Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಥೈಲ್ಯಾಂಡ್ನಲ್ಲೂ ರಾಮನ ಜಪ..! ಅಯೋಧ್ಯೆಗೂ ಥಾಯ್ ದೇಶಕ್ಕೂ ಇದೆ ನಂಟು..!
ಶ್ರೀರಾಮನ ಅಯೋಧ್ಯೆಯ ಭವ್ಯ ಮಂದಿರ ಇನ್ನೇನು ಕೆಲವೇ ದಿನದಲ್ಲಿ ಲೋಕಾರ್ಪಣೆಯಾಗಲಿದೆ. ಈ ನಡುವೆ ರಾಮ ಭಾರತ ಮಾತ್ರವಲ್ಲ ಆತನ ಖ್ಯಾತಿ ವಿದೇಶದಲ್ಲೂ ಸದ್ದು ಮಾಡುತ್ತಿದೆ. ನಿಮಗೆ ಅಚ್ಚರಿಯಾಗಬಹುದು ಏಕೆಂದರೆ ರಾಮಾಯಣಕ್ಕೂ ದೂರದ ಥೈಲ್ಯಾಂಡ್ಗೂ ತುಂಬ ಹತ್ತಿರದ ಸಂಬಂಧವಿದೆ.
ಈ ಥೈಲ್ಯಾಂಡ್ ಕಥೆಗೂ ಮೊದಲು ನಾವು ಥೈಲ್ಯಾಂಡ್ ಸರ್ಕಾರ ಅಯೋಧ್ಯೆ ರಾಮಮಂದಿರಕ್ಕೆ ಕಳುಹಿಸುತ್ತಿರುವ ಉಡುಗೊರೆ ಕುರಿತು ತಿಳಿಯೋಣ. ಇದೇ ಮೊದಲ ಬಾರಿಗೆ ಥೈಲ್ಯಾಂಡ್ ರಾಮಮಂದಿರಕ್ಕೆ ಉಡುಗೊರೆಯಾಗಿ ಮಣ್ಣನ್ನು ಕಳುಹಿಸುತ್ತಿದೆ. ಥೈಲ್ಯಾಂಡ್ನಲ್ಲಿರುವ ಪವಿತ್ರ ರಾಮನ ಸ್ಥಳದಿಂದ ಈ ಮಣ್ಣನ್ನು ಕಳುಹಿಸಲಾಗುತ್ತಿದೆ. ಇದಕ್ಕೂ ಮೊದಲು ಥೈಲ್ಯಾಂಡ್ನ ಎರಡು ಪವಿತ್ರ ನದಿಗಳಿಂದ ರಾಮನ ದೇವಾಲಯಕ್ಕೆ ನೀರನ್ನು ಕಳುಹಿಸಿತ್ತು.

ಹಾಗಾದರೆ ರಾಮನಿಗೂ ದೂರದ ಥೈಲ್ಯಾಂಡ್ಗೂ ಇರುವ ಸಂಬಂಧವೇನು? ಥೈಲ್ಯಾಂಡ್ನಲ್ಲಿ ರಾಮನನ್ನು ಪೂಜಿಸುವುದೇಕೆ? ಅಲ್ಲಿಯೂ ರಾಮಾಯಣ ಕುರುಹು ಏನಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಥೈಲ್ಯಾಂಡ್ನಲ್ಲಿ ಅಯುಥೆಯಾ ಎಂಬ ನಗರವಿದೆ. ಅಲ್ಲಿನ ರಾಜರಿಗೆ 'ರಾಮತಿಬೋಧಿ' (ಲಾರ್ಡ್ ರಾಮ) ಎಂದು ಬಿರುದು ನೀಡಲಾಗುತ್ತದೆ ಮತ್ತು ರಾಮಾಯಣದಲ್ಲಿ ಅಯೋಧ್ಯೆಯನ್ನು ರಾಮನ ರಾಜಧಾನಿ ಎಂದು ಉಲ್ಲೇಖಿಸಿರುವ ಸಂದರ್ಭಕ್ಕೆ ಇದು ಸಂಬಂಧ ಹೊಂದಿದೆ. ಇದಲ್ಲದೆ, ರಾಮ್ಕೀನ್ ಎಂದು ಕರೆಯಲ್ಪಡುವ ಥಾಯ್ ಧಾರ್ಮಿಕ ಪಠ್ಯವು ಥಾಯ್ ರಾಮಾಯಣಕ್ಕೆ ಹೋಲಿಸಬಹುದಾದ ಸ್ಥಾನಮಾನವನ್ನು ಹೊಂದಿದೆ.
ರಾಮಾನುಜನ್ ಅವರ ಕೃತಿ '300 ರಾಮಾಯಣ'ದಲ್ಲಿ ಈ ಪಠ್ಯವನ್ನು ವಾಲ್ಮೀಕಿಯ ರಾಮಾಯಣಕ್ಕೆ ಹೋಲಿಸಲಾಗಿದೆ.
ಸಾಂಪ್ರದಾಯಿಕವಾಗಿ 18 ನೇ ಶತಮಾನದಲ್ಲಿ ಕಿಂಗ್ ರಾಮ I ಅವರು ಹೊಸದಾಗಿ ರಚಿಸಿದ್ದಾರೆ ಎಂದು ನಂಬಲಾಗಿದೆ, ರಾಮ್ಕೀನ್ ಹಿಂದೂ ಪಠ್ಯದಲ್ಲಿ ರಾವಣನನ್ನು ಪ್ರತಿಬಿಂಬಿಸುವಂತೆ ಅಲ್ಲಿ ಥೋಟ್ಸಕ್ನನ್ನು ಕಾಣಬಹುದಾಗಿದೆ. ಹಾಗಾಗಿ ಎರಡೂ ದೇಶಗಳಲ್ಲಿ ರಾಮ ಮತ್ತು ರಾಮಾಯಣದ ಉಲ್ಲೇಖಗಳಿವೆ.
ಥಾಯ್ನಲ್ಲಿರುವ ಅಯುಥೆಯಾ ನಗರವು ಯುನೆಸ್ಕೋ ಪಾರಂಪರಿಕ ತಾಣವಾಗಿ ರಕ್ಷಿಸಲ್ಪಟ್ಟಿದೆ. ಭಾರತ ಮತ್ತು ಥೈಲ್ಯಾಂಡ್ ನಡುವೆ ಬಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬಾಂಧವ್ಯವಿದೆ. ಥೈಲ್ಯಾಂಡ್ನ ರಾಜರು ಭಗವಾನ್ ರಾಮನ ವಂಶಸ್ಥರಿಗೆ ಸೇರಿದವರು, ಅವರ ಹೆಸರಿನಲ್ಲಿ ರಾಮನ ಬಿರುದನ್ನು ಹೊಂದಿದ್ದಾರೆ ಅವರದ್ದು ಸನಾತನ ಸಂಸ್ಕೃತಿ ಅಂತಲೂ ನಂಬಲಾಗಿದೆ.
ಈ ರಾಜವಂಶದ ಆರನೇ ರಾಜ, ವಜೀರವುದ್ಧನು ಇಂಗ್ಲೆಂಡಿನಲ್ಲಿ ಅಧ್ಯಯನ ಮಾಡಿದ್ದ. ಈ ಸಮಯದಲ್ಲಿ ಅವರು ಬ್ರಿಟನ್ನ ಆಡಳಿತಗಾರರ ಹೆಸರಿನಲ್ಲಿ ಪಂಚಮ್, II ಎಂದು ಬಳಸಲಾಗಿದೆ. ಇದಾದ ನಂತರ ರಾಮ ಹೆಸರಿನ ಜೊತೆ ಸಂಖ್ಯೆ ಸೇರಿಸುವ ಯೋಚನೆ ಬಂತು. ಇನ್ನು ವಜೀರವುದ್ಧ ಎಲ್ಲಕ್ಕಿಂತ ಮೊದಲು ತನ್ನ ಹೆಸರಿನಲ್ಲಿ ರಾಮ ಎಂದು ಬಳಸಿದ್ದ ಎಂದು ಹೇಳಲಾಗುತ್ತದೆ. ಹೀಗೆ ಆತ ತನ್ನನ್ನು ತಾನು 'ಆರನೇ ರಾಮ' ಎಂದು ಪರಿಚಯಿಸಿಕೊಂಡಿದ್ದ. ಇದಾದ ನಂತರ ಚಕ್ರಿ ವಂಶದ ರಾಜರ ಹೆಸರಿನಲ್ಲಿ ರಾಮನ ಹೆಸರು ಮತ್ತ ಅಂಕಿಗಳನ್ನು ಸೇರಿಸುವ ಪ್ರವೃತ್ತಿ ಪ್ರಾರಂಭವಾಯಿತು.
ಅಯೋಧ್ಯೆ ರಾಮ ಮಂದಿರದ ವಿಶೇಷ
ಈ ಮಂದಿರವು 2.7 ಎಕರೆ ವಿಸ್ತೀರ್ಣದಲ್ಲಿದೆ, ನೆಲ ಮಹಡಿಯು ಭಗವಾನ್ ರಾಮನ ಜೀವನವನ್ನು ಚಿತ್ರಿಸುತ್ತದೆ, ಆದರೆ ಮೊದಲ ಮಹಡಿಯು ರಾಜಸ್ಥಾನದ ಭರತ್ಪುರದ ಗುಲಾಬಿ ಬಣ್ಣದ ಕಲ್ಲುಗಳಿಂದ ರಚಿಸಲಾದ ಭಗವಾನ್ ರಾಮನ ದರ್ಬಾರ್ನ ಭವ್ಯತೆಯನ್ನು ಪ್ರವಾಸಿಗರನ್ನು ಸೆಳೆಯಲಿದೆ. ಈ ದೇವಾಲಯವು 360 ಅಡಿ ಉದ್ದ, 235 ಅಡಿ ಅಗಲ ಮತ್ತು ಶಿಖರ ಸೇರಿದಂತೆ 161 ಅಡಿ ಎತ್ತರವನ್ನು ಹೊಂದಿದೆ. ಮೂರು ಮಹಡಿಗಳು ಮತ್ತು 12 ದ್ವಾರಗಳೊಂದಿಗೆ, ಇದು ವಾಸ್ತುಶಿಲ್ಪದ ಭವ್ಯತೆಯ ಸಾಕ್ಷಿಯಾಗಿದೆ.



Click it and Unblock the Notifications












