Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
₹25 ಸಾವಿರದಿಂದ ಆರಂಭಗೊಂಡ ಉದ್ಯಮ ಈಗ ₹5,947 ಕೋಟಿ ವ್ಯವಹಾರ
ಯಾರು ಶ್ರಮ ಹಾಕಿ ತಮ್ಮ ಜೀವನದಲ್ಲಿ ಮುಂದೆ ಬರಬೇಕು ಎಂದು ಕೆಲಸ ಆರಂಭಿಸಿರುತ್ತಾರೋ ಅಂತವರು ತಮ್ಮ ಕೆಲಸದಲ್ಲಿ ಯಶಸ್ಸು ಸಾಧಿಸಿಯೇ ಸಾಧಿಸುತ್ತಾರೆ. ಮತ್ತೆ ಕೆಲವರು ಹಣವಿದ್ದರೂ ಅದೆಷ್ಟೇ ದೊಡ್ಡ ಮಟ್ಟದ ಉದ್ಯಮ ಆರಂಭಿಸಿದರೂ ಸಹ ಯಶಸ್ಸು ಅನ್ನೋದು ಮರಿಚಿಕೆಯಾಗುತ್ತದೆ. ಅದ್ರಲ್ಲೂ ಆರಂಭದ ದಿನದಲ್ಲಿ ಕಷ್ಟಪಟ್ಟು ಜೀವನ ನಡೆಸಿ ಬಳಿಕ ಕೋಟಿ ಕೋಟಿ ಆದಾಯದ ಕಂಪನಿ ಕಟ್ಟಿದವರನ್ನು ಸಹ ನಾವು ನೋಡಬಹುದು.
ಇದಕ್ಕೆ ಸಣ್ಣ ಉದಾಹರಣೆ ಅಂದರೆ ವಿಆರ್ಎಲ್ ಕಂಪನಿ, ನಮ್ಮ ರಾಜ್ಯದ ವಿಜಯಾನಂದ ರೋಡ್ಲೈನ್ಸ್ ಲಿಮಿಟೆಡ್ ಈ ಸಾಲಿಗೆ ಸೇರಿಸಬಹುದು. ಒಂದು ಲಾರಿಯಿಂದ ಆರಂಭಗೊಂಡಿದ್ದ ಸಂಸ್ಥೆ ಬಳಿಕ ದೊಡ್ಡ ಹೆಮ್ಮರವಾಗಿ ಕೋಟಿ ಕೋಟಿ ಆದಾಯದ ಬೃಹತ್ ಕಂಪನಿಯಾಗಿ ಬೆಳೆದಿತ್ತು. ಇದೇ ಸಾಲಿಗೆ ಮತ್ತೊಂದು ಕಂಪನಿಯನ್ನು ಸಹ ನಾವು ನೆನೆಯಬಹುದು.

ಈ ಸಂಸ್ಥೆ ಕೇವಲ 25 ಸಾವಿರ ರೂಪಾಯಿ ಹೂಡಿಕೆಯೊಂದಿಗೆ ಆರಂಭಗೊಂಡು ಬರೋಬ್ಬರಿ 5,947 ಕೋಟಿ ರೂಪಾಯಿಯ ಬೃಹತ್ ಕಂಪನಿಯಾಗಿ ಈಗ ಮಾರ್ಪಟ್ಟಿದೆ. ಹಾಗೆ ವ್ಯಾಪಾರ ಈಗ ವಿದೇಶಕ್ಕೂ ಹರಡಿದೆ. ಹಾಗಾದ್ರೆ ಯಾರು ಈ ಉದ್ಯಮಿ ಅವರು ಆರಂಭಿಸಿದ ಉದ್ಯಮ ಏನು ಎಂಬುದನ್ನು ನಾವಿಂದು ನೋಡೋಣ.
ರಾಜ್ಯದ ಶಶಿ ಕಿರಣ್ ಶೆಟ್ಟಿ ಎಂಬಾತ 1957ರಲ್ಲಿ ಜನಿಸಿದ್ದರು. ಅವರು ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ವಾಣಿಜ್ಯ ಶಿಕ್ಷಣವನ್ನು ಪಡೆದರು ಮತ್ತು ನಂತರ 1978 ರಲ್ಲಿ ಉದ್ಯೋಗಾವಕಾಗಿ ಊರು ಬಿಟ್ಟಿದ್ದರು. ಮುಂಬೈಗೆ ಬಂದಿಳಿದಿದ್ದ ಅವರು ಇಂಟರ್ಮೋಡಲ್ ಟ್ರಾನ್ಸ್ಪೋರ್ಟ್ ಮತ್ತು ಟ್ರೇಡಿಂಗ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಮತ್ತು ನಂತರ ಫೋರ್ಬ್ಸ್ ಗೋಕಾಕ್ನಲ್ಲಿ ಕೆಲಸ ಮಾಡಿದರು.
ಕೇವಲ 29 ನೇ ವಯಸ್ಸಿನಲ್ಲಿ, ಅವರು ಬೇರೆ ಕಂಪನಿಯ ಕೆಳಗೆ ದುಡಿಯುವುದನ್ನು ನಿಲ್ಲಿಸಲು ನಿರ್ಧರಿಸಿದರು. ಹೀಗಾಗಿ ತಮ್ಮ ಸ್ವಂತ ಉದ್ಯಮ ಕಟ್ಟಲು ಮುಂದಾದ ಅವರು 1994ರಲ್ಲಿ ಆಲ್ಕಾರ್ಗೋ ಲಾಜಿಸ್ಟಿಕ್ಸ್ ಲಿಮಿಟೆಡ್ ಎಂಬ ಕಂಪನಿ ಆರಂಭಿಸಿಯೇ ಬಿಟ್ಟರು. ಇದಕ್ಕೆ ಕೇವಲ 25 ಸಾವಿರ ರೂಪಾಯಿ ಬಂಡವಾಳ ಹೂಡಿದ್ದರು.
ಇಂದು, 4,500 ಜನರ ಕ್ರಿಯಾತ್ಮಕ ತಂಡವನ್ನು ನೇಮಿಸಿಕೊಂಡಿರುವ ಆಲ್ಕಾರ್ಗೋ ಗ್ರೂಪ್, ಜಗತ್ತಿನಾದ್ಯಂತ 180 ಕ್ಕೂ ಹೆಚ್ಚು ದೇಶಗಳಲ್ಲಿ ಮಹತ್ವದ ಅಸ್ತಿತ್ವವನ್ನು ಇಟ್ಟುಕೊಂಡಿದೆ. ಕಂಪನಿಯು ವಿಶ್ವದ ಅತಿದೊಡ್ಡ LCL ಕನ್ಸಾಲಿಡೇಟರ್ ಆಗಿದೆ. LCL ಎಂದರೆ 'ಕಂಟೇನರ್ ಲೋಡ್ ಗಿಂತ ಕಡಿಮೆ ತೂಕ' ಅಂದರೆ ಸಂಪೂರ್ಣ ಕಂಟೇನರ್ ಅನ್ನು ತುಂಬಲು ಸರಕುಗಳು ಸಾಕಾಗದೇ ಇದ್ದಾಗ ಬಳಕೆಯಾಗುವ ಕಂಟೇನರ್ನಳಾಗಿವೆ.
ಪ್ರಸ್ತುತ, ಆಲ್ಕಾರ್ಗೋ ಲಾಜಿಸ್ಟಿಕ್ಸ್ 5,947 ಕೋಟಿ ರೂ.ಗಳ ದೊಡ್ಡ ಮಾರುಕಟ್ಟೆ ಹೊಂದಿದೆ. ಜೊತೆಗೆ ವಿದೇಶದಲ್ಲಿ ಈ ಕಂಪನಿ ಬಂಡವಾಳ ಹೂಡಿಕೆಯನ್ನು ತನ್ನತ್ತ ಸೆಳೆಯುತ್ತಿದೆ. ಭಾರತದಲ್ಲೂ ಈ ಸಂಸ್ಥೆ ಈಗ ದೊಡ್ಡದಾಗಿ ಬೆಳೆದಿದೆ. ಕೇವಲ 25 ಸಾವಿರ ರೂಪಾಯಿಯಿಂದ ಆರಂಭಗೊಂಡ ಅವರ ಉದ್ಯಮ ಈಗ ಸಾವಿರಾರು ಮಂದಿಗೆ ಉದ್ಯೋಗ ನೀಡುವ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ.



Click it and Unblock the Notifications