Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
5ನೇ ಶ್ರಾವಣ ಸೋಮವಾರ : ಪೂಜಾ ವಿಧಿ, ಆಚರಣೆ ಹೇಗಿರಬೇಕು?
ಶ್ರಾವಣ ಹಿಂದೂಗಳಿಗೆ ಒಂದು ರೀತಿ ವಿಶೇಷವಾದ ತಿಂಗಳು. ಈ ಸಮಯದಲ್ಲಿ ಶಿವನಿಗೆ ಭಕ್ತಿಯಿಂದ ಪೂಜೆ ಮಾಡಿ, ಉಪವಾಸವನ್ನು ಕೈಗೊಂಡರೆ ಆತ ನಮ್ಮೆಲ್ಲರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂಬ ನಂಬಿಕೆಯಿದೆ. ಅಷ್ಟಕ್ಕು ಐದನೇ ಶ್ರಾವಣ ಸೋಮವಾರ ಯಾವಾಗ? ಯಾವ ರೀತಿ ಪೂಜೆ ನೆರವೇರಿಸಬೇಕು ಅನ್ನೋದನ್ನು ತಿಳಿಯೋಣ.

5 ನೇ ಶ್ರಾವಣ ಸೋಮವಾರ 2023 ದಿನಾಂಕ :
ಐದನೇ ಶ್ರಾವಣ ಸೋಮವಾರದ ಉಪವಾಸವನ್ನು ಆಗಸ್ಟ್ 21, 2023 ರಂದು ಆಚರಿಸಲಾಗುತ್ತದೆ. ಈ ದಿನದಂದು ವಿವಾಹಿತರು ಅದೃಷ್ಟ ಮತ್ತು ಸಂಪತ್ತನ್ನು ಪಡೆಯಲು ನಿಯಮ ಮತ್ತು ನಿಬಂಧನೆಗಳನ್ನು ಪಾಲಿಸುವುದರ ಮೂಲಕ ಶಿವನ ಪೂಜೆಯನ್ನು ಮಾಡಬೇಕು. ಈ ಉಪವಾಸದ ಪರಿಣಾಮದಿಂದ ಸೂಕ್ತವಾದ ಜೀವನ ಸಂಗಾತಿಯನ್ನು ಪಡೆಯುವ ನಿಮ್ಮ ಬಯಕೆಯೂ ಈಡೇರುತ್ತದೆ.
5 ನೇ ಶ್ರಾವಣ ಸೋಮವಾರ 2023 ಮುಹೂರ್ತ :
ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯು ಆಗಸ್ಟ್ 21, 2023 ರಂದು ಬೆಳಗ್ಗೆ 12:53 ಕ್ಕೆ ಪ್ರಾರಂಭವಾಗುತ್ತದೆ. ಮತ್ತು 21 ಆಗಸ್ಟ್ 2023 ರಂದು ಬೆಳಗ್ಗೆ 2:00 ರವರೆಗೆ ಇರುತ್ತದೆ. ನಂಬಿಕೆಗಳ ಪ್ರಕಾರ ನಾಗ ಪಂಚಮಿಯ ದಿನದಂದು ಹಾವುಗಳ ಪೂಜೆಗೆ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ಈ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ಜೀವನದಲ್ಲಿ ಸಮಸ್ಯೆಗಳು ನಾಶವಾಗುತ್ತವೆ. ಅಲ್ಲದೆ ವ್ಯಕ್ತಿಯ ಎಲ್ಲಾ ಆಸೆಗಳು ಈಡೇರುತ್ತಂತೆ.
ಶ್ರಾವಣ ಸೋಮವಾರದಂದು ಶಿವನ ಆರಾಧನೆಯ ಮಹತ್ವವೇನು?
ಶಿವನ ಅರ್ಧನಾರೀಶ್ವರ ರೂಪವು ಅರ್ಧ ಹೆಣ್ಣು ಮತ್ತು ಅರ್ಧ ಗಂಡು. ಮನುಕುಲವನ್ನು ಜಗತ್ತಿನಲ್ಲಿ ಮುನ್ನಡೆಸಲು ಶಿವನು ಅರ್ಧನಾರೀಶ್ವರನ ರೂಪವನ್ನು ಪಡೆದಿದ್ದನು. ಶ್ರಾವನ ಸೋಮವಾರದಂದು ಶಿವನ ಅರ್ಧನಾರೀಶ್ವರ ರೂಪವನ್ನು ಪೂಜಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ. ಮತ್ತು ಪತಿ-ಪತ್ನಿಯರಲ್ಲಿ ಮಾಧುರ್ಯ ಹೆಚ್ಚಾಗುತ್ತಂತೆ.
ಸಾವನ ಸೋಮವಾರದಂದು ಶಿವನನ್ನು ಆರಾಧನೆ ಮಾಡುವವರು ಭಕ್ತಿಯಿಂದ ಎಲ್ಲಾ ಪೂಜಾ ವಿಧಾನಗಳನ್ನು ಕೈಗೊಳ್ಳಬೇಕು. ಬೆಳಗ್ಗೆ ಬೇಗನೆ ಎದ್ದು ಶಿವನಿಗೆ ಜಲಾಭಿಷೇಕವನ್ನು ಮಾಡಿ. ನಂತರ 'ಓಂ ಮಹಾದೇವಾಯ ಸರ್ವ ಕಾರ್ಯ ಸಿದ್ಧಿ ದೇಹಿ-ದೇಹಿ ಕಾಮೇಶ್ವರಾಯ ನಮಃ ಮಂತ್ರವನ್ನು 108 ಬಾರಿ ಜಪಿಸಿ. ಸಾಧ್ಯವಾದ್ರೆ ನೀವು ಅರ್ಧನಾರೀಶ್ವರ ಸ್ತೋತ್ರವನ್ನು ಸಹ ಪಠಿಸಬಹುದು. ಕೊನೆಯಲ್ಲಿ ಭೋಲೆನಾಥನ ಆರತಿಯನ್ನು ಮಾಡಿ ನಂತರ ಪ್ರಸಾದವನ್ನು ವಿತರಿಸಿ.



Click it and Unblock the Notifications