Latest Updates
-
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು! -
ಆನ್ಲೈನ್ ಸೆಕ್ಸ್ಟಾರ್ಷನ್ ವಂಚನೆ: ಅಪರಿಚಿತ ವಿಡಿಯೋ ಕಾಲ್ ರಿಸೀವ್ ಮಾಡಿದ್ರೆ ಹುಷಾರ್, ಇಲ್ಲಿದೆ ಎಚ್ಚರಿಕೆ! -
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಹಣ ವಸೂಲಿಗೆ ಅಪಹರಣದ ನಾಟಕ...! ತಂದೆ ಬಳಿಯೇ ₹30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮಗಳು.!
ಜನ ಈಗ ಹಣ ಮಾಡಲು ಯಾವೆಲ್ಲಾ ಕೆಲಸಕ್ಕೆ ಕೈ ಹಾಕ್ತಾರೆ ಅಂದ್ರೆ ಅದು ಬೇರೆಯವರ ಹೆದರಿಸಿ ಬೆದರಿಸಿ ಅಷ್ಟೇ ಅಲ್ಲ ಕೊಲೆಯನ್ನು ಮಾಡುತ್ತಾರೆ. ಇದಲ್ಲದೆ ಹಣಕ್ಕಾಗಿ ಯಾರನ್ನಾದರು ಅಪಹರಣ ಮಾಡಿ ಅವರ ಕುಟುಂಬಸ್ಥರಿಂದ ಹಣಕ್ಕೆ ಬೇಡಿಕೆ ಇಡುತ್ತಾರೆ. ಇಂತಹ ಸಾವಿರಾರು ಪ್ರಕರಣವನ್ನು ನಾವು ಕೇಳಿರುತ್ತೇವೆ.
ಆದರೆ ಇಲ್ಲೊಂದು ಪ್ರಕರಣ ನಿಮಗೆ ಅಚ್ಚರಿ ಹುಟ್ಟಿಸುತ್ತೆ. ಇಲ್ಲಿ ಮಗಳೇ ತಾನು ಅಪಹರಣ ಆದಂತೆ ನಾಟಕ ಆಡಿ ತಂದೆ ಬಳಿ ಹಣ ವಸೂಲಿಗೆ ನಿಂತ ಕಥೆ ಇದು. ಹೌದು ನಿಮಗೆ ಅಚ್ಚರಿಯಾಗಬಹುದು. ಆಕೆ ತನ್ನ ಕಿಡ್ನಾಪ್ ಕುರಿತು ಕಥೆ ಕಟ್ಟಿ ತಂದೆಯ ಬಳಿಯೇ ಬರೋಬ್ಬರಿ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು.

ಮಧ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ಓದುಗರಲ್ಲಿ ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ ಆಕೆ ಈ ರೀತಿ ಅಪಹರಣದ ನಾಟಕ ಮಾಡಿದ್ದೇಕೆ? ಕೊನೆ ಸಿಕ್ಕಿಬಿದ್ದಿದ್ದು ಹೇಗೆ ಎಂಬುದನ್ನು ನೋಡಿ.
ಇಂದೋರ್ನ 21 ವರ್ಷದ ಯುವತಿ ತಾನು ವಿದೇಶಿ ಪ್ರವಾಸ ಕೈಗೊಳ್ಳಬೇಕೆಂಬದು ಆಕೆಯ ಆಸೆಯಾಗಿತ್ತಂತೆ. ಇದನ್ನು ತಂದೆ ಬಳಿ ಹಲವಾರು ಬಾರಿ ಪ್ರಸ್ತಾಒ ಮಾಡಿದ್ದಾಳೆ. ಆದ್ರೆ ತಂದೆ ಅಷ್ಟೊಂದು ಹಣವಿಲ್ಲ ಎಂದು ಆಕೆಗೆ ಹೇಳುತ್ತಿದ್ದರಂತೆ. ಆದ್ರೆ ಆಕೆಯ ವಿದೇಶ ಪ್ರವಾಸದ ಆಸೆ ಮಾತ್ರ ಹಾಗೆಯೇ ಉಳಿದುಬಿಟ್ಟಿತ್ತು.
ಸ್ನೇಹಿತರೊಂದಿಗೆ ಸೇರಿ ಮಾಡಿದ್ಲು ಕಿಡ್ನಾಪ್ ಪ್ಲಾನ್
ಆಕೆ ರಾಜಸ್ಥಾನದ ಕೋಟಾದಲ್ಲಿ ಕೋಚಿಂಗ್ ಕ್ಲಾಸ್ಗೆ ಹಾಜರಾಗುವುದಾಗಿ ಮನೆಯಲ್ಲಿ ಹೇಳಿ ಹೊರಟಿದ್ದಾಳೆ. ಕೋಟಾದಲ್ಲಿ ಹಾಸ್ಟೆಲ್ ರೂಮ್ ಮಾಡಿ ಉಳಿದುಕೊಂಡು ಮೂರು ದಿನದ ಕೋಚಿಂಗ್ ಕ್ಲಾಸ್ಗೆ ಹಾಜರಾಗಿದ್ದಾಳೆ. ಆದರೆ ಇಲ್ಲಿಯೇ ತನ್ನ ಅಪಹರಣದ ಪ್ಲಾನ್ ಮಾಡಿದ್ದಾಳೆ. ತನ್ನನ್ನು ಹಗ್ಗದಿಂದ ಕಟ್ಟಿಹಾಕಿದಂತೆ ಫೋಟೋ ತೆಗೆದು ತನ್ನದೇ ಮೊಬೈಲ್ನಿಂದ ತಂದೆಗೆ ಕಳುಹಿಸಿ 30 ಲಕ್ಷ ನೀಡಿದರೆ ಮಗಳನ್ನು ಬಿಡುವುದಾಗಿ ಸಂದೇಶ ಕಳುಹಿಸಿದ್ದಾಳೆ. ಇದಕ್ಕೆ ಆಕೆಯ ಇಬ್ಬರು ಸ್ನೇಹಿತರು ಸಾಥ್ ನೀಡಿದ್ದಾರೆ. ಆಕೆಯನ್ನು ಯಾವುದೋ ಮೂಲೆಯಲ್ಲಿ ಇಟ್ಟು ಬಾಯಿ, ಕೈ, ಕಾಲು ಕಟ್ಟಿ ಹಾಕಿದಂತೆ ತೋರಿಸಲಾಗಿದೆ. ಈ ಫೋಟೋವನ್ನು ತಂದೆಗೆ ಕಳುಹಿಸಿ ಹಣ ಕೇಳಲಾಗಿದೆ. ಈ ಫೋಟೋ ಬಳಿಕ ಎಲ್ಲಾ ಸಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದೆ.
ಪೊಲೀಸರಿಗೆ ದೂರು ನೀಡಿದ ತಂದೆ
ಈ ಸಂದೇಶ ಬಂದೋಡನೆ ಭಯದಿಂದ ಪೊಲೀಸ್ ಠಾನೆಣೆ ಓಡಿದ ತಂದೆ ಅಪಹರಣದ ಕೇಸ್ ದಾಖಲಿಸಿದ್ದಾರೆ. ಆದರೆ ಆಕೆ ಎಲ್ಲಿದ್ದಾಳೆ. ಯಾವ ಸ್ಥಳದಿಂದ ಈ ಸಂದೇಶ ಬಂದಿದೆ ಎಂಬುದನ್ನು ಪತ್ತೆ ಮಾಡಲು ಕೋಟಾ ಪೊಲೀಸರ ಸಹಾಯ ಕೇಳಲಾಗಿದೆ. ಬಳಿಕ ಆಕೆಯ ಕೊನೆಯ ನೆಟ್ವರ್ಕಿಂಗ್ ಯಾವ ಟವರ್ನಿಂದ ಬಂದಿದೆ ಎಂದು ಪತ್ತೆ ಮಾಡಿ ಸ್ಥಳ ಹುಡುಕಾಟಕ್ಕೆ ಮುಂದಾಗಲಾಗಿದೆ. ಇಷ್ಟು ಹೊತ್ತಿಗಾಗಲೇ ಈ ಪ್ರಕರಣ ಕೇಂದ್ರ ಸಚಿವರ ಬಳಿಯೂ ಹೋಗಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಧ್ಯಪ್ರವೇಶಿಸಿ, ಯುವತಿಯನ್ನು ಸುರಕ್ಷಿತವಾಗಿ ವಾಪಾಸು ಕರೆತರಲಾಗುವುದು ಎಂದು ತಿಳಿಸಿದ್ದರು. ಜೊತೆಗೆ ಈ ಸುದ್ದಿ ವ್ಯಾಪಕವಾಗಿ ಹರಡತೊಡಗಿತ್ತು. ಆದರೆ ಯುವತಿ ಎಲ್ಲಿಯೂ ಹೋಗದೆ ತನ್ನ ಸ್ನೇಹಿತರೊಂದಿಗೆ ಇಂದೋರ್ಗೆ ಹೋಗಿ ಅವರ ಜೊತೆ ನೆಲೆಸಿದ್ದಳು.
ಆಕೆಯ ಮೊಬೈಲ್ ನೆಟ್ವರ್ಕ್ ಟ್ರೇಸ್ ಮಾಡಿದ ಪೊಲೀಸರು ಕೊನೆಗೂ ಆಕೆಯನ್ನು ಪತ್ತೆ ಮಾಡಿದರು. ಆಕೆಯ ಸ್ನೇಹಿತನೊಬ್ಬ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಆತನ ಜೊತೆ ವಿದೇಶಕ್ಕೆ ತೆರಳಲೆಂದು ಈ ಪ್ಲಾನ್ ಮಾಡಲಾಗಿತ್ತು ಎಂದು ಯುವತಿ ಕಾವ್ಯ ಹೇಳಿಕೊಂಡಿದ್ದಾಳೆ.



Click it and Unblock the Notifications