Latest Updates
-
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ
ಗಣೇಶ ಚತುರ್ಥಿ 2023: ಗಣೇಶ ಪ್ರತಿಸ್ಥಾಪನೆ ಯಾವಾಗ ಮಾಡಬೇಕು? ಯಾವ ದಿನ ವಿಸರ್ಜನೆ ಮಾಡಬೇಕು?
ಗಣೇಶ ಚತುರ್ಥಿಯೆಂದರೆ ಸಡಗರ-ಸಂಭ್ರಮ, ಈ ಸಂಭ್ರಮ ಬರೀ ಮನೆಗಷ್ಟೇ ಸೀಮಿತವಲ್ಲ, ಊರಿಗೆ ಊರೇ ಸಂಭ್ರಮಿಸುತ್ತದೆ. ಗಣಪನನ್ನು ಬೀದಿ-ಬೀದಿಗಳಲ್ಲಿ ಕೂರಿಸಿ ತುಂಬಾನೇ ಅದ್ಧೂರಿಯಿಂದ ಗಣೇಶ ಚತುರ್ಥಿ ಆಚರಿಸಲಾಗುವುದು. ಗಣೇಶನನ್ನು 3 ದಿನ 7 ದಿನ 10 ದಿನ ಕೂರಿಸಿ ನಂತರ ವಿರ್ಸಜನೆ ಮಾಡುತ್ತಾರೆ. ಈ ವರ್ಷ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುವುದು.
ಈ ವರ್ಷ ಗಣೇಶ ಪ್ರತಿಷ್ಠಾಪನೆ ಯಾವಾಗ ಮಾಡಲಾಗುವುದು? ಶುಭ ಮುಹೂರ್ತ ಯಾವಾಗ, ಗಣೇಶ ಪ್ರತಿಷ್ಠಾಪನೆ ಮಾಡುವಾಗ ಪಾಲಿಸಬೇಕಾದ ನಿಯಮಗಳೇನು ಎಂದು ನೋಡೋಣ ಬನ್ನಿ:

ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 19 ಮಂಗಳವಾರದಂದು ಆಚರಿಸಲಾಗುವುದು.
ಈ ವರ್ಷ ಗಣೇಶನ ಪ್ರತಿಷ್ಠಾಪನೆಗೆ ಶುಭ ಮುಹೂರ್ತ, ಗಣೇಶ ವಿಸರ್ಜನೆಗೆ ಶುಭ ಮುಹೂರ್ತ ಯಾವಾಗ?
ಗಣೇಶನ ಪ್ರತಿಷ್ಠಾಪನೆಗೆ ಶುಭ ಮುಹೂರ್ತ: ಸೆಪ್ಟೆಂಬರ್ 19 ಬೆಳಗ್ಗೆ 11:01ರಿಂದ ಮಧ್ಯಾಹ್ನ 01:28ರವರೆಗೆ.
ಗಣೇಶ ಪ್ರತಿಷ್ಠಾಪನೆಗೆ 2 ಗಂಟೆ 27 ನಿಮಿಷ ಸಮಯವಿದೆ.
ಗಣೇಶ ಪ್ರತಿಷ್ಠಾಪನೆಗೆ ಪಾಲಿಸಬೇಕಾದ ಪೂಜಾ ನಿಯಮಗಳು
* ಗಣೇಶನನ್ನು ತರುವ ಮುನ್ನವೇ ಗಣೇಶನನ್ನು ಕೂರಿಸುವ ಸ್ಥಳವನ್ನು ಸ್ವಚ್ಛ ಮಾಡಿ ಹೂಗಳಿಂದ ಅಲಂಕರಿಸಿ.
* ಪರಿಸರ ಸ್ನೇಹಿ ಗಣೇಶನನ್ನು ತನ್ನಿ
* ಪೂಜಾರಿ ಮಂತ್ರಗಳನ್ನು ಹೇಳುತ್ತಾ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ.
* ಗಣೇಶನಿಗೆ ಹೂವುಗಳು, ಹಣ್ಣುಗಳು, ಶ್ರೀ ಗಣೇಶನಿಗೆ ಪ್ರಿಯವಾದ ಲಡ್ಡು, ಮೋದಕಗಳನ್ನು ಅರ್ಪಿಸಿ.
* ಗಣೇಶನ ಹಾಡುಗಳನ್ನು ಹೇಳುತ್ತಾ ಆರತಿ ಮಾಡಿ.
* ಗಣೇಶನ ಪ್ರತಿಷ್ಠಾಪನೆ ಮಾಡಿದ ಮೇಲೆ 10 ದಿನಗಳವರೆಗೆ ಶ್ರೀ ಗಣೇಶನನ್ನು ಆರಾಧಿಸಿ. 10ನೇ ದಿನ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಿ.
ಗಣೇಶ ವಿಸರ್ಜನೆಗೆ ಸಮಯ
ಗಣೇಶನ ಮೂರ್ತಿಯನ್ನು ಸೆಪ್ಟೆಂಬರ್ 28ಕ್ಕೆ ವಿಸರ್ಜನೆ ಮಾಡಿ
ಸೆಪ್ಟೆಂಬರ್ 18ಕ್ಕೆ ಚಂದ್ರನನ್ನು ನೋಡಬಾರದು
ಗಣೇಶ ಚತುರ್ಥಿ ತಿಥಿ ಸೆಪ್ಟೆಂಬರ್ 18 ಮಧ್ಯಾಹ್ನ 12:39ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 19 ಮಧ್ಯಾಹ್ನ 01:43ಕ್ಕೆ ಮುಕ್ತಾಯ.
ಗಣೇಶ ಕೂರಿಸುವ ಹಿಂದಿನ ದಿನ ಚಂದ್ರನನ್ನು ನೋಡಬಾರದು ಎಂಬ ನಂಬಿಕೆಯಿದೆ. ಆದ್ದರಿಂದ ಸೆಪ್ಟೆಂಬರ್ 18ಕ್ಕೆ ಚಂದ್ರನನ್ನು ನೋಡಬಾರದು, ನೋಡಿದರೆ ಕಷ್ಟಗಳು ಹೆಚ್ಚಾಗುವುದು ಎಂಬ ಧಾರ್ಮಿಕ ನಂಬಿಕೆಯಿದೆ.



Click it and Unblock the Notifications











