Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
15 ಸಾವಿರ ರೂಪಾಯಿಯನ್ನು ₹15 ಲಕ್ಷ ಮಾಡಿದ ಯುವಕ...! ಅದೃಷ್ಟ ಹುಡುಕಿ ಬರೋದು ಅಂದ್ರೆ ಇದೆ..!
ಕೆಲವರ ಅದೃಷ್ಟ ಯಾವಾಗ ಹೇಘೆ ಬದಲಾಗುತ್ತೆ ಅನ್ನೋದನ್ನ ಯಾರು ಸಹ ಊಹಿಸಲು ಸಾಧ್ಯವಾಗುವುದಿಲ್ಲ. ನೀವು ಕೆಲವರ ಜೀವನ ರಾತ್ರಿ ಬೆಳಗಾಗುವುದಲ್ಲಿ ಬದಲಾಗಿರೋದನ್ನು ನೀವು ಕೇಳಿರಬಹುದು. ಆದ್ರೆ ಇಲ್ಲೊಂದು ಪ್ರಕರಣದಲ್ಲೂ ಸಹ ಇದೇ ರೀತಿ ಅದೃಷ್ಟ ಖುಲಾಯಿಸಿದ ಕಥೆ ಇದೆ.
ಹೌದು ಯುವ ಸ್ಟಾರ್ಟ್ ಅಪ್ ಉದ್ಯಮಿಯೊಬ್ಬ ತನ್ನ ಬಳಿ ಇದ್ದ 15 ಸಾವಿರ ರೂಪಾಯಿಂದ 15 ಲಕ್ಷ ರೂಪಾಯಿ ದುಡಿದ ಕಥೆ ಇದು. ನೀವು VCMedia ಲ್ಯಾಬ್ಸ್ ಎಂಬ ಸ್ಟಾರ್ಟ್ ಅಪ್ ಬಗ್ಗೆ ಕೇಳಿರಬಹುದು. ಈ ಉದ್ಯಮಕ್ಕೆ ಸೇರಿಕೊಂಡವರನ ಕಥೆ ಇದು. ಹಾಗಾದ್ರೆ ಆತ 15 ಸಾವಿರವನ್ನ 15 ಲಕ್ಷ ರೂಪಾಯಿ ಆಗಿ ಬದಲಾಯಿಸಿದ್ದು ಹೇಗೆ? ಎಂಬ ಅದ್ಭುತ ಕಥೆ ಇಲ್ಲಿದೆ ನೋಡಿ.

22 ವರ್ಷದ ಈ ಸುಶ್ರುತ್ ಮಿಶ್ರಾ ಎಂಬಾತ 40 ಸಾವಿರ ಸಂಬಳದಿಂದ 15 ಲಕ್ಷ ವೇತನದ ಕಂಪನಿ ಸೇರಿಕೊಂಡ ಕಥೆಯನ್ನು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಹೇಗೆ ತನ್ನ ಮಾಜಿ ಪ್ರೇಯಸಿಯಿಂದ 15 ಸಾವಿರ ಪಡೆದು ಅದನ್ನು 15 ಲಕ್ಷ ರೂಪಾಯಿ ಆಗಿ ಬದಲಾಯಿಸಿದೆ ಎಂದು ಹೇಳಿಕೊಂಡಿದ್ದಾರೆ.
VCMedia ಸೃಷ್ಟಿಕರ್ತರಾದ ಸುಶ್ರುತ್ ಮಿಶ್ರಾ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ: "22 ನಲ್ಲಿ, ನಾನು ಬೆಂಗಳೂರಿಗೆ ಹಿಂದಿರುಗಲು ಟಿಕೆಟ್ ಕಾಯ್ದಿರಿಸಲು ತನ್ನ ಮಾಜಿ ಪ್ರೇಯಸಿಯಿಂದ 15 ಸಾವಿರ ಸಾಲ ಪಡೆದಿದ್ದೆ. ನನ್ನ ಬಳಿ ಒಂದು ಹುನ್ನಾರವಿರಲಿಲ್ಲ. ಆದರೆ ಆ ಹಂಬಲ ₹15,000 ಅನ್ನು ₹15,00,000 ಆಗಿ ಪರಿವರ್ತಿಸಿತು." ಎಂದು ಬರೆದುಕೊಂಡಿದ್ದಾರೆ.
ಹಾಗಾದ್ರೆ 15 ಸಾವಿರವನ್ನು 15 ಲಕ್ಷವಾಗಿ ಅವರು ಪರಿವರ್ತಿಸಿದ್ದು ಹೇಗೆ?
ಅದು ಸೆಪ್ಟೆಂಬರ್ 2022, ಸುಶ್ರತ್ ಮಿಶ್ರಾ ಎಂಬ ಉದ್ಯಮಿ ಹುಟ್ಟಿಕೊಂಡ ದಿನವಂತೆ. ಆತನ ಮಾಜಿ ಪ್ರೇಯಸಿ ಬೆಂಗಳೂರಿನಲ್ಲಿ ಡೆವಲೋಪರ್ ಈವೆಂಟ್ಗೆ ಆಹ್ವಾನ ನೀಡಿದ್ದರಂತೆ. ಅಲ್ಲದೆ ಸ್ಟಾರ್ಟ್ ಅಪ್ ನಿರ್ಮಾತೃಗಳ ಭೇಟಿ ಮಾಡಿಸುವುದಾಗಿ ಪ್ರಾಮಿಸ್ ಮಾಡಿದ್ದಳಂತೆ. 'ಅಲ್ಲಿ ನಾನೇನಾದ್ರು ಪಡೆದುಕೊಳ್ತೇನೆ' ಎಂಬ ವಿಶ್ವಾಸವಿತ್ತು ಎಂದು ಎಕ್ಸ್ ನಲ್ಲಿ ಮಿಶ್ರಾ ಬರೆದುಕೊಂಡಿದ್ದಾರೆ.
ಈ ವೇಳೆಗೆ ಅವರು 40 ರಿಂದ 50 ಸಾವಿರ ರೂಪಾಯಿ ತಿಂಗಳಿಗೆ ದುಡಿಯುತ್ತಿದ್ದರು. ಅಲ್ಪ ಸ್ವಲ್ಪ ಉಳಿತಾಯದ ಹಣವೂ ಅವರ ಬಳಿ ಇತ್ತು. ಆದರೆ ಬೆಂಗಳೂರಿಗೆ ವಾಪಾಸು ಹೋಗಲು ಸಹ ಅವರಬಳಿ ಹಣವಿರಲಿಲ್ಲವಂತೆ. ಕೇವಲ 3 ಸಾವಿರ ಅಷ್ಟೇ ಅವರ ಬ್ಯಾಂಕ್ ಅಕೌಂಟ್ನಲ್ಲಿ ಉಳಿದಿತ್ತಂತೆ, ಹೀಗಾಗಿ ಮಾಜಿ ಪ್ರೇಯಸಿ ಬಳಿ 15 ಸಾವಿರ ಸಾಲ ಪಡೆದು ಬೆಂಗಳೂರಿಗೆ ಬಂದರಂತೆ.
ಈ ಈವೆಂಟ್ಗೆ ಬಂದ ಮಿಶ್ರಾ, ಕಂಪನಿಯೊಂದರ ಡೆವಲಪರ್ ಮತ್ತು ಕಮ್ಯೂನಿಟಿ ಮ್ಯಾನೇಜರ್ ಪಾತ್ರಕ್ಕೆ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ ಎಂದು ತಿಳಿದುಕೊಂಡರು. ಬಳಿಕ ಈ ಅವಕಾಶ ಬಳಸಿಕೊಳ್ಳಲು ಮುಂದಾದ ಅವರು ನಿರಂತರ ಸಂದರ್ಶನದ ಮೂಲಕ ಈ ಕೆಲಸ ಗಿಟ್ಟಿಸಿದರಂತೆ. ಅವರಿಗೆ ವರ್ಷಕ್ಕೆ 15 ಲಕ್ಷ ರೂಪಾಯಿ ಪ್ಯಾಕೇಜ್ ಇರುವ ಕೆಲಸ ಇದಾಗಿತ್ತು.
ಇದೆಲ್ಲಾ ಬದಲಾಗಿದ್ದು ಕೇವಲ 15 ದಿನಗಳಲ್ಲಿ ಎಂದು ಅವರು ಬರೆದುಕೊಂಡಿದ್ದಾರೆ. ಅಂದು ಅವರು 15 ಸಾವಿರ ರೂಪಾಯಿ ಸಾಲ ಪಡೆಯದೇ ಹೋಗಿದ್ದರೆ ಇಂದು ಈ ಕಂಪನಿ ಕಟ್ಟಿ ಬೆಳೆಸಲು ಸಾಧ್ಯವಾಗುತ್ತಿರಲಿಲ್ಲವಂತೆ. ಎಲ್ಲರಿಗೂ ಈ ರೀತಿಯ ಅವಕಾಶ ಸಿಗುತ್ತದೆ ಆದರೆ ಅವರು ಈ ಅವಕಾಶ ಬಳಸಿಕೊಳ್ಳುವಲ್ಲಿ ಯಡುವುತ್ತಾರೆ ಎಂಬುದನ್ನು ಈ ಪೋಸ್ಟ್ ಮೂಲಕ ಅವರು ಹಂಚಿಕೊಂಡಿದ್ದಾರೆ.
ಜೀವನದಲ್ಲಿ ಯಾವಾಗ ಬೇಕಾದರು ಅವಕಾಶಗಳು ಹುಡುಕಿ ಬರಬಹುದು. ಈ ಅವಕಾಶ ಸಿಕ್ಕ ತಕ್ಷಣ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಅನ್ನೋದು ಹಲವರ ಅಭಪ್ರಾಯವಾಗಿದೆ. ಬೆಂಗಳೂರಿಗೆ ಬರಲು ಹಣವಿಲ್ಲದಾತ ಈಗ ತಿಂಗಳಿಗೆ 1 ಲಕ್ಷ ರೂಪಾಯಿಗೂ ಅಧಿಕ ವೇತನ ಬರುವ ಕೆಲಸ ಸಿಕ್ಕಿರುವುದು ಇದಕ್ಕೆ ಸಾಕ್ಷಿಯಾಗಿದೆ.



Click it and Unblock the Notifications











