Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಈ ಬಾರಿ ನವರಾತ್ರಿಗೆ ಪಲ್ಲಕ್ಕಿಯಲ್ಲಿ ಬರ್ತಾ ಇದ್ದಾಳೆ ದುರ್ಗೆ: ಈ ವಾಹನ ಏನನ್ನು ಸೂಚಿಸುತ್ತದೆ?
2024ರಲ್ಲಿ ನವರಾತ್ರಿ ಸಂಭ್ರಮ ಅಕ್ಟೋಬರ್ 3ರಿಂದ ಶುರುವಾಗಲಿದೆ. ವರ್ಷದಲ್ಲಿ ನಾಲ್ಕು ನವರಾತ್ರಿ ಬರುತ್ತದೆ, ಅದರಲ್ಲಿ ನಾವು ಶಾರದೀಯ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು, ಅದರಲ್ಲಿಯೂ ನಮ್ಮ ಕರ್ನಾಟಕದಲ್ಲಿ ನವರಾತ್ರಿಯ ಬಳಿಕ ನಾಡಹಬ್ಬ ದಸರಾ ಸಂಭ್ರಮ.
ನವರಾತ್ರಿಯಲ್ಲಿ ನವ ದುರ್ಗೆಯರನ್ನು ಆರಾಧಿಸಲಾಗುವುದು. ಈ ನವರಾತ್ರಿ ಹಬ್ಬವನ್ನು ದೇಶದೆಲ್ಲಡೆ ಆಚರಿಸಲಾಗುವುದು. ನವರಾತ್ರಿ ಹಬ್ಬವನ್ನು ಅಕ್ಟೋಬರ್ 3ರಿಂದ ಅಕ್ಟೋಬರ್ 11ರವರೆಗೆ ನಡೆಯಲಿದೆ, ಅಕ್ಟೋಬರ್ 12ಕ್ಕೆ ದಸರಾ.

ಪ್ರತಿವರ್ಷ ನವರಾತ್ರಿಯ ಸಮಯದಲ್ಲಿ ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೆ ಎಂದು ನೋಡುತ್ತಾರೆ. ದೇವಿ ಬರುವ ವಾಹನಕ್ಕೆ ತುಂಬಾನೇ ಮಹತ್ವವಿದೆ, ಏಕೆಂದರೆ ದೇವಿ ಯಾವ ವಾಹನದಲ್ಲಿ ಬರ್ತಾಳೆ ಅದರಂತೆ ವರ್ಷಫಲ ಇರುತ್ತದೆ ಎಂದು ನಂಬಲಾಗುವುದು, ಪ್ರತಿ ನವರಾತ್ರಿಗೂ ದೇವಿ ಬೇರೆ-ಬೇರೆ ವಾಹನದಲ್ಲಿ ಬರ್ತಾಳೆ, ಯಾವ ವಾಹನದಲ್ಲಿ ಬಂದರೆ ಏನರ್ಥ, ಈ ಬಾರಿ ದೇವಿ ಯಾವ ವಾಹನದಲ್ಲಿ ಬರ್ತಾ ಇದ್ದಾಳೆ ಎಂದು ನೋಡೋಣ ಬನ್ನಿ:
ಈ ವರ್ಷ ಪಲ್ಲಕ್ಕಿಯಲ್ಲಿ ಬರ್ತಾ ಇದ್ದಾಳೆ ದೇವಿ
ಈ ಬಾರಿ ದುರ್ಗೆ ಪಲ್ಲಕ್ಕಿಯಲ್ಲಿ ಬರ್ತಾ ಇದ್ದಾಳೆ ದೇವಿ. ದೇವಿ ಪಲ್ಲಕ್ಕಿಯಲ್ಲಿ ಬಂದರೆ ಅದು ಸಾಂಕ್ರಾಮಿಕ ರೋಗ ಬರಲಿದೆ ಎಂಬುವುದನ್ನು ಸೂಚಿಸುತ್ತದೆ ಎಂದು ಹೇಳಲಾಗುವುದು. ದೇವಿ ಪಲ್ಲಕ್ಕಿಯಲ್ಲಿ ಬಂದರೆ ನೈಸರ್ಗಿಕ ವಿಪತ್ತು ಹೆಚ್ಚಾಗುವುದು, ದೇಶದಲ್ಲಿ ಹಿಂಸಾಚಾರ ಉಂಟಾಗಬಹುದು, ರೋಗ ರುಜಿನಗಳಿಂದ ಮನುಷ್ಯರು ನರಳುತ್ತಾರೆ ಎಂದು ಹೇಳಲಾಗುವುದು.
ದೇವಿ ಯಾವ ವಾಹನದಲ್ಲಿ ಬರ್ತಾಳೆ ಎಂದು ಹೇಗೆ ನಿರ್ಧರಿಸಲಾಗುವುದು
ನವರಾತ್ರಿ ಯಾವ ದಿನ ಶುರುವಾಗಲಿದೆ ಅದರಂತೆ ದೇವಿಯ ವಾಹನವನ್ನು ಹೇಳಲಾಗುವುದು, ಈ ಬಾರಿ ನವರಾತ್ರಿ ಗುರುವಾರ ಶುರುವಾಗಲಿದೆ, ಶುಕ್ರವಾರ ಅಂತ್ಯವಾಗಲಿದೆ.
ಗುರುವಾರ ನವರಾತ್ರಿ ಶುರುವಾಗುವುದರಿಂದ ಈ ಬಾರಿ ದುರ್ಗೆ ಪಲ್ಲಕ್ಕಿಯಲ್ಲಿ ಬರ್ತಾಳೆ.
ಯಾವ ದಿನ ಶುರುವಾದರೆ ಯಾವ ವಾಹನ:
ಸೋಮವಾರ, ಭಾನುವಾರ ನವರಾತ್ರಿ ಶುರುವಾದರೆ ದೇವಿ ಆನೆ ಮೇಲೇರಿ ಬರ್ತಾಳೆ
ಶನಿವಾರ, ಮಂಗಳವಾರ ಶುರುವಾದರೆ ಕುದುರೆ ಮೇಲೇರಿ ಬರ್ತಾಳೆ
ಗುರುವಾರ ನವರಾತ್ರಿ ಶುರುವಾದರೆ ದೇವಿ ಪಲ್ಲಕ್ಕಿಯಲ್ಲಿ ಬರ್ತಾಳೆ
ಬುಧವಾರ ನವರಾತ್ರಿ ಶುರುವಾದರೆ ದೋಣಿಯಲ್ಲಿ ಬರ್ತಾಳೆ.
ಯಾವ ವಾಹನದಲ್ಲಿ ಬಂದರೆ ಶುಭ, ಯಾವ ವಾಹನ ಶುಭವಲ್ಲ
ದುರ್ಗೆ ಆನೆ ಮೇಲೇರಿ ಬಂದರೆ: ದೇವಿ ಆನೆಯ ಮೇಲೇರಿ ಬಂದರೆ ಮಳೆ-ಬೆಳೆ ಚೆನ್ನಾಗಿರುತ್ತದೆ, ದೇಶದಲ್ಲಿ ಸಂಪತ್ತು-ಸಮೃದ್ಧಿ ಹೆಚ್ಚಾಗಲಿದೆ, ಜನರು ನೆಮ್ಮದಿಯ ಬದುಕನ್ನು ನಡೆಸುತ್ತಾರೆ, ಜನರು ಪರಸ್ಪರ ಪ್ರೀತಿ- ವಿಶ್ವಾಸದಿಂದ ವರ್ತಿಸುತ್ತಾರೆ.
ದೋಣಿ ಮೇಲೇರಿ ಬಂದರೆ: ದುರ್ಗೆ ದೋಣಿಯಲ್ಲಿ ಬಂದರೆ ಕೂಡ ಶುಭ ಎಂದು ಪರಿಗಣಿಸಲಾಗುವುದು. ದೋಣಿಯಲ್ಲಿ ಬಂದರೆ ದೇಶದಲ್ಲಿ ಮಳೆಗೆ ಅಭಾವ ಇರಲ್ಲ, ಬೆಳೆಗಳು ಚೆನ್ನಾಗಿ ಬೆಳೆಯುತ್ತದೆ , ದೇಶದ ಸಂಪತ್ತು ವೃದ್ಧಿಸಲಿದೆ, ಈ ವರ್ಷ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದು.
ಕುದುರೆ ಮತ್ತು ಪಲ್ಲಕ್ಕಿ ಶುಭವಲ್ಲ
ಅದೇ ದೇವಿ ಕುದುರೆ ಮತ್ತು ಪಲ್ಲಕ್ಕಿಯಲ್ಲಿ ಬಂದರೆ ಶುಭವಲ್ಲ ಎಂದು ಹೇಳಲಾಗುವುದು, ಈ ವಾಹನಗಳಲ್ಲಿ ದುರ್ಗೆ ಬಂದರೆ ಯುದ್ಧದ ಭೀತಿ ಇರುತ್ತದೆ, ಸಾಂಕ್ರಾಮಿಕ ರೋಗಗಳು ಕಾಡುವುದು, ದೇಶದಲ್ಲಿ ಗಲಭೆ ಹಲವು ಸವಾಲುಗಳು ಎದುರಾಗುವುದು ಎಂದು ಹೇಳಲಾಗುವುದು.
ಧ್ಯಾನ ಮಂತ್ರ
ಓಂ ಜಾತಾ ಜತ್ ಸಮ್ಯುಕ್ತಮರ್ಧೇಂದು ಕೃತಿ ಲಕ್ಷಣಮ್
ಈ ಮಂತ್ರ ಪಠಿಸಿ



Click it and Unblock the Notifications