Latest Updates
-
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್!
ನಿಮ್ಮ ರಾಶಿಗೆ ತಕ್ಕಂತೆ ಶ್ರೀ ಗಣೇಶನಿಗೆ ಯಾವ ಆಹಾರ ನೈವೇದ್ಯವಾಗಿ ಸಮರ್ಪಿಸಬೇಕು?
ಶ್ರೀ ಗಣೇಶ ಮೋದಕ, ಲಡ್ಡು ಪ್ರಿಯ ಹಾಗಾಗಿ ಅವನಿಗೆ ಬಗೆ ಬಗೆಯ ಹಣ್ಣುಗಳನ್ನು, ಸಿಹಿ ತಿಂಡಿಗಳನ್ನು ಅರ್ಪಿಸಿ ಪೂಜಿಸಲಾಗುವುದು. ಶ್ರೀ ಗಣೇಶನಿಗೆ ಪ್ರಿಯವಾಗಿರುವ ಕೆಲ ತಿಂಡಿಗಳಿವೆ, ಅದನ್ನು ನಿಮ್ಮ ರಾಶಿ ಪ್ರಕಾರ ಅರ್ಪಿಸಿದರೆ ನಿಮಗೆ ಇನ್ನೂ ಒಳಿತಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಗಣೇಶನಿಗೆ ಇಷ್ಟವಾದ ತಿಂಡಿಗಳಾವುವು, ನಿಮ್ಮ ರಾಶಿಗೆ ಯಾವ ಬಣ್ಣ್ದ ಲಡ್ಡು ಅತವಾ ಮೋದಕ ಅರ್ಪಿಸಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರು ಬೆಲ್ಲದಿಂದ ಮಾಡಿದ ಲಡ್ಡು ಅರ್ಪಿಸಿ, ಇನ್ನು ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ.
ವೃಷಭ ರಾಶಿ
ವೃಷಭ ರಾಶಿಯವರು ತೆಂಗಿನಕಾಯಿಯಿಂದ ಮಾಡಿದ ಲಡ್ಡು ಅರ್ಪಿಸಿ
ಮಿಥುನ ರಾಶಿ
ಮಿಥುನ ರಾಶಿಯವರು ಗಣೇಶನಿಗೆ ಹಸಿರು ಬಣ್ಣದ ಉತ್ತೇರಿಯಾ ಅರ್ಪಿಸಿ , ಹೆಸರು ಕಾಳಿನಿಂದ ಮಾಡಿದ ಲಡ್ಡು ಅರ್ಪಿಸಿ.
ಕರ್ಕ ರಾಶಿ
ಕರ್ಕ ರಾಶಿಯವರು ಬೆಳ್ಳಿ ಬಣ್ಣದ ಅಥವಾ ಬಿಳಿ ಬಣ್ಣದ ಗಣೇಶನ ಮನೆಗೆ ತಂದು ಪೂಜಿಸಿ
ಸಿಂಹ ರಾಶಿ
ಸಿಂಹ ರಾಶಿಯವರು ಶ್ರೀಗಣೇಶನಿಗೆ ಅಕ್ಕಿ ಪಾಯಸ ಅಥವಾಶ್ಯಾವಿಗೆ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಿ.
ಕನ್ಯಾ ರಾಶಿ
ಶ್ರೀ ಗಣೇಶನಿಗೆ ಏಲಕ್ಕಿ, ದ್ರಾಕ್ಷಿ, ಹೆಸರು ಕಾಳನ ಲಡ್ಡು ಅರ್ಪಿಸಿ.
ತುಲಾ ರಾಶಿ
ತುಲಾ ರಾಶಿಯವರು ಸಿಹಿ ತಿಂಡಿಗಳನ್ನು ಅರ್ಪಿಸಿ ಶ್ರೀ ಗಣೇಶನ ಆರಾಧನೆ ಮಾಡಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಬೆಲ್ಲವನ್ನು ಶ್ರೀ ಗಣೇಶನಿಗೆ ಅರ್ಪಿಸಿ, ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ.
ಧನು ರಾಶಿ: ಕಡ್ಲೆಹಿಟ್ಟಿನಿಂದ ಮಾಡಿದ ಲಡ್ಡು ಶ್ರೀ ಗಣೇಶನಿಗೆ ಅರ್ಪಿಸಿ.
ಮಕರ ರಾಶಿ: ಮಕರ ರಾಶಿಯವರು ಶನಿ ಸಾಡೇಸಾತಿ ಇರುವುದರಿಂದ ಕಷ್ಟಗಳ ನಿವಾರಣೆಗೆ ಎಳ್ಳು ಲಡ್ಡು ಅರ್ಪಿಸಿದರೆ ಒಳ್ಳೆಯದು.
ಕುಂಭ ರಾಶಿ: ಕುಂಭ ರಾಶಿಯವರು ಕೂಡ ಎಳ್ಳು ಬಳಸಿ ಮಾಡಿದ ಲಡ್ಡು ಅರ್ಪಿಸಿ ಹಾಗೂ ಗಣೇಶನಿಗೆ ಪ್ರಿಯವಾದ ಸಿಹಿ ತಿಂಡಿಗಳನ್ನು ಅರ್ಪಿಸಿ.
ಮೀನ ರಾಶಿ: ಮೀನ ರಾಶಿಯವರು ಕಡ್ಲೆಲಡ್ಡು ಶ್ರೀ ಗಣೇಶನಿಗೆ ಅರ್ಪಿಸಿ, ಎಳ್ಳು ಬಳಸಿ ಮಾಡಿದ ಲಡ್ಡು ಕೂಡ ಅರ್ಪಿಸಿ.
ಗಣೇಶನಿಗೆ ಇಷ್ಟವಾದ ಆಹಾರಗಳಿವು
ಮೋದಕ
ಗಣೇಶನ ಪ್ರಿಯವಾದ ಆಹಾರವೆಂದರೆ ಮೋದಕ, ಲಡ್ಡು ಪ್ರಿಯವಾದ ಆಹಾರ. ಗಣೇಶ ಹಬ್ಬದಲ್ಲಿ ಮೋದಕ, ಲಡ್ಡು ಇರಲೇಬೇಕು.
ಲಡ್ಡು
ಗಣೇಶನಿಗೆ ಬಗೆಬಗೆಯ ಲಡ್ಡು ಮಾಡಿ ಅರ್ಪಿಸಿ. ಗಣೇಶನಿಗೆ 108ಗಿಂತಲೂ ಅಧಿಕ ಲಡ್ಡು ಬಳಸಿ.
ಪೇಡಾ: ಶ್ರೀ ಗಣೇಶನಿಗೆ ಪೇಡಾ, ಏಲಕ್ಕಿ, ಹಿಟ್ಟು, ಸಕ್ಕರೆ, ಡ್ರೈ ಫ್ರೂಟ್ಸ್ ಈ ಬಗೆಯ ಆಹಾರಗಳನ್ನು ಅರ್ಪಿಸಿ.
ಬಾಳೆಹಣ್ಣು: ಶ್ರೀ ಗಣೇಶನಿಗೆ ಬಾಳೆಹಣ್ಣು ಅರ್ಪಿಸಿ.
ಪಾಯಸ: ಅಕ್ಕಿ ಪಾಯಸ, ಗೋಧಿ ಪಾಯಸ, ಶ್ಯಾವಿಗೆ ಪಾಯಸ ಹೀಗೆ ಪಾಯಸವನ್ನು ಮಾಡಿ ಅರ್ಪಿಸಿ.



Click it and Unblock the Notifications