Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಡಿದ್ದನ್ನು ಕರುಣಿಸುವ ಕಪ್ಪೆ ದೇವಾಲಯ..! ಎಲ್ಲಿದೆ ಗೊತ್ತಾ ಈ ವಿಶೇಷ ಗುಡಿ
ಭಾರತೀಯ ಸಂಪ್ರದಾಯವು ಪ್ರತಿಯೊಂದು ವಸ್ತುವಲ್ಲೂ ದೇವರನ್ನು ಕಾಣುವಂತಹ ಸಂಸ್ಕೃತಿ ಅಳವಡಿಸಿಕೊಂಡಿದೆ. ಹೀಗಾಗಿಯೇ ಹಿಂದೂಗಳಿಗೆ ಪ್ರತಿಯೊಂದು ಪ್ರಾಣಿ-ಪಕ್ಷಿ, ವಸ್ತುಗಳು ಸಹ ಪವಿತ್ರ ಎಂದು ನಂಬಲಾಗಿದೆ. ದೇಶದ ಹಲವು ಭಾಗದಲ್ಲಿ ಚಿತ್ರ ವಿಚಿತ್ರ ದೇವಾಲಯವನ್ನೂ ಸಹ ನಾವು ಕಾಣಬಹುದಾಗಿದೆ.
ಅಚ್ಚರಿ ಎಂದರೆ ನಾವು ನಾಗರಹಾವನ್ನೂ ದೇವರೆಂದು ಪೂಜಿಸುವ ಹಿನ್ನೆಲೆ ಗ್ರಾಮ ಗ್ರಾಮದಲ್ಲೂ ನಾಗರ ಬನವನ್ನು ಕಾಣಬಹುದು. ಇನ್ನು ಹಾವಿನ ಆಹಾರವಾದ ಕಪ್ಪೆಗೂ ಭಾರತದ ನೆಲೆಯಲ್ಲಿ ಪವಿತ್ರ ಸ್ಥಾನವಿದೆ. ಕಪ್ಪೆಗೂ ಕೆಲವು ಕಡೆ ದೇವಾಲಯವಿದ್ದು, ಕಪ್ಪೆಯನ್ನು ಪೂಜಿಸಲಾಗುತ್ತದೆ.
ಹಾಗಾದರೆ ನಾವಿಂದು ಭಾರತದ ಯಾವ ಭಾಗದಲ್ಲಿ ಕಪ್ಪೆ ದೇವಾಲಯವಿದೆ? ಅದರ ವಿಶೇಷವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉತ್ತರ ಪ್ರದೇಶದಲ್ಲಿರುವ ಈ ಕಪ್ಪೆ ದೇವಾಲಯದ ಕಥೆಯು ಸಾಕಷ್ಟು ಆಸಕ್ತಿದಾಯಕವಾಗಿದೆ ಮತ್ತು ನಮ್ಮನ್ನು ಹಿಂದಿನ ಕಾಲಕ್ಕೆ ಕರೆದೊಯ್ಯುತ್ತದೆ. ಕಪ್ಪೆ ದೇವಾಲಯವು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಓಲ್ ಪಟ್ಟಣದಲ್ಲಿದೆ. ಇದು ಲಖಿಂಪುರದಿಂದ ಸೀತಾಪುರದ ನಡುವಿನ ಮಾರ್ಗದಲ್ಲಿದೆ. ಲಖಿಂಪುರ ಖೇರಿಯು ರಾಜ್ಯದ ರಾಜಧಾನಿಯಾದ ಲಕ್ನೋದಿಂದ ಸುಮಾರು 130 ಕಿಮೀ ದೂರದಲ್ಲಿದೆ.

ಹಿಂದೂ ವೈದಿಕ ಶಾಸ್ತ್ರದ ಪ್ರಕಾರ ಕಪ್ಪೆ ಸಮೃದ್ಧಿ, ಅದೃಷ್ಟ ಮತ್ತು ಫಲವತ್ತತೆಯ ಸಂಕೇತವಂತೆ. ಆದ್ದರಿಂದ ಕಪ್ಪೆಯನ್ನೂ ಪೂಜಿಸಲಾಗುತ್ತದೆ. ಈ ಅನನ್ಯ ಕಪ್ಪೆ ದೇವಾಲಯವು 200 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಇದು ಓಲ್ ಪಟ್ಟಣದಲ್ಲಿದೆ. ಈ ಪ್ರದೇಶವು ಓಲ್ ಸಾಮ್ರಾಜ್ಯದ ಭಾಗವಾಗಿತ್ತು ಮತ್ತು ದೇವಾಲಯವನ್ನು ಓಯೆಲ್ ಆಡಳಿತಗಾರರು ನಿರ್ಮಿಸಿದರು. ಅಚ್ಚರಿ ಎಂದರೆ ಈ ದೇವಾಲಯದ ಪ್ರಧಾನ ದೇವರು ಶಿವನೇ ಹೊರತು ಕಪ್ಪೆಯಲ್ಲ. ಆದರೆ, ದೇವಸ್ಥಾನದ ರಚನೆಯೇ ಕುತೂಹಲ ಮೂಡಿಸುತ್ತದೆ.
ಶಿವ ಪ್ರಧಾನ ದೇವತೆಯಾಗಿರುವುದರಿಂದ ಇದನ್ನು ಉತ್ತರ ಪ್ರದೇಶದ ನರ್ಮದೇಶ್ವರ ದೇವಾಲಯ ಎಂದೂ ಕರೆಯುತ್ತಾರೆ. ಕಪ್ಪೆ ದೇವಾಲಯದ ದಂತಕಥೆ ಒಮ್ಮೆ ಬಖತ್ ಸಿಂಗ್ ಎಂಬ ರಾಜನು ಕಪ್ಪೆಯಿಂದ ಆಶೀರ್ವದಿಸಲ್ಪಟ್ಟನು. ಅದರ ನಂತರ, ಅವರ ಜೀವನವು ಸಮೃದ್ಧವಾಯಿತು ಮತ್ತು ಅವರ ಮುಂದಿನ ಪೀಳಿಗೆಗಳು ಸಹ ಉತ್ತಮ ಜೀವನ ಪಡೆದರು . ಆದ್ದರಿಂದ, ಆ ದೈವಿಕ ಕಪ್ಪೆಯ ಗೌರವಾರ್ಥವಾಗಿ ದೇವಾಲಯವನ್ನು ನಿರ್ಮಿಸಲಾಯಿತು ಎಂಬ ಉಲ್ಲೇಖವಿದೆ.
ನಿಸ್ಸಂದೇಹವಾಗಿ ಈ ಕಪ್ಪೆ ದೇವಾಲಯವು ಭಾರತದ ವಿಶಿಷ್ಟ ದೇವಾಲಯಗಳಲ್ಲಿ ಒಂದಾಗಿದೆ. ಆದಾಗ್ಯೂ, ಇದು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳವಾಗಿದೆ. ಕಪ್ಪೆ ಅದೃಷ್ಟ ಮತ್ತು ಫಲವತ್ತತೆಯ ಸಂಕೇತವಾಗಿದೆ. ಹಾಗಾಗಿ ಇಲ್ಲಿಗೆ ಬರುವ ದಂಪತಿ ಆರೋಗ್ಯವಂತ ಮಕ್ಕಳಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಸುತ್ತಮುತ್ತಲಿನ ಅನೇಕ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶಿವರಾತ್ರಿ ಮತ್ತು ದೀಪಾವಳಿಯಂತಹ ಹಬ್ಬಗಳಲ್ಲಿ ನರ್ಮದೇಶ್ವರ ದೇವಸ್ಥಾನಕ್ಕೆ ಹೆಚ್ಚಾಗಿ ಭೇಟಿ ನೀಡಲಾಗುತ್ತದೆ.
ಈ ದೇವಾಲಯದ ಮುಂಭಾಗದಲ್ಲಿ ಕಪ್ಪೆ ಆಕಾರದ ಬೃಹತ್ ಆಕೃತಿಯಿದೆ. ಕಪ್ಪೆ ತನ್ನೆರಡು ಕೈಗಳನ್ನು ಮುಂದೆ ಚಾಚಿದ್ದು ಅದರ ಕುತ್ತಿಗೆ ಭಾಗದಲ್ಲಿ ಸಣ್ಣ ರಂಧ್ರವಿದೆ.
ಶೃಂಗೇರಿಯಲ್ಲಿದೆ ಕಪ್ಪೆ ಶಂಕರ ಗುಡಿ
ರಾಜ್ಯದ ಪವಿತ್ರ ಸ್ಥಳದಲ್ಲಿ ಒಂದಾದ ಶೃಂಗೇರಿಯಲ್ಲಿ ಕಪ್ಪೆ ಶಂಕರ ಗುಡಿಯಿದೆ. ಇಲ್ಲಿ ಕಪ್ಪೆಯೊಂದಕ್ಕೆ ನಾಗರಹಾವು ನೆರಳು ನೀಡುತ್ತಿರುವ ಮೂರ್ತಿ ಇದೆ. ಶಂಕರಾಚಾರ್ಯರು ಮೊದಲ ಸಲ ಶೃಂಗೇರಿಗೆ ಬಂದಾಗ ತುಂಗಾನದಿ ದಡದಲ್ಲಿ ಸರ್ಪವೊಂದನ್ನು ಕಂಡರು. ಅದು ಬಿಸಿಲಿನ ತಾಪದಲ್ಲಿ ಬಸವಳಿಯುತ್ತಿದ್ದ ಗರ್ಭಿಣಿ ಕಪ್ಪೆಗೆ ತನ್ನ ಹೆಡೆಯಿಂದ ನೆರಳು ನೀಡುತ್ತಿತ್ತು. ಹೀಗಾಗಿ ಇದೊಂದು ಪವಿತ್ರ ಸ್ಥಳವಾಗಲಿದೆ ಎಂದು ಮನಗಂಡು ಅವರು ಇಲ್ಲಿಯೇ ಪ್ರಥಮ ಆಮ್ನಾಯ ಪೀಠವನ್ನು ಸ್ಥಾಪಿಸಿದರು.



Click it and Unblock the Notifications