Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಹಣ ವಸೂಲಿಗೆ ಅಪಹರಣದ ನಾಟಕ...! ತಂದೆ ಬಳಿಯೇ ₹30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮಗಳು.!
ಜನ ಈಗ ಹಣ ಮಾಡಲು ಯಾವೆಲ್ಲಾ ಕೆಲಸಕ್ಕೆ ಕೈ ಹಾಕ್ತಾರೆ ಅಂದ್ರೆ ಅದು ಬೇರೆಯವರ ಹೆದರಿಸಿ ಬೆದರಿಸಿ ಅಷ್ಟೇ ಅಲ್ಲ ಕೊಲೆಯನ್ನು ಮಾಡುತ್ತಾರೆ. ಇದಲ್ಲದೆ ಹಣಕ್ಕಾಗಿ ಯಾರನ್ನಾದರು ಅಪಹರಣ ಮಾಡಿ ಅವರ ಕುಟುಂಬಸ್ಥರಿಂದ ಹಣಕ್ಕೆ ಬೇಡಿಕೆ ಇಡುತ್ತಾರೆ. ಇಂತಹ ಸಾವಿರಾರು ಪ್ರಕರಣವನ್ನು ನಾವು ಕೇಳಿರುತ್ತೇವೆ.
ಆದರೆ ಇಲ್ಲೊಂದು ಪ್ರಕರಣ ನಿಮಗೆ ಅಚ್ಚರಿ ಹುಟ್ಟಿಸುತ್ತೆ. ಇಲ್ಲಿ ಮಗಳೇ ತಾನು ಅಪಹರಣ ಆದಂತೆ ನಾಟಕ ಆಡಿ ತಂದೆ ಬಳಿ ಹಣ ವಸೂಲಿಗೆ ನಿಂತ ಕಥೆ ಇದು. ಹೌದು ನಿಮಗೆ ಅಚ್ಚರಿಯಾಗಬಹುದು. ಆಕೆ ತನ್ನ ಕಿಡ್ನಾಪ್ ಕುರಿತು ಕಥೆ ಕಟ್ಟಿ ತಂದೆಯ ಬಳಿಯೇ ಬರೋಬ್ಬರಿ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು.

ಮಧ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ಓದುಗರಲ್ಲಿ ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ ಆಕೆ ಈ ರೀತಿ ಅಪಹರಣದ ನಾಟಕ ಮಾಡಿದ್ದೇಕೆ? ಕೊನೆ ಸಿಕ್ಕಿಬಿದ್ದಿದ್ದು ಹೇಗೆ ಎಂಬುದನ್ನು ನೋಡಿ.
ಇಂದೋರ್ನ 21 ವರ್ಷದ ಯುವತಿ ತಾನು ವಿದೇಶಿ ಪ್ರವಾಸ ಕೈಗೊಳ್ಳಬೇಕೆಂಬದು ಆಕೆಯ ಆಸೆಯಾಗಿತ್ತಂತೆ. ಇದನ್ನು ತಂದೆ ಬಳಿ ಹಲವಾರು ಬಾರಿ ಪ್ರಸ್ತಾಒ ಮಾಡಿದ್ದಾಳೆ. ಆದ್ರೆ ತಂದೆ ಅಷ್ಟೊಂದು ಹಣವಿಲ್ಲ ಎಂದು ಆಕೆಗೆ ಹೇಳುತ್ತಿದ್ದರಂತೆ. ಆದ್ರೆ ಆಕೆಯ ವಿದೇಶ ಪ್ರವಾಸದ ಆಸೆ ಮಾತ್ರ ಹಾಗೆಯೇ ಉಳಿದುಬಿಟ್ಟಿತ್ತು.
ಸ್ನೇಹಿತರೊಂದಿಗೆ ಸೇರಿ ಮಾಡಿದ್ಲು ಕಿಡ್ನಾಪ್ ಪ್ಲಾನ್
ಆಕೆ ರಾಜಸ್ಥಾನದ ಕೋಟಾದಲ್ಲಿ ಕೋಚಿಂಗ್ ಕ್ಲಾಸ್ಗೆ ಹಾಜರಾಗುವುದಾಗಿ ಮನೆಯಲ್ಲಿ ಹೇಳಿ ಹೊರಟಿದ್ದಾಳೆ. ಕೋಟಾದಲ್ಲಿ ಹಾಸ್ಟೆಲ್ ರೂಮ್ ಮಾಡಿ ಉಳಿದುಕೊಂಡು ಮೂರು ದಿನದ ಕೋಚಿಂಗ್ ಕ್ಲಾಸ್ಗೆ ಹಾಜರಾಗಿದ್ದಾಳೆ. ಆದರೆ ಇಲ್ಲಿಯೇ ತನ್ನ ಅಪಹರಣದ ಪ್ಲಾನ್ ಮಾಡಿದ್ದಾಳೆ. ತನ್ನನ್ನು ಹಗ್ಗದಿಂದ ಕಟ್ಟಿಹಾಕಿದಂತೆ ಫೋಟೋ ತೆಗೆದು ತನ್ನದೇ ಮೊಬೈಲ್ನಿಂದ ತಂದೆಗೆ ಕಳುಹಿಸಿ 30 ಲಕ್ಷ ನೀಡಿದರೆ ಮಗಳನ್ನು ಬಿಡುವುದಾಗಿ ಸಂದೇಶ ಕಳುಹಿಸಿದ್ದಾಳೆ. ಇದಕ್ಕೆ ಆಕೆಯ ಇಬ್ಬರು ಸ್ನೇಹಿತರು ಸಾಥ್ ನೀಡಿದ್ದಾರೆ. ಆಕೆಯನ್ನು ಯಾವುದೋ ಮೂಲೆಯಲ್ಲಿ ಇಟ್ಟು ಬಾಯಿ, ಕೈ, ಕಾಲು ಕಟ್ಟಿ ಹಾಕಿದಂತೆ ತೋರಿಸಲಾಗಿದೆ. ಈ ಫೋಟೋವನ್ನು ತಂದೆಗೆ ಕಳುಹಿಸಿ ಹಣ ಕೇಳಲಾಗಿದೆ. ಈ ಫೋಟೋ ಬಳಿಕ ಎಲ್ಲಾ ಸಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದೆ.
ಪೊಲೀಸರಿಗೆ ದೂರು ನೀಡಿದ ತಂದೆ
ಈ ಸಂದೇಶ ಬಂದೋಡನೆ ಭಯದಿಂದ ಪೊಲೀಸ್ ಠಾನೆಣೆ ಓಡಿದ ತಂದೆ ಅಪಹರಣದ ಕೇಸ್ ದಾಖಲಿಸಿದ್ದಾರೆ. ಆದರೆ ಆಕೆ ಎಲ್ಲಿದ್ದಾಳೆ. ಯಾವ ಸ್ಥಳದಿಂದ ಈ ಸಂದೇಶ ಬಂದಿದೆ ಎಂಬುದನ್ನು ಪತ್ತೆ ಮಾಡಲು ಕೋಟಾ ಪೊಲೀಸರ ಸಹಾಯ ಕೇಳಲಾಗಿದೆ. ಬಳಿಕ ಆಕೆಯ ಕೊನೆಯ ನೆಟ್ವರ್ಕಿಂಗ್ ಯಾವ ಟವರ್ನಿಂದ ಬಂದಿದೆ ಎಂದು ಪತ್ತೆ ಮಾಡಿ ಸ್ಥಳ ಹುಡುಕಾಟಕ್ಕೆ ಮುಂದಾಗಲಾಗಿದೆ. ಇಷ್ಟು ಹೊತ್ತಿಗಾಗಲೇ ಈ ಪ್ರಕರಣ ಕೇಂದ್ರ ಸಚಿವರ ಬಳಿಯೂ ಹೋಗಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಧ್ಯಪ್ರವೇಶಿಸಿ, ಯುವತಿಯನ್ನು ಸುರಕ್ಷಿತವಾಗಿ ವಾಪಾಸು ಕರೆತರಲಾಗುವುದು ಎಂದು ತಿಳಿಸಿದ್ದರು. ಜೊತೆಗೆ ಈ ಸುದ್ದಿ ವ್ಯಾಪಕವಾಗಿ ಹರಡತೊಡಗಿತ್ತು. ಆದರೆ ಯುವತಿ ಎಲ್ಲಿಯೂ ಹೋಗದೆ ತನ್ನ ಸ್ನೇಹಿತರೊಂದಿಗೆ ಇಂದೋರ್ಗೆ ಹೋಗಿ ಅವರ ಜೊತೆ ನೆಲೆಸಿದ್ದಳು.
ಆಕೆಯ ಮೊಬೈಲ್ ನೆಟ್ವರ್ಕ್ ಟ್ರೇಸ್ ಮಾಡಿದ ಪೊಲೀಸರು ಕೊನೆಗೂ ಆಕೆಯನ್ನು ಪತ್ತೆ ಮಾಡಿದರು. ಆಕೆಯ ಸ್ನೇಹಿತನೊಬ್ಬ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಆತನ ಜೊತೆ ವಿದೇಶಕ್ಕೆ ತೆರಳಲೆಂದು ಈ ಪ್ಲಾನ್ ಮಾಡಲಾಗಿತ್ತು ಎಂದು ಯುವತಿ ಕಾವ್ಯ ಹೇಳಿಕೊಂಡಿದ್ದಾಳೆ.



Click it and Unblock the Notifications