Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ರೈಲಿನಲ್ಲಿ ಓಡಾಡುತ್ತಲೇ 1 ಲಕ್ಷ ರೂ. ಉಳಿಸಿದ ಯುವಕ..! ಆತನ ಟ್ರಿಕ್ಸ್ ಗೊತ್ತಾಗಿಯೂ ಕ್ರಮಕ್ಕೆ ಮುಂದಾಗದ ರೈಲ್ವೆ..!!
ರೈಲ್ವೆ ಇಂದಿಗೂ ವಿಶ್ವದ ಯಾವುದೇ ಮೂಲೆಗೆ ಹೋದರು ಅತ್ಯಂತ ಸುಲಭ ಹಾಗೆ ಕಡಿಮೆ ದರದಲ್ಲಿ ಓಡಾಡಬಹುದಾದ ಸಂಪರ್ಕ ಸೇತುವೆಯಾಗಿಯೇ ಉಳಿದಿದೆ. ಹಾಗೆ ಭಾರತ ಅತ್ಯಂತ ದೊಡ್ಡ ಸಂಪರ್ಕ ಜಾಲ ಹೊಂದಿದೆ. ಅಲ್ಲದೆ ಬಹುತೇಕ ಮುಂದುವರೆದ ರಾಷ್ಟ್ರಗಳಲ್ಲೂ ರೈಲ್ವೆ ಸಂಪರ್ಕ ಬಹಳ ಮುಖ್ಯ ಪಾತ್ರ ವಹಿಸಿದೆ. ಯಾವ ದೇಶದಲ್ಲಿ ರೈಲ್ವ ಸಂಪರ್ಕ ಉತ್ತಮವಾಗಿರಲಿದೆಯೋ ಆ ದೇಶದನ ಸಂಪರ್ಕ ಉತ್ತಮವಾಗಿದೆ ಎಂದರ್ಥ.
ಹಾಗೆ ರೈಲ್ವೆ ಸಂಪರ್ಕವಿಲ್ಲದೆ ಇರುವ ದೇಶಗಳು ಬಹಳ ಕಡಿಮೆ ಎನ್ನಬಹುದು ಇನ್ನು ಈಗ ಬುಲೆಟ್ ಟ್ರೈನ್, ಹೈಪರ್ ಲೂಪ್ನಂತಹ ಫಾಸ್ಟ್ ಟ್ರೈನ್ ಕೂಡ ಈಗ ಬಂದಿವೆ. ಹೀಗಾಗಿ ಬಹುತೇಕ ಮಂದಿ ಒಂದು ಕಡೆಯಿಂದ ಇನ್ನೊಂದು ಕಡೆ ಚಲಿಸುವ ಉದ್ದೇಶದಿಂದ ಅವರು ಟ್ರೈನ್ ಬಳಸುವುದು ಸಾಮಾನ್ಯ. ಹಾಗೆ ರೈಲ್ವೆ ಪ್ರಯಾಣ ದುಬಾರಿ ಅಲ್ಲದಿದ್ದರೂ ಹಲವರು ಈಗ ಟಿಕೆಟ್ ಬಳಸದೆಯೂ ಪ್ರಯಾಣಿಸುವುದು ನೋಡಬಹುದು.

ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರನ್ನು ತಡೆಯುವ ಉದ್ದೇಶದಿಂದ ದಂಡ ವಿಧಿಸುವುದು ನೋಡಬಹುದು. ಆದ್ರೆ ಇಲ್ಲೊಬ್ಬ ವ್ಯಕ್ತಿ ಫ್ರೀ ಆಗಿ ವರ್ಷವಿಡೀ ರೈಲಿನಲ್ಲಿ ಪ್ರಯಾಣಿಸಿದ್ದಾನೆ. ಅದರಲ್ಲೂ ಆತ ಬಳಸಿದ ಟ್ರಿಕ್ಸ್ ರೈಲ್ವೆ ಇಲಾಖೆಗೆ ತಿಳಿದಿದ್ದರೂ ಏನು ಮಾಡಲಾಗದೆ ಸುಮ್ಮನಾಗಿದೆ. ಆತ ರೈಲ್ವೆ ಪ್ರಯಾಣದಲ್ಲಿ 1 ಲಕ್ಷ ರೂಪಾಯಿಗೂ ಹೆಚ್ಚು ಹಣ ಉಳಿಸಿದ್ದಾನೆ.
ರೈಲಿನಲ್ಲಿ ಟಿಕೆಟ್ ಪಡೆಯದಿದ್ದರೆ ದಂಡ ವಿಧಿಸಲಾಗುತ್ತದೆ, ಆದ್ರೆ ಈ ಯುವಕ ಟಿಕೆಟ್ ಪಡೆದುಕೊಂಡೇ ಲಕ್ಷ ಲಕ್ಷ ಉಳಿಸಿದ್ದಾನೆ. ಆತ ಮಾಡಿದ ಒಂದು ಟ್ರಿಕ್ಸ್ನಿಂದಾಗಿ ಹಣ ಉಳಿಸಲು ಸಹಾಯಕವಾಗಿದೆ. ಆದ್ರೆ ಈ ಟ್ರಿಕ್ಸ್ ರೈಲ್ವೆ ಇಲಾಖೆಗೂ ತಿಳಿಸಿದಿದ್ದರೂ ಏನು ಮಾಡಲಾದ ಸ್ಥಿತಿಯಲ್ಲಿದೆ. ಹಾಗಾದ್ರೆ ಆ ಯುವಕ ಮಾಡಿದ ಟ್ರಿಕ್ಸ್ ಏನು? ಹೇಗೆ ಲಕ್ಷ ಲಕ್ಷ ರೂಪಾಯಿ ಹಣ ಉಳಿಸಿದ್ದಾನೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆತ ಬ್ರಿಟನ್ನ 29 ವರ್ಷದ ಎಡ್ ವೈಸ್ ಎಂಬ ವ್ಯಕ್ತಿ ಇಡೀ ವರ್ಷ ಹಣವನ್ನೇ ವ್ಯಯಿಸದೆ ರೈಲಿನಲ್ಲಿ ಪ್ರಯಾಣಿಸಿದ್ದಾನೆ. ಆತ ನಿಗಧಿತ ಟಿಕೆಟ್ ಖರೀದಿಸಿದ್ದರು ಕೂಡ ವಾರ್ಷಿಕವಾಗಿ 1.06 ಲಕ್ಷ ರೂಪಾಯಿ ಉಳಿಸಿದ್ದಾನೆ. ಇದು ರೈಲ್ವೆಗೆ ತಿಳಿದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬುದನ್ನು ಕೂಡ ಇಲ್ಲಿ ಗಮನಿಸಬಹುದು.
ಆತ ತಾನು ಬುಕ್ ಮಾಡುತ್ತಿದ್ದ ಎಲ್ಲಾ ಟಿಕೆಟ್ಗೂ ರಿಫಂಡ್ ಪಡೆಯುವ ಮೂಲಕ ಹಣ ಉಳಿಸಿದ್ದಾನೆ. ಬ್ರಿಟನ್ನಲ್ಲಿ ಟಿಕೆಟ್ ದರದ ಶೇ.100ರಷ್ಟು ರಿಫಂಡ್ ನಿಯಮಗಳಿವೆ, ಇದನ್ನೇ ಆತ ಬಳಸಿಕೊಂಡು ಈ ರೀತಿ ಮಾಡಿದ್ದಾನೆ.
ತಡವಾಗಿ ಬರುವ ರೈಲಿನ ಟಿಕೆಟ್ ಬುಕ್ ಮಾಡುವ ಭೂಪ
29 ವರ್ಷದ ಎಡ್ ವೈಸ್ ಎಂಬ ಯುವಕ ಯವಾಗಲು ರೈಲಿನಲ್ಲಿ ಪ್ರಯಾಣಿಸುವ ಮುನ್ನ ಆ ಪ್ರದೇಶದಲ್ಲಿನ ಹವಾಮಾನ ಹಾಗೂ ರೈಲ್ವೆ ಸಿಗ್ನಲಿಂಗ್, ಮಳೆ ಇಂತಹ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಆ ರೈಲಿನ ಟಿಕೆಟ್ ಬುಕ್ ಮಾಡಿಕೊಳ್ಳುತ್ತಿದ್ದನಂತೆ. ಆತನಿಗೆ ಯಾವ ರೈಲು ಯಾವಾಗ ತಡವಾಗಿ ಬರಲಿದೆ ಎಂಬ ಕುರಿತು ಸಂಪೂರ್ಣ ಮಾಹಿತಿ ಇತ್ತಂತೆ. ಹೀಗಾಗಿ ಅಂತಹ ಸಮಯದಲ್ಲಿ, ಅಂತಹ ರೈಲಿನ ಟಿಕೆಟ್ ಬುಕ್ ಮಾಡಿಕೊಂಡು ತಾನು ತಲುಪಬೇಕಿದ್ದ ಸ್ಥಳ ತಲುಪುತ್ತಿದ್ದನಂತೆ. ಆದ್ರೆ ಇದರಿಂದ ಹಣ ಹೇಗೆ ಉಳಿಸಿದ ಎಂಬ ಅನುಮಾನ ನಿಮಗೆ ಕಾಡಬಹುದು. ಇಲ್ಲಿಯೇ ಆ ಯುವಕ ತನ್ನ ಜಾಣತನ ಮೆರೆದಿದ್ದಾನೆ.
ಬ್ರಿಟನ್ನಲ್ಲಿ ರೈಲುಗಳು ತಡವಾಗಿ ಬಂದರೆ ನಿಮ್ಮ ಟಿಕೆಟ್ನ ಹಣ ವಾಪಾಸು ನೀಡಲಾಗುತ್ತದೆ. ಆದ್ರೆ ಅಲ್ಲಿನ ರೈಲುಗಳು ತಡವಾಗಿ ಬರುವುದು ಬಹಳ ವಿರಳ ಪ್ರಕರಣ ಎಂದು ಪರಿಗಣಿಸಲಾಗಿದೆ. ಅಲ್ಲಿನ ರೈಲ್ವೆ ನಿಯಮಗಳ ಪ್ರಕಾರ, ಪ್ರಯಾಣಿಕರು 15 ನಿಮಿಷಗಳ ವಿಳಂಬಕ್ಕೆ ಶೇ. 15 ರಷ್ಟು, 30 ನಿಮಿಷಗಳ ವಿಳಂಬಕ್ಕೆ 50 ರಷ್ಟು ಮತ್ತು ಒಂದು ಗಂಟೆ ಮೀರಿದರೆ ಪೂರ್ಣ ಮರುಪಾವತಿ ಪಡೆಯಲು ಅರ್ಹರಾಗಿರುತ್ತಾರೆ.
ಇದೇ ನಿಯಮದ ಲಾಭ ಪಡೆಯುವ ಯುವಕ ಯಾವ ರೈಲು ತಡವಾಗಿ ಬರಲಿದೆ ಎಂಬುದನ್ನು ಮೊದಲೇ ಅಧ್ಯಯನ ಮಾಡುತ್ತಿದ್ದ, ಆ ಮಾರ್ಗದಲ್ಲಿ ಹವಾಮಾನ ವೈಪರಿತ್ಯ, ಮುಷ್ಕರ ಇಂತಹ ಪ್ರಕರಣಗಳಿದ್ದರೆ ಆತ ಪ್ರಯಾಣಕ್ಕಾಗಿ ಹೊರಡುತ್ತಿದ್ದ. ಬಹುತೇಕ ಸಮಯದಲ್ಲಿ ಇದರಲ್ಲಿ ಆತ ಯಶಸ್ವಿಯೂ ಆಗಿದ್ದಾನೆ. ಹೀಗಾಗಿಯೇ 1.06 ಲಕ್ಷ ರೂಪಾಯಿ ಮರುಪಾವತಿ ಪಡೆದಿದ್ದಾನೆ ಎಂದು ತಿಳಿದುಬಂದಿದೆ.



Click it and Unblock the Notifications











