Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಹೆಂಡತಿಯನ್ನು ಪೀಸ್ ಮಾಡಿ ಕುಕ್ಕರ್ನಲ್ಲಿ ಬೇಯಿಸಿ, ಒಣಗಿಸಿ, ಸುಟ್ಟ ಮಾಜಿ ಸೈನಿಕ: ಮೊದಲು ಬೀದಿ ನಾಯಿಯ ಮೃಲೆ ಪ್ರಯೋಗ
ಮನುಷ್ಯ ಇಷ್ಟೊಂದು ಕ್ರೂರಿಯಾಗಲು ಸಾಧ್ಯನಾ? ಅದೂ ತನ್ನ ಕೈ ಹಿಡಿದು ಸುಖದಲ್ಲಿ-ದುಃಖದಲ್ಲಿ ನಾನು ನಿನ್ನ ಜೊತೆಗಿರುತ್ತೇನೆ ಎಂದು ಬಂದ ಧರ್ಮ ಪತ್ನಿಯನ್ನ ಎಷ್ಟೊಂದು ಕ್ರೂರವಾಗಿ ಸಾಯಿಸಿದ್ದಾನೆ. ತೆಲಂಗಾಣದ ಹೈದರಾಬಾದ್ನಲ್ಲಿ ನಡೆದ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ.ಅದು ಆತನೊಬ್ಬ ಮಾಜಿ ಸೈನಿಕ ಬೇರೆ, ಅಷ್ಟೊಂದು ಒಳ್ಳೆಯ ಹುದ್ದೆಯಲ್ಲಿ ಇದ್ದು ಬಂದವ ನಾಗರಿಕ ಸಮಾಜ ಬೆಚ್ಚಿ ಬೀಳಿಸುವಂಥ ನೀಚ ಕೃತ್ಯ ಮಾಡಿದ್ದಾನೆ.
ಜನರನ್ನು ಬೆಚ್ಚಿ ಬೀಳಿಸದ ಘಟನೆ ನಡೆದಿರುವುದು ವೆಂಕಟೇಶ್ವರ ಕಾಲೋನಿಯಲ್ಲಿರುವ ಮೀರಾಪತ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ. ನತದೃಷ್ಟೆಯನ್ನು ಪುಟ್ಟ ವೆಂಕಟ ಮಹಾದೇವಿ ಎಂದು ಗುರುತಿಸಲಾಗಿದೆ.

ಪತ್ನಿಯ ಶೀಲ ಶಂಕಿಸಿ ಭೀಕರವಾಗಿ ಕೊಂದಿದ್ದಾನೆ
ಈತ ತನ್ನ ಪತ್ನಿಯನ್ನು ಕ್ರೂರವಾಗಿ ಕೊಂದು ಕೊಲೆ ಕೇಸ್ನಿಂದ ಪಾರಾಗಲು ಮತ್ತಷ್ಟು ಕ್ರೂರಿಯಾಗಿ ಯೋಚಿಸಿ, ಕೆಯ ಮೃತ ದೇಹವನ್ನು ದುಂಡು-ದುಂಡಾಗಿ ಕತ್ತರಿಸಿ ದೊಡ್ಡ ಕುಕ್ಕರ್ನಲ್ಲಿ ಬೇಯಿಸಿ, ನಂತರ ಮಾಂಸವನ್ನು ಒಣಗಿಸಿ ಬಳಿಕ ಸುಟ್ಟು ಹಾಕಿದ್ದಾನೆ. ಈ ಪಾಪಿಯ ಹೆಸರು ಗುರುಮೂರ್ತಿ, ಈ ದಂಪತಿಗೆ ಮಕ್ಕಳಿಬ್ಬರಿದ್ದಾರೆ.
ಗುರುಮೂರ್ತಿ 13 ವರ್ಷಗಳ ಹಿಂದೆ ಮಾಧವಿಯನ್ನು ಮದುವೆಯಾಗಿದ್ದ, ಸೇನೆಯಿಂದ ನಿವೃತನಾದ ಬಳಿಕ ಕಾಂಚನ್ಬಾಗ್ನಲ್ಲಿರುವ ಡಿಆರ್ಡಿಒದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ ವಿಪರೀತ ಸಂಶು ಬುದ್ಧಿ, ಈ ಕಾರಣಕ್ಕೆ ಪತ್ನಿಯ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ, ಇವರಿಬ್ಬರ ನಡುವಿನ ಸಂಬಂಧ ಸರಿಯಿಲ್ಲ ಎಂಬುವುದು ಮಾಧವಿ ಮನೆಯವರಿಗೂ ಗೊತ್ತಿತ್ತು. ಇಬ್ಬರು ಮಕ್ಕಳಿದ್ದಾರೆ, ಆತ ತಮ್ಮ ಮಗಳ ಜೊತೆ ಚೆನ್ನಾಗಿ ಬಾಳಬಹುದು ಎಂಬ ನಿರೀಕ್ಷೆಯಲ್ಲಿದ್ದರು, ಆಗಾಗ ಜಗಳವಾಗಿ ಮತ್ತೆ ಸರಿಯಾಗುತ್ತಿರುವುದರಿಂದ ಮನೆಯವರು ಕೂಡ ಇತ ಇಂಥದ್ದೊಂದು ಕ್ರೂರ ಕೃತ್ಯ ಎಸಗಬಹುದು ಎಂದು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ.
ಕೆಲ ದಿನಗಳ ಹಿಂದೆ ಕೂಡ ಈತ ಹೆಂಡತಿಯ ಜೊತೆ ಜಗಳವಾಡುತ್ತಾನೆ, ಅಲ್ಲದೆ ಈತ ಆಕಸ್ಮಿತವಾಗಿ ಹೊಡೆದಾಗ ಹೆಂಡತಿ ಸತ್ತಿಲ್ಲ, ಈತ ಪ್ರೀಪ್ಲ್ಯಾನ್ ಮಾಡಿ ಹೆಂಡತಿಯನ್ನು ಸಾಯಿಸಿದ್ದಾನೆ, ಏಕೆಂದರೆ ಈತ ಹೆಂಡತಿಯನ್ನು ಸಾಯಿಸುವ ಮುನ್ನ ಬೀದಿ ನಾಯಿಯನ್ನು ಕೊಂದು ಅದನ್ನು ಕಟ್ ಮಾಡಿ ಬೇಯಿಸಿ, ಸುಟ್ಟು ಹಾಕಿದ್ದ, ಅದರಂತೆಯೇ ಮಾಧವಿಯನ್ನು ಕ್ರೂರವಾಗಿ ಕೊಂದು ಕತ್ತರಿಸಿ ದೊಡ್ಡ ಕುಕ್ಕರ್ನಲ್ಲಿ ಬೇಯಿಸಿದ್ದಾನೆ, ನಂತರ ನರಮಾಂಸವನ್ನು ಒಣಸಿಗಿಸಿ ಸುಟ್ಟು ಹಾಕಿ, ಹೆಂಡತಿ ನನ್ನ ಮೇಲೆ ಕೋಪಗೊಂಡು ಮನೆ ಬಿಟ್ಟು ಹೋದಳು ಎಂದು ಕತೆ ಕಟ್ಟುತ್ತಾನೆ.
ಮಾಧವಿ ತಾಯಿ ಮಗಳು ಕಾಣುತ್ತಿಲ್ಲ ಎಂದು ಪೊಲೀಸರಿಗೆ ಜನವರಿ 18ಕ್ಕೆ ಕೊಡುತ್ತಾರೆ. ಪೊಲೀಸರು ಗುರುಮೂರ್ತಿಯ ಚಲನವಲನ ಗಮನಿಸಿದಾಗ ಈತನೇ ಏನೋ ಮಾಡಿದ್ದಾನೆ ಎಂಬ ಸಂಶಯ ಬಂದು ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಬಂದು ಅವರದ್ದೇ ಆದ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ತಾನು ಮಾಡಿದ ಕೃತ್ಯ ಬಾಯಿ ಬಿಟ್ಟಿದ್ದಾನೆ.
ಈತ ಆಕೆಯನ್ನು ಕೊಂದು ಸಾಕ್ಷಿ ಸಿಗದಂತೆ ಏನು ಮಾಡಬೇಕು ಎಂಬುವುದಕ್ಕೆ ಯೂಟ್ಯೂಬ್ ಸರ್ಚ್ ಮಾಡಿದ್ದ, ನಂತರ ಬೀದಿ ನಾಯಿಯನ್ನು ಕೊಂದು ಪ್ರಯೋಗ ಮಾಡಿ ಬಳಿಕ ಅದೇ ರೀತಿ ಮಾಧವಿಯನ್ನು ಕೊಂದಿದ್ದಾನೆ, ಈ ಪ್ರಕರಣ ಇದೀಗ ದೇಶದ ಗಮನ ಸೆಳೆದಿದೆ.
ಹೊಂದಾಣಿಕೆಯಾಗುತ್ತಿಲ್ಲ ಎಂದರೆ ಬೇರೆಯಾಗಬಹುದಿತ್ತು, ಬದಲಿಗೆ ಎಷ್ಟೊಂದು ಕ್ರೂರವಾಗಿ ಸಾಯಿಸಿದ್ದಾನೆ
ಕೊಂದು ಫ್ರಿಡ್ಜ್ನಲ್ಲಿಡುವುದು, ಪತಿಯನ್ನು ಕೊಂದು ಹೋಮ ಕುಂಡದಲ್ಲಿ ಸುಟ್ಟು ಹಾಕಿದ್ದು, ಹೀಗೆ ಹಲವಾರು ಕ್ರೂರ ಕೃತ್ಯಗಳು ಬೆಳಕಿಗೆ ಬಂದಿದೆ, ಕೊಲೆ ಮಾಡಿದವ ಎಷ್ಟೇ ಬುದ್ಧಿವಂತಿಕೆ ತೋರಿದರೂ ಸಿಕ್ಕಾಕಿಕೊಂಡೇಕೊಳ್ಳುತ್ತಾನೆ. ಇಬ್ಬರ ನಡುವೆ ಹೊಂದಾಣಿಕೆಯಾಗುತ್ತಿಲ್ಲ ಎಂದಾದರೆ ಬೇರೆಯಾಗಿ ಬದುಕಬೇಕು, ಈ ರೀತಿ ಪ್ರಾಣ ತೆಗೆಯುವ ದುಷ್ಟ ಆಲೋಚನೆ ಮಾಡಬಾರದು ಅಲ್ವಾ?



Click it and Unblock the Notifications