Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಗರುಡ ಪುರಾಣದ ಪ್ರಕಾರ ಲಕ್ಷ್ಮೀಯನ್ನು ಒಲಿಸಿಕೊಳ್ಳುವುದು ಹೇಗೆ?
ಹದಿನೆಂಟು ಪುರಾಣಗಳಲ್ಲಿ ಗರುಡ ಪುರಾಣವು ಕೂಡ ಒಂದು. ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ಒರ್ವ ವ್ಯಕ್ತಿ ಸರಿ ದಾರಿಯಲ್ಲಿ ನಡೆಯೋದಕ್ಕೆ ಗರುಡ ಪುರಾಣದಲ್ಲಿ ಎಲ್ಲಾ ರೀತಿಯ ಪರಿಹಾರಗಳಿದೆ.
ಅದೇ ರೀತಿ ಪ್ರತಿಯೊಬ್ಬರು ಜೀವನದಲ್ಲಿ ಶ್ರೀಮಂತರಾಗಬೇಕು, ಉತ್ತಮ ಜೀವನ ನಡೆಸಬೇಕು ಎಂದು ಅಪೇಕ್ಷಿಸುತ್ತಾರೆ. ಇದಕ್ಕೆಲ್ಲಾ ಮುಖ್ಯ ಲಕ್ಷ್ಮೀ ಕೃಪಾಕಟಾಕ್ಷ.

ಆದರೆ ಲಕ್ಷ್ಮೀ ಕೃಪೆಗೆ ಪಾತ್ರರಾಗುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಹಾಗಾದ್ರೆ ಲಕ್ಷ್ಮೀಯನ್ನ ಒಲಿಸಿಕೊಳ್ಳಬೇಕಾದರೆ ಏನು ಮಾಡಬೇಕು? ಗರುಡ ಪುರಾಣ ಈ ಬಗ್ಗೆ ಏನು ಹೇಳುತ್ತೆ ಅನ್ನೋದನ್ನ ನೋಡೋಣ.
ದೇವರಿಗೆ ನೈವೇದ್ಯ ಸಲ್ಲಿಸದೆ ತಿನ್ನಬೇಡಿ
ಗರುಡ ಪುರಾಣದ ಪ್ರಕಾರ ನಾವುದೇ ಯಾವುದೇ ಆಹಾರ ತಯಾರಿಸಿದಾಗಲೂ ಮೊದಲು ದೇವರಿಗೆ ನೈವೇದ್ಯದ ರೂಪದಲ್ಲಿ ಸಲ್ಲಿಸಬೇಕು. ಆ ನಂತರ ನಾವು ಸೇವನೆ ಮಾಡಬೇಕು. ಅದರ ಜೊತೆಗೆ ಆಹಾರಕ್ಕೆ ಅಗೌರವ ಸಲ್ಲಿಸುವುದು ಮತ್ತು ಆಹಾರದ ಬಗ್ಗೆ ಸುಳ್ಳು ಹೇಳುವುದನ್ನು ಮಾಡಬಾರದು. ಹೀಗೆ ಮಾಡಿದರೆ ಲಕ್ಷ್ಮೀ ಒಲಿಯುವುದಿಲ್ಲ. ಇನ್ನೂ ಯಾವ ಮನೆಯಲ್ಲಿ ಆಹಾರವನ್ನು ವ್ಯರ್ಥ ಮಾಡುತ್ತಾರೋ ಆ ಮನೆಯಲ್ಲಿ ಶಾಂತಿ ನೆಲೆಸುವುದಿಲ್ಲವಂತೆ.
ದಾನ ಹಾಗೂ ದೇವರ ಕಾರ್ಯಗಳನ್ನು ಮಾಡಿ
ಗರುಡ ಪುರಾಣದ ಪ್ರಕಾರ ದಾನ ಹಾಗೂ ದೇವರ ಕಾರ್ಯಗಳನ್ನು ಮಾಡುವುದರಿಂದ ಲಕ್ಷ್ಮೀ ಕೃಪೆಗೆ ಪಾತ್ರವಾಗಬಹುದಂತೆ. ಯಾವ ವ್ಯಕ್ತಿ ದಾನ ಕಾರ್ಯದಲ್ಲಿ ತೊಡಗುತ್ತಾನೋ ಹಾಗೂ ಪ್ರತಿನಿತ್ಯ ದೇವರ ಕಾರ್ಯ ಮಾಡುತ್ತಾನೋ ಅಂತವರಿಗೆ ಲಕ್ಷ್ಮೀ ಕೃಪಾಕಪಟಾಕ್ಷ ಇದ್ದೇ ಇರುತ್ತಂತೆ.
ಧರ್ಮಗ್ರಂಥಗಳ ಬಗ್ಗೆ ಜ್ಞಾನ ಹೊಂದಿರಬೇಕು
ಗರುಡ ಪುರಾಣದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಆತನ ಧರ್ಮಗ್ರಂಥಗಳ ಬಗ್ಗೆ ಜ್ಞಾನ ಇರಬೇಕಂತೆ. ಧರ್ಮ ಗ್ರಂಥಗಳ ಬಗ್ಗೆ ತಿಳಿದುಕೊಂಡವರು ಮತ್ತೊಬ್ಬರಿಗೆ ತಿಳಿಸುವ ಪ್ರಯತ್ನವನ್ನು ಖಂಡಿತ ಮಾಡಬೇಕು. ಹೀಗಾದಾಗ ಮಾತ್ರ ಜೀವನದ ಮಹತ್ವ ಏನು ಅನ್ನೋದನ್ನ ತಿಳಿದುಕೊಳ್ಳೋದಕ್ಕೆ ಹಾಗೂ ಸರಿಯಾದ ದಾರಿಯಲ್ಲಿ ನಡೆಯೋದಕ್ಕೆ ಸಾಧ್ಯ.
ಕೊಳಕು ಬಟ್ಟೆಗಳನ್ನು ಧರಿಸಬೇಡಿ
ಗರುಡ ಪುರಾಣದ ಪ್ರಕಾರ ಲಕ್ಷ್ಮೀಯನ್ನು ಒಲಿಸಿಕೊಳ್ಳಬೇಕಾದರೆ ಕೊಳಕಾದ ಬಟ್ಟೆಯನ್ನು ಧರಿಸಬಾರದಂತೆ. ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ಲಕ್ಷ್ಮೀಯು ಸಂಪತ್ತು ಮತ್ತು ಸಮೃದ್ಧಿಯ ಸಂಕೇತ. ಹೀಗಾಗಿ ತಾಯಿ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಶುಚಿಯಾದ ಬಟ್ಟೆಯನ್ನೇ ಧರಿಸಿರಬೇಕು. ಯಾರು ಅವರ ನೋಟದ ಬಗ್ಗೆ ನಿರ್ಲಕ್ಷ್ಯದಿಂದಿರುತ್ತಾರೋ ಅಂತವರಿಗೆ ಲಕ್ಷ್ಮೀ ಒಲಿಯುವುದಿಲ್ಲ.
ಗರುಡ ಪುರಾಣದ ಪ್ರಕಾರ ಈ ವಿಧಾನಗಳನ್ನು ಅನುಸರಿಸಿದರೆ ಖಂಡಿತ ಲಕ್ಷ್ಮೀಯನ್ನು ಒಲಿಸಿಕೊಳ್ಳಬಹುದು. ಧರ್ಮ ಮಾರ್ಗದಲ್ಲಿ ನಡೆದರೆ ಸಂಪತ್ತು ಹಾಗೂ ಯಶಸ್ಸು ಒಲಿಯದೇ ಇರೋದಿಲ್ಲ.



Click it and Unblock the Notifications




