Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡ್ರೋನ್ ತಂತ್ರಜ್ಞಾನ ಬಳಸಿ ನೀರಿನಲ್ಲಿ ಮುಳುಗುತ್ತಿರುವ ವ್ಯಕ್ತಿಯ ರಕ್ಷಣೆ: ಇಂಥ ಸಾಧನ ಪ್ರತಿ ತಾಲೂಕಿಗೆ ಬರಬೇಕು
ಈ ವರ್ಷದ ಮಳೆ ಉಪಕಾರಕ್ಕಿಂತ ಅನಾಹುತವನ್ನೇ ಉಂಟು ಮಾಡುತ್ತಿದೆ, ಎಲ್ಲಿ ನೋಡಿದರೂ ಪ್ರವಾಹದ ಆತಂಕ, ಬರೆಕುಸಿತದ ಆತಂಕ, ಮನೆ ಬೀಳುವ ಆತಂಕ. ರಸ್ತೆಗಳು, ನಗರಗಳು ಪ್ರವಾಹದಲ್ಲಿ ಮುಳುಗುತ್ತಿದೆ.

ರಣ ಭೀಕರ ಮಳೆಯನ್ನು ಎದುರಿಸುವ ಶಕ್ತಿ ಮನುಷ್ಯನಿಗೆ ಬಂದಿಲ್ಲ, ಹಾಗಾಗಿ ಪ್ರತಿ ಬಾರಿ ಪ್ರವಾಹ ಉಂಟಾದಾಗ ತುಂಬಾನೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಜನರು ನೆರೆಯಲ್ಲಿ ಸಿಲುಕಿಗೊಂಡಾಗ ಅಲ್ಲಿಗೆ ರಕ್ಷಣೆಗೆ ಬರುವವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಣೆ ಮಾಡುವಂಥ ಪರಿಸ್ಥಿತಿ, ಆದರೆ ಇಲ್ಲೊಂದು ಸಾಧನ ನೋಡಿ, ಇದು ಡ್ರೋನ್ ಅಂತೆ ಪ್ರವಾಹದಲ್ಲಿ ಸಿಲುಕಿ ಇರುವವರನ್ನು ರಕ್ಷಣೆ ಮಾಡಲು ತುಂಬಾನೇ ಸಹಕಾರಿಯಾಗಿದೆ, ಅಲ್ಲದೆ ರಕ್ಷಣೆ ಮಾಡುವವರಿಗೂ ಯಾವುದೇ ರಿಸ್ಕ್ ಇಲ್ಲ. ಎಲ್ಲಾ ತಾಲುಕಿನಲ್ಲಿ ಇಂಥ ಡ್ರೋನ್ ಇರಬೇಕು.
ನೀರಿನಲ್ಲಿ ಬೋಟ್ ರೀತಿ ಹೋಗಿ ರಕ್ಷಣೆ ಮಾಡುತ್ತದೆ
ಪ್ರವಾಹದ ಸಮಯದಲ್ಲಿ ಇಂಥ ಡ್ರೋನ್ ತಂತ್ರಜ್ಞಾನ ತುಂಬಾನೇ ಸಹಕಾರಿ. ಈ ಡ್ರೋನ್ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಎಲ್ಲಿ ವ್ಯಕ್ತಿಗಳು ಸಂಕಷ್ಟಕ್ಕೆ ಸಿಲುಕಿರುತ್ತಾರೋ ಅಲ್ಲಿಗೆ ಈ ಸಾಧನ ವೇಗವಾಗಿ ಹೋಗುತ್ತದೆ, ಡೈರೆಕ್ಷನ್ ಎಲ್ಲಾ ಡ್ರೋನ್ ಆಪರೇಟ್ ಮಾಡುವಂತೆ ಮಾಡಬಹುದು, ಅದನ್ನು ಹಿಡಿದು ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಬಹುದು.
ಸಮುದ್ರ ತೀರದಲ್ಲಿ ಈ ರೀತಿಯ ತಂತ್ರಜ್ಞಾನ ತುಂಬಾ ಸಹಕಾರಿ
ಸಮುದ್ರ ತೀರದಲ್ಲಿ ಕೋಸ್ಟಲ್ ಗಾರ್ಡ್ ಇರುತ್ತಾರೆ, ಅದರೂ ಕೆಲವೊಮ್ಮೆ ಅವಘಡ ಸಂಭವಿಸುತ್ತದೆ, ಇಂತ ತಂತ್ರಜ್ಞಾನ ಮನುಷ್ಯನ ಪ್ರಾಣ ರಕ್ಷಣೆಗೆ ಸಹಾಯ ಮಾಡುತ್ತದೆ.
ನೀರಿನ ಮಟ್ಟ ಅಪಾಯ ಮೀರುತ್ತಿದೆ ಎಂದು ಜಾಗ್ರತೆವಹಿಸಿ
ಹೌದು ಕೆಲವೊಮ್ಮೆ ನೀರಿನ ಮಟ್ಟ ಹೆಚ್ಚಾಗುತ್ತಿದ್ದರು ನನ್ನ ಮನೆ, ನನ್ನ ಆಸ್ತಿ ಅಂತ ಅಲ್ಲಿಯೇ ಉಳಿಯುತ್ತಾರೆ, ಹೀಗೆ ಮಾಡುವುದರಿಂದ ಸುಮ್ಮನೆ ಅಪಾಯಕ್ಕೆ ಸಿಲುಕಬೇಕಾಗುತ್ತದೆ, ಅಗ್ಯತವಿರುವ ಡಾಕ್ಯೂಮೆಂಟ್ ತೆಗೆದುಕೊಂಡು, ಬೆಲೆ ಬಾಳುವ ವಸ್ತುಗಳು, ಹಣವಿದ್ದರೆ ಅದನ್ನು ತೆಗೆದುಕೊಂಡು ಸುರಕ್ಷಿತ ಸ್ಥಳಕ್ಕೆ ಹೋಗುವುದರಿಂದ ಜೀವಕ್ಕೆ ಅಪಾಯ ಉಂಟಾಗುವುದನ್ನು ತಡೆಗಟ್ಟಬಹುದು. ಇಲ್ಲ ನಿರಿನ ಮಟ್ಟ ಕಡಿಮೆಯಾಗುತ್ತೆ, ಮಳೆ ಬರಲ್ಲ, ನೀರಿನ ಮಟ್ಟ ಹೆಚ್ಚಾಗಲ್ಲ ಎಂದೆಲ್ಲಾ ಲೆಕ್ಕಾಚಾರ ಹಾಕುತ್ತಾ ಕೂತರೆ ಪ್ರವಾಹದ ನಡುವೆ ಸಿಲುಕಿಕೊಳ್ಳುವಂತೆ ಮಾಡುತ್ತದೆ.
ನೀರಿನ ಜೊತೆ ಸಾಹಸ ಬೇಡ
ಮಳೆ ಹೆಚ್ಚಾದಾಗ ಕೊಳಗಳು, ಕೆರೆಗಳು, ನದಿಗಳು ತುಂಬಿ ಹರಿಯುತ್ತಿರುತ್ತದೆ, ಜಲಪಾತಗಳು ಉಕ್ಕಿ ಹರಿಯುತ್ತಿರುತ್ತದೆ, ಇದನ್ನು ನೋಡಲು ತುಂಬಾನೇ ಮನಮೋಹಕವಾಗಿರುತ್ತದೆ. ಹಾಗಾಗಿ ನಮಗೆ ಆ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುವ ಕುತೂಹಲ ಕೂಡ ಇರುತ್ತದೆ. ಆದರೆ ಅಂಥ ಸ್ಥಳಗಳಿಗೆ ಹೋಗುವಾಗ ಮಾತ್ರ ತುಂಬಾನೇ ಜಾಗ್ರತೆವಹಿಸಬೇಕು. ರೀಲ್ಸ್ ಮಾಡುವುದು, ಸೆಲ್ಫಿ ತೆಗೆದುಕೊಳ್ಳುವುದು ಮಾಡಬೇಡಿ.
ಸಮೀಪದ ರಕ್ಷಣಾ ಟೀಂ ನಂಬರ್ ನಿಮಗೆ ಗೊತ್ತಿರಲಿ
ಎಲ್ಲಾ ಕಡೆ ರಕ್ಷಣೆಗೆ ಒಂದು ಟೀಂ ಸ್ವಯಂ ಪ್ರೇರಿತರಾಗಿ ಸಿದ್ಧರಾಗಿರುತ್ತಾರೆ. ಅಂಥವರ ಫೋನ್ ನಂಬರ್ ನಿಮ್ಮ ಬಳಿ ಇರಲಿ.



Click it and Unblock the Notifications