Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ತೆಂಗಿನಕಾಯಿ ಬಳಸಿ ಭೂಮಿ ಅಡಿಯಲ್ಲಿ ನೀರು ಇದೆಯೇ ತಿಳಿಯುವುದು ಹೇಗೆ?: ವೈರಲ್ ವೀಡಿಯೋ
ಇಲ್ಲೊಬ್ಬ ವ್ಯಕ್ತಿ ತೆಂಗಿನಕಾಯಿ ಹಿಡಿದು ಅಂತರ್ಜಲವಿದೆ ಎಂದು ತಿಳಿದುಕೊಳ್ಳಬಹುದು ಎಂದು ಪ್ರಾಕ್ಟಿಕಲ್ ಆಗಿ ತಿಳಿಸಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗಿದೆ.
ನಾವು ಒಂದು ನೆಲ ಖರೀದಿಸುತ್ತೇವೆ, ಅದರಲ್ಲಿ ಬೆಳೆ ಬೆಳೆಯಬೇಕೆಂದು ನಿರ್ಧರಿಸಿ ಬಾವಿನೋ, ಬೋರ್ವೆಲ್ ಕೊರಿಯಲು ತೀರ್ಮಾನಿಸಿ ಬಾವಿ ತೋಡಿದರೆ ಅಥವಾ ಬೋರ್ವೆಲ್ ಕೊರಿದರೆ ನೀರು ಸಿಗುವುದಿಲ್ಲ, ಅಷ್ಟು ಶ್ರಮವೂ ವ್ಯರ್ಥವಾಗುತ್ತದೆ. ಆದ್ದರಿಂದ ಬಾವಿ ಅಥವಾ ಬೋರ್ವೆಲ್ ಕೊರಿಯುವ ಮೊದಲು ಆ ಭಾಗದಲ್ಲಿ ಅಂತರ್ಜಲವಿದೆಯೇ ಎಂದು ಪರೀಕ್ಷಿಸುವುದು ಒಳ್ಳೆಯದು.

ಅಂತರ್ಜಲವಿದೆಯೇ ಎಂದು ತಿಳಿಯಲು ವೈಜ್ಞಾನಿಕ ವಿಧಾನಗಳಿವೆ, ವೈಜ್ಞಾನಿಕ ವಿಧಾನಗಳನ್ನು ನಂಬಿ ಬಾವಿ ಅಥವಾ ಬೋರ್ವೆಲ್ ತೋಡಿದವರಿಗೆ ನೀರು ಸಿಗದೇ ಇರುವ ಎಷ್ಟೋ ಉದಾಹರಣೆಗಳಿವೆ. ಕೆಲವರಿಗೆ ತುಂಬಾ ಆಳವಾಗಿ ಭೂಮಿಯನ್ನು ಕೊರಿದಾಗ ಸ್ವಲ್ಪ ನೀರು ಸಿಗಬಹುದು, ಆದರೆ ಅಷ್ಟು ನೀರು ನಮ್ಮ ಅವಶ್ಯಕತೆಗೆ ಸಾಕಾಗುವುದಿಲ್ಲ. ಇನ್ನು ಕೆಲವು ಬಾವಿಗಳಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ಇರುತ್ತದೆ, ಮಳೆಗಾಲದಲ್ಲಿ ನೀರು ಸಿಗುವುದಿಲ್ಲ, ಬೇಸಿಗೆಯಲ್ಲಿ ನೀರು ಬೇಕಾಗಿರುತ್ತೆ. ಆದರೆ ಆವಾಗ ನೀರಿಲ್ಲ ಎಂದರೆ ಬಾವಿ, ಬೋರ್ವೆಲ್ ಇದ್ದು ಏನು ಪ್ರಯೋಜನ ಅಲ್ವಾ?
ಆದರೆ ನಮ್ಮ ಹಿರಿಯರು ಬಾವಿ ತೋಡುವಾಗ ಕೆಲವೊಂದು ವಿಧಾನ ಅನುಸರಿಸುತ್ತಿದ್ದರು. ಇದನ್ನು ಈಗಲೂ ಕೆಲವು ಅನುಸರಿಸುತ್ತಾರೆ. ಅದೇನೆಂದರೆ ತೆಂಗಿನಕಾಯಿ ಅಂಗೈಯಲ್ಲಿಟ್ಟು ಎಲ್ಲಿ ಅಂತರ್ಜಲ ಅಧಿಕವಿದೆ ಎಂದು ಮೆಲ್ಲನೆ ನಡೆಯುತ್ತಾ ಪರಿಶೀಲಿಸಲಾಗುವುದು. ಎಲ್ಲಿ ಅಂತರ್ಜಲವಿರುತ್ತದೋ ಆ ಸ್ಥಳಕ್ಕೆ ಬಂದಾಗ ತೆಂಗಿನಕಾಯಿ ಅಲುಗಾಡಲರಂಭಿಸುತ್ತದೆ ಅಲ್ಲದೆ ತೆಂಗಿನಕಾಯಿ ಜುಟ್ಟು ನೇರವಾಗಿ ನಿಲ್ಲುತ್ತದೆ, ಆ ಸ್ಥಳದಲ್ಲಿ ಭಾವಿ ತೋಡಿದರೆ ಖಂಡಿತ ನೀರು ಸಿಗುವುದು. ಈ ವೀಡಿಯೋ ನೋಡಿದವರು ಹಿಂದೆ ನಮ್ಮ ಹಿರಿಯರು ಅನುಸರಿಸುತ್ತಿದ್ದ ಕೆಲವೊಂದು ವಿಧಾನಗಳು ಬರೀ ನಂಬಿಕೆಯಲ್ಲ ಅದರಲ್ಲಿ ವೈಜ್ಞಾನಿಕ ಅಂಶವಿರುತ್ತದೆ.



Click it and Unblock the Notifications