Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಗಣೇಶ ಚತುರ್ಥಿ 2023: ಗಣೇಶ ಪ್ರತಿಸ್ಥಾಪನೆ ಯಾವಾಗ ಮಾಡಬೇಕು? ಯಾವ ದಿನ ವಿಸರ್ಜನೆ ಮಾಡಬೇಕು?
ಗಣೇಶ ಚತುರ್ಥಿಯೆಂದರೆ ಸಡಗರ-ಸಂಭ್ರಮ, ಈ ಸಂಭ್ರಮ ಬರೀ ಮನೆಗಷ್ಟೇ ಸೀಮಿತವಲ್ಲ, ಊರಿಗೆ ಊರೇ ಸಂಭ್ರಮಿಸುತ್ತದೆ. ಗಣಪನನ್ನು ಬೀದಿ-ಬೀದಿಗಳಲ್ಲಿ ಕೂರಿಸಿ ತುಂಬಾನೇ ಅದ್ಧೂರಿಯಿಂದ ಗಣೇಶ ಚತುರ್ಥಿ ಆಚರಿಸಲಾಗುವುದು. ಗಣೇಶನನ್ನು 3 ದಿನ 7 ದಿನ 10 ದಿನ ಕೂರಿಸಿ ನಂತರ ವಿರ್ಸಜನೆ ಮಾಡುತ್ತಾರೆ. ಈ ವರ್ಷ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುವುದು.
ಈ ವರ್ಷ ಗಣೇಶ ಪ್ರತಿಷ್ಠಾಪನೆ ಯಾವಾಗ ಮಾಡಲಾಗುವುದು? ಶುಭ ಮುಹೂರ್ತ ಯಾವಾಗ, ಗಣೇಶ ಪ್ರತಿಷ್ಠಾಪನೆ ಮಾಡುವಾಗ ಪಾಲಿಸಬೇಕಾದ ನಿಯಮಗಳೇನು ಎಂದು ನೋಡೋಣ ಬನ್ನಿ:

ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 19 ಮಂಗಳವಾರದಂದು ಆಚರಿಸಲಾಗುವುದು.
ಈ ವರ್ಷ ಗಣೇಶನ ಪ್ರತಿಷ್ಠಾಪನೆಗೆ ಶುಭ ಮುಹೂರ್ತ, ಗಣೇಶ ವಿಸರ್ಜನೆಗೆ ಶುಭ ಮುಹೂರ್ತ ಯಾವಾಗ?
ಗಣೇಶನ ಪ್ರತಿಷ್ಠಾಪನೆಗೆ ಶುಭ ಮುಹೂರ್ತ: ಸೆಪ್ಟೆಂಬರ್ 19 ಬೆಳಗ್ಗೆ 11:01ರಿಂದ ಮಧ್ಯಾಹ್ನ 01:28ರವರೆಗೆ.
ಗಣೇಶ ಪ್ರತಿಷ್ಠಾಪನೆಗೆ 2 ಗಂಟೆ 27 ನಿಮಿಷ ಸಮಯವಿದೆ.
ಗಣೇಶ ಪ್ರತಿಷ್ಠಾಪನೆಗೆ ಪಾಲಿಸಬೇಕಾದ ಪೂಜಾ ನಿಯಮಗಳು
* ಗಣೇಶನನ್ನು ತರುವ ಮುನ್ನವೇ ಗಣೇಶನನ್ನು ಕೂರಿಸುವ ಸ್ಥಳವನ್ನು ಸ್ವಚ್ಛ ಮಾಡಿ ಹೂಗಳಿಂದ ಅಲಂಕರಿಸಿ.
* ಪರಿಸರ ಸ್ನೇಹಿ ಗಣೇಶನನ್ನು ತನ್ನಿ
* ಪೂಜಾರಿ ಮಂತ್ರಗಳನ್ನು ಹೇಳುತ್ತಾ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ.
* ಗಣೇಶನಿಗೆ ಹೂವುಗಳು, ಹಣ್ಣುಗಳು, ಶ್ರೀ ಗಣೇಶನಿಗೆ ಪ್ರಿಯವಾದ ಲಡ್ಡು, ಮೋದಕಗಳನ್ನು ಅರ್ಪಿಸಿ.
* ಗಣೇಶನ ಹಾಡುಗಳನ್ನು ಹೇಳುತ್ತಾ ಆರತಿ ಮಾಡಿ.
* ಗಣೇಶನ ಪ್ರತಿಷ್ಠಾಪನೆ ಮಾಡಿದ ಮೇಲೆ 10 ದಿನಗಳವರೆಗೆ ಶ್ರೀ ಗಣೇಶನನ್ನು ಆರಾಧಿಸಿ. 10ನೇ ದಿನ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಿ.
ಗಣೇಶ ವಿಸರ್ಜನೆಗೆ ಸಮಯ
ಗಣೇಶನ ಮೂರ್ತಿಯನ್ನು ಸೆಪ್ಟೆಂಬರ್ 28ಕ್ಕೆ ವಿಸರ್ಜನೆ ಮಾಡಿ
ಸೆಪ್ಟೆಂಬರ್ 18ಕ್ಕೆ ಚಂದ್ರನನ್ನು ನೋಡಬಾರದು
ಗಣೇಶ ಚತುರ್ಥಿ ತಿಥಿ ಸೆಪ್ಟೆಂಬರ್ 18 ಮಧ್ಯಾಹ್ನ 12:39ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 19 ಮಧ್ಯಾಹ್ನ 01:43ಕ್ಕೆ ಮುಕ್ತಾಯ.
ಗಣೇಶ ಕೂರಿಸುವ ಹಿಂದಿನ ದಿನ ಚಂದ್ರನನ್ನು ನೋಡಬಾರದು ಎಂಬ ನಂಬಿಕೆಯಿದೆ. ಆದ್ದರಿಂದ ಸೆಪ್ಟೆಂಬರ್ 18ಕ್ಕೆ ಚಂದ್ರನನ್ನು ನೋಡಬಾರದು, ನೋಡಿದರೆ ಕಷ್ಟಗಳು ಹೆಚ್ಚಾಗುವುದು ಎಂಬ ಧಾರ್ಮಿಕ ನಂಬಿಕೆಯಿದೆ.



Click it and Unblock the Notifications