Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
ಕ್ರಿಸ್ಮಸ್ ಕೇಕ್ ಕತ್ತರಿಸಿದ್ದ ರಣಬೀರ್ ಕಪೂರ್ಗೆ ಸಂಕಷ್ಟ..ದೂರು ದಾಖಲು..ಯಾಕೆ ಗೊತ್ತಾ?
ಕ್ರಿಸ್ಮಸ್ ಸಮಯದಲ್ಲಿ ಕೇಕ್ ಕತ್ತರಿಸಿ ಹಬ್ಬ ಆಚರಿಸೋದು ಕಾಮನ್, ಹಾಗೆ ವಿಭಿನ್ನ ಕೇಕ್ಗಳು ಈ ಸಮಯದಲ್ಲಿ ಕಣ್ಣಿಗೆ ಬೀಳುತ್ತವೆ. ಆದರೆ ಇದೇ ಕೇಕ್ನಿಂದ ನಟ ರಣಬೀರ್ ಕಪೂರ್ ವಿರುದ್ಧ ದೂರು ದಾಖಲಾಗುವಂತೆ ಆಗಿದೆ. ಹಾಗಾದ್ರೆ ಆ ಕೇಕ್ನಲ್ಲಿ ಏನಿತ್ತು.? ನಟನ ಮೇಲೆ ಕೇಸ್ ಹಾಕಿದ್ಯಾಕೆ? ಇದಕ್ಕೆಲ್ಲ ಇಲ್ಲಿದೆ ಉತ್ತರ..
ಬಾಲಿವುಡ್ ನಟ ರಣಬೀರ್ ಕಪೂರ್ ಕ್ರಿಸ್ಮಸ್ ಆಚರಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅವರು ಮತ್ತು ಅವರ ಕುಟುಂಬದವರು "ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ" ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಮುಂಬೈನಲ್ಲಿ ದೂರು ನೀಡಿದ್ದಾರೆ.

ವೀಡಿಯೊದಲ್ಲಿ, ರಣಬೀರ್ ಕಪೂರ್ ಕ್ರಿಸ್ಮಸ್ ಸಂಪ್ರದಾಯದಂತೆ ಫ್ಲಾಂಬೆ ಕೇಕ್ ಇಟ್ಟಿರುವುದನ್ನು ಕಾಣಬಹುದು. ಇಲ್ಲಿ ಕೇಕ್ ಮೇಲೆ ಮದ್ಯ ಸುರಿದು ಬಳಿಕ ಅದಕ್ಕೆ ಬೆಂಕಿ ಹಚ್ಚಲಾಗುತ್ತದೆ. ಮದ್ಯವೆಲ್ಲಾ ಬೆಂಕಿಯಲ್ಲಿ ಆವಿಯಾದ ಬಳಿಕ ಆ ಕೇಕ್ ಅನ್ನು ಸೇವಿಸಲಾಗುತ್ತದೆ. ಆದ್ರೆ ಇಷ್ಟಕ್ಕೆ ಈ ಪಾರ್ಟಿ ಮುಗಿದಿದ್ದರೆ ನಟನ ಮೇಲೆ ಕೇಸ್ ದಾಖಲಾಗುತ್ತಿರಲಿಲ್ಲ. ಆದ್ರೆ ಈ ಕೇಕ್ ಕಟ್ ಮಾಡುವ ವೇಲೆ ಅವರು, 'ಜೈ ಮಾತಾ ದಿ' ಎಂದು ಕೂಗಿದ್ದಾರೆ.
ತಮ್ಮ ವಕೀಲರಾದ ಆಶಿಶ್ ರಾಯ್ ಮತ್ತು ಪಂಕಜ್ ಮಿಶ್ರಾ ಅವರ ಮೂಲಕ ಘಾಟ್ಕೋಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸಂಜಯ್ ತಿವಾರಿ, ನಟ "ಜೈ ಮಾತಾ ದಿ" ಎಂದು ಹೇಳುವಾಗ ಕೇಕ್ ಮೇಲೆ ಮದ್ಯವನ್ನು ಸುರಿದು ಬೆಂಕಿ ಹಚ್ಚುತ್ತಿರುವುದು ಕಂಡುಬಂದಿದೆ, ಇದರಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
"ಹಿಂದೂ ಧರ್ಮದಲ್ಲಿ, ಇತರ ದೇವತೆಗಳನ್ನು ಆವಾಹನೆ ಮಾಡುವ ಮೊದಲು ಅಗ್ನಿ ದೇವರನ್ನು ಆವಾಹನೆ ಮಾಡಲಾಗುತ್ತದೆ, ಆದರೆ ರಣಬೀರ್ ಕಪೂರ್ ಮತ್ತು ಅವರ ಕುಟುಂಬ ಸದಸ್ಯರು ಉದ್ದೇಶಪೂರ್ವಕವಾಗಿ ಮತ್ತೊಂದು ಧರ್ಮದ ಹಬ್ಬವನ್ನು ಆಚರಿಸುವಾಗ ಅಮಲು ಪದಾರ್ಥಗಳನ್ನು ಬಳಸಿದರು ಮತ್ತು ಜೈ ಮಾತಾ ದಿ ಎಂದು ಘೋಷಣೆ ಕೂಗಿದರು" ಎಂದು ದೂರಿನಲ್ಲಿ ಹೇಳಲಾಗಿದೆ.
ಕುನಾಲ್ ಕಪೂರ್ ಆಯೋಜಿಸಿದ್ದ ಪಾರ್ಟಿ
ಕ್ರಿಸ್ಮಸ್ ವೇಳೆ ಕುನಾಲ್ ಕಪೂರ್ ತಮ್ಮ ಕುಟುಂಬಸ್ಥರೊಂದಿಗೆ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ನಟ ರಣಬೀರ್ ಜೊತೆ ಪತ್ನಿ ಆಲಿಯಾ, ಮಗಳು ಹಾಗೂ ಭಟ್ ಫ್ಯಾಮಿಲಿಯೂ ಇದೆ. ಆದರೆ ಕೇಕ್ ಕತ್ತರಿಸುವ ವೇಳೆ ನಟ ಯಡವಟ್ಟು ಮಾಡಿಕೊಂಡಿದ್ದಾರೆ.
ಏನಿದು ಫ್ಲಾಂಬೆ ಕೇಕ್ ಮಾಡುವುದೇಗೆ?
1 ಕಪ್ ಸಕ್ಕರೆ
1 ಕಪ್ ಹಾಲು
1 ಟೀಸ್ಪೂನ್ ವಿನೆಗರ್
6 ಚಮಚ ಎಣ್ಣೆ
1 ಟೀಸ್ಪೂನ್ ಅಡಿಗೆ ಸೋಡಾ
1.5 ಕಪ್ ಮೈದಾ
0.25 ಕಪ್ ಕೋಕೋ ಪೌಡರ್
ಸಕ್ಕರೆ ಮತ್ತು ಹಾಲು ಮಿಶ್ರಣ ಮಾಡಿ, ಎಣ್ಣೆ, ವೆನಿಲ್ಲಾ, ವಿನೆಗರ್ ಮತ್ತು ನಂತರ ಎಲ್ಲಾ ಒಣ ಪದಾರ್ಥಗಳನ್ನು ಸೇರಿಸಿ. 180 ಡಿಗ್ರಿಯಲ್ಲಿ 30-40 ನಿಮಿಷಗಳ ಕಾಲ ಕುದಿಸಿ, ಅದು ತಣ್ಣಗಾದ ನಂತರ, ಡಿ-ಮೌಲ್ಡ್ ಮಾಡಿ. ನಂತರ ಎರಡೂ ಚಾಕೋಲೆಟ್ ಸೇರಿರುವ ಪದಾರ್ಥವನ್ನು ಮೈಕ್ರೋವೇವ್ನಲ್ಲಿಡಿ, ನೀವು ಈ ವೇಳೆ 50 ಎಂ.ಎಲ್ನಷ್ಟು ವಿಸ್ಕಿ ಸೇರಿಸಬಹುದು. ಬಳಿಕ ಕೇಕ್ ಅನ್ನು ಚಾಕೊಲೆಟ್ನಿಂದ ಕವರ್ ಮಾಡಿ, ಅಥವಾ ನೀವು ಕೇಕ್ ಅನ್ನು ಕತ್ತರಿಸಿ ಮಧ್ಯದಲ್ಲಿಯೂ ಚಾಕೊಲೇಟ್ ಸೇರಿಸಬಹುದು ಹೀಗೆ ಮಾಡುವುದರಿಂದ ಡಬಲ್ ಲೇಯರ್ ಕೇಕ್ ತಯಾರಾಗುತ್ತದೆ. ಇಲ್ಲಿದಿದ್ದರೆ ಒಂದೇ ಲೇಯರ್ ಕೇಕ್ ತಯಾರಾಗಲಿದೆ. ಬಳಿಕ ನಿಮ್ಮ ಮುಂದಿರುವ ಕೇಕ್ ಮೇಲೆ ವಿಸ್ಕಿಯನ್ನು ಸುರಿಯಿರಿ ಬಳಿಕ ಬೆಂಕಿ ಹಚ್ಚಿದರೆ ಆಯಿತು. ಬೆಂಕಿ ಆರಿದ ಮೇಲೆ ಫ್ಲಾಂಬೆ ಕೇಕ್ ಸವಿಯಲು ಸಿದ್ಧವಾಗುತ್ತದೆ.



Click it and Unblock the Notifications