಂದವರಿಗಿಂತ ಯಾರೆಲ್ಲಾ ಬಂದಿಲ್ಲಾ ಎಂಬುದು ಮತ್ತೊಂದು ರೀತಿಯ ಚರ್ಚೆ ಹುಟ್ಟುಹಾಕಿತ್ತು.

ಅಚ್ಚರಿ ಎಂದರೆ ಈ ಮದುವೆಗೆ ಆಹ್ವಾನ ನೀಡಿದ್ದ ಹಲವರಲ್ಲಿ ಬಹುಪಾಲು ಮಂದಿ ಆಗಮಿಸಿದ್ದರು. ಆದರೆ ಬೆರಳೆಣಿಕೆ ಮಂದಿ ಈ ಮದುವೆಯಲ್ಲಿ ಭಾಗಿಯಾಗಿರಲಿಲ್ಲ. ಅದ್ರಲ್ಲಿ ಪ್ರಮುಖವಾಗಿ ವಿರಾಟ್ ಕೊಹ್ಲಿ-ಅನುಷ್ಕಾ ಸೇರಿ ಒಂದಿಷ್ಟು ಮಂದಿ ಈ ಮದುವೆಯಲ್ಲಿ ಭಾಗಿಯಾಗಿರಲಿಲ್ಲ.
ಇನ್ನೂ ಅಚ್ಚರಿಯ ವಿಚಾರ ಏನಂದ್ರೆ ಅಂಬಾನಿ ಅವರ ಮದುವೆ ಹೇಗೆ ಭಾರತದ ಆರ್ಥಿಕತೆಗೆ ನೆರವಾಗಲಿದೆ ಎಂಬ ಕುರಿತು ವಿಡಿಯೋಗಳು ಹರಿದಾಡುತ್ತಿದ್ದವು. ಆದರೆ ಈ ವಿಡಿಯೋಗಳು ಭಾರೀ ಚರ್ಚೆಗೆ ಕಾರಣವಾಗಿತ್ತು. ಆದ್ರೆ ಈಗೊಬ್ಬರು ಯುವ ಇನ್ಫ್ಲೂಯನ್ಸರ್ ಅಂಬಾನಿ ಮದುವೆ ಹೊಗಳಲು ಲಕ್ಷ ಲಕ್ಷ ಹಣದ ಆಮಿಷ ನೀಡಿದ್ದರು ಎಂದು ಹೇಳಿದ್ದಾರೆ.
ಹೌದು ಕಾವ್ಯಾ ಎಂಬಾಕೆ ತನಗೆ ಅಂಬಾನಿ ಮದುವೆ ಹೊಗಳಲು 3.6 ಲಕ್ಷ ರೂಪಾಯಿ ನೀಡಲು ಮುಂದಾಗಿದ್ದರು ಆದರೆ ನಾನು ತಿರಸ್ಕರಿಸಿದ್ದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಕಾವ್ಯಾ ಕರ್ನಾಟಕ್ ಎಂಬಾಕೆ ಇನ್ಸ್ಸ್ಟಾಗ್ರಾಮ್ನಲ್ಲಿ ಅಂಬಾನಿ ಮದುವೆ ಭಾರತದ ಆರ್ಥಿಕತೆಗೆ ಹೇಗೆ ಸಹಾಯ ಮಾಡಿತು ಎಂದು ಹೇಳಲು ಈ ಹಣ ನೀಡಿದ್ದರಂತೆ.
ಆದರೆ ಈ ಕುರಿತು ವಿಡಿಯೋ ಮಾಡಲು ನಾನು ಏಕೆ ಒಪ್ಪಿಕೊಳ್ಳಲಿಲ್ಲ ಎಂಬುದಕ್ಕೆ ಕಾರಣಗಳನ್ನು ಸಹ ಕಾವ್ಯಾ ಹಂಚಿಕೊಂಡಿದ್ದಾರೆ. ಜಿಯೋ ಇಂಟರ್ನೆಟ್ ಶುಲ್ಕಗಳನ್ನು ಹೆಚ್ಚಿಸಿರುವ ಸಮಯದಲ್ಲಿ, ಅಂಬಾನಿಯಂತಹ ಕಾರ್ಪೊರೇಟ್ ದೈತ್ಯರನ್ನು ಉತ್ತೇಜಿಸುವ ಸಮಯದಲ್ಲಿ ಪ್ರಾಮಾಣಿಕತೆ ತೋರಲಿಲ್ಲ. ನಂಬಿಕೆ ದುರ್ಬಲವಾಗಿದೆ ಮತ್ತು ಸ್ಥಿರವಾದ ಪ್ರಾಮಾಣಿಕತೆಯ ಮೂಲಕ ಕಾಲಾನಂತರದಲ್ಲಿ ನಿರ್ಮಿಸಲಾಗಿದೆ. ನನ್ನ ಪ್ರೇಕ್ಷಕರು ವಿವೇಚನಾಶೀಲರಾಗಿದ್ದಾರೆ; ಅವರು ಪಾವತಿಸಿದ ಪ್ರಚಾರಗಳು ಮತ್ತು ನಿಜವಾದ ವಿಷಯದ ನಡುವೆ ವ್ಯತ್ಯಾಸವನ್ನು ತೋರಿಸಬಹುದು. ಹೀಗಾಗಿ, ಅವರ ನಂಬಿಕೆಯನ್ನು ಕಾಪಾಡುವುದು ಬಹಳ ಮುಖ್ಯ ಎಂದಿದ್ದಾರೆ.
ಭಾರತದಲ್ಲಿ ಜಾತಿ, ವರ್ಗ, ಲಿಂಗ ಮತ್ತು ಧರ್ಮದ ಕಾರಣದಿಂದ ಆಗಾಗ್ಗೆ ಮದುವೆಗಳು ರದ್ದಾಗುತ್ತವೆ. ಇವು ತನ್ನ ಮೌಲ್ಯಗಳು ಹೊಂದಿಕೆಯಾಗುವುದಿಲ್ಲ, ಇದಲ್ಲದೆ ನಾನೊಬ್ಬ ಶಿಕ್ಷಣ ಪಡೆದ ವ್ಯಕ್ತಿಯಾಗಿ ಈ ರೀತಿ ದಾರಿ ತಪ್ಪಿಸುವ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ.
3.6 ಲಕ್ಷ ಹಣ ನನ್ನ ಕಣ್ಣು ಕುಕ್ಕಿತ್ತು. ಆದರೆ ಇದು ನನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಇದು ತೊಡಕಾಗಲಿದೆ. ನನ್ನ ನಿಷ್ಠಾವಂತ ಫಾಲೋವರ್ಸ್ಗಳ ಕಟ್ಟಿ ಬೆಳೆಸಿರುತ್ತೇವೆ. ಇದು ಅಮೂಲ್ಯವಾಗಿದೆ ಎಂದು ಕಾವ್ಯಾ ವಿವರಿಸಿದ್ದಾಳೆ.
ಆಕೆಯ ಈ ಪೋಸ್ಟ್ ಹಲವರ ಗಮನ ಸೆಳೆದಿದೆ. ಅಲ್ಲದೆ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ, ಹಣ ತೆಗೆದುಕೊಂಡು ಹಲವರು ಯಾವು ವಿಚಾರವನ್ನಾದರೂ ಪ್ರಮೋಟ್ ಮಾಡುವ ಈ ಕಾಲದಲ್ಲಿ ಈಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಗಾದ್ರೆ ಈಗ ಇನ್ಸ್ಸ್ಟಾಗ್ರಾಮ್ನಲ್ಲಿ ಕೇಳಿಬರುತ್ತಿರುವ ಅಂಬಾನಿ ಮದುವೆಯ ಕುರಿತ ಎಲ್ಲಾ ವಿಡಿಯೋಗಳಿಗೂ ಹಣ ನೀಡಲಾಗಿದ್ಯಾ? ಎಂಬ ಅನುಮಾನ ಸಹ ಮೂಡುತ್ತಿವೆ. ಅಂಬಾನಿ ಮದುವೆಯನ್ನು ಹೊಗಳಿ ನೂರಾರು ಮಂದಿ ವಿಡಿಯೋ ಮಾಡಿದ್ದಾರೆ. ಇವರಲ್ಲಿ ಹಲವರಿಗೆ ಹಣ ಸಿಕ್ಕಿರಬಹುದು ಎಂಬ ಶಂಕೆ ಸಹ ವ್ಯಕ್ತವಾಗಿದೆ.
ಇನ್ಸ್ಸ್ಟಾಗ್ರಾಮ್ನಲ್ಲಿ ಕಾವ್ಯಾ ಬಹಳ ಕಡಿಮೆ ಅವಧಿಯಲ್ಲಿ ಬರೋಬ್ಬರಿ 1.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರ ವಿಡಿಯೋಗಳು ಲಕ್ಷ ಲಕ್ಷ ವೀಕ್ಷಣೆ ಪಡೆಯುತ್ತವೆ.



Click it and Unblock the Notifications