Latest Updates
-
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ
Guru Purnima 2025: ಸಾಯಿಬಾಬಾರನ್ನು ಹೇಗೆ ಪೂಜಿಸಬೇಕು? ಪೂಜಾ ವಿಧಾನ, ಶುಭ ಫಲಗಳ ಸಂಪೂರ್ಣ ಮಾಹಿತಿ
ಗುರು ಪೂರ್ಣಿಮೆಯನ್ನು (Guru Purnima 2025) ಆಷಾಢ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ಹಬ್ಬವು ಜ್ಞಾನಕ್ಕೆ, ಗುರುಗಳಿಗೆ ಗೌರವಕ್ಕೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಸಂಕೇತವಾಗಿದೆ. ಈ ಹಬ್ಬವನ್ನು ವ್ಯಾಸ ಮಹರ್ಷಿಯ ಜಯಂತಿ ಎಂದು ಸಹ ಕರೆಯುತ್ತಾರೆ. ಗುರುಗಳನ್ನು ಸ್ಮರಿಸುವುದು ಮತ್ತು ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವುದು ಈ ಹಬ್ಬದ ಮುಖ್ಯ ಉದ್ದೇಶ. ಗುರು ಪೂರ್ಣಿಮೆಯ ದಿನದಂದು ಅನೇಕ ಜನರು ಸಾಯಿಬಾಬಾರನ್ನು ಗುರುಗಳೆಂದು ಭಾವಿಸಿ ಪೂಜೆ (Worship Sai Baba on Guru Purnima) ಮಾಡುತ್ತಾರೆ. ಉಪವಾಸ ವ್ರತ ಮಾಡುತ್ತಾರೆ. ಈ ಶುಭದಿನದಂದು ಸಾಯಿಬಾಬಾರನ್ನು ಹೇಗೆ ಪೂಜಿಸಬೇಕು? ಪೂಜಾ ವಿಧಾನ ಮತ್ತು ಶುಭ ಫಲಗಳ ಬಗ್ಗೆ ಇಲ್ಲಿದೆ ಮಾಹಿತಿ.
ಆಷಾಢ ಮಾಸದ ಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಇದು ಜೀವನದಲ್ಲಿ ಗುರುವಿನ ಮಹತ್ವವನ್ನು ತಿಳಿಸುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗುರು ಪೂರ್ಣಿಮೆಯಂದು ಗುರುವಿನ ಆಶೀರ್ವಾದವನ್ನು ಪಡೆದರೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ. ಮೊದಲೇ ಹೇಳಿದಂತೆ, ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದು ಸಹ ಕರೆಯಲಾಗುತ್ತದೆ. ಯಾಕಂದ್ರೆ, ಮಹಾಭಾರತದ ಲೇಖಕ ಮಹರ್ಷಿ ವೇದವ್ಯಾಸರು ಈ ದಿನದಂದು ಜನಿಸಿದರು. ಗುರು ಪೂರ್ಣಿಮೆಯ ದಿನ ಬಹಳ ಮಂಗಳಕರ ಯೋಗ ರಚನೆ ಆಗುತ್ತದೆ. ಈ ಯೋಗದಿಂದ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಅದು ಯಶಸ್ಸು ಖಚಿತ.

ಗುರು ಪೂರ್ಣಿಮೆ ಯಾವಾಗ?
ಹಿಂದೂ ಧರ್ಮದಲ್ಲಿ ಪೂಜೆ ಮತ್ತು ಧಾರ್ಮಿಕ ಆಚರಣೆಗಳನ್ನು ಸರಿಯಾದ ಸಮಯಕ್ಕೆ ಅನುಗುಣವಾಗಿ ನಡೆಸಲಾಗುತ್ತದೆ. ಈ ವರ್ಷದ ಆಷಾಢ ಪೂರ್ಣಿಮೆ ಜುಲೈ 9 ರಂದು ಪ್ರಾರಂಭವಾಗಿ ಜುಲೈ 10ರ ಬೆಳಗ್ಗೆ 1.36ಕ್ಕೆ ಮುಕ್ತಾಯವಾಗುತ್ತದೆ. ಮರುದಿನ ಬೆಳಗ್ಗೆ 2.06ಕ್ಕೆ, ಅಂದರೆ ಜುಲೈ 10 ಮತ್ತು ಜುಲೈ 11ರ ನಡುವೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ, ಗುರು ಪೂರ್ಣಿಮೆಯನ್ನು ಜುಲೈ 10ರಂದು ಆಚರಿಸಲಾಗುತ್ತದೆ.
ಪೂಜೆ ಪ್ರಾರಂಭ
ಬೆಳಗ್ಗೆ ಎದ್ದು ಸ್ನಾನ ಮಾಡಿ ಮನೆಯನ್ನು ಸ್ವಚ್ಛಗೊಳಿಸಬೇಕು. ಪೂಜಾ ಮಂದಿರದಲ್ಲಿ ಅಥವಾ ಪ್ರತ್ಯೇಕವಾಗಿ ಸಿದ್ಧಪಡಿಸಿದ ಪೀಠವನ್ನು ಹಳದಿ, ಕುಂಕುಮ, ಅಕ್ಕಿ ಹಿಟ್ಟಿನಿಂದ ಅಲಂಕರಿಸಿಕೊಳ್ಳಬೇಕು. ಸಾಯಿಬಾಬಾ ಫೋಟೋ ಅಥವಾ ವಿಗ್ರಹವನ್ನು ಹಳದಿ, ಬಿಳಿ, ಕೆಂಪು ಬಣ್ಣದ ಹೂವುಗಳಿಂದ ಅಲಂಕರಿಸಬೇಕು. ಕಡಲೆಕಾಳು ಹಾರವನ್ನು ಅರ್ಪಿಸುವುದು ಈ ಪೂಜೆಯಲ್ಲಿ ಒಂದು ವಿಶೇಷ ಅಂಶ.
ಪೂಜಾ ವಿಧಾನ
ಮೊದಲು ವಿನಾಯಕನಿಗೆ ಪೂಜೆ ಮಾಡಬೇಕು. ಹಸುವಿನ ತುಪ್ಪ ಅಥವಾ ಎಳ್ಳೆಣ್ಣೆಯಿಂದ ದೀಪ ಬೆಳಗಿಸಿ, ಇಷ್ಟ ದೈವಕ್ಕೆ ನಮಸ್ಕರಿಸಿಕೊಳ್ಳಬೇಕು. ವಿನಾಯಕನಿಗೆ ಅರಿಶಿನ, ಕುಂಕುಮ, ಅಕ್ಷತೆ, ಹೂವುಗಳನ್ನು ಅರ್ಪಿಸಿ ಅಷ್ಟೋತ್ತರಗಳನ್ನು ಅಥವಾ 'ಓಂ ಗಂ ಗಣಪತಯೇ ನಮಃ' ಎಂಬ ಮಂತ್ರವನ್ನು ಪಠಿಸಬೇಕು. ಬಾಳೆಹಣ್ಣು, ಬೆಲ್ಲದ ತುಂಡುಗಳನ್ನು ನೈವೇದ್ಯವಾಗಿ ಅರ್ಪಿಸಿ, ಅಗರಬತ್ತಿಯಿಂದ ಧೂಪ ಹಾಕಿ ಆರತಿ ಬೆಳಗಬೇಕು.
ನೈವೇದ್ಯಗಳು
ವಿನಾಯಕನ ಪೂಜೆಯ ಬಳಿಕ ಸಾಯಿಬಾಬಾ ಪೂಜೆಯನ್ನು ಪ್ರಾರಂಭಿಸಬೇಕು. 'ಓಂ ಶ್ರೀ ಸದ್ಗುರು ಸಾಯಿನಾಥ್ ಮಹಾರಾಜ್ ಕಿ ಜೈ' ಎಂದು ಪೂಜೆ ಪ್ರಾರಂಭಿಸಬೇಕು. ಹಾಲು ಅಥವಾ ಪಂಚಾಮೃತದಿಂದ ಅಭಿಷೇಕ ಮಾಡಬೇಕು. ಅಕ್ಷತೆ, ಹೂವುಗಳನ್ನು ಅರ್ಪಿಸಿ, ಅಷ್ಟೋತ್ತರಗಳನ್ನು ಪಠಿಸಬೇಕು. ಶ್ರೀ ಸಾಯಿ ಸಚ್ಚರಿತಮು ಅಧ್ಯಾಯಗಳನ್ನು ಓದಬೇಕು. ಇಲ್ಲವೇ ಸಾಯಿ ಕೋಟಿ ಬರೆಯುವುದು ಒಳ್ಳೆಯದು. ಹಣ್ಣುಗಳು, ಹಸಿ ಕಡಲೆಕಾಳು, ಕೋವಾ, ಪೊಲಗಂ, ಚಪಾತಿ, ಬ್ರೆಡ್, ಕಿಚಡಿ ಇತ್ಯಾದಿ ನೈವೇದ್ಯಗಳನ್ನು ಅರ್ಪಿಸಿ, ಸಾಂಬ್ರಾಣಿ ಧೂಪ ಬೆಳಗಿಸಬೇಕು. ಕೊನೆಯಲ್ಲಿ ಮಹಾ ಮಂಗಳಾರತಿ ಮಾಡಬೇಕು.
ಗುರು ಪೂರ್ಣಿಮಾ ನಿಯಮಗಳಿವು
• ಗುರು ಪೂರ್ಣಿಮೆಯ ದಿನದಂದು ಮಾಂಸಾಹಾರವನ್ನು ತಿನ್ನಬಾರದು.
• ಪೂಜೆ ಮಾಡಿದವರು ಕಠಿಣ ನೆಲದ ಮೇಲೆ ಮಲಗಬೇಕು.
• ಮೂಕ ಪ್ರಾಣಿಗಳಿಗೆ ಅನ್ನ ಹಾಕಬೇಕು.
• ಸುಳ್ಳು ಹೇಳಬಾರದು, ಜಗಳವಾಡಬಾರದು ಮತ್ತು ಮಕ್ಕಳನ್ನು ಹೊಡೆಯಬಾರದು.
• ಬ್ರಹ್ಮಚರ್ಯವನ್ನು ಪಾಲಿಸಿ, ಸಾಯಿಬಾಬಾ ನೀತಿ ವಾಕ್ಯಗಳನ್ನು ಓದಿಕೊಳ್ಳಬೇಕು.
• ದಿನದಲ್ಲಿ ಒಂದು ಹೊತ್ತು ಮಾತ್ರ ಊಟ ಮಾಡಬೇಕು.
ಈ ದಿನ ದತ್ತಾತ್ರೇಯ, ವೀರಬ್ರಹ್ಮೇಂದ್ರ, ದಕ್ಷಿಣಾಮೂರ್ತಿ, ರಾಘವೇಂದ್ರ ಸ್ವಾಮಿ ಮುಂತಾದ ಗುರುಗಳನ್ನು ಸಹ ಪೂಜಿಸಬಹುದು. ಹಣ್ಣುಗಳು, ಸಿಹಿತಿಂಡಿ, ಹೊಸ ಬಟ್ಟೆಗಳನ್ನು ನೀಡಿ ಗುರುಗಳ ಆಶೀರ್ವಾದ ಪಡೆಯುವುದು ಸಹ ಒಳ್ಳೆಯದು. ಹೀಗೆ ಮಾಡುವುದರಿಂದ ಶುಭ ಫಲಿತಾಂಶಗಳು ಉಂಟಾಗುತ್ತವೆ. ಈ ರೀತಿ ಗುರು ಪೂರ್ಣಿಮೆಯ ದಿನದಂದು ಸಾಯಿಬಾಬಾರನ್ನು ಪೂಜಿಸಿದರೆ ಸಕಲ ಶುಭಗಳು ಉಂಟಾಗುತ್ತವೆ.



Click it and Unblock the Notifications












