Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಇದು ಟೊಮೆಟೋ ಅಲ್ಲ 'ಪೊಮೆಟೋ'..!! ಒಂದೇ ಗಿಡದಲ್ಲಿ ಆಲೂ-ಟೊಮೆಟೋ ಬೆಳೆ..!
ಆಧುನಿಕ ಯುಗದಲ್ಲಿ ಹೊಸ ಹೊಸ ತಂತ್ರಜ್ಞಾನಗಳು, ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇವೆ. ಅದರಲ್ಲೂ ಕೃಷಿ ಕ್ಷೇತ್ರದಲ್ಲಿ ನಿತ್ಯವು ಒಂದಲ್ಲಾ ಒಂದು ಹೊಸ ಆವಿಷ್ಕಾರ ನಮ್ಮ ಮುಂದೆ ಬರುತ್ತದೆ. ಅದರಲ್ಲೂ ನಾವು ಕಸಿ ಮೂಲಕ ವಿವಿಧ ಗಿಡಗಳು, ಹಣ್ಣು ಬಿಡುವ ಸಸ್ಯಗಳ ಬೆಳೆಸುವ ಮಾದರಿ ನಮಗೆ ತಿಳಿದಿದೆ.
ಇದರ ಜೊತೆ ರೈತರ ಆದಾಯ ದ್ವಿಗುಣಗೊಳಿಸಲು ಮಿಶ್ರ ಬೇಸಾಯ, ವಾಣಿಜ್ಯ ಕೃಷಿ ಹೀಗೆ ಹಲವು ವಿಧಾನಗಳ ಬಳಸುವುದನ್ನು ಸಹ ನಾವು ನೋಡಿದ್ದೇವೆ.
ಆದರೆ ಇಲ್ಲೊಂದು ವಿಡಿಯೋದಲ್ಲಿ ಒಬ್ಬ ಒಂದೇ ಗಿಡದಲ್ಲಿ ಟೊಮೆಟೋ ಹಾಗೂ ಆಲೂಗಡ್ಡೆ ಬೆಳೆದಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಹೌದು ಈ ರೀತಿಯ ಬೆಳೆಯನ್ನು ಆತ ಪೊಮೆಟೋ ಎಂದು ಕರೆದಿದ್ದಾನೆ. ಒಂದೇ ಗಿಡದಲ್ಲಿ ಟೊಮೆಟೋ ಹಾಗೂ ಪೊಟೆಟೋ ಬೆಳೆ ತೆಗೆಯುವುದನ್ನು ಆತ ತೋರಿಸಿಕೊಟ್ಟಿದ್ದಾನೆ.

ಈ ವಿಡಿಯೋದಲ್ಲಿ ಆತ ವಿವರಿಸಿರುವಂತೆ ರಸಭರಿತವಾದ ಟೊಮೆಟೋ ಮತ್ತು ಕೊಬ್ಬಿದ ಆಲೂಗಡ್ಡೆ ಒಂದೇ ಕಾಂಡದ ಮೇಲೆ ಬೆಳೆಯುತ್ತದೆ. ಇದು ಸಂಭಾವ್ಯ ಹೆಚ್ಚಿನ ಇಳುವರಿ ಮತ್ತು ರೈತರಿಗೆ ಹೆಚ್ಚಿನ ಆದಾಯವನ್ನು ನೀಡಬಹುದು ಎಂಬುದು ಆತನ ವಾದವಾಗಿದೆ.
ಈ ವಿಡಿಯೋದಲ್ಲಿ ಆಲೆನ್ ಜೋಸೆಫ್ ಎಂಬಾತ ಒಂದೇ ಗಿಡದಲ್ಲಿ ಟೊಮೆಟೋ ಹಾಗೂ ಆಲೂಗಡ್ಡೆ ಬೆಳೆದಿರುವುದನ್ನು ತೋರಿಸುತ್ತಾನೆ. ಗಿಡದಲ್ಲಿ ಹಣ್ಣಾದ ಟೊಮೆಟೋಗಳಿದ್ದರೆ ಬುಡದಲ್ಲಿ ಆಲೂಗಡ್ಡೆಗಳಿವೆ. ಮಾರುಕಟ್ಟೆಯಲ್ಲಿರುವ ಸಾಮಾನ್ಯ ತರಕಾರಿಗಳಂತೆಯೇ ಇದು ಸಹ ಕಂಡುಬರುತ್ತದೆ. ಇದನ್ನೂ ಸಹ ಕಸಿ ವಿಧಾನದ ಮೂಲಕವೇ ಬೆಳೆಯಲಾಗಿದೆ ಎಂಬುದನ್ನು ಸಹ ಆತ ವಿವರಿಸುತ್ತಾನೆ.
ಆದರೆ ಈ ವಿಡಿಯೋ ಚರ್ಚೆಯನ್ನು ಹುಟ್ಟುಹಾಕಿದೆ, ಕೆಲವರು ಪ್ರಕೃತಿಯನ್ನು ಹಾಳುಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಇತರರು ಕಸಿ ಮಾಡುವುದು ಸುಸ್ಥಾಪಿತ ಅಭ್ಯಾಸವಾಗಿದೆ ಎಂದು ಪ್ರತಿವಾದಿಸಿದರು ಮತ್ತು ಇದು ರೈತರಿಗೆ ಅಭಿವೃದ್ಧಿಗೆ ಸಹಾಯ ಮಾಡಿದರೆ, ಅದನ್ನು ಏಕೆ ಸ್ವೀಕರಿಸಬಾರದು? ಎಂದು ಪ್ರಶ್ನೆ ಮಾಡಿದ್ದಾರೆ.
"ಕೃಷಿಯಲ್ಲಿ ಆಗಬೇಕಾದ ಏಕೈಕ ಉಪಯುಕ್ತ ಆವಿಷ್ಕಾರವೆಂದರೆ ತರಕಾರಿಗಳು ಮತ್ತು ಹಣ್ಣುಗಳಲ್ಲಿ ಕಳೆದುಹೋದ ಪೋಷಕಾಂಶಗಳನ್ನು ಮರಳಿ ತರುವ ಸಾಮರ್ಥ್ಯ. ಈ ರೀತಿಯ ಸಾಹಸಗಳು ಉತ್ಪಾದನೆಯನ್ನು ಹೆಚ್ಚಿಸಲು ಮಾತ್ರ ಒಳ್ಳೆಯದು, ಗುಣಮಟ್ಟವಲ್ಲ" ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಈ ನವೀನ ತಂತ್ರವು ಕೃಷಿ ತಂತ್ರಜ್ಞಾನದಲ್ಲಿನ ತ್ವರಿತ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಪೊಮೆಟೊದಂತಹ ಪರಿಹಾರಗಳನ್ನು ನೀಡುವ ಮೂಲಕ, ವಿಜ್ಞಾನಿಗಳು ಸಾಂಪ್ರದಾಯಿಕ ಮಿತಿಗಳನ್ನು ನಿವಾರಿಸಲು ಮತ್ತು ಹೆಚ್ಚಿನ ಸಮೃದ್ಧಿಯನ್ನು ಸಾಧಿಸಲು ರೈತರಿಗೆ ಅಧಿಕಾರ ನೀಡುತ್ತಿದ್ದಾರೆ. ಅಂತಹ ಅಭ್ಯಾಸಗಳ ದೀರ್ಘಾವಧಿಯ ಪರಿಣಾಮಗಳಿಗೆ ಹೆಚ್ಚಿನ ಅಧ್ಯಯನದ ಅಗತ್ಯವಿದ್ದರೂ, ಹೆಚ್ಚಿದ ಆಹಾರ ಭದ್ರತೆ ಮತ್ತು ರೈತರ ಯೋಗಕ್ಷೇಮದ ಸಾಮರ್ಥ್ಯವು ನಿರಾಕರಿಸಲಾಗದು.
ಇದನ್ನೂ ಯಾರು ಬೇಕಾದರೂ ಬೆಳೆಯಬಹುದೇ?
ಹಾಗಾದರೆ ಈ ರೀತಿ ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ಪಡೆಯಬಹುದಲ್ಲವೇ ಎಂಬ ನಿಮ್ಮ ಪ್ರಶ್ನೆ ಸಹಜವೇ. ಆದರೆ ಈ ರೀತಿ ಒಂದೇ ಸಸ್ಯದಲ್ಲಿ ಎರಡು ಬೆಳೆ ಬೆಳೆಯುವುದು ವೈಜ್ಞಾನಿಕವಾಗಿ ಸಾಬೀತಾಗಬೇಕು. ಅಂದರೆ ಇದರಿಂದ ಮಾನವ ದೇಹಕ್ಕೆ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ ಎಂಬ ಕೃಷಿ ವಿಜ್ಞಾನಿಗಳ ಉಲ್ಲೇಖದ ಬಳಿಕವಷ್ಟೇ ಬೆಳೆಯಬಹುದು.
ರೈತರಿಗೆ ಸಹಾಯವಾಗಬಹುದೇ?
ಹೌದು ಇದು ಬಳಕೆಗೆ ಮತ್ತು ಸೇವನೆಗೆ ಯೋಗ್ಯ ಎಂದಾದರೆ ರೈತರಿಗೂ ಇದರಿಂದ ಅನುಕೂಲವಾಗಬಹುದು. ಕಡಿಮೆ ಭೂಮಿ ಹೊಂದಿರುವ ರೈತ ಒಂದೇ ಬೆಳೆಯಲ್ಲಿ ಎರಡೆರಡು ಫಸಲು ಪಡೆಯಲು ಸಾಧ್ಯವಾಗಬಹುದು. ಇದರಿಂದ ರೈತರ ಆದಾಯವೂ ಸಹ ಹೆಚ್ಚಾಗುವ ಜೊತೆಗೆ ಕೃಷಿಯತ್ತ ಮುಖ ಮಾಡುವವರ ಸಂಖ್ಯೆಯೂ ಹೆಚ್ಚಾಗಬಹುದು.



Click it and Unblock the Notifications