Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಗಣೇಶ ಚತುರ್ಥಿ 2023: ಗಣೇಶ ಪ್ರತಿಸ್ಥಾಪನೆ ಯಾವಾಗ ಮಾಡಬೇಕು? ಯಾವ ದಿನ ವಿಸರ್ಜನೆ ಮಾಡಬೇಕು?
ಗಣೇಶ ಚತುರ್ಥಿಯೆಂದರೆ ಸಡಗರ-ಸಂಭ್ರಮ, ಈ ಸಂಭ್ರಮ ಬರೀ ಮನೆಗಷ್ಟೇ ಸೀಮಿತವಲ್ಲ, ಊರಿಗೆ ಊರೇ ಸಂಭ್ರಮಿಸುತ್ತದೆ. ಗಣಪನನ್ನು ಬೀದಿ-ಬೀದಿಗಳಲ್ಲಿ ಕೂರಿಸಿ ತುಂಬಾನೇ ಅದ್ಧೂರಿಯಿಂದ ಗಣೇಶ ಚತುರ್ಥಿ ಆಚರಿಸಲಾಗುವುದು. ಗಣೇಶನನ್ನು 3 ದಿನ 7 ದಿನ 10 ದಿನ ಕೂರಿಸಿ ನಂತರ ವಿರ್ಸಜನೆ ಮಾಡುತ್ತಾರೆ. ಈ ವರ್ಷ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುವುದು.
ಈ ವರ್ಷ ಗಣೇಶ ಪ್ರತಿಷ್ಠಾಪನೆ ಯಾವಾಗ ಮಾಡಲಾಗುವುದು? ಶುಭ ಮುಹೂರ್ತ ಯಾವಾಗ, ಗಣೇಶ ಪ್ರತಿಷ್ಠಾಪನೆ ಮಾಡುವಾಗ ಪಾಲಿಸಬೇಕಾದ ನಿಯಮಗಳೇನು ಎಂದು ನೋಡೋಣ ಬನ್ನಿ:

ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 19 ಮಂಗಳವಾರದಂದು ಆಚರಿಸಲಾಗುವುದು.
ಈ ವರ್ಷ ಗಣೇಶನ ಪ್ರತಿಷ್ಠಾಪನೆಗೆ ಶುಭ ಮುಹೂರ್ತ, ಗಣೇಶ ವಿಸರ್ಜನೆಗೆ ಶುಭ ಮುಹೂರ್ತ ಯಾವಾಗ?
ಗಣೇಶನ ಪ್ರತಿಷ್ಠಾಪನೆಗೆ ಶುಭ ಮುಹೂರ್ತ: ಸೆಪ್ಟೆಂಬರ್ 19 ಬೆಳಗ್ಗೆ 11:01ರಿಂದ ಮಧ್ಯಾಹ್ನ 01:28ರವರೆಗೆ.
ಗಣೇಶ ಪ್ರತಿಷ್ಠಾಪನೆಗೆ 2 ಗಂಟೆ 27 ನಿಮಿಷ ಸಮಯವಿದೆ.
ಗಣೇಶ ಪ್ರತಿಷ್ಠಾಪನೆಗೆ ಪಾಲಿಸಬೇಕಾದ ಪೂಜಾ ನಿಯಮಗಳು
* ಗಣೇಶನನ್ನು ತರುವ ಮುನ್ನವೇ ಗಣೇಶನನ್ನು ಕೂರಿಸುವ ಸ್ಥಳವನ್ನು ಸ್ವಚ್ಛ ಮಾಡಿ ಹೂಗಳಿಂದ ಅಲಂಕರಿಸಿ.
* ಪರಿಸರ ಸ್ನೇಹಿ ಗಣೇಶನನ್ನು ತನ್ನಿ
* ಪೂಜಾರಿ ಮಂತ್ರಗಳನ್ನು ಹೇಳುತ್ತಾ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ.
* ಗಣೇಶನಿಗೆ ಹೂವುಗಳು, ಹಣ್ಣುಗಳು, ಶ್ರೀ ಗಣೇಶನಿಗೆ ಪ್ರಿಯವಾದ ಲಡ್ಡು, ಮೋದಕಗಳನ್ನು ಅರ್ಪಿಸಿ.
* ಗಣೇಶನ ಹಾಡುಗಳನ್ನು ಹೇಳುತ್ತಾ ಆರತಿ ಮಾಡಿ.
* ಗಣೇಶನ ಪ್ರತಿಷ್ಠಾಪನೆ ಮಾಡಿದ ಮೇಲೆ 10 ದಿನಗಳವರೆಗೆ ಶ್ರೀ ಗಣೇಶನನ್ನು ಆರಾಧಿಸಿ. 10ನೇ ದಿನ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಿ.
ಗಣೇಶ ವಿಸರ್ಜನೆಗೆ ಸಮಯ
ಗಣೇಶನ ಮೂರ್ತಿಯನ್ನು ಸೆಪ್ಟೆಂಬರ್ 28ಕ್ಕೆ ವಿಸರ್ಜನೆ ಮಾಡಿ
ಸೆಪ್ಟೆಂಬರ್ 18ಕ್ಕೆ ಚಂದ್ರನನ್ನು ನೋಡಬಾರದು
ಗಣೇಶ ಚತುರ್ಥಿ ತಿಥಿ ಸೆಪ್ಟೆಂಬರ್ 18 ಮಧ್ಯಾಹ್ನ 12:39ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 19 ಮಧ್ಯಾಹ್ನ 01:43ಕ್ಕೆ ಮುಕ್ತಾಯ.
ಗಣೇಶ ಕೂರಿಸುವ ಹಿಂದಿನ ದಿನ ಚಂದ್ರನನ್ನು ನೋಡಬಾರದು ಎಂಬ ನಂಬಿಕೆಯಿದೆ. ಆದ್ದರಿಂದ ಸೆಪ್ಟೆಂಬರ್ 18ಕ್ಕೆ ಚಂದ್ರನನ್ನು ನೋಡಬಾರದು, ನೋಡಿದರೆ ಕಷ್ಟಗಳು ಹೆಚ್ಚಾಗುವುದು ಎಂಬ ಧಾರ್ಮಿಕ ನಂಬಿಕೆಯಿದೆ.



Click it and Unblock the Notifications