Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಡ್ರೋನ್ ತಂತ್ರಜ್ಞಾನ ಬಳಸಿ ನೀರಿನಲ್ಲಿ ಮುಳುಗುತ್ತಿರುವ ವ್ಯಕ್ತಿಯ ರಕ್ಷಣೆ: ಇಂಥ ಸಾಧನ ಪ್ರತಿ ತಾಲೂಕಿಗೆ ಬರಬೇಕು
ಈ ವರ್ಷದ ಮಳೆ ಉಪಕಾರಕ್ಕಿಂತ ಅನಾಹುತವನ್ನೇ ಉಂಟು ಮಾಡುತ್ತಿದೆ, ಎಲ್ಲಿ ನೋಡಿದರೂ ಪ್ರವಾಹದ ಆತಂಕ, ಬರೆಕುಸಿತದ ಆತಂಕ, ಮನೆ ಬೀಳುವ ಆತಂಕ. ರಸ್ತೆಗಳು, ನಗರಗಳು ಪ್ರವಾಹದಲ್ಲಿ ಮುಳುಗುತ್ತಿದೆ.

ರಣ ಭೀಕರ ಮಳೆಯನ್ನು ಎದುರಿಸುವ ಶಕ್ತಿ ಮನುಷ್ಯನಿಗೆ ಬಂದಿಲ್ಲ, ಹಾಗಾಗಿ ಪ್ರತಿ ಬಾರಿ ಪ್ರವಾಹ ಉಂಟಾದಾಗ ತುಂಬಾನೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಜನರು ನೆರೆಯಲ್ಲಿ ಸಿಲುಕಿಗೊಂಡಾಗ ಅಲ್ಲಿಗೆ ರಕ್ಷಣೆಗೆ ಬರುವವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಣೆ ಮಾಡುವಂಥ ಪರಿಸ್ಥಿತಿ, ಆದರೆ ಇಲ್ಲೊಂದು ಸಾಧನ ನೋಡಿ, ಇದು ಡ್ರೋನ್ ಅಂತೆ ಪ್ರವಾಹದಲ್ಲಿ ಸಿಲುಕಿ ಇರುವವರನ್ನು ರಕ್ಷಣೆ ಮಾಡಲು ತುಂಬಾನೇ ಸಹಕಾರಿಯಾಗಿದೆ, ಅಲ್ಲದೆ ರಕ್ಷಣೆ ಮಾಡುವವರಿಗೂ ಯಾವುದೇ ರಿಸ್ಕ್ ಇಲ್ಲ. ಎಲ್ಲಾ ತಾಲುಕಿನಲ್ಲಿ ಇಂಥ ಡ್ರೋನ್ ಇರಬೇಕು.
ನೀರಿನಲ್ಲಿ ಬೋಟ್ ರೀತಿ ಹೋಗಿ ರಕ್ಷಣೆ ಮಾಡುತ್ತದೆ
ಪ್ರವಾಹದ ಸಮಯದಲ್ಲಿ ಇಂಥ ಡ್ರೋನ್ ತಂತ್ರಜ್ಞಾನ ತುಂಬಾನೇ ಸಹಕಾರಿ. ಈ ಡ್ರೋನ್ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಎಲ್ಲಿ ವ್ಯಕ್ತಿಗಳು ಸಂಕಷ್ಟಕ್ಕೆ ಸಿಲುಕಿರುತ್ತಾರೋ ಅಲ್ಲಿಗೆ ಈ ಸಾಧನ ವೇಗವಾಗಿ ಹೋಗುತ್ತದೆ, ಡೈರೆಕ್ಷನ್ ಎಲ್ಲಾ ಡ್ರೋನ್ ಆಪರೇಟ್ ಮಾಡುವಂತೆ ಮಾಡಬಹುದು, ಅದನ್ನು ಹಿಡಿದು ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಬಹುದು.
ಸಮುದ್ರ ತೀರದಲ್ಲಿ ಈ ರೀತಿಯ ತಂತ್ರಜ್ಞಾನ ತುಂಬಾ ಸಹಕಾರಿ
ಸಮುದ್ರ ತೀರದಲ್ಲಿ ಕೋಸ್ಟಲ್ ಗಾರ್ಡ್ ಇರುತ್ತಾರೆ, ಅದರೂ ಕೆಲವೊಮ್ಮೆ ಅವಘಡ ಸಂಭವಿಸುತ್ತದೆ, ಇಂತ ತಂತ್ರಜ್ಞಾನ ಮನುಷ್ಯನ ಪ್ರಾಣ ರಕ್ಷಣೆಗೆ ಸಹಾಯ ಮಾಡುತ್ತದೆ.
ನೀರಿನ ಮಟ್ಟ ಅಪಾಯ ಮೀರುತ್ತಿದೆ ಎಂದು ಜಾಗ್ರತೆವಹಿಸಿ
ಹೌದು ಕೆಲವೊಮ್ಮೆ ನೀರಿನ ಮಟ್ಟ ಹೆಚ್ಚಾಗುತ್ತಿದ್ದರು ನನ್ನ ಮನೆ, ನನ್ನ ಆಸ್ತಿ ಅಂತ ಅಲ್ಲಿಯೇ ಉಳಿಯುತ್ತಾರೆ, ಹೀಗೆ ಮಾಡುವುದರಿಂದ ಸುಮ್ಮನೆ ಅಪಾಯಕ್ಕೆ ಸಿಲುಕಬೇಕಾಗುತ್ತದೆ, ಅಗ್ಯತವಿರುವ ಡಾಕ್ಯೂಮೆಂಟ್ ತೆಗೆದುಕೊಂಡು, ಬೆಲೆ ಬಾಳುವ ವಸ್ತುಗಳು, ಹಣವಿದ್ದರೆ ಅದನ್ನು ತೆಗೆದುಕೊಂಡು ಸುರಕ್ಷಿತ ಸ್ಥಳಕ್ಕೆ ಹೋಗುವುದರಿಂದ ಜೀವಕ್ಕೆ ಅಪಾಯ ಉಂಟಾಗುವುದನ್ನು ತಡೆಗಟ್ಟಬಹುದು. ಇಲ್ಲ ನಿರಿನ ಮಟ್ಟ ಕಡಿಮೆಯಾಗುತ್ತೆ, ಮಳೆ ಬರಲ್ಲ, ನೀರಿನ ಮಟ್ಟ ಹೆಚ್ಚಾಗಲ್ಲ ಎಂದೆಲ್ಲಾ ಲೆಕ್ಕಾಚಾರ ಹಾಕುತ್ತಾ ಕೂತರೆ ಪ್ರವಾಹದ ನಡುವೆ ಸಿಲುಕಿಕೊಳ್ಳುವಂತೆ ಮಾಡುತ್ತದೆ.
ನೀರಿನ ಜೊತೆ ಸಾಹಸ ಬೇಡ
ಮಳೆ ಹೆಚ್ಚಾದಾಗ ಕೊಳಗಳು, ಕೆರೆಗಳು, ನದಿಗಳು ತುಂಬಿ ಹರಿಯುತ್ತಿರುತ್ತದೆ, ಜಲಪಾತಗಳು ಉಕ್ಕಿ ಹರಿಯುತ್ತಿರುತ್ತದೆ, ಇದನ್ನು ನೋಡಲು ತುಂಬಾನೇ ಮನಮೋಹಕವಾಗಿರುತ್ತದೆ. ಹಾಗಾಗಿ ನಮಗೆ ಆ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುವ ಕುತೂಹಲ ಕೂಡ ಇರುತ್ತದೆ. ಆದರೆ ಅಂಥ ಸ್ಥಳಗಳಿಗೆ ಹೋಗುವಾಗ ಮಾತ್ರ ತುಂಬಾನೇ ಜಾಗ್ರತೆವಹಿಸಬೇಕು. ರೀಲ್ಸ್ ಮಾಡುವುದು, ಸೆಲ್ಫಿ ತೆಗೆದುಕೊಳ್ಳುವುದು ಮಾಡಬೇಡಿ.
ಸಮೀಪದ ರಕ್ಷಣಾ ಟೀಂ ನಂಬರ್ ನಿಮಗೆ ಗೊತ್ತಿರಲಿ
ಎಲ್ಲಾ ಕಡೆ ರಕ್ಷಣೆಗೆ ಒಂದು ಟೀಂ ಸ್ವಯಂ ಪ್ರೇರಿತರಾಗಿ ಸಿದ್ಧರಾಗಿರುತ್ತಾರೆ. ಅಂಥವರ ಫೋನ್ ನಂಬರ್ ನಿಮ್ಮ ಬಳಿ ಇರಲಿ.



Click it and Unblock the Notifications