Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ಹೆಂಡತಿಯನ್ನು ಪೀಸ್ ಮಾಡಿ ಕುಕ್ಕರ್ನಲ್ಲಿ ಬೇಯಿಸಿ, ಒಣಗಿಸಿ, ಸುಟ್ಟ ಮಾಜಿ ಸೈನಿಕ: ಮೊದಲು ಬೀದಿ ನಾಯಿಯ ಮೃಲೆ ಪ್ರಯೋಗ
ಮನುಷ್ಯ ಇಷ್ಟೊಂದು ಕ್ರೂರಿಯಾಗಲು ಸಾಧ್ಯನಾ? ಅದೂ ತನ್ನ ಕೈ ಹಿಡಿದು ಸುಖದಲ್ಲಿ-ದುಃಖದಲ್ಲಿ ನಾನು ನಿನ್ನ ಜೊತೆಗಿರುತ್ತೇನೆ ಎಂದು ಬಂದ ಧರ್ಮ ಪತ್ನಿಯನ್ನ ಎಷ್ಟೊಂದು ಕ್ರೂರವಾಗಿ ಸಾಯಿಸಿದ್ದಾನೆ. ತೆಲಂಗಾಣದ ಹೈದರಾಬಾದ್ನಲ್ಲಿ ನಡೆದ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ.ಅದು ಆತನೊಬ್ಬ ಮಾಜಿ ಸೈನಿಕ ಬೇರೆ, ಅಷ್ಟೊಂದು ಒಳ್ಳೆಯ ಹುದ್ದೆಯಲ್ಲಿ ಇದ್ದು ಬಂದವ ನಾಗರಿಕ ಸಮಾಜ ಬೆಚ್ಚಿ ಬೀಳಿಸುವಂಥ ನೀಚ ಕೃತ್ಯ ಮಾಡಿದ್ದಾನೆ.
ಜನರನ್ನು ಬೆಚ್ಚಿ ಬೀಳಿಸದ ಘಟನೆ ನಡೆದಿರುವುದು ವೆಂಕಟೇಶ್ವರ ಕಾಲೋನಿಯಲ್ಲಿರುವ ಮೀರಾಪತ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ. ನತದೃಷ್ಟೆಯನ್ನು ಪುಟ್ಟ ವೆಂಕಟ ಮಹಾದೇವಿ ಎಂದು ಗುರುತಿಸಲಾಗಿದೆ.

ಪತ್ನಿಯ ಶೀಲ ಶಂಕಿಸಿ ಭೀಕರವಾಗಿ ಕೊಂದಿದ್ದಾನೆ
ಈತ ತನ್ನ ಪತ್ನಿಯನ್ನು ಕ್ರೂರವಾಗಿ ಕೊಂದು ಕೊಲೆ ಕೇಸ್ನಿಂದ ಪಾರಾಗಲು ಮತ್ತಷ್ಟು ಕ್ರೂರಿಯಾಗಿ ಯೋಚಿಸಿ, ಕೆಯ ಮೃತ ದೇಹವನ್ನು ದುಂಡು-ದುಂಡಾಗಿ ಕತ್ತರಿಸಿ ದೊಡ್ಡ ಕುಕ್ಕರ್ನಲ್ಲಿ ಬೇಯಿಸಿ, ನಂತರ ಮಾಂಸವನ್ನು ಒಣಗಿಸಿ ಬಳಿಕ ಸುಟ್ಟು ಹಾಕಿದ್ದಾನೆ. ಈ ಪಾಪಿಯ ಹೆಸರು ಗುರುಮೂರ್ತಿ, ಈ ದಂಪತಿಗೆ ಮಕ್ಕಳಿಬ್ಬರಿದ್ದಾರೆ.
ಗುರುಮೂರ್ತಿ 13 ವರ್ಷಗಳ ಹಿಂದೆ ಮಾಧವಿಯನ್ನು ಮದುವೆಯಾಗಿದ್ದ, ಸೇನೆಯಿಂದ ನಿವೃತನಾದ ಬಳಿಕ ಕಾಂಚನ್ಬಾಗ್ನಲ್ಲಿರುವ ಡಿಆರ್ಡಿಒದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ ವಿಪರೀತ ಸಂಶು ಬುದ್ಧಿ, ಈ ಕಾರಣಕ್ಕೆ ಪತ್ನಿಯ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ, ಇವರಿಬ್ಬರ ನಡುವಿನ ಸಂಬಂಧ ಸರಿಯಿಲ್ಲ ಎಂಬುವುದು ಮಾಧವಿ ಮನೆಯವರಿಗೂ ಗೊತ್ತಿತ್ತು. ಇಬ್ಬರು ಮಕ್ಕಳಿದ್ದಾರೆ, ಆತ ತಮ್ಮ ಮಗಳ ಜೊತೆ ಚೆನ್ನಾಗಿ ಬಾಳಬಹುದು ಎಂಬ ನಿರೀಕ್ಷೆಯಲ್ಲಿದ್ದರು, ಆಗಾಗ ಜಗಳವಾಗಿ ಮತ್ತೆ ಸರಿಯಾಗುತ್ತಿರುವುದರಿಂದ ಮನೆಯವರು ಕೂಡ ಇತ ಇಂಥದ್ದೊಂದು ಕ್ರೂರ ಕೃತ್ಯ ಎಸಗಬಹುದು ಎಂದು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ.
ಕೆಲ ದಿನಗಳ ಹಿಂದೆ ಕೂಡ ಈತ ಹೆಂಡತಿಯ ಜೊತೆ ಜಗಳವಾಡುತ್ತಾನೆ, ಅಲ್ಲದೆ ಈತ ಆಕಸ್ಮಿತವಾಗಿ ಹೊಡೆದಾಗ ಹೆಂಡತಿ ಸತ್ತಿಲ್ಲ, ಈತ ಪ್ರೀಪ್ಲ್ಯಾನ್ ಮಾಡಿ ಹೆಂಡತಿಯನ್ನು ಸಾಯಿಸಿದ್ದಾನೆ, ಏಕೆಂದರೆ ಈತ ಹೆಂಡತಿಯನ್ನು ಸಾಯಿಸುವ ಮುನ್ನ ಬೀದಿ ನಾಯಿಯನ್ನು ಕೊಂದು ಅದನ್ನು ಕಟ್ ಮಾಡಿ ಬೇಯಿಸಿ, ಸುಟ್ಟು ಹಾಕಿದ್ದ, ಅದರಂತೆಯೇ ಮಾಧವಿಯನ್ನು ಕ್ರೂರವಾಗಿ ಕೊಂದು ಕತ್ತರಿಸಿ ದೊಡ್ಡ ಕುಕ್ಕರ್ನಲ್ಲಿ ಬೇಯಿಸಿದ್ದಾನೆ, ನಂತರ ನರಮಾಂಸವನ್ನು ಒಣಸಿಗಿಸಿ ಸುಟ್ಟು ಹಾಕಿ, ಹೆಂಡತಿ ನನ್ನ ಮೇಲೆ ಕೋಪಗೊಂಡು ಮನೆ ಬಿಟ್ಟು ಹೋದಳು ಎಂದು ಕತೆ ಕಟ್ಟುತ್ತಾನೆ.
ಮಾಧವಿ ತಾಯಿ ಮಗಳು ಕಾಣುತ್ತಿಲ್ಲ ಎಂದು ಪೊಲೀಸರಿಗೆ ಜನವರಿ 18ಕ್ಕೆ ಕೊಡುತ್ತಾರೆ. ಪೊಲೀಸರು ಗುರುಮೂರ್ತಿಯ ಚಲನವಲನ ಗಮನಿಸಿದಾಗ ಈತನೇ ಏನೋ ಮಾಡಿದ್ದಾನೆ ಎಂಬ ಸಂಶಯ ಬಂದು ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಬಂದು ಅವರದ್ದೇ ಆದ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ತಾನು ಮಾಡಿದ ಕೃತ್ಯ ಬಾಯಿ ಬಿಟ್ಟಿದ್ದಾನೆ.
ಈತ ಆಕೆಯನ್ನು ಕೊಂದು ಸಾಕ್ಷಿ ಸಿಗದಂತೆ ಏನು ಮಾಡಬೇಕು ಎಂಬುವುದಕ್ಕೆ ಯೂಟ್ಯೂಬ್ ಸರ್ಚ್ ಮಾಡಿದ್ದ, ನಂತರ ಬೀದಿ ನಾಯಿಯನ್ನು ಕೊಂದು ಪ್ರಯೋಗ ಮಾಡಿ ಬಳಿಕ ಅದೇ ರೀತಿ ಮಾಧವಿಯನ್ನು ಕೊಂದಿದ್ದಾನೆ, ಈ ಪ್ರಕರಣ ಇದೀಗ ದೇಶದ ಗಮನ ಸೆಳೆದಿದೆ.
ಹೊಂದಾಣಿಕೆಯಾಗುತ್ತಿಲ್ಲ ಎಂದರೆ ಬೇರೆಯಾಗಬಹುದಿತ್ತು, ಬದಲಿಗೆ ಎಷ್ಟೊಂದು ಕ್ರೂರವಾಗಿ ಸಾಯಿಸಿದ್ದಾನೆ
ಕೊಂದು ಫ್ರಿಡ್ಜ್ನಲ್ಲಿಡುವುದು, ಪತಿಯನ್ನು ಕೊಂದು ಹೋಮ ಕುಂಡದಲ್ಲಿ ಸುಟ್ಟು ಹಾಕಿದ್ದು, ಹೀಗೆ ಹಲವಾರು ಕ್ರೂರ ಕೃತ್ಯಗಳು ಬೆಳಕಿಗೆ ಬಂದಿದೆ, ಕೊಲೆ ಮಾಡಿದವ ಎಷ್ಟೇ ಬುದ್ಧಿವಂತಿಕೆ ತೋರಿದರೂ ಸಿಕ್ಕಾಕಿಕೊಂಡೇಕೊಳ್ಳುತ್ತಾನೆ. ಇಬ್ಬರ ನಡುವೆ ಹೊಂದಾಣಿಕೆಯಾಗುತ್ತಿಲ್ಲ ಎಂದಾದರೆ ಬೇರೆಯಾಗಿ ಬದುಕಬೇಕು, ಈ ರೀತಿ ಪ್ರಾಣ ತೆಗೆಯುವ ದುಷ್ಟ ಆಲೋಚನೆ ಮಾಡಬಾರದು ಅಲ್ವಾ?



Click it and Unblock the Notifications
