Latest Updates
-
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು! -
ಆನ್ಲೈನ್ ಸೆಕ್ಸ್ಟಾರ್ಷನ್ ವಂಚನೆ: ಅಪರಿಚಿತ ವಿಡಿಯೋ ಕಾಲ್ ರಿಸೀವ್ ಮಾಡಿದ್ರೆ ಹುಷಾರ್, ಇಲ್ಲಿದೆ ಎಚ್ಚರಿಕೆ! -
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಬೇಡಿದ್ದನ್ನು ಕರುಣಿಸುವ ಕಪ್ಪೆ ದೇವಾಲಯ..! ಎಲ್ಲಿದೆ ಗೊತ್ತಾ ಈ ವಿಶೇಷ ಗುಡಿ
ಭಾರತೀಯ ಸಂಪ್ರದಾಯವು ಪ್ರತಿಯೊಂದು ವಸ್ತುವಲ್ಲೂ ದೇವರನ್ನು ಕಾಣುವಂತಹ ಸಂಸ್ಕೃತಿ ಅಳವಡಿಸಿಕೊಂಡಿದೆ. ಹೀಗಾಗಿಯೇ ಹಿಂದೂಗಳಿಗೆ ಪ್ರತಿಯೊಂದು ಪ್ರಾಣಿ-ಪಕ್ಷಿ, ವಸ್ತುಗಳು ಸಹ ಪವಿತ್ರ ಎಂದು ನಂಬಲಾಗಿದೆ. ದೇಶದ ಹಲವು ಭಾಗದಲ್ಲಿ ಚಿತ್ರ ವಿಚಿತ್ರ ದೇವಾಲಯವನ್ನೂ ಸಹ ನಾವು ಕಾಣಬಹುದಾಗಿದೆ.
ಅಚ್ಚರಿ ಎಂದರೆ ನಾವು ನಾಗರಹಾವನ್ನೂ ದೇವರೆಂದು ಪೂಜಿಸುವ ಹಿನ್ನೆಲೆ ಗ್ರಾಮ ಗ್ರಾಮದಲ್ಲೂ ನಾಗರ ಬನವನ್ನು ಕಾಣಬಹುದು. ಇನ್ನು ಹಾವಿನ ಆಹಾರವಾದ ಕಪ್ಪೆಗೂ ಭಾರತದ ನೆಲೆಯಲ್ಲಿ ಪವಿತ್ರ ಸ್ಥಾನವಿದೆ. ಕಪ್ಪೆಗೂ ಕೆಲವು ಕಡೆ ದೇವಾಲಯವಿದ್ದು, ಕಪ್ಪೆಯನ್ನು ಪೂಜಿಸಲಾಗುತ್ತದೆ.
ಹಾಗಾದರೆ ನಾವಿಂದು ಭಾರತದ ಯಾವ ಭಾಗದಲ್ಲಿ ಕಪ್ಪೆ ದೇವಾಲಯವಿದೆ? ಅದರ ವಿಶೇಷವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉತ್ತರ ಪ್ರದೇಶದಲ್ಲಿರುವ ಈ ಕಪ್ಪೆ ದೇವಾಲಯದ ಕಥೆಯು ಸಾಕಷ್ಟು ಆಸಕ್ತಿದಾಯಕವಾಗಿದೆ ಮತ್ತು ನಮ್ಮನ್ನು ಹಿಂದಿನ ಕಾಲಕ್ಕೆ ಕರೆದೊಯ್ಯುತ್ತದೆ. ಕಪ್ಪೆ ದೇವಾಲಯವು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಓಲ್ ಪಟ್ಟಣದಲ್ಲಿದೆ. ಇದು ಲಖಿಂಪುರದಿಂದ ಸೀತಾಪುರದ ನಡುವಿನ ಮಾರ್ಗದಲ್ಲಿದೆ. ಲಖಿಂಪುರ ಖೇರಿಯು ರಾಜ್ಯದ ರಾಜಧಾನಿಯಾದ ಲಕ್ನೋದಿಂದ ಸುಮಾರು 130 ಕಿಮೀ ದೂರದಲ್ಲಿದೆ.

ಹಿಂದೂ ವೈದಿಕ ಶಾಸ್ತ್ರದ ಪ್ರಕಾರ ಕಪ್ಪೆ ಸಮೃದ್ಧಿ, ಅದೃಷ್ಟ ಮತ್ತು ಫಲವತ್ತತೆಯ ಸಂಕೇತವಂತೆ. ಆದ್ದರಿಂದ ಕಪ್ಪೆಯನ್ನೂ ಪೂಜಿಸಲಾಗುತ್ತದೆ. ಈ ಅನನ್ಯ ಕಪ್ಪೆ ದೇವಾಲಯವು 200 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಇದು ಓಲ್ ಪಟ್ಟಣದಲ್ಲಿದೆ. ಈ ಪ್ರದೇಶವು ಓಲ್ ಸಾಮ್ರಾಜ್ಯದ ಭಾಗವಾಗಿತ್ತು ಮತ್ತು ದೇವಾಲಯವನ್ನು ಓಯೆಲ್ ಆಡಳಿತಗಾರರು ನಿರ್ಮಿಸಿದರು. ಅಚ್ಚರಿ ಎಂದರೆ ಈ ದೇವಾಲಯದ ಪ್ರಧಾನ ದೇವರು ಶಿವನೇ ಹೊರತು ಕಪ್ಪೆಯಲ್ಲ. ಆದರೆ, ದೇವಸ್ಥಾನದ ರಚನೆಯೇ ಕುತೂಹಲ ಮೂಡಿಸುತ್ತದೆ.
ಶಿವ ಪ್ರಧಾನ ದೇವತೆಯಾಗಿರುವುದರಿಂದ ಇದನ್ನು ಉತ್ತರ ಪ್ರದೇಶದ ನರ್ಮದೇಶ್ವರ ದೇವಾಲಯ ಎಂದೂ ಕರೆಯುತ್ತಾರೆ. ಕಪ್ಪೆ ದೇವಾಲಯದ ದಂತಕಥೆ ಒಮ್ಮೆ ಬಖತ್ ಸಿಂಗ್ ಎಂಬ ರಾಜನು ಕಪ್ಪೆಯಿಂದ ಆಶೀರ್ವದಿಸಲ್ಪಟ್ಟನು. ಅದರ ನಂತರ, ಅವರ ಜೀವನವು ಸಮೃದ್ಧವಾಯಿತು ಮತ್ತು ಅವರ ಮುಂದಿನ ಪೀಳಿಗೆಗಳು ಸಹ ಉತ್ತಮ ಜೀವನ ಪಡೆದರು . ಆದ್ದರಿಂದ, ಆ ದೈವಿಕ ಕಪ್ಪೆಯ ಗೌರವಾರ್ಥವಾಗಿ ದೇವಾಲಯವನ್ನು ನಿರ್ಮಿಸಲಾಯಿತು ಎಂಬ ಉಲ್ಲೇಖವಿದೆ.
ನಿಸ್ಸಂದೇಹವಾಗಿ ಈ ಕಪ್ಪೆ ದೇವಾಲಯವು ಭಾರತದ ವಿಶಿಷ್ಟ ದೇವಾಲಯಗಳಲ್ಲಿ ಒಂದಾಗಿದೆ. ಆದಾಗ್ಯೂ, ಇದು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳವಾಗಿದೆ. ಕಪ್ಪೆ ಅದೃಷ್ಟ ಮತ್ತು ಫಲವತ್ತತೆಯ ಸಂಕೇತವಾಗಿದೆ. ಹಾಗಾಗಿ ಇಲ್ಲಿಗೆ ಬರುವ ದಂಪತಿ ಆರೋಗ್ಯವಂತ ಮಕ್ಕಳಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಸುತ್ತಮುತ್ತಲಿನ ಅನೇಕ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶಿವರಾತ್ರಿ ಮತ್ತು ದೀಪಾವಳಿಯಂತಹ ಹಬ್ಬಗಳಲ್ಲಿ ನರ್ಮದೇಶ್ವರ ದೇವಸ್ಥಾನಕ್ಕೆ ಹೆಚ್ಚಾಗಿ ಭೇಟಿ ನೀಡಲಾಗುತ್ತದೆ.
ಈ ದೇವಾಲಯದ ಮುಂಭಾಗದಲ್ಲಿ ಕಪ್ಪೆ ಆಕಾರದ ಬೃಹತ್ ಆಕೃತಿಯಿದೆ. ಕಪ್ಪೆ ತನ್ನೆರಡು ಕೈಗಳನ್ನು ಮುಂದೆ ಚಾಚಿದ್ದು ಅದರ ಕುತ್ತಿಗೆ ಭಾಗದಲ್ಲಿ ಸಣ್ಣ ರಂಧ್ರವಿದೆ.
ಶೃಂಗೇರಿಯಲ್ಲಿದೆ ಕಪ್ಪೆ ಶಂಕರ ಗುಡಿ
ರಾಜ್ಯದ ಪವಿತ್ರ ಸ್ಥಳದಲ್ಲಿ ಒಂದಾದ ಶೃಂಗೇರಿಯಲ್ಲಿ ಕಪ್ಪೆ ಶಂಕರ ಗುಡಿಯಿದೆ. ಇಲ್ಲಿ ಕಪ್ಪೆಯೊಂದಕ್ಕೆ ನಾಗರಹಾವು ನೆರಳು ನೀಡುತ್ತಿರುವ ಮೂರ್ತಿ ಇದೆ. ಶಂಕರಾಚಾರ್ಯರು ಮೊದಲ ಸಲ ಶೃಂಗೇರಿಗೆ ಬಂದಾಗ ತುಂಗಾನದಿ ದಡದಲ್ಲಿ ಸರ್ಪವೊಂದನ್ನು ಕಂಡರು. ಅದು ಬಿಸಿಲಿನ ತಾಪದಲ್ಲಿ ಬಸವಳಿಯುತ್ತಿದ್ದ ಗರ್ಭಿಣಿ ಕಪ್ಪೆಗೆ ತನ್ನ ಹೆಡೆಯಿಂದ ನೆರಳು ನೀಡುತ್ತಿತ್ತು. ಹೀಗಾಗಿ ಇದೊಂದು ಪವಿತ್ರ ಸ್ಥಳವಾಗಲಿದೆ ಎಂದು ಮನಗಂಡು ಅವರು ಇಲ್ಲಿಯೇ ಪ್ರಥಮ ಆಮ್ನಾಯ ಪೀಠವನ್ನು ಸ್ಥಾಪಿಸಿದರು.



Click it and Unblock the Notifications