Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ತೆಂಗಿನಕಾಯಿ ಬಳಸಿ ಭೂಮಿ ಅಡಿಯಲ್ಲಿ ನೀರು ಇದೆಯೇ ತಿಳಿಯುವುದು ಹೇಗೆ?: ವೈರಲ್ ವೀಡಿಯೋ
ಇಲ್ಲೊಬ್ಬ ವ್ಯಕ್ತಿ ತೆಂಗಿನಕಾಯಿ ಹಿಡಿದು ಅಂತರ್ಜಲವಿದೆ ಎಂದು ತಿಳಿದುಕೊಳ್ಳಬಹುದು ಎಂದು ಪ್ರಾಕ್ಟಿಕಲ್ ಆಗಿ ತಿಳಿಸಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗಿದೆ.
ನಾವು ಒಂದು ನೆಲ ಖರೀದಿಸುತ್ತೇವೆ, ಅದರಲ್ಲಿ ಬೆಳೆ ಬೆಳೆಯಬೇಕೆಂದು ನಿರ್ಧರಿಸಿ ಬಾವಿನೋ, ಬೋರ್ವೆಲ್ ಕೊರಿಯಲು ತೀರ್ಮಾನಿಸಿ ಬಾವಿ ತೋಡಿದರೆ ಅಥವಾ ಬೋರ್ವೆಲ್ ಕೊರಿದರೆ ನೀರು ಸಿಗುವುದಿಲ್ಲ, ಅಷ್ಟು ಶ್ರಮವೂ ವ್ಯರ್ಥವಾಗುತ್ತದೆ. ಆದ್ದರಿಂದ ಬಾವಿ ಅಥವಾ ಬೋರ್ವೆಲ್ ಕೊರಿಯುವ ಮೊದಲು ಆ ಭಾಗದಲ್ಲಿ ಅಂತರ್ಜಲವಿದೆಯೇ ಎಂದು ಪರೀಕ್ಷಿಸುವುದು ಒಳ್ಳೆಯದು.

ಅಂತರ್ಜಲವಿದೆಯೇ ಎಂದು ತಿಳಿಯಲು ವೈಜ್ಞಾನಿಕ ವಿಧಾನಗಳಿವೆ, ವೈಜ್ಞಾನಿಕ ವಿಧಾನಗಳನ್ನು ನಂಬಿ ಬಾವಿ ಅಥವಾ ಬೋರ್ವೆಲ್ ತೋಡಿದವರಿಗೆ ನೀರು ಸಿಗದೇ ಇರುವ ಎಷ್ಟೋ ಉದಾಹರಣೆಗಳಿವೆ. ಕೆಲವರಿಗೆ ತುಂಬಾ ಆಳವಾಗಿ ಭೂಮಿಯನ್ನು ಕೊರಿದಾಗ ಸ್ವಲ್ಪ ನೀರು ಸಿಗಬಹುದು, ಆದರೆ ಅಷ್ಟು ನೀರು ನಮ್ಮ ಅವಶ್ಯಕತೆಗೆ ಸಾಕಾಗುವುದಿಲ್ಲ. ಇನ್ನು ಕೆಲವು ಬಾವಿಗಳಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ಇರುತ್ತದೆ, ಮಳೆಗಾಲದಲ್ಲಿ ನೀರು ಸಿಗುವುದಿಲ್ಲ, ಬೇಸಿಗೆಯಲ್ಲಿ ನೀರು ಬೇಕಾಗಿರುತ್ತೆ. ಆದರೆ ಆವಾಗ ನೀರಿಲ್ಲ ಎಂದರೆ ಬಾವಿ, ಬೋರ್ವೆಲ್ ಇದ್ದು ಏನು ಪ್ರಯೋಜನ ಅಲ್ವಾ?
ಆದರೆ ನಮ್ಮ ಹಿರಿಯರು ಬಾವಿ ತೋಡುವಾಗ ಕೆಲವೊಂದು ವಿಧಾನ ಅನುಸರಿಸುತ್ತಿದ್ದರು. ಇದನ್ನು ಈಗಲೂ ಕೆಲವು ಅನುಸರಿಸುತ್ತಾರೆ. ಅದೇನೆಂದರೆ ತೆಂಗಿನಕಾಯಿ ಅಂಗೈಯಲ್ಲಿಟ್ಟು ಎಲ್ಲಿ ಅಂತರ್ಜಲ ಅಧಿಕವಿದೆ ಎಂದು ಮೆಲ್ಲನೆ ನಡೆಯುತ್ತಾ ಪರಿಶೀಲಿಸಲಾಗುವುದು. ಎಲ್ಲಿ ಅಂತರ್ಜಲವಿರುತ್ತದೋ ಆ ಸ್ಥಳಕ್ಕೆ ಬಂದಾಗ ತೆಂಗಿನಕಾಯಿ ಅಲುಗಾಡಲರಂಭಿಸುತ್ತದೆ ಅಲ್ಲದೆ ತೆಂಗಿನಕಾಯಿ ಜುಟ್ಟು ನೇರವಾಗಿ ನಿಲ್ಲುತ್ತದೆ, ಆ ಸ್ಥಳದಲ್ಲಿ ಭಾವಿ ತೋಡಿದರೆ ಖಂಡಿತ ನೀರು ಸಿಗುವುದು. ಈ ವೀಡಿಯೋ ನೋಡಿದವರು ಹಿಂದೆ ನಮ್ಮ ಹಿರಿಯರು ಅನುಸರಿಸುತ್ತಿದ್ದ ಕೆಲವೊಂದು ವಿಧಾನಗಳು ಬರೀ ನಂಬಿಕೆಯಲ್ಲ ಅದರಲ್ಲಿ ವೈಜ್ಞಾನಿಕ ಅಂಶವಿರುತ್ತದೆ.



Click it and Unblock the Notifications