Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಬಜೆಟ್ಗೂ ಮುನ್ನ ಹಲ್ವಾ ಸಮಾರಂಭ ನಡೆಸುವುದೇಕೆ.? ಏನಿದರ ಮಹತ್ವ ಗೊತ್ತಾ?
ಕೇಂದ್ರ ಸರ್ಕಾರವು 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಲು ತಯಾರಿ ನಡೆಸಿದೆ. ನಾಳೆ ಅಂದರೆ ಫೆಬ್ರುವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭರ್ಜರಿ 6ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ ಈ ಬಜೆಟ್ನಲ್ಲಿ ದೇಶದ ಜನರಿಗೆ ಯಾವೆಲ್ಲಾ ಉಡುಗೊರೆ ಸಿಗಲಿದೆ ಎಂಬ ಕಾತರದಲ್ಲಿ ಜನ ಕಾಯುತ್ತಿದ್ದಾರೆ.
ಅಲ್ಲದೆ ಇದೇ ವರ್ಷ ಲೋಕಸಭಾ ಚುನಾವಣೆಯೂ ಘೋಷಣೆಯಾಗುವುದರಿಂದ ಈ ಬಜೆಟ್ ಮೇಲೆ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಆದರೆ ಚುನಾವಣೆ ಅಂತ್ಯಗೊಂಡು ಬರುವ ಸರ್ಕಾರ ಸಹ ಮತ್ತೊಂದು ಬಜೆಟ್ ಮಂಡಿಸಲಿದೆ. ಹೀಗಾಗಿ ಇದು ಮಧ್ಯಂತರ ಬಜೆಟ್ ಆಗಿದೆ.

ಇನ್ನು ಈ ಬಜೆಟ್ ಮಂಡನೆಗೂ ಮುನ್ನ ನಡೆಯುವ ಕೆಲವು ಘಟನಾವಳಿಗಳು ಅಚ್ಚರಿಗೆ ಕಾರಣವಾಗುತ್ತದೆ. ಅದರಲ್ಲೂ ಬಜೆಟ್ಗೂ ಮುನ್ನ 'ಹಲ್ವಾ ಸಮಾರಂಭ' ನಡೆಸುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಖುದ್ದು ಹಣಕಾಸು ಮಂತ್ರಿಗಳೇ ಹಲ್ವಾ ತಯಾರಿಸಿ ಹಂಚಿ ಸಂಭ್ರಮಿಸುವ ಒಂದು ವಿಭಿನ್ನ ಆಚರಣೆಯಾಗಿದೆ.
ಹಾಗಾದರೆ ಈ ಸಂಪ್ರದಾಯ ಏಕೆ ಆರಂಭಿಸಿದ್ದಾರೆ. ಇದರ ಹಿಂದಿರುವ ಕಥೆ ಏನು?, ಈ ರೀತಿ ಹಲ್ವಾ ಹಂಚುವ ಸಂಭ್ರಮ ಆರಂಭಿಸಿದ್ದು ಯಾರು? ಹೀಗೆ ನಿಮ್ಮಲ್ಲಿರುವ ಹತ್ತಾರು ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ.
ಬಜೆಟ್ ಮಂಡಿಸುವುದು ಮತ್ತು ತಯಾರಿ ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಬಜೆಟ್ ಮಂಡನೆಯಾಗುತ್ತಿರುವ ವರ್ಷದಲ್ಲಿ ಪ್ರತಿಯೊಂದು ಸಚಿವಾಲಯದ ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ಕೆಲಸ ಮಾಡಬೇಕಾಗುತ್ತದೆ. ಸತತ 6ರಿಂದ 7 ತಿಂಗಳ ಕಠಿಣ ಪರಿಶ್ರಮದ ಬಳಿಕ ಬಜೆಟ್ ಪುಸ್ತಕ ತಯಾರಾಗುತ್ತದೆ. ಈ ಬಜೆಟ್ ಪುಸ್ತಕ ತಯಾರಾಗುವ ಮುನ್ನ ಸಚಿವಾಲಯಗಳ ಪರಿಶ್ರಮವನ್ನು ಸ್ಮರಿಸಲು ಹಲ್ವಾ ತಯಾರಿಸಲಾಗುತ್ತದೆ.
ದೊಡ್ಡ ಖಡಾಯಿಯಲ್ಲಿ ಹಲ್ವಾವನ್ನು ತಯಾರಿಸಲಾಗುತ್ತದೆ. ಇದಕ್ಕೆ ಎಲ್ಲಾ ಸಚಿವಾಲಯದ ಅಧಿಕಾರಿಗಳು ಸಾಥ್ ನೀಡಿರುತ್ತಾರೆ. ಅಲ್ಲದೆ ಖುದ್ದು ಹಣಕಾಸು ಸಚಿವರು ಸಹ ಭಾಗಿಯಾಗುತ್ತಾರೆ. ಬಜೆಟ್ ಮಂಡನೆಗೂ ಮುನ್ನ ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಈ ಸಂಪ್ರದಾಯ ಬಹಳ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ.
ಪ್ರಸಿದ್ಧ ಭಾರತೀಯ ಸಿಹಿತಿಂಡಿಯಾದ ಹಲ್ವಾವನ್ನು ಬೃಹತ್ ಭಕ್ಷ್ಯದಲ್ಲಿ ತಯಾರಿಸಲಾಗುತ್ತದೆ ಮತ್ತು ಹಣಕಾಸು ಸಚಿವಾಲಯದ ಸದಸ್ಯರಿಗೆ ಬಡಿಸಲಾಗುತ್ತದೆ. ಹಣಕಾಸು ಸಚಿವರು ಖಾದ್ಯವನ್ನು ಬೆರೆಸಿ ತಮ್ಮ ತಂಡದ ಸದಸ್ಯರಿಗೆ ನೀಡುತ್ತಾರೆ, ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸುತ್ತಾರೆ. ಬಜೆಟ್ ಪೂರ್ವ ಹಲ್ವಾ ಸಮಾರಂಭವು ಬಜೆಟ್ ಅನ್ನು ಘೋಷಿಸುವ ಮೊದಲು 9-10 ದಿನಗಳವರೆಗೆ ಬಜೆಟ್ ತಯಾರಿಕೆಯಲ್ಲಿ ತೊಡಗಿರುವ ತಂಡದ ಪ್ರತ್ಯೇಕತೆಯನ್ನು ಪ್ರಾರಂಭಿಸುತ್ತದೆ.
ಬಜೆಟ್ ಪ್ರತಿಗಳಿರುವ ಹಣಕಾಸು ಸಚಿವಾಲಯದ ಉತ್ತರ ಬ್ಲಾಕ್ ಅನ್ನು ಸಾರ್ವಜನಿಕರಿಗೆ ಕಾಣದಂತೆ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. 1950 ರಲ್ಲಿ ಬಜೆಟ್ ಸೋರಿಕೆಯಾಗಿ ಭಾರೀ ಸುದ್ದಿಯಾಗಿತ್ತು. ಇದಾದ ಬಳಿಕ ತುಂಬ ಭದ್ರತೆಯಲ್ಲಿ ಈ ಕೆಲಸ ಕಾರ್ಯಗಳಯ ನಡೆಯುತ್ತವೆ.
ಭಾರತದ ಮೊಟ್ಟ ಮೊದಲ ಬಜೆಟ್ ಮಂಡಿಸಿದ್ದು ಯಾರು?
ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಕೆಲಸ ಮಾಡುವ ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ 1860 ರಲ್ಲಿ ಬ್ರಿಟಿಷರ ಕಾಲದಲ್ಲಿ ಭಾರತದ ಮೊದಲ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದ.
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಗರಿಷ್ಠ ಹತ್ತು ಬಜೆಟ್ಗಳನ್ನು ಮಂಡಿಸಿದ ದಾಖಲೆ ಹೊಂದಿದ್ದಾರೆ. ಆದಾಗ್ಯೂ, ಮುಂಬರುವ ಮಧ್ಯಂತರ ಬಜೆಟ್ ನಂತರ, ನಿರ್ಮಲಾ ಸೀತಾರಾಮನ್ ಅವರು ಗರಿಷ್ಠ ಕೇಂದ್ರ ಬಜೆಟ್ಗಳನ್ನು ಮಂಡಿಸಿರುವ ಸಾಲಿಗೆ ಸೇರಲಿದ್ದಾರೆ.



Click it and Unblock the Notifications











