Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ನಿಮ್ಮ ರಾಶಿಗೆ ತಕ್ಕಂತೆ ಶ್ರೀ ಗಣೇಶನಿಗೆ ಯಾವ ಆಹಾರ ನೈವೇದ್ಯವಾಗಿ ಸಮರ್ಪಿಸಬೇಕು?
ಶ್ರೀ ಗಣೇಶ ಮೋದಕ, ಲಡ್ಡು ಪ್ರಿಯ ಹಾಗಾಗಿ ಅವನಿಗೆ ಬಗೆ ಬಗೆಯ ಹಣ್ಣುಗಳನ್ನು, ಸಿಹಿ ತಿಂಡಿಗಳನ್ನು ಅರ್ಪಿಸಿ ಪೂಜಿಸಲಾಗುವುದು. ಶ್ರೀ ಗಣೇಶನಿಗೆ ಪ್ರಿಯವಾಗಿರುವ ಕೆಲ ತಿಂಡಿಗಳಿವೆ, ಅದನ್ನು ನಿಮ್ಮ ರಾಶಿ ಪ್ರಕಾರ ಅರ್ಪಿಸಿದರೆ ನಿಮಗೆ ಇನ್ನೂ ಒಳಿತಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಗಣೇಶನಿಗೆ ಇಷ್ಟವಾದ ತಿಂಡಿಗಳಾವುವು, ನಿಮ್ಮ ರಾಶಿಗೆ ಯಾವ ಬಣ್ಣ್ದ ಲಡ್ಡು ಅತವಾ ಮೋದಕ ಅರ್ಪಿಸಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರು ಬೆಲ್ಲದಿಂದ ಮಾಡಿದ ಲಡ್ಡು ಅರ್ಪಿಸಿ, ಇನ್ನು ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ.
ವೃಷಭ ರಾಶಿ
ವೃಷಭ ರಾಶಿಯವರು ತೆಂಗಿನಕಾಯಿಯಿಂದ ಮಾಡಿದ ಲಡ್ಡು ಅರ್ಪಿಸಿ
ಮಿಥುನ ರಾಶಿ
ಮಿಥುನ ರಾಶಿಯವರು ಗಣೇಶನಿಗೆ ಹಸಿರು ಬಣ್ಣದ ಉತ್ತೇರಿಯಾ ಅರ್ಪಿಸಿ , ಹೆಸರು ಕಾಳಿನಿಂದ ಮಾಡಿದ ಲಡ್ಡು ಅರ್ಪಿಸಿ.
ಕರ್ಕ ರಾಶಿ
ಕರ್ಕ ರಾಶಿಯವರು ಬೆಳ್ಳಿ ಬಣ್ಣದ ಅಥವಾ ಬಿಳಿ ಬಣ್ಣದ ಗಣೇಶನ ಮನೆಗೆ ತಂದು ಪೂಜಿಸಿ
ಸಿಂಹ ರಾಶಿ
ಸಿಂಹ ರಾಶಿಯವರು ಶ್ರೀಗಣೇಶನಿಗೆ ಅಕ್ಕಿ ಪಾಯಸ ಅಥವಾಶ್ಯಾವಿಗೆ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಿ.
ಕನ್ಯಾ ರಾಶಿ
ಶ್ರೀ ಗಣೇಶನಿಗೆ ಏಲಕ್ಕಿ, ದ್ರಾಕ್ಷಿ, ಹೆಸರು ಕಾಳನ ಲಡ್ಡು ಅರ್ಪಿಸಿ.
ತುಲಾ ರಾಶಿ
ತುಲಾ ರಾಶಿಯವರು ಸಿಹಿ ತಿಂಡಿಗಳನ್ನು ಅರ್ಪಿಸಿ ಶ್ರೀ ಗಣೇಶನ ಆರಾಧನೆ ಮಾಡಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಬೆಲ್ಲವನ್ನು ಶ್ರೀ ಗಣೇಶನಿಗೆ ಅರ್ಪಿಸಿ, ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ.
ಧನು ರಾಶಿ: ಕಡ್ಲೆಹಿಟ್ಟಿನಿಂದ ಮಾಡಿದ ಲಡ್ಡು ಶ್ರೀ ಗಣೇಶನಿಗೆ ಅರ್ಪಿಸಿ.
ಮಕರ ರಾಶಿ: ಮಕರ ರಾಶಿಯವರು ಶನಿ ಸಾಡೇಸಾತಿ ಇರುವುದರಿಂದ ಕಷ್ಟಗಳ ನಿವಾರಣೆಗೆ ಎಳ್ಳು ಲಡ್ಡು ಅರ್ಪಿಸಿದರೆ ಒಳ್ಳೆಯದು.
ಕುಂಭ ರಾಶಿ: ಕುಂಭ ರಾಶಿಯವರು ಕೂಡ ಎಳ್ಳು ಬಳಸಿ ಮಾಡಿದ ಲಡ್ಡು ಅರ್ಪಿಸಿ ಹಾಗೂ ಗಣೇಶನಿಗೆ ಪ್ರಿಯವಾದ ಸಿಹಿ ತಿಂಡಿಗಳನ್ನು ಅರ್ಪಿಸಿ.
ಮೀನ ರಾಶಿ: ಮೀನ ರಾಶಿಯವರು ಕಡ್ಲೆಲಡ್ಡು ಶ್ರೀ ಗಣೇಶನಿಗೆ ಅರ್ಪಿಸಿ, ಎಳ್ಳು ಬಳಸಿ ಮಾಡಿದ ಲಡ್ಡು ಕೂಡ ಅರ್ಪಿಸಿ.
ಗಣೇಶನಿಗೆ ಇಷ್ಟವಾದ ಆಹಾರಗಳಿವು
ಮೋದಕ
ಗಣೇಶನ ಪ್ರಿಯವಾದ ಆಹಾರವೆಂದರೆ ಮೋದಕ, ಲಡ್ಡು ಪ್ರಿಯವಾದ ಆಹಾರ. ಗಣೇಶ ಹಬ್ಬದಲ್ಲಿ ಮೋದಕ, ಲಡ್ಡು ಇರಲೇಬೇಕು.
ಲಡ್ಡು
ಗಣೇಶನಿಗೆ ಬಗೆಬಗೆಯ ಲಡ್ಡು ಮಾಡಿ ಅರ್ಪಿಸಿ. ಗಣೇಶನಿಗೆ 108ಗಿಂತಲೂ ಅಧಿಕ ಲಡ್ಡು ಬಳಸಿ.
ಪೇಡಾ: ಶ್ರೀ ಗಣೇಶನಿಗೆ ಪೇಡಾ, ಏಲಕ್ಕಿ, ಹಿಟ್ಟು, ಸಕ್ಕರೆ, ಡ್ರೈ ಫ್ರೂಟ್ಸ್ ಈ ಬಗೆಯ ಆಹಾರಗಳನ್ನು ಅರ್ಪಿಸಿ.
ಬಾಳೆಹಣ್ಣು: ಶ್ರೀ ಗಣೇಶನಿಗೆ ಬಾಳೆಹಣ್ಣು ಅರ್ಪಿಸಿ.
ಪಾಯಸ: ಅಕ್ಕಿ ಪಾಯಸ, ಗೋಧಿ ಪಾಯಸ, ಶ್ಯಾವಿಗೆ ಪಾಯಸ ಹೀಗೆ ಪಾಯಸವನ್ನು ಮಾಡಿ ಅರ್ಪಿಸಿ.



Click it and Unblock the Notifications