Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಮಗಳಿಗೆ ಹೆಸರಿಡಲು ಶ್ರೀಕೃಷ್ಣನಿಗೆ ಸಂಬಂಧಿಸಿದ ಮುದ್ದಾದ ಹೆಸರುಗಳಿವು
ನೀವು ಶ್ರೀಕೃಷ್ಣನ ಪರಮ ಭಕ್ತೆಯಾಗಿದ್ದು ನಿಮಗೆ ಜನಿಸಿರುವ ಮುದ್ದಾದ ಹೆಣ್ಣು ಮಗುವಿಗೆ ಕೃಷ್ಣನಿಗೆ ಸಂಬಂಧಿಸಿದ ಹೆಸರನ್ನಿಡಬೇಕೆಂದು ನೀವು ಯೋಚಿಸುತ್ತಿದ್ದರೆ ನಿಮ್ಮ ಮಗುವಿಗೆ ಈ ಹೆಸರನ್ನು ಇಡಬಹುದು ನೋಡಿ:

ಅಚು
ಅರ್ಥ: ಬುದ್ಧಿವಂತಿಕೆ, ನಾಶ ಪಡಿಸಲು ಸಾಧ್ಯವಾಗದೇ ಇರುವಂಥದ್ದು
ಗೋಪಿ
ಹಸು-ಕರುವನ್ನು ಇಷ್ಟಪಡುವವಳು
ಕಾನು
ಕೃಷ್ಣನ ಹೆಸರು, ಗುಡುಗಿನ ದೇವರು
ಕೇಸು: ಕೃಷ್ಣನ ಹೆಸರು
ಮೀರಾ: ಕೃಷ್ಣ ಭಕ್ತೆ
ಮೋಹಿ: ಅತ್ಯಾಕರ್ಷಕ
ವೇಣು: ಸರಸ್ವತಿ, ಕೃಷ್ಣ ಮತ್ತೊಂದು ಹೆಸರು
ವ್ರಜ್: ಕೃಷ್ಣ ಜೀವಿಸಿದ ಸ್ಥಳ
ಅಮೋಹಾ: ರಾಧೆಯ ಮತ್ತೊಂದು ಹೆಸರು
ಬನ್ಸಿ: ಕೃಷ್ಣ ಕೊಳಲು
ಬನ್ಸೈ: ಕೊಳಲು
ದ್ವಿತಿ: ಎರಡು, ಶ್ರೀಕೃಷ್ಣನ ಮತ್ತೊಂದು ಹೆಸರು
ಕಾನ್ವಿ: ಕೃಷ್ಣನ ಕೊಳಲು ಹೆಸರು
ಕೇಶ್ವಿ: ಕೃಷ್ಣ, ಸುಂದರ ಕೂದಲಿನವಳು
ಕಿಸಾವ: ಶ್ರೀಕೃಷ್ಣನ ಮತ್ತೊಂದು ಹೆಸರು, ಪ್ರೀತಿ
ಕ್ರಿಶು: ಅತ್ಯಂತ ಪ್ರಿಯವಾದ, ಶ್ರೀಕೃಷ್ಣ
ಮೀರಾ: ಶ್ರೀಕೃಷ್ಣನ ಭಕ್ತೆ
ಮಿಶಾ: ನಗು
ಮೃದು: ಮೃದುವಾದ ಮನಸ್ಸಿನವಳು
ನಂದು: ವಿಶೇಷವಾದದ್ದು
ನಿಹಾರ್: ಶ್ರೀಕೃಷ್ಣ, ಮಂಜು
ರಾಧೆ, ರಾಧಾ: ಶ್ರೀಕೃಷ್ಣನ ಭಕ್ತೆ
ಸಾಕೇತ್: ಶ್ರೀಕೃಷ್ಣ, ಸ್ವರ್ಗ
ವಂಶಿ: ಶ್ರೀಕೃಷ್ಣ ಕೊಳಲು
ದರ್ಶಿ: ದೃಷ್ಟಿ
ದೆಮಿರಾ: ಕೃಷ್ಣನ ಭಕ್ತೆ
ದೇವಿಕಾ: ದೇವತೆ
ದ್ಯುತಿ: ಖುಷಿಯಾಗಿರುವವಳು, ಶ್ರೀಕೃಷ್ಣ
ದ್ವಿತಿ: ಕೃಷ್ಣನ ಮತ್ತೊಂದು ಹೆಸರು
ಕನ್ಶಿ: ಶ್ರೀಕೃಷ್ಣನಂತೆ, ನಿಧಿ
ಶ್ರೀ ಕೃಷ್ಣ ಏಕೆ ಆರಾಧಿಸಲಾಗುವುದು?
ಶ್ರೀ ಕೃಷ್ಣನನ್ನು ವಿಷ್ಣುವಿನ 8ನೇ ಅವತಾರ ಎಂದು ಹೇಳಲಾಗುವುದು. ದುಷ್ಟರ ನಾಶ, ಶಿಷ್ಟರ ಸಂರಕ್ಷಣೆಗೆ ಶ್ರೀವಿಷ್ಣು ಕೃಷ್ಣ ಅವತಾರ ಎತ್ತಿ ಭೂಮಿಗೆ ಬಂದಿದ್ದಾನೆ ಎಂದು ಹೇಳಲಾಗುವುದು. ಶ್ರೀ ಕೃಷ್ಣನ ಆರಾಧನೆ ಮಾಡುವುದರಿಂದ ಮನಸ್ಸಿಗೆ ಚೈತನ್ಯ ದೊರೆಯಲಿದೆ. ನಮ್ಮಲ್ಲಿರುವ ಗೊಂದಲಗಳು ದೂರಾಗುವುದು, ಬದುಕನ್ನು ಒಳ್ಳೆಯ ರೀತಿ ನಡೆಸಿಕೊಂಡು ಹೋಗುವಂತಾಗುವುದು.
ಶ್ರೀ ಕೃಷ್ಣನನ್ನು ಹೇಗೆ ಆರಾಧಿಸಲಾಗುವುದು?
ಶ್ರೀಕೃಷ್ಣನ ಎರಡು ರೂಪವನ್ನು ಆರಾಧಿಸಲಾಗುವುದು. ಒಂದು ಶ್ರೀಕೃಷ್ಣನ ಮಗುವಿನ ರೂಪವನ್ನು ಆರಾಧಿಸಲಾಗುವುದು, ಮತ್ತೊಂದು ಗೀತೋಪದೇಶ ನೀಡಿರುವ ಶ್ರೀಕೃಷ್ಣ ಮೂರ್ತಿಯನ್ನು ಆರಾಧಿಸಲಾಗುವುದು.
ಶ್ರೀಕೃಷ್ಣ ನೀಡಿರುವ 18 ಗೀತೋಪದೇಶಗಳು
* ಧರ್ಮವೇ ದೊಡ್ಡದು
* ಸುಜ್ಞಾನದಿಂದಲೇ ಪರಿಹಾರ
* ನಿಸ್ವಾರ್ಥದಿಂದ ಬೆಳವಣಿಗೆ
* ಧರ್ಮಸಂಸ್ಥಾಪನೆಗೆ ಅವತಾರ
* ಫಲದಾಸೆ ಇಲ್ಲದೆ ಕರ್ಮ ಮಾಡು
* ಧ್ಯಾನದಿಂದ ಇಂದ್ರೀಯಗಳನ್ನು ಗೆಲ್ಲಬೇಕು
* ಪ್ರಯತ್ನ ನಿರಂತರವಾಗಿರಬೇಕು
* ವಿಶ್ವರೂಪದರ್ಶನ
* ಕರ್ಮಕ್ಕೆ ತಕ್ಕಫಲ
* ಭಗವಂತನಲ್ಲಿ ಪ್ರೀತಿ
* ನಿನ್ನ ದೃಷ್ಟಿಕೋನಕ್ಕೆ ಹೊಂದುವ ಜೀವನಶೈಲಿ ಅಳವಡಿಸಿಕೋ
* ದೈವಿಕತ್ವಕ್ಕೆ ಬೆಲೆ ಕೊಡು
* ಉತ್ತಮನಾಗಿರುವುದೇ ವರ
* ಮೇರು ಸತ್ಯ
* ಪರಮಾತ್ಮನೊಂದಿಗೆ ಐಕ್ಯ
* ಭಗವಂತನಲ್ಲಿ ಪ್ರೀತಿ
* ಮಾಯೆಯಿಂದ ಕಳಚಿಕೋ
ಇವುಗಳ ಅರ್ಥವನ್ನು ತಿಳಿದುಕೊಂಡು ನಡೆದರೆ ಬದುಕು ತುಂಬಾನೇ ಚೆನ್ನಾಗಿರುತ್ತದೆ.



Click it and Unblock the Notifications