Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಹನುಮಾನ್ ಜಯಂತಿಯನ್ನು ಈ ಪರಿಹಾರ ಮಾಡಿದರೆ ದಾರಿದ್ರ್ಯ, ಕಷ್ಟಗಳು ದೂರಾಗುವುದು
ಹನುಮಂತನನ್ನು ಭಕ್ತಿಯಿಂದ ಸ್ಮರಿಸಿದರೆ ಬದುಕಿನಲ್ಲಿರುವ ಎಲ್ಲಾ ಕಷ್ಟಗಳು ದೂರಾಗುವುದು, ಆದ್ದರಿಂದಲೇ ಆಂಜನೇಯ ಎಂದರೆ ಭಕ್ತರು ಕಣ್ಮುಚ್ಚಿ ತಮ್ಮ ಇಷ್ಟದೇವನನ್ನು ನಂಬುತ್ತಾರೆ. ಪ್ರತಿ ಮಂಗಳವಾರ ಹಾಗೂ ಶನಿವಾರ ಹನುಮಂತನ ಪೂಜೆ ಮಾಡುವುದರಿಂದ ನಮ್ಮ ಜೀವನದಲ್ಲಿರುವ ಕಷ್ಟಗಳು ದೂರಾಗುವುದು. ಅದರಲ್ಲೂ ಶನಿ ಸಾಡೇಸಾತಿ, ಶನಿ ಧೈಯ್ಯ ನಡೆಯುತ್ತಿರುವವರು ಹನುಮಂತನ ಮೊರೆ ಹೋದರೆ ಹನುಮಂತನ ಕೃಪೆಯಿಂದ ತುಂಬಾ ಕಷ್ಟಗಳಿಂದ ಪಾರಾಗಬಹುದು.
ಅದರಲ್ಲೂ ಹನುಮಾನ್ ಜಯಂತಿಯಂದು ಕೆಲ ಪರಿಹಾರ ಮಾಡಿದರೆ ಹೆಚ್ಚಿನ ಫಲ ದೊರೆಯಲಿದೆ. ಈ ದಿನ ಏನು ಮಾಡಿದರೆ ನಮ್ಮ ಜೀವನದಲ್ಲಿರುವ ಕಷ್ಟಗಳು ದೂರಾಗುವುದು, ಶನಿ ದೋಷವಿದ್ದರೆ ಅದರಿಂದ ಪಾರಾಗಲು ಏನು ಮಾಡಬೇಕು ಎಂದು ನೋಡೋಣ:

* ಹನುಮಾನ್ ಜಯಂತಿಯಂದು ಸುಂದರಕಾಂಡ ಹಾಗೂ ಹನುಮಾನ್ ಚಾಲೀಸಾ ಪಠಿಸಿ. ಈ ದಿನ ಹನುಮಂತನ ಭಕ್ತಿಯಿಂದ ಪೂಜಿಸುವುದರಿಂದ ಶನಿಯ ಕೆಟ್ಟ ದೃಷ್ಟಿಯಿಂದ ಪಾರಾಗಬಹುದು.
* ಹನುಮಾನ್ ಜಯಂತಿಯಂದು ಹನುಮಂತನಿಗೆ ಪೂಜೆ ಸಲ್ಲಿಸಿ. ಈ ದಿನ ಹಸುವಿಗೆ ಮೇವು ದಾನ ಮಾಡಿ. ಕಪ್ಪು ದನವಿದ್ದರೆ ಅದಕ್ಕೆ ಆರತಿ ಮಾಡಿ.
* ಹನುಮಾನ್ ಜಯಂತಿಯಂದು ಸೂರ್ಯಾಸ್ತದ ನಂತರ ಶನಿದೇವನನ್ನು ಪೂಜಿಸಿ. ಸಂಜೆ ಆಲದ ಮರಕ್ಕೆ ಸುತ್ತು ಬಂದು ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ಮತ್ತು ಹಾಲು ಮತ್ತು ಧೂಪವನ್ನು ಅರ್ಪಿಸಿ. ನಂತರ ಶನಿದೋಷ ಕಡಿಮೆ ಮಾಡುವಂತೆ ಪ್ರಾರ್ಥಿಸಿ.
* ಈ ದಿನ ನೀವು ಕೈಯಲ್ಲಿ ರುದ್ರಾಕ್ಷ ಹಿಡಿದು ಶನಿಯ ಯಾವುದೇ ಒಂದು ಮಂತ್ರವನ್ನು ಕನಿಷ್ಠ ಐದು ಸುತ್ತು ಜಪಿಸಿ. ಶನಿದೇವನು ಇದರಿಂದ ಸಂತುಷ್ಟನಾಗುತ್ತಾನೆ, ನಿಮ್ಮ ಕಷ್ಟಗಳು ದೂರಾಗುವುದು.
* ಈ ದಿನ ಕಪ್ಪು ಬಟ್ಟೆ, ಕಪ್ಪು ಎಳ್ಳು ಹಾಗೂ ಆಹಾರ ವಸ್ತುಗಳನ್ನು ದಾನ ಮಾಡಿ.
* ಹನುಮಾನ್ ಜಯಂತಿಯಂದು ಮಂಗಗಳಿಗೆ ಬಾಳೆಹಣ್ಣು ನೀಡಿ, ಕಪ್ಪು ನಾಯಿಗೆ ಆಹಾರ ಹಾಕಿ.
* ತುಂಬಾನೇ ಕಷ್ಟ, ಏನೇ ಮಾಡಿದರೂ ಕಷ್ಟದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ , ಏಕೋ ನನ್ನ ಸುತ್ತು ಋಣಾತ್ಮಕ ಶಕ್ತಿಯಿದೆ ಎಂದು ಭಾವಿಸುವವರು ಈ ದಿನ ಮನೆಮುಂದೆ ಕೆಂಪು ಭಾವುಟ ಕಟ್ಟಿ, ಇದರಿಂದ ಶ್ರೀ ಹನುಮಾನ್ ರಕ್ಷಣೆ ಮನೆಗೆ ಇರಲಿದೆ. ಕೆಂಪು ಬಾವುಟವನ್ನು ಮೊದಲು ಹನುಮಂತನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ ಬಂದ ಮೇಲೆ ಕಟ್ಟಿ.
* ಆರ್ಥಿಕ ತೊಂದರೆ ಅನುಭವಿಸುತ್ತಿರುವವರು ಈ ದಿನ ಬಡವರಿಗೆ ಆಹಾರವನ್ನು ದಾನ ಮಾಡಿ.
* ಪಿತೃದೋಷವಿದ್ದು ಇದರಿಂದಾಗಿ ತುಂಬಾ ತೊಂದರೆ ಅನುಭವಿಸಿದ್ದರೆ ಈ ದಿನ ಶ್ರೀ ರಾಮ ಹಾಗೂ ಹನುಮಂತನನ್ನು ಆರಾಧಿಸಿ, ಇದರಿಂದ ಪಿತೃಗಳಿಗೆ ಮೋಕ್ಷ ಸಿಗುವುದು ನಿಮ್ಮ ತೊಂದರೆ ದೂರಾಗುವುದು.
* ಏನಾದರೂ ಆರೋಗ್ಯ ಸಂಬಂಧಿತ ಸಮಸ್ಯೆಯಿದ್ದರೆ ಹನುಮಾನ್ ಜಯಂತಿಯಂದು 108 ಬಾರಿ ಹನುಮಾನ್ ಚಾಲೀಸಾ ಪಠಿಸಿ.
* ಮನೆಯಲ್ಲಿ ನಡೆಯಬೇಕಾದ ಶುಭ ಕಾರ್ಯಗಳಿಗೆ ವಿಘ್ನ ಉಂಟಾಗುತ್ತಿದೆ ಎಂದಾದರೆ ಆ ವಿಘ್ನ ನಿವಾರಣೆಗೆ ಹನುಮಂತನಿಗೆ ಕುಂಕುಮ ಅರ್ಪಿಸಿ ಆರಾಧನೆ ಮಾಡಿ.
* ಕೋರ್ಟ್ ಸಂಬಂಧಿತ ಸಮಸ್ಯೆಯಿದ್ದರೆ ಕೋರ್ಟ್ ಸಮಸ್ಯೆಯಿಂದ ಹೊರಬರಲು ದೇವಾಲಯಕ್ಕೆ ಕೆಂಪು ಬಾವುಟ ಅರ್ಪಿಸಿ.
* ವೀಳ್ಯೆದೆಲೆ ಅರ್ಪಿಸಿ: ತುಂಬಾ ಸವಾಲುಗಳು ಎದುರಾಗಿದೆ, ಪರಿಸ್ಥಿತಿ ನಿಮ್ಮ ಕೈ ಮೀರಿದೆ, ಈ ಸಮಸ್ಯೆಯಿಂದ ಹೊರಬರುವುದು ಹೇಗೆ ತಿಳಿಯದಿದ್ದರೆ ನೀವು ಹನುಮಂತನ ಮೊರೆ ಹೋದರೆ ಖಂಡಿತ ಪರಿಹಾರ ಸಿಗುತ್ತದೆ. ಹನುಮಾನ್ ಜಯಂತಿಯಂದು ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಿ. ಮಂಗಳವಾರ ಮತ್ತು ಶನಿವಾರ ಹನುಮಂತನ ದೇವಾಲಯಕ್ಕೆ ಹೋಗಿ ವೀಳ್ಯೆದೆಲೆ ಅರ್ಪಿಸಿ.
2023ರಲ್ಲಿ ಶನಿ ಸಾಡೇಸಾತಿ ಇರುವ ರಾಶಿಗಳು
ಶನಿ ಸಾಡೇಸಾತಿ ಇದ್ದರೆ ತುಂಬಾನೇ ಸಮಸ್ಯೆ ಎದುರಾಗುವುದು. ನಮ್ಮ ಕೆಲಸಗಳಲ್ಲಿ ಅನೇಕ ವಿಘ್ನ ಉಂಟಾಗುವುದು, ವ್ಯವಹಾರದಲ್ಲಿ ನಷ್ಟ ಉಂಟಾಗುವುದು. ಮನೆಯಲ್ಲಿ ಮಾನಸಿಕ ನೆಮ್ಮದಿ ಇರಲ್ಲ, ಆರೋಗ್ಯ ಸಮಸ್ಯೆಗಳು ಕಾಡುವುದು, ಆರ್ಥಿಕ ಸಂಕಷ್ಟ ಎದುರಾಗುವುದು ಹೀಗೆ ಅನೇಕ ಸಮಸ್ಯೆಗಳು ಎದುರಾಗುವುದು.
ಇದೀಗ ಮಕರ, ಕುಂಭ , ಮೀನ ರಾಶಿಯವರ ಮೇಲೆ ಶನಿ ಸಾಡೇಸಾತಿ ನಡೆಯುತ್ತಿದೆ. ತುಲಾ, ವಶ್ಚಿಕ ರಾಶಿಯವರು ಶನಿ ಧೈಯ್ಯ ಎದುರಿಸುತ್ತಿದ್ದಾರೆ.
ಹನುಮಾನ್ ಜಯಂತಿಯಂದು ಪರಿಹಾರ ಮಾಡಿದರೆ ಹನುಮಂತನ ಕೃಪೆಯಿಂದಾಗಿ ಶನಿದೋಷ ಕಡಿಮೆ ಮಾಡಬಹುದು.



Click it and Unblock the Notifications